Tuesday, April 21, 2009

ಜಲಗಾಂವ್ ಅಣ್ಣನ ಸಾಧಕ(ತೆ!)


ಜಲ­ಗಾಂವ್‌, ಮಹಾ­ರಾಷ್ಟ್ರ- ಮಧ್ಯ­ಪ್ರ­ದೇಶ ಗಡಿ ಜಿಲ್ಲೆ. ಯಾವ ಪುಣ್ಯಾತ್ಮ ಈ ಹೆಸ­ರನ್ನು ಆ ಊರಿಗೆ ಇಟ್ಟನ್ನೊ ಗೊತ್ತಿಲ್ಲ! ಬ್ಯಾಟರಿ ಹಾಕಿ ಹುಡು­ಕಿ­ದರೂ ಜಲ ಮಾತ್ರ ಸಿಗ­ಲಿ­ಕ್ಕಿಲ್ಲ. ಮಳೆ ಕಡಿಮೆ. ಉರಿ­ಯುವ ಬಿಸಿಲು ಹೇರಳ. ಕೊರೆ­ಯುವ ಚಳಿಯೂ ಜಾಸ್ತಿ. ಇಂತಹ `ಜ­ಲ­ಗಾಂವ್‌' ಅನ್ನು ಹೆಸ­ರಿಗೆ ತಕ್ಕಂತೆ ಪರಿ­ವ­ರ್ತಿ­ಸಿದ ವ್ಯಕ್ತಿ ಭವ­ರ­ಲಾಲ್‌ ಜ್ಕ್ರೆನ್‌. ಎಲ್ಲರ ಪ್ರೀತಿಯ ಬಾವು, ಅಂದರೆ ಮರಾ­ಠಿ­ಯಲ್ಲಿ ಅಣ್ಣ ಎಂದರ್ಥ.
ಭವ­ರ್‌­ಲಾಲ್‌ ಜೈನ್‌ ರೈತ ಕುಟುಂ­ಬ­ದಲ್ಲಿ ಹುಟ್ಟಿ­ದ­ವರು. `ಜೈನ್‌ ಇರಿ­ಗೇ­ಷನ್‌' ಎಂಬ ಸಾಮ್ರಾ­ಜ್ಯದ ಅಧಿ­ಪತಿ. ಸರ­ಕಾ­ರದ ತಿಂಗಳು-ತಿಂ­ಗಳು ಸಂಬಳ, ಕಾರು, ಬಂಗಲೆ ಎಲ್ಲ­ವನ್ನು ಪಡೆದು ತಣ್ಣಗೆ ಜೀವನ ಸಾಗಿ­ಸ­ಬ­ಹು­ದಾ­ಗಿತ್ತು. ಮಹಾ­ರಾ­ಷ್ಟ್ರದ ನಾಗ­ರಿಕ ಸೇವೆಗೆ ಆಯ್ಕೆ­ಯಾ­ಗಿದ್ದ ಬಾವು, ಅದನ್ನು ತಿರ­ಸ್ಕ­ರಿ­ಸಿ­ಬಿ­ಟ್ಟರು. ಆರಂ­ಭ­ದಲ್ಲಿ ಅವರು ತಾಯಿ­ಯಿಂದ ಐದು ಸಾವಿರ ರೂಪಾಯಿ ಪಡೆದು ಸೀಮೆ ಎಣ್ಣೆ ವ್ಯಾಪಾರ ಶುರು­ಮಾ­ಡಿ­ದರು. ಅವರೇ ಹೇಳು­ವಂತೆ `ಮಾ­ರ್ವಾ­ಡಿ­ಗ­ಳಿಗೆ ವ್ಯಾಪಾ­ರವೇ ಇಷ್ಟ'. ಇವರು ವ್ಯಾಪಾ­ರ­ದಲ್ಲಿ ಸೋಲ­ಲಿಲ್ಲ. ಬೆಳೆ­ಯುತ್ತ ಹೋದರು. ರೈತಾಪಿ ಹಿನ್ನೆಲೆ ಇರುವ ಇವ­ರಿಗೆ ಕೃಷಿಯ ಸೆಳೆತ ಸಹ­ಜ­ವಾ­ಗಿಯೇ ಇತ್ತು. ತಮ್ಮ ವ್ಯಾಪಾ­ರದ ಜತೆ ತಂದೆ­ಯಿಂದ ತಮಗೆ ಬಂದ ಜಮೀ­ನಿ­ನಲ್ಲಿ ಕೃಷಿ ಮಾಡಲು ಪ್ರಾರಂ­ಭಿ­ಸಿ­ದರು. ತಮ್ಮ ಯೋಚ­ನೆ­ಯನ್ನು ಇತ­ರಿಗೂ ತೋರಿ­ಸ­ಬೇಕು ಎಂಬ ಮನ­ಸ್ಸಾ­ಯಿತು. ರೈತ­ರಿಗೆ ಅನು­ಕೂ­ಲ­ವಾ­ಗುವ ನಿಟ್ಟಿ­ನಲ್ಲಿ ಕೆಲಸ ಮಾಡ­ಬೇಕು ಎಂಬ ನಿರ್ಧಾ­ರ­ವನ್ನು ಇವರು ತೆಗೆ­ದು­ಕೊಂ­ಡರು.
ಅವರ ಈ ಯೋಚನೆ ಇವರ ಊರಿಗೆ ಹೊಂದಿ­ಕೊಂ­ಡಿ­ರುವ ಊರು ಶಿರ್ಸೋ­ಳ್ಳಿ­ಯಲ್ಲಿ ಬೆಟ್ಟ ಕಣ್ಣಿಗೆ ಬಿತ್ತು. ಇದನ್ನು ಬಾವು ಖರೀ­ದಿ­ಸಿ­ದರು. ಹಲ­ವಾರು ಕನ­ಸು­ಗಳ ಮೂಟೆ ಹೊತ್ತು ಬೆಟ್ಟ­ವೇ­ರಿದ ಭಾವು ಅವ­ರಿಗೆ ಇದನ್ನು ಪ್ರಯೋ­ಜ­ನಕ್ಕೆ ಬರು­ವಂತೆ ಮಾರ್ಪಾಡು ಮಾಡು­ವುದೇ ದೊಡ್ಡ ಸವಾ­ಲಾ­ಯಿತು. ಕಲ್ಲಿನ ಅರೆ. ಹಸಿರು ಹೇಳುವ ಶಬ್ದಕ್ಕೆ ಇಲ್ಲಿ ಅರ್ಥ­ವಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತು ಈ ಬೆಟ್ಟದ ವಿಷ­ಯ­ದಲ್ಲಿ ಸುಳ್ಳಾ­ಯಿತು. ಇಲ್ಲಿ ಹತ್ತಿರ ಹೋಗಿ ನೋಡಿ­ದರೂ ನುಣ್ಣಗೆ. ಇಂತಹ ಬೆಟ್ಟ­ವನ್ನು ಖರೀ­ದಿ­ಸಿದ ಬಾವು ಅವ­ರಿಗೆ `ಸ­ರಿ­ಯಿಲ್ಲ' ಎಂಬ ಮಾತು­ಗಳು ಕೇಳಿ­ಬಂ­ದವು. ಆದರೆ, ಬಾವು ಮಾತ್ರ ತಮ್ಮ ಮನ­ಸ್ಸಿಗೆ ಬಂದ ಆಲೋ­ಚನೆ ಕೈಬಿ­ಡ­ಲಿಲ್ಲ. ಶಿರ್ಸೋಳ್ಳಿ ಬೋಳು­ಗು­ಡ್ಡಕ್ಕೆ`ಜೈನ್‌ ಹಿಲ್ಸ್‌' ಎಂದು ನಾಮ­ಕ­ರಣ ಮಾಡಿ­ದರು. ಸಾಧನೆ ಮಾಡಿ ತೋರಿ­ಸಲು ಪಣ ತೊಟ್ಟರು.
ಬೋಳು­ಗು­ಡ್ಡ­ದಲ್ಲಿ ಕೃಷಿ ಮಾಡು­ವುದು ಸುಲ­ಭದ ಮಾತಲ್ಲ. ಎಲ್ಲಿ­ಕ್ಕಿಂತ ಮೊದಲು ನೀರನ್ನು ಇಲ್ಲಿಗೆ ತರು­ವುದು ಸವಾ­ಲಾ­ಗಿತ್ತು. ಈ ಬೆಟ್ಟದ ಹತ್ತಿ­ರ­ದಲ್ಲಿ `ಗಿ­ರಣಾ' ನದಿ ಹರಿ­ಯು­ತ್ತದೆ. ಇದು ಹೆಸ­ರಿಗೆ ಮಾತ್ರ ನದಿ. ಮಳೆ ಬಂದಷ್ಟು ದಿನ ಮಾತ್ರ ನೀರು ಹರಿ­ಯು­ತ್ತದೆ. ಉಳಿದ ದಿನ­ದಲ್ಲಿ ಈ ನದಿ­ಯನ್ನು ನೋಡಿ­ದರೆ ಯಾವುದೋ ಶತ­ಮಾ­ನದ ಪಳ­ಯು­ಳಿ­ಕೆ­ಯಂತೆ ಕಾಣು­ತ್ತದೆ. ಆದರೂ ಇಲ್ಲಿಂದ ನೀರನ್ನು ತರುವ ಯೋಚ­ನೆ­ಯನ್ನು ಭಾವು ಮಾಡಿ­ದರು. ಈ ನದಿಗೆ ಒಂದು ಪಂಪ್‌­ಸೆಟ್‌ ಹಾಕಿಸಿ ನೀರನ್ನು ತಂದರು. ಆದರೆ ಇದು ಶಾಶ್ವತ ವ್ಯವ­ಸ್ಥೆ­ಯಾ­ಗಿ­ರ­ಲಿಲ್ಲ.
ನಂತರ ತಮ್ಮ ಸ್ವಂತ ಜಾಗ­ದ­ಲ್ಲಿಯೇ ಶಾಶ್ವತ ನೀರಿನ ವ್ಯವಸ್ಥೆ ಮಾಡಿ­ಕೊ­ಳ್ಳ­ಬೇ­ಕೆಂಬ ಆಲೋ­ಚನೆ ಮಾಡಿ­ದರು ಬಾವು. ಅಂತ­ರ್ಜಲ ತಜ್ಞ­ರೊಂ­ದಿಗೆ ಸಮಾ­ಲೋ­ಚನೆ ನಡೆ­ಸಿ­ದರು. ಸಾವಿರ ಅಡಿ ಆಳ ಬೋರ ಹೊಡೆ­ದರು ನೀರು ಬರು­ವು­ದಿಲ್ಲ ಎಂಬ ಉತ್ತರ ದೊರೆ­ಯಿತು. ಒಂದು ಹನಿ ನೀರು ಕೂಡಾ ನಿಲ್ಲ­ದಷ್ಟು ಕಡಿ­ದಾದ ಗುಡ್ಡ­ದಲ್ಲಿ ನೀರು ತರು­ವುದೇ ಒಂದು ಯಕ್ಷ ಪ್ರಶ್ನೆ­ಯಾ­ಯಿತು. ಏನಾ­ದರೂ ಸಾಧನೆ ಮಾಡ­ಬೇ­ಕೆಂ­ದರೆ, ನೀರು ಅನಿ­ವಾರ್ಯ. `ಅ­ನಿ­ವಾ­ರ್ಯವೇ ಆವಿ­ಷ್ಕಾ­ರಕ್ಕೆ ದಾರಿ­ಯ­ಲ್ಲವೇ?' ಈಡಿ ಗುಡ್ಡ­ವನ್ನು ತಾರ­ಸೀ­ಕ­ರಣ (ಟೆ­ರೇ­ಸಿಂಗ್‌) ಮಾಡುವ ಯೋಚನೆ ಮಾಡಿ­ದರು. ಇದು ಸುಲ­ಭದ ಕೆಲ­ಸ­ವಾ­ಗಿ­ರ­ಲಿಲ್ಲ. ಭೂ ವಿಜ್ಞಾ­ನ­ದಲ್ಲಿ ಪರಿ­ಣಿತಿ ಇರು­ವ­ವ­ರನ್ನು ಕರೆ­ಸಿ­ದರು ತಾರ­ಸೀ­ಕ­ರ­ಣಕ್ಕೆ ಯೋಜನೆ ರೂಪಿ­ಸಿ­ದರು. ಕಡಿ­ದಾದ ಗುಡ್ಡ­ವನ್ನು ಕಡಿದು ಕರ­ಗಿ­ಸು­ವುದು ಖರ್ಚಿನ ಬಾಬ್ತು. ಆದರೂ ಕೂಡಾ ಮಾಡದೇ ಬಿಡುವ ಹಾಗಿಲ್ಲ. ಯಂತ್ರ­ಗಳ ಜೊತೆ ಮನುಷ್ಯ ಶ್ರಮ­ವನ್ನು ಬಳ­ಸಿ­ದರು. ಒಂದು­ವರೆ ವರ್ಷದ ಸತತ ಪರಿ­ಶ್ರ­ಮ­ದಿಂದ ಗುಡ್ಡದ ಸುತ್ತಲು ತಾರ­ಸೀ­ಕ­ರಣ ಮಾಡಿ­ದರು. ಓಡುವ ನೀರು ನಿಂತು ನಿಂತು ಇಂಗ ತೊಡ­ಗಿತು.
ಗುಡ್ಡದ ಯಾವು ಮೂಲೆ­ಯಲ್ಲೂ ನೀರು ಸುಮ್ಮನೆ ಹರಿ­ದು­ಹೋ­ಗದೆ ಇರು­ವಂತೆ ಹತ್ತು ಬಾಂದಾ­ರ­ಗ­ಳನ್ನು ನಿರ್ಮಿ­ಸಿ­ದರು. `ಜೈ­ನ್‌­ಸಾ­ಗರ್‌' ಇದ­ರಲ್ಲಿ 1.25.000 ಘನ ಮೀಟರ್‌(ಒಂದು ಘನ ಮೀಟರ್‌= 1000 ಲೀಟರ್‌) ನೀರು ನಿಲ್ಲು­ತ್ತದೆ. `ಸಿಂಧೂ'ವಿ­ನಲ್ಲಿ 1.65.000, `ಜೈನ್‌ ಸಂಗ್ರಹ' 8.000, `ಜೈನ್‌ ಬಾಂದಾರ' 1200, `ಜೈನ್‌ ಉಪ­ಸಾ­ಗರ' 61000, `ಕ್ಷೀ­ರ­ಸಾ­ಗರ್‌' 42.500, `ಜೈ­ನ್‌­ಜ­ಲ­ಗಾರ' 15.000, `ಜೈನ್‌ ಜಲಾ­ಶಯ' 40.000, `ಮ­ಹಾ­ಸಾ­ಗರ' 4.40.000, `ಜೈನ್‌ ಜಲ­ನಿಧಿ' 3000 ಘನ ಮೀಟರ್‌ ನೀರು ಸಂಗ್ರ­ಹ­ವಾ­ಗು­ತ್ತದೆ.
ಇಲ್ಲಿ ಸಂಗ್ರ­ಹ­ವಾ­ಗುವ ನೀರನ್ನು ಹಿಡಿ­ದಿ­ಡಲು ಗುಡ್ಡದ ತಲೆ­ಯಲ್ಲಿ 3.25 ಹಾಗೂ 2.27 ಲಕ್ಷ ಲೀಟರ್‌ ಸಾಮ­ರ್ಥ್ಯದ ಎರಡು ೃಹತ್‌ ಟ್ಯಾಂಕ್‌ ನೀರ್ಮಾಣ ಮಾಡಿ­ದ್ದಾರೆ. ಇದ­ರಿಂದ ಈಡೀ ಗುಡ್ಡಕ್ಕೆ ನೀರು ಸರ­ಬ­ರಾ­ಜಾ­ಗು­ತ್ತದೆ. ನೀರಿನ ವ್ಯವ­ಸ್ಥೆ­ಯಾದ ನಂತರ ಸಾವಿರ ಎಕರೆ ಜೈನ್‌ ಹಿಲ್ಸ್‌ ಹಸಿ­ರು­ಕ­ರ­ಣ­ಗೊ­ಳಿ­ಸಲು ಪ್ರಾರಂ­ಭಿ­ಸಿ­ದರು. ಪೇರಲ, ಹುಣಸೆ, ಮಾವು, ಬೇವು, ತಾಡ ಮರ­ಮ­ಗನ್ನು ಬೆಳೆ­ಸಿ­ದರು. ಹದಿ­ನೈದು ವರ್ಷ­ಗ­ಳಲ್ಲಿ ಜೈನ್‌ ಹಿಲ್ಸ್‌ನ ಚಿತ್ರ­ಣವೇ ಬದ­ಲಾ­ಯಿತು. ನುಣ್ಣನೆ ಗುಡ್ಡ ಹಸಿ­ರಿಂದ ಕಂಗೊ­ಳಿ­ಸ­ತೊ­ಡ­ಗಿತು.
`ಜೈನ್‌ ಹಿಲ್ಸ್‌' ಇಂದು ಭಾರ­ತದ ಮೂಲೆ ಮೂಲೆ­ಯ­ಲ್ಲಿ­ರುವ ರೈತ­ರಿಗೂ ನೈಜ ಪ್ರಾತ್ಯ­ಕ್ಷಿಕೆ ತಾಣ. ಮಳೆ ನೀರು ಸದ್ಬ­ಳಕೆ, ತಾರ­ಸೀ­ಕ­ರಣ, ಇಲ್ಲಿನ ಕೃಷಿ ವಿಧಾನ, ನೀರಾ­ವರಿ ಕ್ರಮ ಹೀಗೆ ಹಲವು ದೃಷ್ಟಿ­ಯಿಂದ ಅಧ್ಯ­ಯನ ಯೋಗ್ಯ ಪ್ರವಾಸಿ ತಾಣ­ವಾಗಿ ಜೈನ್‌ ಹಿಲ್ಸ್‌ ಮಾರ್ಪಾ­ಡಾ­ಗಿದೆ. ದೇಶದ ಎಲ್ಲಾ ಕಡೆ­ಯಿಂ­ದಲೂ ರೈತರು ಇಲ್ಲಿನ ಯಶೋ­ಗಾ­ಥೆ­ಯನ್ನು ಕಣ್ಣಾರೆ ಕಂಡು, ತರ­ಬೇತಿ ಪಡೆದು ನವ ಕನ­ಸನ್ನು ಕಟ್ಟಿ­ಕೊಂಡು ತವ­ರಿಗೆ ಮರ­ಳು­ತ್ತಿ­ದ್ದಾರೆ.
ಬಾವು ಬೋಳು ಗುಡ್ಡ ಖರೀ­ದಿ­ಸಿ­ದಾಗ ನಕ್ಕ ಮಂದಿ­ಯೆಲ್ಲ ಇವರ ಸಾಧ­ನೆ­ಯನ್ನು ಕಂಡಿ­ದ್ದಾರೆ. ನಗೆ­ಯಾ­ಡು­ತ್ತಿದ್ದ ಬಾಯಿ ಮುಚ್ಚಿದೆ. ಕನಸು, ಛಲ, ದೂರ­ದೃ­ಷ್ಟಿಯ ಮನೋ­ಭಾ­ವ­ವಿ­ದ್ದರೆ ಏನ­ನ್ನಾ­ದರೂ ಸಾಧಿ­ಸ­ಬ­ಹುದು ಎನ್ನು­ವು­ದಕ್ಕೆ ಬಾವು ಸಾಧನೆ ಸಾಕ್ಷಿ. ಬಾವು ಸಾಧನೆ ಕಂಡ ಕಂಡ ಅನೇ­ಕರು ಅವ­ರನ್ನು ಅಭಿ­ನಂ­ದಿ­ಸಿ­ದ್ದಾರೆ. `ಭಾ­ರ­ತೀಯ ಜಲ ರಕ್ಷಕ' ಎನ್ನುವ ಪುರ­ಸ್ಕಾರ ನೀಡಿ­ದ್ದಾರೆ.
ಜೈನ್‌ ಹಿಲ್ಸ್‌ ಬಗ್ಗೆ ಮಾಹಿ­ತಿ­ಗಾಗಿ
ಸಿ.ಎ. ಜೋಶಿ
(ಡೆ­ಪ್ಯುಟಿ ಮ್ಯಾನೇ­ಜರ್‌, ಜೈನ್‌ ಇರಿ­ಗೇ­ಷನ್‌)
ದೂರ­ವಾಣಿ ಸಂಖ್ಯೆ- 9448286508



ನಾಗರಾಜ ಮತ್ತಿಗಾರ

Tuesday, April 7, 2009

ಮಖಾನಾ ಬೆಳೆಯುವುದು ಸುಖಾನಾ?


ಕೆಲವು ವರ್ಷಗಳ ಹಿಂದೆ ಸಾವಯವ ಗೊಬ್ಬರ ತಯಾರಿಸುವ ಮಿತ್ರರೊಬ್ಬರು ಹೇಳಿದ್ದು ನೆನಪಾಗುತ್ತದೆ. ಅವರೊಮ್ಮೆ ಬಿಹಾರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಹಳ್ಳಿಗಳಲ್ಲಿ ಸಣ್ಣ ಪುಟ್ಟ ನೀರಿನ ಹೊಂಡಗಳಲ್ಲಿ ವಿಶಿಷ್ಟ ಬೀಜವೊಂದನ್ನು ಬೆಳೆದು ಮಾರುವುದನ್ನು ತಿಳಿಸಿದ್ದರು. ಅಂತರ್ಜಾಲದಲ್ಲಿ, ಇಂಗ್ಲೀಷ್‌ ಪತ್ರಿಕೆಗಳಲ್ಲಿ ಜಾಲಾಡಿದಾಗ ಆ ಬೆಳೆಯ ಪರಿಚಯವಾಗಿತ್ತು. ಅದು ಮಖಾನಾ!
ಬಿಹಾರದ ಉತ್ತರ ಪೂರ್ವ ಪ್ರದೇಶದಲ್ಲಿ ವಿಶ್ವದ ಶೇ.90ರ ಮಖಾನಾ ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ 90ರ ದಶಕದಲ್ಲಿಯೇ ಈ ಬೆಳೆಯನ್ನು ಇಲ್ಲಿನ ಕೃಷಿಕರು ವ್ಯವಸ್ಥಿತವಾಗಿ ಬೆಳೆದುದಕ್ಕೆ ದಾಖಲೆಗಳಿವೆ. ಅಲ್ಲಿನ ಮಧುಬನಿ ಜಿಲ್ಲೆಯ ಉಜ್ಜಾನ್‌ನ ರೈತ ಕೇದಾರ್‌ನಾಥ್‌ ಜಾ ತಮ್ಮದಲ್ಲದೆ ಗುತ್ತಿಗೆ ಮೂಲಕ ಒಟ್ಟು 70 ಹೊಂಡಗಳಲ್ಲಿ ಮಖಾನಾ ಬೆಳೆದು ವಾರ್ಷಿಕ ಸಂಪಾದಿಸುವ ಆದಾಯ 17 ಲಕ್ಷ ರೂ.!
ಮಖಾನಾ ಒಂದು ವಿಶಿಷ್ಟ ಬೆಳೆ. ಇದನ್ನು ಬೆಳೆಯಲು ನೀರಿನ ಆಧಾರ ಬೇಕು. ನೀರಿರುವ ಹೊಂಡ ಬೇಕು. ಪ್ರತಿ ವರ್ಷದ ಡಿಸೆಂಬರ್‌ಜನವರಿ ಬೀಜವನ್ನು ಬಿತ್ತಬೇಕಾದ ಸಮಯ. ಸುಮಾರು ಐದು ಅಡಿ ಆಳದ ನೀರಿನ ಹೊಂಡದಲ್ಲಿ ಒಂದರಿಂದ ಒಂದೂವರೆ ಮೀಟರ್‌ ಅಂತರದಲ್ಲಿ ಬೀಜವನ್ನು ಬಿತ್ತಬೇಕು. ಒಂದು ಹೆಕ್ಟೇರ್‌ ಅಂದರೆ ಎರಡೂವರೆ ಎಕರೆ ವ್ಯಾಪ್ತಿಯ ಹೊಂಡಕ್ಕೆ 80 ಕೆ.ಜಿ. ತೂಕದ ಬೀಜ ಬೇಕಾಗುತ್ತದೆ. ಹೊಂಡದ ಅಗಲ ರೈತನ ಅಗತ್ಯತೆ, ಲಭ್ಯತೆಯನ್ನು ಆಧರಿಸಿರುತ್ತದೆ.
ಬಿತ್ತನೆಗೆ ಮುನ್ನ ಬೀಜೋಪಚಾರ ನಡೆಸುವುದು ಕ್ಷೇಮ. ಇದರಿಂದ ಮೊಳಕೆಯ ಶೇಕಡಾವಾರು ಪ್ರಮಾಣ ಹೆಚ್ಚುವುದು ಖಚಿತ. ಜಾ ಹೇಳುತ್ತಾರೆ, ಬಿತ್ತನೆಗೆ ಮುನ್ನ ಒಂದು ವಾರ ಕಾಲ ಒದ್ದೆ ಮಾಡಿದ ಸೆಣಬಿನ ದಾರದ ಚೀಲದಲ್ಲಿ ಬೀಜವನ್ನು ಇರಿಸಿರುತ್ತೇನೆ. ಇದರಿಂದ ಫಲವತ್ತತೆ ಹೆಚ್ಚುತ್ತದೆ.
ಮಖಾನಾ ನೀರಿನೊಳಗೇ ಗಿಡವಾಗಿ ಬೆಳೆಯುತ್ತದೆ. ಏಪ್ರಿಲ್‌ ವೇಳೆಗೆ ಮಖಾನಾ ಹೂವು ಹೊರಗೆ ಬಂದು ನೀರಿನ ಮೇಲೆ ಹರಡಿಕೊಳ್ಳುತ್ತದೆ. ಪರಾಗ ಸ್ಪರ್ಶವನ್ನು ಪ್ರಕೃತಿ ನಡೆಸುವ ಕಾರಣದಿಂದಾಗಿ ವಾತಾವರಣಕ್ಕೆ ತೆರೆದುಕೊಳ್ಳುತ್ತದಿರಬೇಕು. ನಂತರದ 3-4 ದಿನಗಳಲ್ಲಿ ಮತ್ತೆ ನೀರಿನೊಳಗೆ ಮಖಾನಾ ಮಾಯ!
ಸಾಮಾನ್ಯವಾಗಿ ಜೂನ್‌ ಜುಲೈ ಸಮಯದಲ್ಲಿ ಹಣ್ಣುಗಳು ಸೃಷ್ಟಿಯಾಗುತ್ತವೆ. ಕೇವಲ 24ರಿಂದ 48 ತಾಸು ನೀರಿನ ಮೇಲೆ ಅವು ತೇಲಾಡುತ್ತವೆ. ಮತ್ತೆ ನೀರಿನಲ್ಲಿ ಹಣ್ಣು ಮುಳುಗುತ್ತವೆ! ಅದರ ಬೀಜಗಳನ್ನು ಸೆಪ್ಟೆಂಬರ್‌ ಅಕ್ಟೋಬರ್‌ ಅವಧಿಯಲ್ಲಿ ಹೊಂಡಗಳಿಂದ ಸಂಗ್ರಹಿಸಬೇಕಾಗುತ್ತದೆ.
ಬೀಜಗಳ ಸಂಗ್ರಹದ ನಂತರ ಸಂಸ್ಕರಣೆ ನಡೆಸಬೇಕು. ಬೀಜಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿ ಒಣಗಿಸಿದ ನಂತರ ಗಾತ್ರದ ಆಧಾರದಲ್ಲಿ ವರ್ಗೀಕರಣ ನಡೆಸಬೇಕಾಗುತ್ತದೆ. ಒಣಗಿಸುವ ಪ್ರಕ್ರಿಯೆಗೆ ನಾನಾ ವಿಧದ ಆಧುನಿಕ ತಂತ್ರಜ್ಞಾನಗಳನ್ನು ಬಳಸಬಹುದು.
ಕರ್ನಾಟಕದಲ್ಲಿ ಈ ಬೆಳೆ ಹೊಂದಿಕೊಂಡೀತೆ? ಮಿಲಿಯನ್‌ ಡಾಲರ್‌ ಪ್ರಶ್ನೆ. ಹವಾಮಾನಗಳನ್ನು ಅಧ್ಯಯನ ನಡೆಸಿರುವವರು ಹೇಳುವ ಪ್ರಕಾರ ಸಮಸ್ಯೆ ಇಲ್ಲ. ಚುರುಮುರಿಯಾಗಿ, ಕಾರ್ನ್‌ ಆಗಿ ಮೌಲ್ಯವರ್ಧನೆ ನಡೆಸಬಹುದಾದ ಮಖಾನಾಕ್ಕೆ ಒಳ್ಳೆಯ ದರವೂ ಸಿಕ್ಕೀತು. ನೀರಿನಡಿಯೇ ಬೆಳೆಯುವುದರಿಂದ ದೊಡ್ಡ ಪ್ರಮಾಣದ ಶತ್ರುಗಳು, ರೋಗಗಳು ಎದುರಾಗಲಿಕ್ಕಿಲ್ಲ. ಮುಖ್ಯವಾದುದೆಂದರೆ, ನೀರು ಸಮೃದ್ಧ ಇರಬೇಕು. ನೀರಿನಲ್ಲಿ ಪರ್ಯಾಯ ಬೆಳೆ ಅರ್ಥಾತ್‌ ಮೀನು ಸಾಕಾಣಿಕೆಯಂತದು ಸಾಧ್ಯವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಹೊಂಡಗಳಿಂದ ಬಿಳಿಯದಾದ ಚಿಕ್ಕದಾದ ಮಖಾನಾ ಬೀಜಗಳನ್ನು ಆಯುವುದು ತ್ರಾಸವಾದೀತು. ಬೆಳಗಿನ ಜಾವ ಕೃಷಿಕರು ಕೃತಕ ಪರಾಗಸ್ಪರ್ಶ ನಡೆಸಿ ವೆನಿಲ್ಲಾ ಕೋಡುಗಳನ್ನು ಬೆಳೆದಿದ್ದಾರೆಂದ ಮೇಲೆ ಇದು ಯಾವ ಲೆಕ್ಕ?
ಇಂದು ಕೇದಾರ್‌ನಾಥ್‌ ಜಾ 20-25 ಸಾವಿರ ರೂ. ಖರ್ಚು ಮಾಡಿ ಹೆಕ್ಟೇರ್‌ಗೆ 40ರಿಂದ 50 ಸಾವಿರದ ನಿವ್ವಳ ಆದಾಯ ಪಡೆಯುತ್ತಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಮಖಾನಾದ ಪರಿಷ್ಕರಣೆಗೆ ಆಧುನಿಕ ಕಾರ್ಖಾನೆ ಸ್ಥಾಪನೆಯಾಗಿದೆ. ಬಿಹಾರದ ಎಂಟು ಜಿಲ್ಲೆಗಳ ಸಣ್ಣ ಪುಟ್ಟ ರೈತರು ಬೆಳೆದದ್ದನ್ನು ಖರೀದಿಸಲು ಸತ್ಯಜೀತ್‌ ಕುಮಾರ್‌ ಸಿಂಗ್‌ ಎಂಬಾತ 70 ಕೋಟಿ ಬಂಡವಾಳದ ಈ ಕಾರ್ಖಾನೆ ಸ್ಥಾಪಿಸಿದ್ದಾರೆ. ಖುದ್ದು ಜಾರಂತ ದೊಡ್ಡ ರೈತರು ಹೆಕ್ಟೇರ್‌ಗೆ ಒಂದರಿಂದ ಒಂದೂವರೆ ಟನ್‌ ಮಖಾನಾ ಬೆಳೆಯುತ್ತಾರೆ. ಇನ್ನೂ ವಾರ್ಷಿಕ 400ರಿಂದ 500 ಕೋಟಿ ರೂಪಾಯಿ ಮೌಲ್ಯದ ಮಖಾನಾಕ್ಕೆ ಬೇಡಿಕೆಯಿದೆಯೆಂದು ಆಹಾರ ತಜ್ಞರು ಹೇಳುತ್ತಾರೆ.
ನಮ್ಮ ರೈತರಿಗೆ ಅವಕಾಶವಂತೂ ಇದೆ. ಇನ್ನಷ್ಟು ಅಧ್ಯಯನದ ಅಗತ್ಯವೂ ಕಾಣುತ್ತದೆ. 2002ರಲ್ಲಿಯೇ ಭಾರತ ಸರ್ಕಾರದ ಕೃಷಿ ಸಂಶೋಧನಾಲಯ ಮಖಾನಾದ ರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ದರ್ಬಾಂಗ್‌ನಲ್ಲಿ ತೆರೆದಿದೆ. ರೈತ ಕೇದಾರ್‌ನಾಥ್‌ ಅವರ ಮೊಬೈಲ್‌ 09939037453 ಅಥವಾ 09934911553
-ಮಾವೆಂಸ