Wednesday, January 21, 2009

ಗಗನಕೆ ಏರಿದ ಅಕ್ಕಿ ಬೆಲೆ: ಇದೇ ಪರಿಹಾರವೇ


ನೆರೆಯ ಆಂಧ್ರ­ಪ್ರ­ದೇ­ಶ­ದಲ್ಲಿ ಸಾಧ್ಯ­ವಾ­ಗಿ­ರು­ವುದು? ಕರ್ನಾ­ಟ­ಕ­ದಲ್ಲಿ ಏಕೆ ಸಾಧ್ಯ­ವಾ­ಗು­ತ್ತಿಲ್ಲ? ಇದೇನಾ ಪರಿ­ಹಾರ?
ಅಕ್ಕಿ ಬೆಲೆ ಕೈಗೆ­ಟು­ಕದ ರೀತಿ­ಯಲ್ಲಿ ಗಗ­ನ­ಮುಖಿ ಆಗಿ­ರುವ ಕಾರಣ ತತ್ತ­ರಿ­ಸಿ­ರುವ ಜನ­ಸಾ­ಮಾ­ನ್ಯ­ರಿಂದ ಕೇಳಿ ಬರು­ತ್ತಿ­ರುವ ಪ್ರಶ್ನೆ­ಗ­ಳಿವು.
ಆಂಧ್ರ­ಪ್ರ­ದೇ­ಶ­ದ­ಲ್ಲಿಯೂ ಸರ್ಕಾ­ರ­ವಿದೆ. ರಾಜ್ಯ­ದ­ಲ್ಲಿ­ರು­ವಂ­ತಹ ಕಾನೂ­ನು­ಗಳೇ ಅಲ್ಲಿಯೂ ಇವೆ. ಅಲ್ಲಿ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ತರುವ ರೀತಿ­ಯಲ್ಲಿ ರಫ್ತಿನ ಮೇಲೆ ನಿಯಂ­ತ್ರಣ ತರಲು ಸಾಧ್ಯ­ವಾ­ಗು­ತ್ತದೆ. ಆದರೆ ರಾಜ್ಯ­ದ­ಲ್ಲಿನ ಸರ್ಕಾರ ಏನು ಮಾಡು­ತ್ತಿದೆ? ಜನ ಸಾಮಾ­ನ್ಯರ ಆಕ್ರೋಶ ಈ ರೀತಿ­ಯಲ್ಲಿ ಕಟ್ಟೆ­ಯೊ­ಡೆ­ಯು­ತ್ತಿದೆ.
ಅಕ್ಕಿಯ ಬೆಲೆ ಕಳೆದ ಕೆಲವು ತಿಂಗ­ಳಿ­ನಿಂದ ಏರು­ಗ­ತಿ­ಯ­ಲ್ಲಿಯೇ ಇದೆ. ಕಳೆದ ಒಂದೇ ತಿಂಗ­ಳಿ­ನ­ಲ್ಲಿಯೇ ಪ್ರತಿ ಕೆಜಿಗೆ 3 ರಿಂದ 5 ರೂ.ಗಳ ತನಕ ಏರಿ­ಕೆ­ಯಾ­ಗಿದೆ. ಒಂದು ವರ್ಷದ ಅವ­ಧಿ­ಯಲ್ಲಿ 10 ರಿಂದ 13 ರೂ.ಗಳ ತನಕ ಅಕ್ಕಿಯ ಬೆಲೆ ಏರಿ­ಕೆ­ಯಾ­ಗಿದೆ. ಇದು ಮುಂದಿನ ವರ್ಷ­ದಲ್ಲಿ ಇನ್ನೂ ಹೆಚ್ಚಾ­ಗ­ಲಿದೆ ಎಂಬ ಆಘಾ­ತ­ಕಾರಿ ಸುದ್ದಿಯೂ ವರ್ತಕ ಸಮು­ದಾ­ಯ­ದ­ಲ್ಲಿದೆ. ಈ ಸದ್ಯಕ್ಕೆ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಕಾಣಿ­ಸಿ­ಕೊ­ಳ್ಳುವ ಎಲ್ಲಾ ಸಾಧ್ಯ­ತೆ­ಗಳೂ ಇವೆ. ಅದಕ್ಕೂ ಮೊದಲು ಪರಿ­ಹಾರ ಎಂದ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ಕರ್ನಾ­ಟಕ ರಾಗಿ, ಜೋಳ, ಗೋಧಿಯ ಜತೆಗೆ ಅಕ್ಕಿ ಸಹ ಹೆಚ್ಚು ಉಪ­ಯೋ­ಗಿ­ಸುವ ರಾಜ್ಯ­ಗಳ ಸಾಲಿಗೆ ಸೇರು­ತ್ತದೆ. ಇಲ್ಲಿ ಸಾಕಷ್ಟು ಪ್ರಮಾ­ಣ­ದಲ್ಲಿ ಭತ್ತ ಬೆಳೆ­ಯ­ಲಾ­ಗು­ತ್ತದೆ. ಆದರೆ ಈಗ ಉಂಟಾ­ಗಿ­ರುವ ಸಮ­ಸ್ಯೆಗೆ ತನ್ನದೇ ಆದ ಕೆಲವು ಕಾರ­ಣ­ಗ­ಳಿವೆ.
ಒಂದೆಡೆ ಆಂಧ್ರ ಪ್ರದೇಶ ಅಕ್ಕಿ ರಫ್ತಿನ ಮೇಲೆ ವಿಧಿ­ಸಿ­ರುವ ನಿರ್ಬಂಧ, ಇನ್ನೊಂ­ದೆಡೆ ರಾಜ್ಯ­ದಲ್ಲಿ ಉತ್ಪಾ­ದ­ನೆ­ಯಲ್ಲಿ ಆಗಿ­ರುವ ಕುಂಠಿತ, ಕಡಿ­ಮೆ­ಯಾ­ಗು­ತ್ತಿ­ರುವ ಇಳು­ವರಿ, ಮತ್ತೊಂ­ದೆಡೆ ಅಕ್ಕಿ ಬಳ­ಕೆಯ ಪ್ರಮಾಣ ಹೆಚ್ಚು­ತ್ತಿ­ರು­ವುದು ಹೀಗೆ ಅನೇಕ ಕಾರ­ಣ­ಗ­ಳನ್ನು ಗುರು­ತಿ­ಸ­ಬ­ಹು­ದಾ­ಗಿದೆ.
ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಅಕ್ಕಿ ಬಳ­ಕೆಯ ಯಥೇ­ಚ್ಚ­ವಾ­ಗಿಯೇ ಆಗು­ತ್ತಿದೆ. ಉತ್ತರ ಕರ್ನಾ­ಟ­ಕ­ದಲ್ಲಿ ಜೋಳದ ಜತೆಗೆ ಅಕ್ಕಿಯ ಬಳ­ಕೆ­ಯಾ­ದರೆ, ಹಳೇ ಮೈಸೂರು ಭಾಗ­ದಲ್ಲಿ ರಾಗಿಯ ಜತೆಗೆ ಬಳ­ಸ­ಲಾ­ಗು­ತ್ತದೆ. ಮಲೆ­ನಾಡು ಮತ್ತು ಕರಾ­ವಳಿ ಭಾಗ­ದಲ್ಲಿ ಅಕ್ಕಿಯೇ ಪ್ರಮುಖ ಉಪ­ಯೋ­ಗದ ಆಹಾರ ಉತ್ಪನ್ನ. ಒಂದು ಅಂದಾ­ಜಿನ ಪ್ರಕಾರ ಬೆಂಗ­ಳೂರು ನಗ­ರ­ವೊಂ­ದಕ್ಕೆ ಪ್ರತಿ ನಿತ್ಯ 50 ಲಾರಿ ಲೋಡ್‌­ನಷ್ಟು ಅಕ್ಕಿ ವ್ಯಾಪಾ­ರಿ­ಗ­ಳಿಗೆ ಬೇಕಾ­ಗು­ತ್ತದೆ. ಇಡೀ ರಾಜ್ಯಕ್ಕೆ ದಿನಕ್ಕೆ ಎಷ್ಟು ಅಕ್ಕಿ ಬೇಕಾ­ಗು­ತ್ತದೆ ಎಂಬು­ದನ್ನು ಈ ಆಧಾ­ರದ ಮೇಲೆ ಲೆಕ್ಕ ಹಾಕ­ಲಾ­ಗು­ತ್ತಿದೆ.
ರಾಜ್ಯ­ಕ್ಕಿಂತ ಆಂಧ್ರ­ಪ್ರ­ದೇಶ ಅಕ್ಕಿ ಹೆಚ್ಚು ಬೆಳೆ­ಯುವ ರಾಜ್ಯ. ಪ್ರತಿ ವರ್ಷ ಅಲ್ಲಿಂದ ಬೇರೆ ಬೇರೆ ರಾಜ್ಯ­ಗ­ಳಿಗೆ ಅಕ್ಕಿ ರಫ್ತು ಆಗು­ತ್ತಿತ್ತು. ಆದರೆ ಈ ವರ್ಷ ನಿಷೇಧ ಮಾಡಿ­ರುವ ಪರಿ­ಣಾಮ ಬೇರೆ ರಾಜ್ಯದ ವ್ಯಾಪಾ­ರಿ­ಗ­ಳೆಲ್ಲ ಕರ್ನಾ­ಟ­ಕ­ವನ್ನು ಅವ­ಲಂ­ಬಿ­ಸಿ­ದ್ದಾರೆ. ರಾಜ್ಯ­ದಿಂದ ಪ್ರತಿ ವರ್ಷ ಆಗು­ತ್ತಿದ್ದ ರಫ್ತು­ವಿನ ಪ್ರಮಾ­ಣ­ದಲ್ಲಿ ಶೇ.30ರಷ್ಟು ಹೆಚ್ಚಾ­ಗಿದೆ. ಬೇರೆ ರಾಜ್ಯದ ವ್ಯಾಪಾ­ರಿ­ಗಳು ಇಲ್ಲಿಗೆ ಆಗ­ಮಿಸಿ ಅಕ್ಕಿ ಖರೀದಿ ಮಾಡ­ಲಾ­ರಂ­ಭಿ­ಸಿ­ರುವ ಪರಿ­ಣಾಮ ಬೆಲೆ­ಯಲ್ಲಿ ಹೆಚ್ಚ­ಳ­ವಾ­ಗಿದೆ.
ಆಂಧ್ರ­ಪ್ರ­ದೇ­ಶ­ದಲ್ಲಿ ರಫ್ತು­ವಿನ ಮೇಲೆ ನಿಯಂ­ತ್ರಣ ಹಾಕಿ­ರುವ ಪರಿ­ಣಾಮ ಅಲ್ಲಿ ಅತ್ಯು­ತ್ತಮ ಅಕ್ಕಿಯ 19.40 ರೂ.ಗಳಿಗೆ ಲಭ್ಯ­ವಾ­ಗು­ತ್ತಿದೆ ಎಂಬು­ವುದು ಅಲ್ಲಿಂದ ದೊರ­ಕಿ­ರುವ ಮಾಹಿತಿ. ಆದರೆ ಅದೇ ಅಕ್ಕಿ ರಾಜ್ಯ­ದಲ್ಲಿ ಈಗ 30 ರೂ.ಗಳಿ­ಗಿಂತ ಕಡಿಮೆ ದರಕ್ಕೆ ಲಭ್ಯ­ವಾ­ಗು­ವು­ದಿಲ್ಲ. ರಾಜ್ಯ­ದಲ್ಲಿ ಸರ್ಕಾರ ಅಧಿ­ಕಾ­ರಕ್ಕೆ ಬರು­ವು­ದ­ಕ್ಕಿಂತ ಮುನ್ನ ಹೇಳಿದ ಬಿಜೆ­ಪಿಯೇ ಪರಿ­ಹಾರ ಎಂಬ ಮಾತು ಈಗ ಸುಳ್ಳಾ­ಗಿದೆ. ಏಕೆಂ­ದರೆ ಮುಂದಿನ ವರ್ಷ­ದಲ್ಲಿ ಈ ದರ ಇನ್ನೂ ಹೆಚ್ಚಾ­ಗುವ ಎಲ್ಲಾ ಸಾಧ್ಯ­ತೆ­ಗಳು ಗೋಚ­ರಿ­ಸ­ಲಾ­ರಂ­ಭಿ­ಸಿವೆ. ಅದಕ್ಕೂ ಮುನ್ನವೇ ಸರ್ಕಾರ ಎಚ್ಚೆ­ತ್ತು­ಕೊ­ಳ್ಳ­ಬೇ­ಕಾ­ಗಿದೆ.
ರಾಜ್ಯ­ದಲ್ಲಿ ಈ ವರ್ಷ ಭತ್ತ ಬೆಳೆ­ಯುವ ಪ್ರಮಾಣ ಕಡಿ­ಮೆ­ಯಾ­ಗು­ತ್ತಿದೆ. ನಿರೀ­ಕ್ಷಿತ ಪ್ರಮಾ­ಣ­ದಲ್ಲಿ ಭತ್ತ ನಾಟಿ­ಯಾ­ಗಿಲ್ಲ. ಈ ವರ್ಷದ ಮೂರು ಹಂಗಾ­ಮು­ಗ­ಳಿಂದ 14.07 ಲಕ್ಷ ಹೆಕ್ಟೇ­ರ್‌­ನಲ್ಲಿ ಬಿತ್ತ­ನೆಯ ಗುರಿ ಇತ್ತು. ಇನ್ನೂ ಬೇಸಿ­ಗೆಯ ಹಂಗಾಮು ನಾಟಿ­ಯಾ­ಗಿಲ್ಲ. ಮುಂಗಾ­ರಿ­ನಲ್ಲಿ ಸ್ವಲ್ಪ ಕಡಿ­ಮೆ­ಯಾ­ಗಿದೆ. ಮಳೆ ಆಶ್ರ­ಯ­ದಲ್ಲಿ ಬಿತ್ತ­ನೆಯೇ ಆಗ­ಲಿಲ್ಲ. ಕೆಲವು ಭಾಗ­ದಲ್ಲಿ ಹೆಚ್ಚು ಮಳೆ­ಯಿಂದ ಹಾನಿ­ಯಾ­ಗಿದೆ. ಇದು ಉತ್ಪಾ­ದ­ನೆಯ ಮೇಲೆ ಪರಿ­ಣಾಮ ಬೀರುವ ಸಾಧ್ಯ­ತೆ­ಗ­ಳಿವೆ. ಎಲ್ಲಾ ಹಂಗಾ­ಮು­ಗ­ಳಲ್ಲಿ ಉತ್ತಮ ಬೆಳೆ ಬಂದರೆ 40.78 ಲಕ್ಷ ಅಕ್ಕಿಯ ಉತ್ಪಾ­ದ­ನೆಯ ಗುರಿ­ಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಈಗ ಬೇಸಿ­ಗೆ­ಯ­ಲ್ಲಿಯೂ ಉತ್ತ­ಮ­ವಾಗಿ ಆದರೆ ಮಾತ್ರ 38 ಲಕ್ಷ ಟನ್‌ ಆಗ­ಬ­ಹು­ದೆಂದು ಅಂದಾಜು ಮಾಡ­ಲಾ­ಗು­ತ್ತಿದೆ. ಆದರೆ ಬೇಸಿ­ಗೆ­ಯಲ್ಲಿ ಆ ಪ್ರಮಾ­ಣ­ದಲ್ಲಿ ಆಗುವ ಸಾಧ್ಯ­ತೆ­ಗ­ಳಿ­ಲ್ಲದ ಕಾರಣ 30 ರಿಂದ 35 ಲಕ್ಷ ಟನ್‌ಗೆ ನಿಲ್ಲ­ಬ­ಹುದು ಎಂಬುದು ಒಂದು ಮೂಲ­ದಿಂದ ಲಭ್ಯ­ವಾ­ಗುವ ಮಾಹಿತಿ.
ಕೇಂದ್ರ ಸರ್ಕಾರ ರೂಪಿ­ಸಿ­ರುವ ರಾಷ್ಟ್ರೀಯ ಆಹಾರ ಭದ್ರತೆ ಮಿಷ­ನ್‌­ನಲ್ಲಿ ರಾಜ್ಯಕ್ಕೆ ಭತ್ತ ಮತ್ತು ದ್ವಿದಳ ಧಾನ್ಯ­ಗ­ಳಿಗೆ ಹೆಚ್ಚಿನ ಆದ್ಯತೆ ನೀಡ­ಲಾ­ಗು­ತ್ತಿದೆ. ಏಳು ಜಿಲ್ಲೆ­ಗ­ಳಲ್ಲಿ ಈ ಯೋಜನೆ ಜಾರಿ­ಯಾ­ಗು­ತ್ತಿದೆ. ಇದ­ರಿಂದ ಅಕ್ಕಿಯ ಉತ್ಪಾ­ದ­ಕತೆ ಹೆಚ್ಚಾ­ಗು­ತ್ತದೆ ಎಂದು ಕೃಷಿ ಇಲಾ­ಖೆಯ ಅಧಿ­ಕಾ­ರಿ­ಗಳು ಹೇಳು­ತ್ತಾರೆ.
ಆದರೆ ಲಭ್ಯ­ವಿ­ರುವ ಮತ್ತೊಂದು ಮೂಲದ ಪ್ರಕಾರ ಕೆಲವು ಜಿಲ್ಲೆ­ಗ­ಳಲ್ಲಿ ಇಳು­ವರಿ ಕುಂಠಿ­ತ­ವಾ­ಗು­ತ್ತಿದೆ. 15 ರಿಂದ 20ರಷ್ಟು ಭತ್ತದ ಇಳು­ವರಿ ಕಡಿ­ಮೆ­ಯಾ­ಗುವ ಸಾಧ್ಯ­ತೆ­ಗ­ಳಿವೆ. ಈ ರೀತಿ­ಯಾ­ದರೆ ನಿರೀ­ಕ್ಷಿತ ಪ್ರಮಾ­ಣದ ಉತ್ಪಾ­ದನೆ ಕುಸಿ­ತ­ವಾ­ಗು­ತ್ತದೆ. ಆಗ ಸಮಸ್ಯೆ ಇನ್ನಷ್ಟು ಹೆಚ್ಚಾ­ಗು­ತ್ತದೆ. ಏಕೆಂ­ದರೆ ರಾಜ್ಯಕ್ಕೆ ಆಂಧ್ರ­ಪ್ರ­ದೇ­ಶ­ದಿಂದ ಸಾಕಷ್ಟು ಅಕ್ಕಿ ಬರು­ತ್ತಿತ್ತು, ಆದರೆ ಈಗ ಅದು ನಿಂತಿದೆ.
ಕನಿಷ್ಠ ಬೆಂಬಲ ಬೆಲೆ­ಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇದ­ರಿಂದ ರೈತರು ಸಂತೋ­ಷ­ದ­ಲ್ಲಿ­ದ್ದಾರೆ. ಆದರೆ ಅಕ್ಕಿಯ ಬೆಲೆ ನಿಯಂ­ತ್ರ­ಣಕ್ಕೆ ಸರ್ಕಾರ ಶ್ರಮ­ವ­ಹಿ­ಸು­ತ್ತಿಲ್ಲ ಎಂಬ ದೂರು­ಗ­ಳಿವೆ.
ಈ ಬಗ್ಗೆ ಆಹಾರ ಮತ್ತು ನಾಗ­ರಿಕ ಸರ­ಬ­ರಾಜು ಸಚಿವ ಎಚ್‌. ಹಾಲಪ್ಪ ಹೇಳು­ವುದು, ಪಡಿ­ತ­ರ­ದಲ್ಲಿ ವಿತ­ರಣೆ ಮಾಡುವ ಆಹಾರ ಧಾನ್ಯದ ಬಗ್ಗೆ ಮಾತ್ರ ಸರ್ಕಾರ ತಲೆ ಕೆಡಿ­ಸಿ­ಕೊ­ಳ್ಳು­ತ್ತದೆ ಹೊರತು ಇನ್ನು­ಳಿದ ವಿಚಾ­ರ­ದಲ್ಲಿ ಅಲ್ಲ.
ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಲು ಎಲ್ಲಾ ಪ್ರಯತ್ನ ಮಾಡಿ ವಿಫ­ಲ­ವಾ­ಗಿ­ದ್ದೇವೆ. ಯಾವುದೇ ಕಾನೂ­ನಿ­ನಲ್ಲಿ ಇದು ಸಾಧ್ಯ­ವಾ­ಗು­ತ್ತಿಲ್ಲ ಎಂದು ಕೈಚೆ­ಲ್ಲು­ತ್ತಾರೆ.
ಪಡಿ­ತ­ರಕ್ಕೆ ಸಮಸ್ಯೆ ಇಲ್ಲ:
ಪಡಿ­ತ­ರಕ್ಕೆ ಸಮ­ಸ್ಯೆ­ಯಾ­ಗುವ ಸಾಧ್ಯ­ತೆ­ಗ­ಳಿಲ್ಲ. ಏಕೆಂ­ದರೆ ಈ ವರ್ಷ ಸರ್ಕಾರ ಲೆವಿ ಸಂಗ್ರ­ಹಣೆ ಬಿಗಿ­ಯಾಗಿ ಮಾಡು­ತ್ತಿದೆ. ರಾಜ್ಯ­ದಲ್ಲಿ 1.35 ಲಕ್ಷ ಮೆಟ್ರಿಕ್‌ ಟನ್‌ ಲೆವಿ ಸಂಗ್ರಹ ಮಾಡು­ತ್ತಿದೆ. ಕಳೆದ ಆರೇಳು ವರ್ಷ­ದಿಂದ ನಿಂತಿದ್ದ ಲೆವಿ ಸಂಗ್ರ­ಹಕ್ಕೆ ಈಗ ಚಾಲನೆ ನೀಡ­ಲಾ­ಗಿದೆ.
ಆದರೆ ಸಮ­ಸ್ಯೆ­ಯಾ­ಗು­ವುದು ಪಡಿ­ತರ ಬಿಟ್ಟು ಬೇರೆ­ಯ­ವರು ಖರೀದಿ ಮಾಡುವ ಭತ್ತಕ್ಕೆ. ಪಡಿ­ತ­ರ­ದಲ್ಲಿ ನೀಡು­ವುದು ಕೇವಲ ಹಸಿರು ಕಾರ್ಡ್‌ ಹೊಂದಿ­ರುವ ಕಡು ಬಡ­ವ­ರಿಗೆ ಮಾತ್ರ.
ಈಗ ಬೆಲೆ ಹೆಚ್ಚ­ಳ­ವಾ­ಗಿದೆ. ಮುಂದೆ ಕೊರ­ತೆಯೂ ಉಂಟಾ­ದರೆ ಜನ ಸಾಮಾ­ನ್ಯ­ರನ್ನು ಕಾಪಾ­ಡಲು ನಿಜಕ್ಕೂ ಆ ದೇವರೇ ಬರ­ಬೇ­ಕಾ­ಗು­ತ್ತದೆ.

ರುದ್ರಣ್ಣ ಹರ್ತಿ­ಕೋಟೆ

(ಕೃಪೆ-ಉದಯವಾಣಿ ವಾಣಿಜ್ಯ ಸಂಪದ)

Sunday, January 11, 2009

ಅಡಿಕೆಗೆ ಹೋದ ಮಾನ: ಬರುವುದು ಯಾವಾಗ



ಇಂದಿನ ಸರಕಾರದಲ್ಲಿ ಅಡಿಕೆ ಬೆಳೆಯುವ ಪ್ರದೇಶದಿಂದ ಆರಿಸಿಬಂದ ಸಿ.ಎಂ ಹಾಗೂ ಇತರ ಮಂತ್ರಿಗಳಿದ್ದರೂ ಅಡಿಕೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಇತರ ವಸ್ತುಗಳ ಬೆಲೆ ಹೆಚ್ಚುತ್ತಿದ್ದರೆ ಅಡಿಕೆಯ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ಅತಂತ್ರ ಬದುಕಿನಲ್ಲಿ ಒದ್ದಾಡುತ್ತಿರುವ ಬೆಳೆಗಾರ ಸರಕಾರಕ್ಕೆ ಬೆಂಬಲ ಬೆಲೆ ನೀಡುವಂತೆ ಮಾಡಿದ ಮನವಿಗೆ ಸರಕಾರ “ನೋ” ಹೇಳಿದ್ದು ಬರಸಿಡಿಲಿನಂತೆ ಎರಗಿದೆ.
“ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು” ಎಂಬ ನಾಡ್ನುಡಿ ಅಕ್ಷರಶ: ಅಡಿಕೆ ಬೆಳೆಗಾರ ಪಾಲಿಗೆ ನಿಜವಾಗಿದೆ.
ಒಂದು ಕಡೆ ಬೆಳೆ ಇದ್ದರೆ ಬೆಲೆ ಇಲ್ಲ.ಜೊತೆಗೆ ಹವಮಾನ ವೈಪರಿತ್ಯದಿಂದ ಪ್ರತಿ ವರ್ಷ ಒಂದಲ್ಲ ಒಂದು ಹೊಸ ರೋಗ ಅಡಿಕೆಗೆ ಪೂರಕ ಬೆಳೆಗೆ ದಾಳಿ ಇಡುತ್ತಿದ್ದು ಅಡಿಕೆ ಕೃಷಿಕರನ್ನು ಕಂಗೇಡಿಸಿದೆ.ಮತ್ತೊಂದು ಕಡೆ ದರ ವೈಪರಿತ್ಯವನ್ನು ಅನುವಿಸುತ್ತಿರುವ ಅಡಿಕೆ ಬೆಳೆಗಾರರು ,ಎಲ್ಲರೀತಿಯಿಂದಲೂ “ಅಡಕತ್ತರಿಯಲ್ಲಿ ಸಿಕ್ಕ ಅಡಿಕೆ”.ಇತರರಿಗೆ ಮಾತ್ರ “ಶ್ರೀಮಂತ ಬೆಳೆಗಾರ”
ಮಲೆನಾಡು,ಕರಾವಳಿ ಪ್ರದೇಶವಾದ ಶಿರಸಿ,ಸಿದ್ದಾಪುರ,ಯಲ್ಲಾಪುರ,ಸಾಗರ,ಶಿವಮೊಗ್ಗ,ಹೊಸನಗರ,ದಕ್ಷಿಣಕನ್ನಡ ಜಿಲ್ಲೆಗಳಲ್ಲಿ,ಹಾಗೂ ಈಗ ಬಯಲು ಸೀಮೆ,ಕಡೂರು,ಬೀರೂರುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ಅಟಲ್‌ ಬಿಹಾರಿ ವಾಜ್‌ ಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಡಿಕೆಯ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದ ಅಂದಿನ ವಾಣಿಜ್ಯ ಮಂತ್ರಿ ದಿ.ರಾಮಕೃಷ್ಣಹೆಗಡೆ ಅವರು ಅಡಿಕೆಗೆ ಬಂಗಾರದ ಬೆಲೆಯನ್ನು ,ವಿದೇಶಿ ಅಡಿಕೆಗೆ ಅಧೀಕ ತೆರಿಗೆ ವಿಧಿಸುವುದರ ಮೂಲಕ,ಇತರ ಬಿಗಿಯಾದ ವಾಣಿಜ್ಯ ನೀತಿಯಿಂದ ದೊರಕಿಸಿಕೊಟ್ಟಿದ್ದರು.ಇದರಿಂದ ಅಡಿಕೆ ಬೆಳೆಗಾರ ಸಂಖ್ಯೆ ಹೆಚ್ಚಿತು.ಕೇವಲ ಪ್ರಾದೇಶಿಕವಾಗಿ ಬೆಳೆಯುವ ಪ್ರದೇಶದಾಚೆ ಇದರ ಬೆಳೆಯುವರು ಸಹ ಹೆಚ್ಚಾದರು.ಬೆಲೆ ಏರಿಕೆಯಿಂದ ತಮ್ಮ ಜೀವನ್ದ ಮೌಲ್ಯವನ್ನು ಹೆಚ್ಚಿಸಿಕೊಂಡ ಅಡಿಕೆ ಬೆಳೆಗಾರರು ನಂತರ ದಿನಗಳಲ್ಲಿ ಹಿಡಿತ ಕಳೆದುಕೊಂಡ ನೀತಿಯಿಂದಾಗಿ ಮತ್ತು ಇತರ ಕಾರಣಗಳಿಂದ ಅಡಿಕೆಯ ದರ ಬೀಳುತ್ತ ನೆಲಕಚ್ಚಿದರೆ,ಆಗ ಏರಬಹುದು,ಈಗ ಏರಬಹುದು ಎಂಬ ಆಸೆಯಿಂದ ಬೆಳೆಗಾರ ಕಾಲ ತಳ್ಳುತ್ತಿದ್ದಾರೆ.ಸರಕಾರ ಈ ಹಿಂದೆ ಬೆಂಬಲ ಬೆಲೆಯನ್ನು ಘೋಷಿಸಿದರೂ ಹೆಚ್ಚಿನ ಜನರಿಗೆ ಪ್ರಯೋಜನ ಸಿಗದೇ ಸೋತಿತು.ಈಗ ಮತ್ತೆ ದರ ಏರಿಳತಕ್ಕೆ ಒಳಗಾಗುತ್ತಿರುವ ಅಡಿಕೆ ಬೆಳೆಗಾರರನ್ನು ಚಿಂತಾಕ್ರೀತರನ್ನಾಗಿ ಮಾಡಿದೆ.ಈ ವರ್ಷ ಮತ್ತೆ ಬೆಂಬಲ ಬೆಲೆ ನೀಡಿ ಬೆಳೆಗಾರರಿಗೆ ಚೈತನ್ಯ ನೀಡಿ ಎಂದು ಬೆಳೆಗಾರರು ಮಾಡಿದ ಮನವಿಗೆ ಸರಕಾರ “ನೋ” ಎಂದು ಹೇಳಿದೆ.ಇದು ಬೆಳೆಗಾರರನ್ನು ಕಂಗೇಡಿಸಿದೆ. ಈ ಹಿಂದೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್‌. ಸಮ್ಮೀಶ್ರ ಸರಕಾರ ಇದ್ದಾಗ ಅಂದಿನ ಸಚಿವರಾಗಿದ್ದ ಶಿವಾನಂದ ನಾಯ್ಕ,ನಾಗರಜ ಶೆಟ್ಟಿ ಮುಂತಾದ ಬಿ.ಜೆ.ಪಿ. ಮುಖಂಡರು ಅಡಿಕೆ ಬೆಳೆಗಾರರ ಸಬೆಕರೆದು ,ಬೆಳೆಗಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ರವಸೆ ನೀಡಲಾಗಿತ್ತು.ಆದರೆ ಇಂದು ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾದಿಯಾಗಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ,ಹಾಲಪ್ಪ,ಕೃಷ್ಣಶೆಟ್ಟಿ,ಸದಾನಂದ ಗೌಡ ಮುಂತಾದವರು ಅಡಿಕೆ ಬೆಳೆಯುವ ಪ್ರದೇಶದಿಂದ ಬಂದವರಾಗಿದ್ದು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.ಅಂದು ಸಮ್ಮೀಶ್ರ ಸರಕಾರದಲ್ಲಿ ಆಸಕ್ತಿ ತೋರಿಸಿದವರು ಇಂದು ಅವರದೇ ಸರಕಾರ ಆಡಳಿತದಲ್ಲಿ ಇರುವುದರಿಂದ ಅಡಿಕೆ ಬೆಳೆಗಾರರು ತಮ್ಮ ಕೇಲಮೊಂದು ಸಮಸ್ಯೆಗಾದರೂ ಪರಿಹಾರ ಸಿಗಬಹುದು ಎಂದು ಆಶೀಸಿದ್ದರು.
ಅಡಿಕೆಯನ್ನು ಕಮಾಡಿಟಿ ಎಕ್ಸ್ಚೆಂಜ್‌ ನಲ್ಲಿ ಸೇರಿಸಿರುವುದು ,ಶೇರು ಮಾರುಕಟ್ಟೆ ಕುಸೀತ,ಆರ್ಥೀಕ ಕುಸಿತ ಅಡಿಕೆ ಬೆಲೆಗೆ ಹೊಡೆತ ನೀಡಿದರೆ ,ಕುಸಿಯುತ್ತಿರುವ ಆರ್ಥೀಕ ಸ್ಥಿತಿಯಲ್ಲಿ ಅದು ಜೀವನದ ಅವಶ್ಯಕ ವಸ್ತು ಅಲ್ಲದೇ ಇರುವುದರಿಂದ ಸರಕಾರ ಬೆಂಬಲ ಬೆಲೆ ನೀಡಲು ನಿರಾಕರಿಸಿದರೂ ಅಡಿಕೆ ಒಂದು ಕೃಷಿಯ ಅಂಗವಾಗಿದೆ.ಅಡಿಕೆ ಬೆಳೆಗಾರರಿಗೆ ಬೇರೆ ಬೆಳೆ ಇಲ್ಲದೇ ಪುರಾತನ ಕಾಲದಿಂದ ಕುಲ ಕಸುಬಾಗಿ ಬೆಳೆದುಕೊಂಡು ಬರಲಾಗುತ್ತಿದೆ.ಹೆಚ್ಚಿನದಾಗಿ ಗುಟ್ಕಾಕ್ಕೆ ಅಡಿಕೆ ಹೋಗುತ್ತದೆ ಆದರೂ ಪರ್ಯಾಯ ಬಳಕೆಯ ಬಗ್ಗೆ ಸಾಕಷ್ಟು ಸಂಶೋಧನೆ ಆಗದೇ ಇರುವುದು ಅಡಿಕೆ ಬೆಳೆಗಾರರಿಗೆ ಸಾಕಷ್ಟು ಹೊಡೆತ ನೀಡಿದೆ.ಸಂಶೋಧನೆಗೆ ತೋಡಗಿರುವವರಿಗೂ ಸಾಕಷ್ಟು ಪ್ರೋತ್ಸಾಹ ಸಿಗದೆ ಅವರ ಸಂಶೋಧನೆ ನೆಲ ಕಚ್ಚುತ್ತಿದೆ. ರೈತರಿಗೆ ವ್ಯವಹಾರಿಕವಾಗಿ ದರ,ಕ್ಯಾಂಪ್ಕೊದಂತಹ ಸಂಸ್ಥೆಗೆ ದರ ನೆಲಕಚ್ಚಿದಾಗ ಹೆಚ್ಚಿನ ದರದಲ್ಲಿ ಬೆಳೆಯನ್ನು ಖರಿದಿಸುವ ವ್ಯವಸ್ಥೆಗೆ ಆರ್ಥಿಕ ಸಹಕಾರ ,ಹೆಚ್ಚುತ್ತಿರುವ ಇತರ ವಸ್ತುಗಳ ಬೆಲೆ,ಕೂಲಿ,ಗೊಬ್ಬರ ಇತರ ಖರ್ಚನ್ನು ಗಮನಿಸಿ ನೂತನವಾಗಿ ಬೆಂಬಲ ಬೆಲೆ ಘೋಷಿಸುವುದು ಅಗತ್ಯವಾಗಿದೆ.ಇಂದು ಕೆಂಪಡಕಿಗೆ 8-9 ಸಾವಿರ ರೂ ಮತ್ತು ಚಾಲಿ (ಬಿಳಿ) ಅಡಿಕೆಗೆ 6000-7000 ರೂ ದರ ಸಿಗುತ್ತಿದೆ.ಕೆಂಪಡಿಕೆಗೆ 13000 ರೂ.,ಚಾಲಿಗೆ 9000 ರೂ ಬೆಂಬಲ ಬೆಲೆ ಅಗತ್ಯವಾಗಿದೆ ಎಂದು ಬೆಳೆಗಾರರ ಅಭಿಪ್ರಾಯ.ಈಗಾಗಲೆ ಅನೇಕ ಕಡೆಗಳಲ್ಲಿ ಸುಗ್ಗಿ ಆರಂವಾಗಿದ್ದು ಬೆಂಬಲ ಬೆಲೆ ಇಲ್ಲ ಎಂದು ಹೇಳಿರುವುದು ಅಡಿಕೆ ಬೆಲೆ ಮೇಲೆ ಪರಿಣಾಮ ಬೀರುವುದು ನಿಶ್ಚಿತ.ಈ ಹಿಂದೆ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಲಾಗಿತ್ತು.ಇದಕ್ಕೆ 10ಕೋಟಿ ರೂಗಳನ್ನು ಮಂಜೂರಿ ಮಾಡಿ ಅದರ ಮೂಲಕ ಅಡಿಕೆಗೆ ಚೈತನ್ಯ ತುಂಬುವ ಕೆಲಸವಾಗಿತ್ತು.ಚಾಲಿ ಅಡಿಕೆ 6000ರೂ ಮತ್ತು ಕೆಂಪಡಿಕೆಗೆ 10000ರೂಗಳ ಬೆಂಬಲ ಬೆಲೆಯಡಿಯಲ್ಲಿ ಪ್ರತಿ ರೈತರಿಂದ 5 ಕ್ವೀ. ಅಡಿಕೆಯನ್ನು ಖರಿದಿಸಲಾಗಿತ್ತು.ಬೆಂಬಲ ಬೆಲೆ ಘೋಷಣೆಯಿಂದ 4500 ರೂಗಿದ್ದ ಚಾಲಿ ಅಡಿಕೆ 7000 ರೂಗೆ ಏರಿದರೆ,7000ರದ ಆಸುಪಾಸಲ್ಲಿದ್ದ ಕೆಂಪಡಿಕೆ 10000 ರೂಗಿಂತ ಮೇಲಿನ ಪಡೆದಿತ್ತು.ಆದರೆ ಬೆಂಬಲ ಬೆಲೆ ನೀಡಿದ್ದು ಮಾತ್ರ ಮೇನಲ್ಲಿ!!. ಇದು ಸಾಕಷ್ಟು ಬೆಳೆಗಾರರಿಗೆ ಪ್ರಯೋಜನ ಸಿಗದೆ ಇದ್ದರೂ ಅಡಿಕೆ ಬೆಲೆಗೆ ಚೈತನ್ಯ ನೀಡಿತ್ತು.ಈ ವರ್ಷ ಬೆಂಬಲ ಬೆಲೆ ನೀಡಲು ಇದು ಸೂಕ್ತ ಸಮಯವಾಗಿತ್ತಾದರೂ ಸರಕಾರ ಈ ವರ್ಷ ಬೆಂಬಲ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

· “ಕಳ್ಳ” ಅಡಿಕೆ ತಂದಿತು ಆಪತ್ತು:
ಗೌಹಾಟಿ ಮುಂತಾದ ಕಡೆ ಅಡಕೆಯನ್ನು ಅರಣ್ಯಪ್ರದೇಶದಲ್ಲಿ ಬೆಳೆದು ದೊಡ್ಡ ಪ್ರಮಾಣದಲ್ಲಿ ಬಾರತಕ್ಕೆ ಕಳುಹಿಸುತ್ತಿರುವುದರಿಂದ ಮತ್ತು ಮಲೇಷಿಯಾ,ಶ್ರೀಲಂಕಾ ದೇಶಗಳಿಂದ ಕಡಿಮೆ ದರ್ಜೆಯ ಅಡಿಕೆಯನ್ನು ಕಳ್ಳ ವ್ಯವಸ್ಥೆಯಡಿಯಲ್ಲಿ ಬಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಬಾರತೀಯ ಅಡಿಕೆಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ.ದಿ.ರಾಮಕೃಷ್ಣ ಹೆಗಡೆ ವಾಣಿಜ್ಯ ಮಂತ್ರಿಯಾದ ಸಂದರ್ದಲ್ಲಿ ಗ್ಲೋಬಲೈಸೆಶನ್‌ ಇದ್ದರೂ 33-4 ಕಾಯ್ದೆಯಡಿಯಲ್ಲಿ ಆಮದು ಅಡಿಕೆಗೆ ಶೇ.300ರಷ್ಟು ತೆರಿಗೆ ಮತ್ತು ಎಕ್ಸಿವ್‌ ನಿಯಮದಲ್ಲಿ ಹಿಡಿತ ತಂದು ಕಳ್ಳವ್ಯವಹಾರಕ್ಕೆ ಕೊನೆಗಾಣಿಸಿದ್ದರು.ಅದಲ್ಲದೇ ಪಾಕಿಸ್ಥಾನದ ಜೊತೆ ಒಳ್ಳೆ ಸಂಬಂಧ ಬೆಳೆಸಿ ,ಹೆಚ್ಚು ಅಡಿಕೆಯನ್ನು ಉಪಯೋಗಿಸುವ ಪಾಕಿಸ್ಥಾನಕ್ಕೆ ರಪ್ತುಮಾಡಲು ಶ್ರಮಿಸಿದ್ದರು.ಗಡಿ ಸಮಸ್ಯೆಯ ಕರಿ ನೆರಳು ಈಗ ಮತ್ತೆ ಅಲ್ಲಿಗೆ ರಪ್ತು ಮಾಡಲು ತಡೆಯಾಗಿದೆ.ಇದರಿಂದಲೂ ಅಡಿಕೆಗೆ ಅಷ್ಟು ಬೇಡಿಕೆ ಕುಸಿದಂತಾಗಿದೆ.ಬೆಲೆ ಬಂದಾಗ ಮತ್ತು ಸ್ವಲ್ಪ ಕೃಷಿ ಕಾರ್ಯ ಸ್ವಲ್ಪ ಏರುಪೇರಾದರೂ ನಡೆಯುತ್ತದೆ ಎಂದು ಎಲ್ಲ ಪ್ರದೇಶದಲ್ಲಿ ಬೆಳೆಯಲು ಆರಂಭಿದ್ದು ಸಹ ಬೆಲೆ ಯ ಮೇಲೆ ದುಷ್ಪರೀಣಾಮ ಬೀರಿತು. “ಸರಕಾರ ಅಥವಾ ನಬಾರ್ಡ್‌ ಕೃಷಿ ಯೋಜನೆಗಳನ್ನು ತಂದು ಪ್ರಾದೇಶಿಕ ಬೆಳೆಗಳನ್ನು ಆಯಾ ಪ್ರದೇಶದಲ್ಲಿ ಸೀಮಿತಗೊಳಿಸಬೇಕು.ಇದರಿಂದ ಬೆಳೆಗಳಲ್ಲಿ ಸಮತೋಲನ ಉಂಟಾಗುತ್ತದೆ.ಆಯಾಪ್ರದೇಶದಲ್ಲಿ ಪ್ರಾದೇಶಿಕವಾಗಿ ಇರುವ ಬೆಳೆಗೆ ಮಾತ್ರ ಹೆಚ್ಚಿನ ಪ್ರಯೋಜನ ನೀಡುವಂತಾದರೆ,ಗೋದಿ ಬೆಳೆಯುವಲ್ಲಿ ಅಡಿಕೆ ಬೆಳೆಯುವುದಿಲ್ಲ.ಅಡಿಕೆ ಬೆಳೆಯುವಲ್ಲಿ ಕಾಫಿ ಬೆಳೆಯದೆ ಯಾವುದೇ ಬೆಳೆಗಳ ಮೇಲೆ ಆಗುವ ದುಷ್ಪರೀಣಾಮವನ್ನು ತಡೆಗಟ್ಟಬಹುದು” ಎಂದು ಅಭಿಪ್ರಾಯಪಡುತ್ತಾರೆ ಅಡಿಕೆ ಕೃಷಿಕ ಯಲ್ಲಾಪುರದ ಪ್ರಮೋದ ಹೆಗಡೆ.
“ಇಂದು ಅಡಿಕೆ ಉತ್ಪಾದನೆಗೆ ಖರ್ಚು ಹೆಚ್ಚಾಗುತ್ತಿದ್ದು ಬೆಲೆ ಕುಸಿಯುತ್ತಿದೆ.ನುರಿತ ಕೆಲಸಗಾರರ ಅಬಾವ ಉಂಟಾಗುತ್ತಿದ್ದು,ರೋಗಗಳ ಹಾವಳಿ ಮೀತಿ ಮೀರುತ್ತಿದೆ.ಸರಕಾರ ಮಾರ್ಕೇಟಿಂಗ್‌ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಸಂಸ್ಥೆಗಳಿಗೆ ರೈತರ ಮಾಲನ್ನು ಬೆಲೆ ಬರುವ ತನಕ ಹಿಡಿದಿಟ್ಟುಕೊಳ್ಳಲು ಅಥವಾ ಹೆಚ್ಚಿನ ಬೆಲೆಗೆ ಇದನ್ನು ಖರಿದಿಸಲು ಸಾಲ ಸೌಲ್ಯ ನೀಡಬೇಕು” ಎಂದೆನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಎನ್‌.ವಿ.ಹೆಗಡೆ.
· ತಂಬಾಕು / ಅಡಿಕೆ:
ಅಡಿಕೆ ಮತ್ತು ತಂಬಾಕಿಗೆ ಮೊದಲಿನಿಂದಲೂ ವೈರತ್ವ!!.ಅಡಿಕೆ ಮತ್ತು ತಂಬಾಕಿನ ಲಾಬಿ ಇಂದು ನಿನ್ನೆಯದಲ್ಲ..ಮೊದಲಿನಿಂದಲೂ ಅಡಿಕೆಯ ಮೇಲೆ ಸವಾರಿ ಮಾಡುತ್ತಿರುವ ತಂಬಾಕಿನ ಲಾಬಿ,ಅಡಿಕೆ ವಿಷಕಾರಿ ಎಂದು ಪ್ರಚಾರಮಾಡಿತು.ಗುಟ್ಕಾದಲ್ಲಿನ ವಿಷಕಾರಿ ಪದಾರ್ಥ ಅಡಿಕೆಗೆ ಮಾರಕವಾಗಿ ಅಡಿಕೆಯೇ ವಿಷಕಾರಿ ಪಟ್ಟಿಯಲ್ಲಿದೆ!.ಅದಿಕೆಯಲ್ಲಿರುವ ಅನೇಕ ಉಪಯೋಗಹೊಂದಿದ ಅಂಶಗಳ ಪ್ರಚಾರ ಅವಶ್ಯವಾಗಿದೆ.ಗುಟ್ಕಾದಲ್ಲಿನ ವಿಷ ಪದಾರ್ಥ ಕಡಿಮೆ ಮಾಡಿ ಅಡಿಕೆ ಆರೋಗ್ಯಕ್ಕೆ ಉತ್ತಮ ಎಂಬ ಬಿರುದು ಬೇಕಾಗಿದೆ.
· ಬೇಕಿದೆ ಸಹಾಯ ಹಸ್ತ:ಅಡಿಕೆಯ ಸಂಪೂರ್ಣ ಬೆಲೆ ನಿಯಂತ್ರಿಸುವವರು ಇತರ ರಾಜ್ಯದ ದೊಡ್ಡ ದೊಡ್ಡ ವ್ಯಾಪರಸ್ಥರು.ಕೋಟ್ಯಾಂತರ ವ್ಯವಹಾರ ನಡೆಸುವರು ಇವರೆ.ಆದರೆ ಗುಟ್ಕಾಕೆ ಹೋಗುವ ಅಡಿಕೆ ಕಡಿಮೆ ದರ್ಜೆಯದು ಮತ್ತು ಕೆಲಮೊಂದು ಮದ್ಯಮದರ್ಜೆಯ ಅಡಿಕೆ ಅಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತದೆ.ಆದರೆ ಇತರ ದರ್ಜೆಯ ಅಡಿಕೆ ಎಲ್ಲಿಗೆ ಹೋಗುತ್ತದೆ ಯಾರಿಗೂ ತಿಳಿದಿಲ್ಲ.ಅಡಿಕೆಗೆ ಕಡಿಮೆ ರೇಟು ಬಿದ್ದಿದೆ ಎಂದು ಕಡಿಮೆ ಬೆಲೆಗೆ ಖರಿದಿಸಿ ಹೆಚ್ಚಿನ ಲಾ ಮಾಡಿಕೊಳ್ಳುವ ವ್ಯಾಪರಸ್ಥರಿಗೆ ಕಡಿವಾಣ ಹಾಕಲು ಸರಕಾರ ಕ್ಯಾಂಪ್ಕೊ ಮತ್ತು ಶಿವಮೊಗ್ಗದ ಸಂಸ್ಥೆಗೆ 10 ಕೋಟಿರೂಗಳ ನೆರವು ನೀಡಿದ್ದರೂ ಬೆಲೆ ಏರಿಸಲು ಮತ್ತು ಮಾಲನ್ನು ಬೆಲೆ ಬರುವ ತನಕ ರಕ್ಷಿಸಲು ಏನೇನು ಸಾಲದು.ರೈತರಿಗೆ ಮಾಲನ್ನು ಕೆಡದಂತೆ ಹೆಚ್ಚಿನದಿನ ಬರುವಂತೆ ರಕ್ಷಿಸಲು ಔಷಧಿ ಸಾಮಗ್ರಿಗಳ ಸೌಲ್ಯ,ಗೊಡೊನ್‌ ಗಳ ವ್ಯವಸ್ಥೆ,ಆಗಬೇಕಿದೆ.
ಅಡಿಕೆ ಪ್ರಕೃತಿ ಮೇಲೆ ಅವಲಂಬಿಸಿದ್ದು ,ರೋಗಾಣುಗಳ ದಾಳಿ,ಹೊಸ-ಹೊಸ ರೋಗಗಳ ಹೆಚ್ಚಿದೆ.ಬಣ್ಣದ ರೋಗ,ಅಡಿಕೆ ಮಿಳ್ಳೆ ಉದುರುವ ರೋಗ,ಚಂಡೆ ರೋಗ,ಹಳದಿ ರೋಗ ಮುಂತಾದ ರೋಗದಿಂದ ಮಲೆನಾಡಿನ ಹೆಗ್ಗುರುತಾಗಿದ್ದ ಅಡಿಕೆ ತೋಟಗಳು ಬರಿದಾಗುತ್ತಿದೆ.ಒಮ್ಮೆ 1 ಮರ ಹೋದರೂ ಅದು ಬೆಳೆಗಾರರ ಪಾಲಿಗೆ ಅದು ಸಾವಿರಾರು ರೂಗಳಿಗೆ ಸಮಾನ.ಏಕೆಂದರೆ ಅಡಿಕೆ ಬೆಳೆ 1 ವರ್ಷಕ್ಕೆ ಬೆಳೆ ಸಿಗುವಂಥದಲ್ಲ.ಅದರ ಪಸಲು ಕೈಗೆ ಸಿಗಲು 10-15 ವರ್ಷವಾದರೂ ಬೇಕು.ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ಅವಶ್ಯವಾಗಿದೆ.ಸರಕಾರ ರೋಗದ ಬಗ್ಗೆ ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ.ಶ್ರೀಮಂತ ಬೆಳೆ ಎಂದು ಯಾಮದೇ ಪರಿಹಾರ ಅಡಿಕೆ ಬೆಳೆಗಾರರಿಗೆ ಸಿಗುತ್ತಿಲ್ಲ.ನೈಜ ಸ್ಥಿತಿ ಹಾಗೆ ಇಲ್ಲದೇ ಇರುವುದರಿಂದ ಇದನ್ನು ಪ್ಲಾಂಟೇಶನ್‌ ಬೆಳೆಗೆ ಸೇರಿಸಬೇಕು ಮತ್ತು ಅದಕ್ಕೆ ಸಿಗುವ ಸೌಲ್ಯ ನೀಡಬೇಕು ಎಂಬುದು ಅಡಿಕೆ ಬೆಳೆಗಾರರ ಕನಸು.ಅಡಿಕೆಗೆ ಈಗಾಗಲೇ ಹೋಗಿರುವ ಮಾನ ಯಾವುದರಿಂದಲಾದರೂ ಬರುತ್ತದೆಯೇ?ಕಾದು ನೋಡಬೇಕಷ್ಟೆ.

ನಿತಿನ್‌ ಮುತ್ತಿಗೆ nitinmuttige@gmail.com

Thursday, January 1, 2009

ತುಡುವೆ ಜೇನಿಗೊಂದು ಪಾರದರ್ಶಕ ಪೆಟ್ಟಿಗೆ.


ಜೇನು ತುಪ್ಪದ ರುಚಿ ಹಾಗೂ ಮಹತ್ವವನ್ನು ಸವಿದವರೇ ಬಲ್ಲರು. ಆದರೆ ತುಡುವೆ ಜೇನನ್ನು ಪೆಟ್ಟಿಗೆಯಲ್ಲಿ ಸಾಕುವವರಿಗೆ ತುಪ್ಪದ ಮಹತ್ವ ಇನ್ನೂ ಚೆನ್ನಾಗಿ ಬಲ್ಲವರಾಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ತುಡುವೆ ಜೇನುಹುಳಗಳನ್ನು ಪೆಟ್ಟಿಗೆಯಲ್ಲಿ ಸಾಕುವುದು ಕೃಷಿಕರಿಗೆ ಬಹಳ ಪ್ರಯೋಜನಾಕರಿ ಎಂಬುದು ನಿಜವಾದರೂ, ಜೇನುಕುಟುಂಬಗಳು ಅಕ್ಟೋಬರ್‌ ನವೆಂಬರ್‌ ತಿಂಗಳಿನಲ್ಲಿ ಹಿಸ್ಸೆಯಾಗಿ ಹಾರಿಹೋಗದಂತೆ ತಡೆಯುವುದು ಕಷ್ಟಕರ ಕೆಲಸ. ಮಳೆಗಾಲ ಮುಗಿದ ತಕ್ಷಣ ರಾಣಿ ಹುಳು ಮತ್ತೊಂದು ರಾಣಿಮೊಟ್ಟೆಯನ್ನಿಟ್ಟು ಹಾರಿಹೋಗುತ್ತದೆ. ಇದನ್ನು ತಡೆಯಲು ಕೃತಕ ಹಿಸೆಯನ್ನು ಮಾಡಿಸಬೇಕಾಗುತ್ತದೆ. ಅಥವಾ ಹೊಸ ರಾಣಿ ಮೊಟ್ಟೆಗಳನ್ನು ಕೀಳಬೇಕಾಗುತ್ತದೆ.ಮರದ ಪೆಟ್ಟಿಗೆಯೊಳಗಿನ ಜೇನು ಕುಟುಂಬಗಳ ಹಿಸ್ಸೆ ಪ್ರಕ್ರಿಯೆಯನ್ನು ಗಮನಿಸಲು ಜೇನು ಪೆಟ್ಟಿಗೆಯ ಮುಚ್ಚಳವನ್ನು ಪದೆ ಪದೆ ತೆಗೆದು ನೋಡಬೇಕು. ರಾಣಿ ಮೊಟ್ಟೆಯನ್ನು ಇಟ್ಟಾಗ ಹುಳುಗಳು ಸಿಟ್ಟಿನಿಂದ ಇರುತ್ತವೆಯಾದ್ದರಿಂದ ಮರದ ಪೆಟ್ಟಿಗೆಯ ಮುಚ್ಚುಳ ತೆಗೆದಾಗಲೆಲ್ಲಾ ಹತ್ತಾರು ಜೇನುನೊಣಗಳಿಂದ ಕಚ್ಚಿಸಿಕೊಳ್ಳುವುದು ಅನಿವಾರ್ಯ. ಎರಡು ದಿನಗಳಿಗೊಮ್ಮೆ ಜೇನುಪೆಟ್ಟಿಗೆಯ ಸಂಸಾರಕೋಣೆಯನ್ನು ಮುಚ್ಚಳ ತೆಗೆದು ನೋಡದಿದ್ದರೆ ಜೇನುಕುಟುಂಬ ಪರಾರಿಯಾಗುವುದು ಖಂಡಿತ. ಪೆಟ್ಟಿಗೆಯ ಮುಚ್ಚಳ ತೆಗೆಯದೇ, ರಾಣಿ ಹಾಗು ಇತರ ಹುಳುಗಳ ಕೆಲಸಗಳನ್ನು ಅರಿಯಲು ಅತ್ಯಂತ ಸುಲಭವಾದ ಮಾರ್ಗವೆಂದರೆ, ಜೇನುಪೆಟ್ಟಿಗೆಯ ಸಂಸಾರಕೋಣೆಯ ಹೊರಗಡೆ ಗಾಜನ್ನು ಅಳವಡಿಸುವುದು. ಇದರಿಂದಾಗಿ ಪದೆಪದೇ ಮುಚ್ಚುಳತೆಗೆದು ನೋಡುವ ಕೆಲಸ ತಪ್ಪುತ್ತದೆ ಎನ್ನುವುದು ಹಲವಾರು ವರ್ಷಗಳಿಂದ ತುಡುವೆ ಜೇನಿನ ಕೃಷಿ ಮಾಡುತ್ತಾ ಬಂದಿರುವ ಸಾಗರ ತಾಲ್ಲೂಕಿನ ಕೆರೇಕೈಪ್ರಶಾಂತ್‌ರವರ ಅಭಿಪ್ರಾಯ.
ಹಣವೂ ಉಳಿತಾಯ: ಮರದಿಂದ ತಯಾರಿಸಿದ ಜೇನುಪೆಟ್ಟಿಗೆಗೆ ಸುಮಾರು 900 ರೂಪಾಯಿಗಳು ತಗಲುತ್ತವೆ. ಆದರೆ ಗಾಜಿನಿಂದ ತಯಾರಾಗುವ ಜೇನುಪೆಟ್ಟಿಗೆ ತಗಲುವ ವೆಚ್ಚ 400 ರೂಪಾಯಿ. ಗಾಜು ಮಾರಾಟ ಮಾಡುವ ಅಂಗಡಿಗಳಲ್ಲಿನ ಅಳಿದುಳಿದ ಗಾಜಿನ ತುಣುಕುಗಳು ಅರ್ದ ಬೆಲೆಗೆ ದೊರಕುತ್ತದೆ. ಅವುಗಳಿಗೆ ಅರಾಲ್ಡೇಟ್‌ ಅಂಟನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಒಂದು ಮುನ್ನೆಚ್ಚರಿಕೆಯನ್ನು ಮಾತ್ರಾ ತೆಗೆದುಕೊಳ್ಳಬೇಕು. ತುಡುವೆ ಜೇನುಗಳು ಕತ್ತಲಿನಲ್ಲಿ ಮಾತ್ರಾ ಗೂಡುಕಟ್ಟಿ ವಾಸಮಾಡುವುದರಿಂದ ಗಾಜಿನಪೆಟ್ಟಿಗೆಯ ಒಳಗಡೆ ಬೆಳಕು ಪ್ರವೇಶಿಸದಂತೆ ದಟ್ಟ ವರ್ಣದ ಬಟ್ಟೆಯಿಂದ ಮುಚ್ಚಬೇಕಾಗುತ್ತದೆ. ಜೇನುನೊಣಗಳ ಚಲನವಲನ ನೋಡಬೇಕಾದ ಸಂದರ್ಭಗಳಲ್ಲಿ ಬಟ್ಟೆಯನ್ನು ಬದಿಸರಿಸಿ ನೋಡಿದರಾಯಿತು. ಗಾಜು ಅಳವಡಿಸಿದ ಪಾರದರ್ಶಕ ಜೇನುಪೆಟ್ಟಿಗೆಯಿಂದ ಪದೆಪದೆ ಜೇನುನೊಣಗಳಿಗೆ ತೊಂದರೆಕೊಡುವುದು ಮತ್ತು ಅವುಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು, ಹಾಗೂ ಜೇನುಕುಟುಂಬಗಳು ಪರಾರಿಯಾಗುವುದನ್ನು ಸುಲಭದಲ್ಲಿ ಕಂಡುಹಿಡಿಯಬಹುದು. ಇಡೀ ಪೆಟ್ಟಿಗೆಯನ್ನು ಗಾಜಿನಿಂದ ರಚಿಸ ಬಯಸುವವರು ಒಳಗಡೆ ಗಾಳಿ ಪ್ರವೇಶಿಸಲು ಸಣ್ಣ ಜಾಗವನ್ನು ಬಿಡಲು ಮರೆಯಬಾರದು.
ರಾಘವೇಂದ್ರ ಶರ್ಮಾ ಕೆ.ಎಲ್‌

Saturday, December 27, 2008

ಬರಲಿದೆ...ಔಷಧ ಬೆಳೆಗಳ ಮಿಷನ್‌


2009 ಜನವರಿಗೆ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಅನುಷ್ಠಾನ. ಇದರಿಂದ ಬಹಳಷ್ಟು ಸಹಾಯಧನ ಸಿಗುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳುವ ಬದಲು ಯೋಜನೆಯ ಸದುಪಯೋಗ ಮುಖ್ಯ. ಇಲಾಖೆಯವರು ಅರ್ಹರಿಗೆ ಯೋಜನೆ ತಲುಪಿಸಿದರೆ ಇದರ ಉದ್ದೇಶ ಸಾರ್ಥಕ.


ನಗರ ಪ್ರದೇಶಗಳು ೃಹತ್ತಾಗಿ ಬೆಳೆಯುತ್ತಿವೆ. ಪರಿಣಾಮ, ಕೃಷಿ ಭೂಮಿಗಳು ಕಡಿಮೆಯಾಗುತ್ತಿದೆ. ಭೂಮಿ ಇರುವ ಕೃಷಿಕರು ಬೇಸಾಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಬೇಸಾಯ ಮಾಡುವವರಿಗೆ ಬೆಲೆ ಕೈಕೊಡುತ್ತಿದೆ. ಎಂತಹ ಸ್ಥಿತಿ!
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿಯೇ ಕೃಷಿ ಉತ್ಪನ್ನ ಕಡಿಮೆ ಆಗುತ್ತಿರುವುದು ವಿಷಾದನೀಯ. ಅದಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ತರುತ್ತಲೂ ಇದೆ. ಬಹಳಷ್ಟು ರೈತರು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ನೀಡುವ ಅನುದಾನದ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಿಗುವ ಅನುದಾನ ಬಳಸಿಕೊಂಡು ತಮ್ಮ ಜಮೀನಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಔಷಧ ಬೆಳೆಗಳನ್ನು ಉತ್ತೇಜಿಸಲಿಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮಾದರಿಯಲ್ಲಿಯೇ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಸದ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ.
ಭಾರತ ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆ ಇದು. ಇಂದಿನ ಜನರಲ್ಲಿ ನೈಸರ್ಗಿಕ, ಆಯುರ್ವೇದ ಔಷಧ ಮತ್ತು ಸೌಂದರ್ಯ ವರ್ಧಕಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಔಷಧ ಬೆಳೆಗಳನ್ನು ರೈತರ ಹೊಲದಲ್ಲಿ ಬೆಳೆಸಲು, ಅವರನ್ನು ಬೆಳೆಯುವಂತೆ ಉತ್ತೇಜಿಸುವುದು ಯೋಜನೆ ಉದ್ದೇಶ.
ಯಾರಿಗೆ ಯೋಜನೆ?
ಔಷಧಿ ಬೆಳೆಗಳನ್ನು ಯಾವ ಕೃಷಿಕ ಬೇಕಾದರೂ ಬೆಳೆಯಬಹುದು. ಭೂ ಗುಣವನ್ನು ನೋಡಿ. ಒಬ್ಬೊಬ್ಬರೇ ಔಷಧ ಬೆಳೆಗಳನ್ನು ಬೆಳೆದರೆ ಕೊಯ್ಲೋತ್ತರ ಸಂಸ್ಕರಣ ಘಟಕ ಮುಂತಾದವುಗಳಿಗೆ ಸಹಾಯಧನ ಕಡಿಮೆ. ತಮ್ಮದೇ ಗುಂಪು ಸ್ಥಾಪಿಸಿಕೊಂಡು ಕೃಷಿ ಮಾಡುವವರಿಗೆ ಈ ಔಷಧ ಮಿಷನ್‌ ಪ್ರಯೋಜನ ನೂರಕ್ಕೆ ನೂರು. ಸ್ವಸಹಾಯ ಗುಂಪುಗಳು ಈ ಕೃಷಿ ಮಾಡಲು ತೊಡಗಿದರೆ ಮಿಷನ್‌ ಸಹಕಾರದಿಂದ ಹೆಚ್ಚನ ಸ್ಥಿರತೆ ಸಾಧಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ಔಷಧ ಬೆಳೆಗಳನ್ನು ಬೆಳೆಯುವ ಪ್ರತಿಯೊಂದು ಹಂತದಲ್ಲಿಯೂ ಸಹಾಯಧನ ದೊರೆಯುತ್ತದೆ.
ನರ್ಸರಿ ಅಭಿವೃದ್ಧಿ
ಔಷಧೀಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೆಂದರೆ ಉತ್ತಮ ನರ್ಸರಿಯ ಅಗತ್ಯವು ಇದೆ. ಇದನ್ನು ಅಭಿವೃದ್ಧಿಪಡಿಸಲು ಈ ಮಿಷನ್‌ ಸಹಾಯಧನ ನೀಡುತ್ತದೆ. ಇದು ಎರಡು ವಿಭಾಗದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು, ಅಂದರೆ ಸ್ವಸಹಾಯ ಗುಂಪುಗಳು ನರ್ಸರಿ ಘಟಕ ಪ್ರಾರಂಭಿಸುತ್ತಾರೆಂದರೆ ಶೇ. 100 ಸಹಾಯಧನ ದೊರೆಯುತ್ತದೆ. ದೊಡ್ಡ ಪ್ರಮಾಣದ ಘಟಕಕ್ಕೆ 20 ಲಕ್ಷ ರೂ. ಮತ್ತು ಸಾರ್ವಜನಿಕರು ಸ್ಥಾಪಿಸುವ ಸಣ್ಣ ಘಟಕ್ಕೆ 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳು ನರ್ಸರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಶೇ. 50 (10 ಲಕ್ಷ ರೂ.) ಮತ್ತು ಸಣ್ಣ ಘಟಕಕ್ಕೆ 2 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
ಔಷಧ ಬೆಳೆ ಬೆಳೆಯುವುದು ಸುಲಭವಲ್ಲ. ಸಾವಯವ ಕೃಷಿ ಮಾಡಿದರೆ ಮಾರುಕಟ್ಟೆ ಮೌಲ್ಯ ಜಾಸ್ತಿ. ಬೇರೆ ಕಡೆಯಿಂದ ಸಾವಯವ ಪೋಷಕಾಂಶ ತಂದು ಕೃಷಿ ಮಾಡುವುದಾದರೆ ವೆಚ್ಚ ಹೆಚ್ಚು. ರಾಸಾಯನಿಕ ಪೋಷಕಾಂಶ ನೀಡಿದರು ಖರ್ಚು ಕಡಿಮೆಯಾಗದು. ಪೋಷಕಾಂಶ, ನೀರಾವರಿ ಉಳಿದ ಕೆಲಸಗಳಿಗೆ ತಗಲುವ ವೆಚ್ಚದ ಶೇ. 20 ರಿಂದ ಶೇ. 75ರವರೆಗೂ ಸಹಾಯಧನ ಲಭ್ಯ. ಆದರೆ ಷರತ್ತು ಅನ್ವಯ. ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಗೊಂಚಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ಆ ಷರತ್ತು.
ಕೊಯ್ಲೋತ್ತರ ಸಂಸ್ಕರಣೆ
ಬೆಳೆಗಳನ್ನು ಕಟಾವು ಮಾಡಿದ ನಂತರದ ಚಟುವಟಿಕೆಗಳಾದ ಒಣಗಿಸುವ ಘಟಕ ಸ್ಥಾಪನೆ ಮತ್ತು ಉತ್ಪನ್ನಗಳನ್ನು ಶೇಖರಿಸಿಡಲು ಅಗತ್ಯವಿರುವ ಗೋದಾಮು ನಿರ್ಮಾಣಕ್ಕೆ ತಗಲುವ ವೆಚ್ಚಕ್ಕೆ ಕ್ರಮವಾಗಿ ಸಾರ್ವಜನಿಕ ಶೇ. 100ರಷ್ಟು ಮತ್ತು ಖಾಸಗಿ ಸಂಸ್ಥೆಗಳಿಗೆ ಶೇ. 50 ಸಹಾಯಧನವನ್ನು ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ ನೀಡುತ್ತದೆ.
ಔಷಧಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಅದನ್ನು ಸರಿಯಾದ ರೀತಿ ಸಂಸ್ಕರಣೆ ಮಾಡಬೇಕಾಗುತ್ತದೆ. ಇದರ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ. 25ರಂತೆ 50 ಲಕ್ಷಗಳವರೆಗೆ ದೊರೆಯುತ್ತದೆ. ಇದಲ್ಲದೇ, ಔಷಧ ಬೆಳೆಗಳನ್ನು ಬೆಳೆಸಿ ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವ ದೃಷ್ಠಿಯಿಂದ ಪ್ರಯೋಗಾಲಯ ಸ್ಥಾಪಿಸುವುದಾದರೆ ಶೇ. 30ರಂತೆ 30 ಲಕ್ಷಗಳವರೆಗೆ ಹಾಗೂ ಮಾರುಕಟ್ಟೆ ಉತ್ತೇಜನಕ್ಕೆ ಶೇ. 10ರಂತೆ 10 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಅಷ್ಟೇ ಅಲ್ಲದೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಶೇ. 100ರಂತೆ ಗರಿಷ್ಟ 20 ಲಕ್ಷದವರೆಗೆ ಸಹಾಯಧನವನ್ನು ಮಿಷನ್‌ ಒದಗಿಸುತ್ತದೆ.
ಇದಲ್ಲದೇ ಮಾರುಕಟ್ಟೆ ತಂತ್ರ, ಮರು ಖರೀದಿ ಚಟುವಟಿಕೆಗಳು, ಸಾವಯವ ಧೃಡೀಕರಣ, ಬೆಳೆ ವಿಮೆಯಂತಹ ಚಟುವಟಿಕೆಗಳಿಗೆ ಯೋಜನಾ ವರದಿಯನ್ನಾಧರಿಸಿ ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನ ಸುಮಾರು 93 ಬೆಳೆಗಳಿಗೆ ದೊರೆಯುತ್ತದೆ. ಹಾಗೆಯೇ ಬೆಳೆಗಳನ್ನು ಆಧರಿಸಿ ಶೇ. 20ರಿಂದ ಶೇ. 75ರವರೆಗೆ ಸಬ್ಸಿಡಿಯು ಸಿಗುತ್ತದೆ.
ಮರುಖರೀದಿ ಒಪ್ಪಂದ
ಔಷಧ ಬೆಳೆ ಬೆಳೆದಾಗ ರೈತರಿಗೆ ಎದುರಾಗುವ ಮೊದಲ ಸಮಸ್ಯೆ ಮಾರುಕಟ್ಟೆಯದ್ದು. ಅದಕ್ಕಾಗಿ ಈ ಬೆಳೆಯಲು ತೊಡಗುವ ರೈತರು ತಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳುವುದು ಉತ್ತಮ. ಈ ಸಂಘದ ಮೂಲಕ ವಿಶ್ವಾಸನೀಯ ಕಂಪೆನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಉತ್ತರ ಕನ್ನಡದ ಕಾರವಾರದಲ್ಲಿ `ಪ್ರಗತಿ' ಅನ್ನುವ ಕಂಪೆ ಈಗಾಗಲೇ 40 ಔಷಧೀಯ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇದಲ್ಲದೇ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಔಷಧೀಯ ಬೆಳೆಗಳನ್ನು ಖರೀದಿಸುತ್ತವೆ. ಒಪ್ಪಂದ ಮಾಡಿಕೊಳ್ಳುವಾಗ ಮಾತ್ರ ರೈತರು ಜಾಗರೂಕರಾಗಿದ್ದರೆ ಒಳ್ಳೆಯದು.
ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ನ ಕ್ರೀಯಾ ಯೋಜನೆ ಸಿದ್ಧವಾಗಿದ್ದು ಜನವರಿ 2009ರ ಸಮಯಕ್ಕೆ ಆಶಾವಾದಿ ರೈತರ ಬಳಕೆಗೆ ಲಭ್ಯ. ಕೊನೆಯ ವಿನಂತಿ, ಸರ್ಕಾರದಿಂದ ದೊರೆಯುವ ಸಹಾಯಧನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಸಿಕ್ಕುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳದಿದ್ದರೆ ಸರ್ಕಾರ ಅನುಷ್ಠಾನಕ್ಕೆ ತರುವ ಯೋಜನೆಗಳು ಸಾರ್ಥಕ. ಹಾಗೆಯೇ ತೋಟಗಾರಿಕಾ ಇಲಾಖೆಯವರು ಅರ್ಹ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ಸಿಗುವಂತೆ ಮಾಡಬೇಕು.
ನಾಗರಾಜ ಮತ್ತಿಗಾರ

Friday, December 19, 2008

ತುಡುವೆ ಜೇನಿನ ಕೃತಕ ಹಿಸ್ಸೆ!


                                               .                        
      ಜೇನು ಸಹಜ ಕೃಷಿಯ ಒಂದು ಭಾಗ. ತೋಟಗಾರಿಕಾ ಬೆಳೆಗಳ ಪರಾಗ  ಸ್ಪರ್ಷ ಕ್ರಿಯೆ ಹೆಚ್ಚಿಸಿ ಬೆಳೆ ಉತ್ತಮವಾಗುವಂತೆ ನೊಡಿಕೊಳ್ಳುವ ಜೇನು ತುಪ್ಪವನ್ನು ನೀಡಿ ಇನ್ನಷ್ಟು ಉಪಆದಾಯವನ್ನೂ ತಂದುಕೊಡುತ್ತದೆ. ಆದ್ದರಿಂದ  ವರ್ಷದಿಂದ ವರ್ಷಕ್ಕೆ ಜೇನು ಸಾಕಾಣಿಕೆ ಮಾಡುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಸುತ್ತಮುತ್ತ  ಪೆಟ್ಟಿಗೆಯಲ್ಲಿ ಸಾಕುವ ತುಡುವೆಜೇನು  ಸಾಕಾಣಿಕೆ ಮಾಡುವ   ಕೃಷಿಕರಿಗೆ  ನವೆಂಬರ್ ಡಿಸೆಂಬರ್ ತಿಂಗಳು ಬಂತೆಂದರೆ ಸಮಸ್ಯೆ ಪ್ರಾರಂಭವಾಯಿತೆಂದೇ ಅರ್ಥ. ಕಾರಣ  ಮಳೆಗಾಲಪೂರ್ತಿ  ಕೃತಕ ಆಹಾರ  ಕೊಟ್ಟು  ಮನೆಯಂಗಳದಲ್ಲಿ ಸಾಕಿದ  ತುಡುವೆ ಜೇನಿನ  ರಾಣಿಗೆ   ಹಿಸ್ಸೆಯಾಗಿ ಹೊಸರಾಣಿಹುಳುವನ್ನು ಸೃಷ್ಟಿಸಿ ಪೆಟ್ಟಿಗೆ  ಬಿಟ್ಟು  ಬೇರೆ  ಗೂಡನ್ನು ಅರಸಿ ಓಡಿಹೋಗುವ ಆತುರ. ಜೇನು ರಾಣಿಯ  ಈ ಪ್ರಾಕೃತಿಕ  ಕ್ರಿಯೆ  ತುಡುವೆಜೇನು ಸಾಕಾಣಿಕಾದಾರನಿಗೆ ಮಾತ್ರ ನಷ್ಟ. ಪೆಟ್ಟಿಗೆಯಲ್ಲಿನ ಜೇನುಪಡೆ   ಕಣ್ಣಾರೆ  ಕಾಡುಪಾಲಾಗುವುದನ್ನು  ನೋಡುತ್ತಾ  ನಿಲ್ಲಬೇಕು.  ಜೇನಿನ  ಹಿಸ್ಸೆ ಪ್ರಕ್ರಿಯೆನ್ನಾಗಲಿ ಅಥವಾ ಹೊಸ  ರಾಣಿಯ  ಹುಟ್ಟನ್ನಾಗಲಿ ರಾಣಿಮೊಟ್ಟೆಯ ಮುರಿದು  ತಡೆಗಟ್ಟಬಹುದಾದರೂ  ಅದು  ಪ್ರಕೃತಿ  ಸಹಜವಲ್ಲ.ಹಾಗೂ ಮತ್ತೊಂದು ಜೇನು ಸಂಸಾರ ಅಭಿವೃದ್ಧಿಯನ್ನು ತಡೆಗಟ್ಟಿದಂತಾಗುತ್ತದೆ. ಜತೆಗೆ  ರಾಣಿಜೇನು ಮೊಟ್ಟೆಯನ್ನಿಟ್ಟ ಸಮಯದಲ್ಲಿ   ಗೂಡಿಗೆ  ಕೈಹಾಕುವುದು  ಕಷ್ಟಕರ. ಹಾಗಾಗಿ ಜೇನು ಹುಟ್ಟನ್ನು ಮನೆಯಲ್ಲಿಯೇ ಉಳಿಸಿಕೊಂಡು ಗೂಡು ಹೆಚ್ಚಿಸಿಕೊಳ್ಳುವುದು ಎಲ್ಲಾ ಜೇನು ಕೃಷಿಕರ ಆಶಯ.  ಹಳೆರಾಣಿ ತನ್ನ ಪಾಲಿನ  ಹುಳುಗಳನ್ನು ಕರೆದುಕೊಂಡು  ಕಾಡುಪಾಲಾಗದಂತೆ  ತಡೆದು, ಜೇನಿನ ಹಿಸ್ಸೆಯನ್ನು ಸಹಜವಾಗಿ ನಡೆಯುವಂತೆ  ಮಾಡಿ  ಜೇನು ಸಂಸಾರವನ್ನೂ  ಹೆಚ್ಚಿಸಿಕೊಳ್ಳಲು ಇಲ್ಲಿದೆ  ಸುಲಬೋಪಾಯ.
     ಈಗಾಗಲೆ  ಇರುವ ಜೇನು ಪೆಟ್ಟಿಗೆಯನ್ನೇ  ಹೋಲುವ(ಒಂದೇ  ಬಣ್ಣದ್ದಾದರೆ  ಉತ್ತಮ)  ಇನ್ನೊಂದು  ಪೆಟ್ಟಿಗೆಯನ್ನು ಮೂಲಪೆಟ್ಟಿಗೆಯಿಟ್ಟ ಜಾಗಕ್ಕಿಂತ  ೩  ಅಡಿ ದೂರದಲ್ಲಿ  ಇಡಬೇಕು. ಮೂಲಪೆಟ್ಟಿಗೆಯನ್ನು  ಕೂಡ  ಅದರ  ಜಾಗದಿಂದ  ೩ ಅಡಿ  ಪಕ್ಕಕ್ಕೆ  ಇಡಬೇಕು(ಚಿತ್ರದಲ್ಲಿ ತೋರಿಸಿದಂತೆ). ಬೆಳಿಗಿನ  ಸಮಯದಲ್ಲಿ  ಹಿಸ್ಸೆ  ಪ್ರಕ್ರಿಯೆ  ಮಾಡಿದರೆ  ಉತ್ತಮ. ಮೂಲಪೆಟ್ಟಿಗೆಯಲ್ಲಿನ  ಯಾವುದಾದರೂ  ನಾಲ್ಕು  ತತ್ತಿಗಳನ್ನು  ಹೊಸ ಪೆಟ್ಟಿಗೆಗೆ  ಹಾಕಿ  ಮುಚ್ಚಳ ಹಾಕಿದರೆ  ಅರ್ದ ಕೆಲಸ  ಮುಗಿದಂತೆ.  ಈಗ  ಒಂದು  ಪೆಟ್ಟಿಗೆಯಲ್ಲಿ  ರಾಣಿನೊಣ  ಇರುತ್ತದೆ.  ರಾಣಿ ನೊಣ ಇರದ  ಇನ್ನೊಂದು  ಪೆಟ್ಟಿಗೆಯಲ್ಲಿ  ಇರುವ  ಕಡ್ಡಿಮೊಟ್ಟೆಗೆ  ಜೇನುಹುಳುಗಳು  ರಾಜಾಷಾಯಿ  ಯೆಂಬ  ಆಹಾರವನ್ನು  ಕೊಟ್ಟು  ರಾಣಿಯನ್ನಾಗಿ  ಪರಿವರ್ತಿಸಿಕೊಳ್ಳುತ್ತವೆ. ಹೀಗೆ ಹಿಸ್ಸೆಮಾಡಿ  ೧೩  ದಿವಸಕ್ಕೆ  ೩-೪  ಹೊಸರಾಣಿ ಹೊರಬರುತ್ತವೆ.  ಒಂದು  ರಾಣಿಯನ್ನು  ಉಳಿಸಿಕೊಳ್ಳಬೇಕು.  ಹುಳುಗಳ  ಸಂಖ್ಯೆ  ಜಾಸ್ತಿ   ಇದ್ದಲ್ಲಿ  ಇನ್ನೊಂದು  ಜೇನು  ಸಂಸಾರವನ್ನು ಕೂಡ  ಮಾಡಿಕೊಳ್ಳಬಹುದು.  ಇದರಿಂದಾಗಿ  ಅತ್ಯಂತ  ಸುಲಭವಾಗಿ  ಜೇನು  ಸಂಸಾರವನ್ನು  ವೃದ್ದಿಸಿಕೊಳ್ಳಬಹುದು  ಎಂಬುದು  ಕಳೆದ  ನಾಲ್ಕಾರು ವರ್ಷದಿಂದ  ಕೃತಕಹಿಸ್ಸೆಯನ್ನು  ಮಾಡಿ  ಜೇನು  ಸಂಸಾರ   ಹೆಚ್ಚಿಸಿಕೊಂಡ  ಸಾಗರ  ತಾಲ್ಲೂಕಿನ   ಪ್ರಶಾಂತ  ಕೆರೇಕೈರವರ  ಅಭಿಪ್ರಾಯ. 
 ಹೆಚ್ಚಿನ  ಮಾಹಿತಿಗೆ  ಸಂಪರ್ಕಿಸಿ   ಮೋ: ೯೪೪೮೯೧೪೭೯೧ 

ಚಿತ್ರ  ಬರಹ: ಕೆ.ಆರ್.ಶರ್ಮಾ  ತಲವಾಟ
shreeshum@gmail.com


Saturday, December 13, 2008

ಹರಿಯಾಣ ಎಮ್ಮೆ ಮಲೆನಾಡಿಗೆ ಬಂತು!




                                                                                                                                                                                                                                                       ಎಲ್ಲಿಯ ಮಾಮರ, ಎಲ್ಲಿಯ ಕೋಗಿಲೆ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ ಮೇಲಿನ ಸುದ್ದಿಯನ್ನು ತಳ್ಳಿಹಾಕುವಂತಿಲ್ಲ. ಸಾಗರದ ಚಿಕ್ಕತೋಟ ಶಶಿಧರ್ ಅಕ್ಷರಶಃ ಹರಿಯಾಣ ರಾಜ್ಯದಿಂದ ಎವ್ಮ್ಮೆಗಳನ್ನು ತಂದು ಹಾಲಿನ ಡೈರಿ ಆರಂಭಿಸಿದ್ದಾರೆ. ಮೈ ತುಂಬಾ ಸವಾಲುಗಳೇ ಇರುವ ಈ ಸಾಹಸ ಗಮನಿಸಲೇಬೇಕಾದಂತದು.
ಶಿವಮೊಗ್ಗ ಜಿಲ್ಲೆಯ ಈ ಚಿಕ್ಕತೋಟ ಎಂಬ ಪುಟ್ಟ ಹಳ್ಳಿ ಸಾಗರದಿಂದ ೧೩ ಕಿ.ಮೀ. ಅಂತರದಲ್ಲಿದೆ. ಅಲ್ಲಿನ ಯುವಕ ಸಿ.ಎಸ್. ಶಶಿಧರ್‌ರಿಗೆ ಮೊದಲಿನಿಂದಲೂ ಜಾನುವಾರು ಸಾಕಣೆ ಅಚ್ಚುಮೆಚ್ಚಿನ ಸಂಗತಿ. ಅದರಲ್ಲಿನ ಪ್ರಯೋಗಗಳತ್ತ ಆಸಕ್ತಿ, ಎಮ್ಮೆ ಎಂದರೆ ಆಕರ್ಷಣೆ. ಒಮ್ಮೆ ಟಿ.ವಿ.ಯಲ್ಲಿ ಕೃಷಿ ಕಾರ್ಯಕ್ರಮವೊಂದನ್ನು ನೋಡುವಾಗ, ಗೋಕಾಕ್‌ನಲ್ಲಿ ಹರಿಯಾಣ ಎಮ್ಮೆಗಳನ್ನು ತಂದು ಹೈನುಗಾರಿಕೆ ನಡೆಸುತ್ತಿರುವ ವಿಹಂಗಮ ಕತೆ ಗಮನ ಸೆಳೆಯಿತು. ನಮ್ಮೂರಿಗೂ ಹರಿಯಾಣ ಎಮ್ಮೆ ತಂದರೆ ಹೇಗೆ?
ಅಧ್ಯಯನದ ಅಗತ್ಯವಿತ್ತು. ಅಲ್ಲಿನ ಎಮ್ಮೆ ಮಲೆನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಹಲವು ಓಡಾಟಗಳ ನಂತರ ಮಲೆನಾಡಿನ ಚಳಿ, ಮಳೆಯನ್ನು ಇವು ತಾಳಿಕೊಳ್ಳುವುದು ಸ್ಪಷ್ಟವಾಯಿತು. ಸ್ವಾರಸ್ಯವೆಂದರೆ, ಗೋಕಾಕ್‌ನಲ್ಲಿರುವುದೂ ಹೆಚ್ಚು ಕಡಿಮೆ ಸಾಗರದ ಹವಾಮಾನ!
ಹರಿಯಾಣದಿಂದ ಎಮ್ಮೆ ತರಿಸುವುದೇ ತ್ರಾಸದ, ದುಬಾರಿಯ ಕೆಲಸ. ಒಂದೆರಡು ಎಮ್ಮ್ಮೆಯನ್ನು ಖರೀದಿಸಲಾಗದು. ಅಲ್ಲಿ ಹತ್ತು ಎಮ್ಮೆಗಳಿಗೆ ಒಂದು ಯೂನಿಟ್. ಒಂದು ಯೂನಿಟ್‌ಗೆ ತಕ್ಕುದಾದ ವಾಹನ ವ್ಯವಸ್ಥೆಯಿರುತ್ತದೆ. ಯೂನಿಟ್ ಒಂದರ ನಿರ್ವಹಣೆಗೆ ಒಬ್ಬ ನಿರ್ವಾಹಕನನ್ನು ಅಲ್ಲಿಂದಲೇ ಕಳಿಸಿಕೊಡಲಾಗುತ್ತದೆ. ಆತನಿಗೆ ದಿನಕ್ಕೆ ೧೦೦ ರೂಪಾಯಿ ಸಂಬಳ, ಜೊತೆಗೆ ಆಹಾರ ಸಾಮಗ್ರಿ ಕೊಡಬೇಕು. ಇವೆಲ್ಲವನ್ನೂ ನಿರ್ವಹಿಸಲು ‘ಎಮ್ಮೆ ಏಜೆಂಟ್’ಗಳಿರುತ್ತಾರೆ. ಈ ಏಜೆಂಟರು ದೂರದ ಊರಿನಿಂದ ಬರುವ ಗ್ರಾಹಕರಿಗೆ ಗೆಸ್ಟ್‌ಹೌಸ್ ಸೌಲಭ್ಯವನ್ನೂ ಮಾಡಿರುತ್ತಾರೆ!
ಶಶಿಧರ್ ಈ ಎಮ್ಮೆಗಳಿಗಾಗಿಯೇ ಹೊಸ ಕೊಟ್ಟಿಗೆ ನಿರ್ಮಿಸಿದ್ದಾರೆ. ಹರಿಯಾಣದಿಂದ ಅವರು ಒಂಭತ್ತು ಎಮ್ಮೆ-ಕರು ತರಿಸಿದ್ದಾರೆ. ಒಟ್ಟು ೩.೮೦ ಲಕ್ಷ ರೂಪಾಯಿ ಎಮ್ಮೆಗಳಿಗಾಗಿ ವೆಚ್ಚವಾಗಿದೆ. ಅಂದರೆ ಒಂದು ಎಮ್ಮೆಗೆ ೪೨ ಸಾವಿರ ರೂ.! ಪ್ರತಿ ಎಮ್ಮೆಗೆ ದಾರಿ ಖರ್ಚು ಎಂತಲೇ ಆರು ಸಾವಿರ ರೂಪಾಯಿ ಖರ್ಚಾಗಿದೆ.
ಅಷ್ಟಕ್ಕೂ ಹರಿಯಾಣ ಎಮ್ಮೆಯೇ ಹೈನುಗಾರಿಕೆಗೆ ಏಕೆ ಬೇಕು? ಶಶಿ ಉತ್ತರಿಸುವುದು ಹೀಗೆ, ಸ್ಥಳೀಯ ಎಮ್ಮೆಗಳಲ್ಲಿ ಹಲವು ದೋಷಗಳಿವೆ. ಗರ್ಭ ಕಟ್ಟದಿರುವಿಕೆ ದೊಡ್ಡ ಸಮಸ್ಯೆ. ಹಾಲು ಕೊಯ್ಲಿನ ಅವಧಿ ಅನಿಶ್ಚಿತವಾಗಿರುವುದು ಮತ್ತು ೬ - ೮ ತಿಂಗಳಿಗೇ ನಿಲ್ಲಿಕೆಯಾಗಿಬಿಡುವುದು ನಷ್ಟದ ಬಾಬತ್ತು. ಗರ್ಭಾವಧಿಯಲ್ಲೂ ಹಾಲು ಇಳುವರಿ ಕಡಿಮೆಯಾಗದಿರುವುದು ಮುರಾ ವೈಶಿಷ್ಟ್ಯ. ಸ್ಥಳೀಯ ಎಮ್ಮೆಗಿಂತ ಹೆಚ್ಚಿನ ಫ್ಯಾಟ್ ಅರ್ಥಾತ್ ೮ - ೯ ಅಂಶಗಳಷ್ಟು ಕೊಬ್ಬು ಹಾಲಿನಲ್ಲಿರುತ್ತದೆ. ಸಾಮಾನ್ಯವಾಗಿಯೇ ಹಾಲಿನ ಇಳುವರಿ ಜಾಸ್ತಿಯೇ. ಹರಿಯಾಣದಲ್ಲಿ ಹೊತ್ತಿಗೆ ಹತ್ತು ಲೀಟರ್‌ವರೆಗೆ ಬರುತ್ತಿದೆಯಂತೆ. ಈಗ ನಮ್ಮಲ್ಲೂ ಆರೂವರೆ ಲೀಟರ್ ಲಭಿಸುತ್ತಿದೆ
ಆ ಲೆಕ್ಕದಲ್ಲಿ, ನಿರ್ವಹಣೆ ಸಂಕೀರ್ಣವೇನಲ್ಲ. ಹತ್ತಿ ಹಿಂಡಿ, ಗೋಧಿ ಬೂಸ, ಜೋಳದ ಕಡಿ ಮಿಶ್ರಣದ ಮೂರು ಕೆ.ಜಿ. ಹಿಂಡಿ, ಕೋ ತ್ರಿ ಜಾತಿಯ ಹಸಿ ಹುಲ್ಲು, ಕತ್ತರಿಸಿದ ಒಣ ಹುಲ್ಲು ಎಮ್ಮೆಗಳಿಗೆ ಆಹಾರ. ಒಂದು ಎಮ್ಮೆಗೆ ದಿನಕ್ಕೆ ಸರಾಸರಿ ೧೧೫ ರೂ. ನಿರ್ವಹಣಾ ವೆಚ್ಚ. ಶಶಿಧರ್ ಪ್ರಕಾರ, ಸದ್ಯಕ್ಕಂತೂ ಹಾಲು ಮತ್ತು ನಿರ್ವಹಣೆಯ ಅನುಪಾತ ಸರಿಸಮ. ಸಗಣಿ ಗೊಬ್ಬರದ ಆದಾಯ ನಿಕ್ಕಿ ಉಳಿಯುತ್ತದೆ. ಒಂದು ವ್ಯಾನ್ ಲೋಡ್‌ಗೆ ೨,೩೦೦ ರೂ.ನಂತೆ ಗೊಬ್ಬರ ಮಾರಾಟವಾಗುತ್ತಿದೆ.
     ತಕ್ಷಣಕ್ಕೆ ಸಮಸ್ಯೆಗಳು ಬರಲಿಲ್ಲವೆಂದೇನಲ್ಲ. ವ್ಯಾನ್ ಹತ್ತಿದ ಒಂಬತ್ತು ಕರುಗಳಲ್ಲಿ ಒಂದು ದೊಡ್ಡ ಎಮ್ಮೆಗಳ ಕಾಲ್ತುಳಿತಕ್ಕೆ ಸಿಕ್ಕು ಬರುವಾಗಲೆ ಪ್ರಾಣ ಬಿಟ್ಟಿತ್ತು. ಚಿಕ್ಕತೋಟಕ್ಕೆ ಬಂದ ನಂತರವೂ ಮೂರು ಕರುಗಳು ವಿವಿಧ ಕಾರಣಗಳಿಂದ ಜೀವ ಕಳೆದುಕೊಂಡವು. ಬಂದ ಹೊಸದರಲ್ಲಿ ಎಮ್ಮೆಗಳಿಗೆ ಥಂಡಿ, ಜ್ವರ ಇತ್ಯಾದಿ ಸಣ್ಣ ಪುಟ್ಟ ರೋಗ ಕಾಣಿಸಿದ್ದುಂಟು. ಅದೃಷ್ಟಕ್ಕೆ, ಹರಿಯಾಣದಿಂದ ಬಂದಿರುವ ಪಶು ನಿರ್ವಾಹಕನಿಗೆ ಒಂದು ಮಟ್ಟಿನ ವೈದ್ಯವೂ ಗೊತ್ತಿದೆ., ಇಂಜಕ್ಷನ್ ಕೊಡುವುದಕ್ಕೂ ಸೈ. ಹಾಗಾಗಿ ತ್ರಾಸ ಎಷ್ಟೋ ಕಡಿಮೆಯಾದಂತೆ. ಇಂದು ಶಶಿ ಪಶು ಆಹಾರ, ಹಾಲು ಮಾರಾಟ ಮುಂತಾದ ವ್ಯಾವಹಾರಿಕ ವಿಚಾರಗಳಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಕು. 
     ಸ್ಥಳೀಯ ಕೆಎಂಎಫ್ ಡೈರಿಗೆ ಹಾಲು ಹಾಕುವುದರಿಂದ ಲಾಭ ನಿರೀಕ್ಷಿಸಲಾಗದು. ಈ ವಿಚಾರ ಅರ್ಥವಾದ ತಕ್ಷಣ ಶಶಿಧರ್ ಸ್ವತಃ ಹಾಲು ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅವರು ಸಾಗರ ಪೇಟೆಗೆ ಪ್ಯಾಕೆಟ್ ಹಾಲು ಮಾಡಿ ಮಾರಲಾರಂಭಿಸಿದ್ದಾರೆ. ತಾಜಾ ಹಾಲಿನ ಒಂದು ಲೀಟರ್ ದರ ೨೦ ರೂ. ಈಗಾಗಲೇ ಹಲವರು ಬೆಣ್ಣೆ ಜಾಸ್ತಿ ಬರುತ್ತಿದೆ ಎನ್ನುವುದನ್ನು ದೃಢಪಡಿಸುತ್ತಿದ್ದಾರೆ.
ಹರಿಯಾಣ ಎಮ್ಮೆಗಳದ್ದು ವಾಸ್ತವವಾಗಿ ‘ಮುರಾ’ ಜಾತಿ. ಈ ಹಿಂದಿನಿಂದಲೇ ತಂದು ಸಾಕಿರುವ ಗೋಕಾಕ್‌ನ ಜೇನುಗೌಡ, ಗೋಣಿಯವರ ಮಾರ್ಗದರ್ಶನದಲ್ಲಿ ಶಶಿಧರ್ ಮಲೆನಾಡಿಗೆ ಎಮ್ಮೆ ತಂದಿದ್ದಾರೆ. ಅಧ್ಯಯನಕ್ಕೆ ಸಾಗರದ ಪಶು ವೈದ್ಯ ಶ್ರೀಪಾದರಾವ್ ನಂದೀತಳೆಯವರ ಸಹಕಾರವನ್ನು ಶಶಿ ಸ್ಮರಿಸುತ್ತಾರೆ.
ಇದಿನ್ನೂ ಯೋಜನೆಯ ಆರಂಭ ಮಾತ್ರ. ಇನ್ನೊಂದು ಯೂನಿಟ್ ದನಗಳನ್ನು ತಂದು ಕಟ್ಟಬೇಕಿದೆ. ಖರ್ಚು ಮಿಗತೆಗೆ ರಸಮೇವು, ಅಜೋಲಾಗಳಂತಹ ತಂತ್ರಗಳನ್ನು ಅನುಸರಿಸಬೇಕಿದೆ. ಬಹುಷಃ ಇನ್ನೊಂದು ತಿಂಗಳಲ್ಲಿ ಇನ್ನೊಂದು ಯೂನಿಟ್ ದನಗಳನ್ನು ಶಶಿ ತರಿಸಲಿದ್ದಾರೆ. ಈ ಸಂಬಂಧ ಬ್ಯಾಂಕ್ ಖುಷಿಯಿಂದಲೇ ಸಾಲ ವ್ಯವಸ್ಥೆ ಮಾಡಿದೆ. ಮುರಾದ ಅಸಲಿ ಗುಣದ ಸಂತತಿ ಬೆಳೆಸಬೇಕೆಂದರೆ ತಕ್ಷಣಕ್ಕೇ ‘ಮುರಾ ಕೋಣ’ವೊಂದನ್ನು ಕೊಟ್ಟಿಗೆಗೆ ತರಬೇಕಿದೆ! ಸದ್ಯ ಕೃತಕ ಗರ್ಭಧಾರಣೆ ಕ್ರಮವನ್ನು ಅನುಸರಿಸಲಾಗಿದೆ.
ಶಶಿ ಒಂದು ಸಾಹಸದ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ಮೇವಿನ ಅಗತ್ಯವನ್ನು ಸ್ವಜಮೀನು ಪೂರೈಸುವಂತಿದ್ದರೆ, ಏಕಾಏಕಿ ಜಾನುವಾರುಗಳಿಗೆ ಮರಣಾಂತಿಕ ಕಾಯಿಲೆ ಬಾರದಿದ್ದರೆ ಹೈನುಗಾರಿಕೆಯಲ್ಲಿ ಅಷ್ಟಿಷ್ಟು ಲಾಭ ಕಟ್ಟಿಟ್ಟ ಬುತ್ತಿ. ಮಲೆನಾಡಿಗೆ ಬಂದಿಳಿದ ಹರಿಯಾಣ ಎಮ್ಮೆಗಳ ಲಾಭ - ನಷ್ಟದ ಅನುಪಾತ ತೆಗೆಯಲು ಇನ್ನೂ ಸ್ವಲ್ಪಕಾಲ ಬೇಕಾದೀತು. ಮೂರು ತಿಂಗಳ ಈ ಕ್ಲುಪ್ತ ಸಮಯದಲ್ಲಿ ಶಶಿಯವರಿಗಂತೂ ತಮ್ಮ ಹೆಜ್ಜೆ ಸಮಾಧಾನ ತಂದಿದೆ. ಮಲೆನಾಡಿನ ಉಳಿದ ಕೃಷಿಕರೂ ಶಶಿಯವರ ದಾರಿ ಹಿಡಿಯುವಂತಾಗಲು ಇನ್ನೂ ಕೆಲಕಾಲ ಕಾಯಲೇಬೇಕು.
ಶಶಿಧರ್‌ರ ಸಂಪರ್ಕ ದೂರವಾಣಿ -(೦೮೧೮೩)೨೩೧೬೯೮ [ಸ್ಥಿರ] ಮತ್ತು ೯೪೪೮೦೧೮೫೫೫ [ಮೊಬೈಲ್]
 
-ಮಾವೆಂಸ
ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨
ಇ ಮೇಲ್- mavemsa@gmail.com

Thursday, December 4, 2008

ಜವಾರಿ ಸರೋಜ!

ರಾಜ್ಯದಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲಿ ದಾವಣಗೆರೆಯೂ ಒಂದು. ಇಲ್ಲಿನ ಹೆಚ್ಚಿನ ರೈತರು ರಾಸಾಯನಿಕ ಕೃಷಿ ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೆಲವು ರೈತರು ರಾಸಾಯಾನಿಕ ಕೃಷಿ ಬಿಟ್ಟು ಸಾವಯವದತ್ತ ಮುಖ ಮಾಡಿದ್ದಾರೆ. ಹಂತ ಹಂತವಾಗಿ ರಸಗೊಬ್ಬರ ಹಾಕುವುದನ್ನು ಬಿಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಉತ್ತಮ ಬೆಳೆವಣಿಗೆಯೇ.
ದಾವಣಗೆರೆಯ ಜಿಲ್ಲೆ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಸರೋಜ, ನಾಗೇಂದ್ರ ಪಾಟೀಲ್‌ ದಂಪತಿ ಪ್ರಗತಿಪರ ಕೃಷಿಕರು. ಇವರಿಗೆ ಹತ್ತೊಂಬತ್ತು ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಆರು ಎಕರೆ ತೆಂಗು, ಮೂರು ಎಕರೆ ಅಡಿಕೆ ತೋಟವಿದೆ. ಉಳಿದ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ.
ಸರೋಜ ಹರಿಹರ ಗ್ರಾಮ ಸಂಪರ್ಕ ಕೇಂದ್ರದ ಸಂಪನ್ಮೂಲ ವ್ಯಕ್ತಿ. ಇವರು ಹಳ್ಳಿ ಹಳ್ಳಿಗಳಗೆ ಹೋಗಿ ಕೃಷಿಯಲ್ಲಿ ತಮಗಿರುವ ಅನುಭವದ ಕುರಿತು ಉಪನ್ಯಾಸ ಕೊಡುತ್ತಾರೆ. ಈ ಸಂದರ್ಭದಲ್ಲಿ ಇವರಿಗೆ ನೈಸರ್ಗಿಕ ಕೃಷಿಯ ಕಡೆಗೆ ಆಸಕ್ತಿ ಮೂಡಿತು. ಅಡಿಕೆ, ತೆಂಗಿನ ತೋಟಕ್ಕೆ ರಸಗೊಬ್ಬರ ಬಿಟ್ಟು ಜೀವಾಮೃತವನ್ನು ಹಾಕತೊಡಗಿದರು. ಭತ್ತದ ಕೃಷಿಗೂ ಇದನ್ನೇ ಅನುಸರಿಸಿದರು. ಸಾವಯವ ಕೃಷಿಯನ್ನು ಮಾಡತೊಡಗಿದಾಗ ನಾಟಿ ಭತ್ತದ ತಳಿ ಬೆಳೆಯಬೇಕೆಂಬ ಮನಸ್ಸು ಸರೋಜ ಅವರಿಗೆ ಬಂತು.
ನಾಟಿ ತಳಿ ಬೆಳೆಸಬೇಕೆಂದು ಮನಸ್ಸಾದರೆ ತಳಿಗಳು ಸಿಗಬೇಕಲ್ಲ? ಕಳೆದ ವರ್ಷ ಇವರು ಗಂಧಸಾಲಿ ಎನ್ನುವ ಒಂದು ತಳಿಯನ್ನು ಮಾತ್ರ ಬೆಳೆದಿದ್ದರು. ನಾಟಿ ತಳಿ ಬಹಳ ಆಸಕ್ತಿಯಿಂದ ಬೆಳೆದು, ಸಂರಕ್ಷಣೆ ಮಾಡುತ್ತಿದ್ದ ಮಂಡ್ಯ ಹತ್ತಿರದ ಶಿವಳ್ಳಿಯ ಬೋರೇಗೌಡರಲ್ಲಿಗೆ ಹೋಗಿ 23 ತಳಿಗಳನ್ನು ತಂದು ನಾಟಿ ಮಾಡಿದ್ದಾರೆ. ಇವರು ತಳಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ 5 ಕೆಜಿ ಸಗಣಿ, 100 ಗ್ರಾಂ ಸುಣ್ಣ ಮತ್ತು ಗೋಮೂತ್ರ ಮಿಶ್ರಣ ಮಾಡಿ, ಅದರಲ್ಲಿ ಬೀಜೋಪಚಾರ ನಡೆಸಿ ನಾಟಿ ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ಸಾಮಾನ್ಯವಾಗಿ ಬರುವ ಬೆಂಕಿರೋಗ ಮತ್ತು ಕಾಂಡಕೊರಕ ಬಾಧೆ ಬಂದಿಲ್ಲ.
ಇವರು ಬೀಜ ಬ್ಯಾಂಕ್‌ ಅನ್ನು ಮಾಡುತ್ತಿದ್ದಾರೆ. ಇವರಲ್ಲಿ ಇಂದು 23 ಜವಾರಿ ತಳಿಗಳು ಇವೆ. ಗಂಧಸಾಲಿ, ರಾಜಭೋಗ್‌, ರಾಜಮುಡಿ, ಬಂಗಾರಸಣ್ಣ, ರತ್ನಚೂಡಿ, ಮೋರಡ್ಡಿ, ಬೂಸ ಬಾಸಮತಿ, ಕರಿಮುಂಡ್ಗ, ರಾಜಕೈಮೆ, ಜೀರಿಗೆಸಾಂಬ, ಮೈಸೂರು ಮಲ್ಲಿಗೆ, ಕೆಂಪುದಡಿ, ಸೇಲಂ ಸಣ್ಣ, ಮಾಲ್ಗುಡಿ ಸಣ್ಣ, ನಾಗ ಭತ್ತ, ಚಿನ್ನಾಪನ್ನಿ, ನವರ, ಪೂಸಾ ಸುಗಂಧ, ಗೌರಿ ಸಣ್ಣ, ಎಚ್‌ಎಂಟಿ ಸೋನಾ ತಳಿಗಳನ್ನು ಇವರು ಪ್ರಾತ್ಯಕ್ಷಿಕೆ ಮಾದರಿ ಬೆಳೆಯುತ್ತಿದ್ದಾರೆ.
ನಮ್ಮಲ್ಲಿಯ ಭೂಮಿಗೆ ಯಾವ ತಳಿ ಹೆಚ್ಚು ಇಳುವರಿ ಬರುತ್ತದೆ ಎನ್ನುವುದನ್ನು ಗಮನಿಸಿ ಅಂತಹ ತಳಿಗಳನ್ನು ಹೆಚ್ಚು ಬೆಳೆಯುವುದು ಮತ್ತು ನಮ್ಮಲ್ಲಿನ ಅಪರೂಪದ ತಳಿಗಳನ್ನು ಸಂರಕ್ಷಿಸಿ ದ್ವಿಗುಣಗೊಳಸುವುದು ಉದ್ದೇಶ. ಸಾವಯವ ಕೃಷಿಗೆ ನಾಟಿ ತಳಿಯೇ ಸೂಕ್ತ. ನಾವು ಮೊದಲು ಇಳವರಿ ಪಡೆಯಲು ತುಂಬಾ ಕಸರತ್ತು ಮಾಡುತ್ತಿದ್ದೆವು. ರೋಗ ಬಾಧೆಗೆ, ಕೀಟ ಬಾಧೆಗೆ ಔಷಧಗಳನ್ನು ಸಿಂಪಡಿಸುತ್ತಿದ್ದೆವು. ಆದರೆ ಈಗ ಮಾತ್ರ ಅದಾವುದನ್ನೂ ಮಾಡದೇ ಸಾವಯವದಲ್ಲಿಯೇ ಕೃಷಿ ಮಾಡುತ್ತಿದ್ದೇವೆ. ಮಾರಾಟಕ್ಕಾಗಿ ಬೆಳೆಯುತ್ತಿರುವ ಭತ್ತದ ಗದ್ದೆಗಳಿಗೆ ಒಂದೂವರೆ ಕ್ವಿಂಟಾಲ್‌ ರಾಸಾಯನಿಕ ಗೊಬ್ಬರ ಹಾಕುತ್ತಿದ್ದೇವೆ. ಮೊದಲು ತುಂಬಾ ಗೊಬ್ಬರದ ಬಳಕೆ ಮಾಡುತ್ತಿದ್ದೆವು. ಈಗ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬರುತ್ತಿದ್ದೇವೆ. ಎರೆಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ ಅನ್ನುತ್ತಾರೆ ಸರೋಜಮ್ಮ.
ನಾಟಿ ತಳಿಯನ್ನು ಬೆಳೆಸುತ್ತಿರುವ ತಾಕುಗಳಿಗೆ ಯಾವುದೇ ತರಹದ ರಾಸಾಯನಿಕವನ್ನು ಬಳಸುತ್ತಿಲ್ಲ. ಈ ಭಾಗದಲ್ಲಿ ಶ್ರೀಪದ್ಧತಿ ಭತ್ತವನ್ನು ಮೊದಲು ಬೆಳೆದವರು ಇವರು. ಕೃಷಿಯೇ ಬದುಕಾಗಿರುವ ಸರೋಜಮ್ಮ ಅವರ ಪ್ರತಿಯೊಂದು ಯೋಚನೆ, ಯೋಜನೆಗೆ ಬೆನ್ನೆಲುಬಾಗಿ ನಿಂತವರು ಪತಿ ನಾಗೇಂದ್ರಪ್ಪ ಪಾಟೀಲರು. ಇವರ ಕೃಷಿಯನ್ನು ನೋಡಿ ಕೃಷಿ ಇಲಾಖೆಯವರು ಬಹಳಷ್ಟು ಕೃಷಿಕರಿಗೆ ಇವರಿಂದ ಮಾರ್ಗದರ್ಶನ ಕೊಡಿಸಿದ್ದಾರೆ. ಇವರು ಸಹ ಕೃಷಿ ಇಲಾಖೆಯ ಸಲಹೆ ಪಡೆಯದೆ ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಸರೋಜಮ್ಮ ಅವರ ಕೃಷಿ ತೋಟಕ್ಕೆ ಅಮೇರಿಕಾದ ಪತ್ರಕರ್ತೆ ರೆಬಾಕಾ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.
ನಾವು ಕೇವಲ ವಾಣಿಜ್ಯ ಉದ್ದೇಶಗಳಿಗೆ ಭತ್ತ ಬೆಳೆಯದೇ ನಮ್ಮದೇ ಆದ ಜವಾರಿ ತಳಿಗಳನ್ನು ಹುಡುಕಿ ಬೆಳೆಸಬೇಕು ಎಂದು ಪತ್ನಿ ಸರೋಜ ಹೇಳಿದಳು. ಕೃಷಿ ವಿಚಾರದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಅವಳು. ನನಗೂ ಸರಿ ಅನ್ನಿಸಿತು. ಸಾವಯವ ಕೃಷಿಯ ಕಡೆಗೆ ಬಂದಿದ್ದೆವು. ಸಾವಯವ ಕೃಷಿಯ ಜೊತೆ ಜವಾರಿ ತಳಿಗಳನ್ನು ಬೆಳೆಯುವುದು ಸರಿಯಾದ ಹೊಂದಾಣಿಕೆ. ಅವಳ ಆಸಕ್ತಿಗೆ ನಾನು ಆಸರೆಯಾಗಿದ್ದೇನೆ. ನಾಟಿ ತಳಿಗಳಲ್ಲಿ ಇಳವರಿ ಹೆಚ್ಚು ಬಾರದಿದ್ದರೂ ಗುಣಮಟ್ಟ ಒಳ್ಳೆಯದಾಗಿರುತ್ತದೆ ಎಂಬುದು ಸತ್ಯ ಅನ್ನುತ್ತಾರೆ ನಾಗೇಂದ್ರಪ್ಪ ಪಾಟೀಲ.
ಕಾಣೆಯಾಗುತ್ತಿರುವ ನಾಟಿ ತಳಿಗಳನ್ನು ಹುಡುಕಿ ಬೆಳೆಯುತ್ತಿರುವ ಸರೋಜ ಅವರ ಪ್ರಯತ್ನ ಶ್ಲಾಘನೀಯ. ಒಂದೊಂದು ಭಾಗದಲ್ಲಿ ಇಂತಹ ಒಬ್ಬೊಬ್ಬರು ಇದ್ದರೂ ಜವಾರಿ ತಳಿಯ ಕೃಷಿ ಪುನರ್ಜನ್ಮ ಪಡೆಯುಯುವುದು ಖಂಡಿತ.
ಇವರ ಕೃಷಿ ಮಾಹಿತಿಗಾಗಿ: ಸರೋಜ ನಾಗೇಂದ್ರಪ್ಪ ಪಾಟೀಲ್‌
ನಿಟ್ಟೂರು
ಅಂಚೆ: ನಿಟ್ಟೂರು
ಹರಿಹರ, ದಾವಣಗೆರೆ
ದೂರವಾಣಿ: 08192293014
ನಾಗರಾಜ ಮತ್ತಿಗಾರ