Saturday, January 2, 2010

ಬೆಳೆಗಾರ ಒಬ್ಬ-ತಳಿ 70




ಒಂದೂವರೆ ಎಕರೆ ಜಾಗ. ಬೆಳೆಯುವ ಬೆಳೆ ಭತ್ತ. ಒಂದಲ್ಲ, ಎರಡಲ್ಲ ಬರೋಬ್ಬರಿ 70 ದೇಶೀ ತಳಿಗಳು! ಸಣ್ಣ ಕಾಳು, ದೊಡ್ಡ ಕಾಳು, ಕಪ್ಪು ಕಾಳು, ಬಂಗಾರದಂತಹ ಭತ್ತದ ಕಾಳು ನಳನಳಿಸುವ ತಾಕುಗಳು. ಯಾವ ಕೃಷಿ ವಿಶ್ವವಿದ್ಯಾಲಯಗಳಲ್ಲೂ ಕಾಣ ಸಿಗದಿರುವಂತಹ ಜೀವಂತ ದೃಶ್ಯ ಕಣ್ಣಿಗೆ ಹಿತ ನೀಡುತ್ತದೆ. ಇದು ಮಂಡ್ಯ ಹತ್ತಿರದ ಶಿವಳ್ಳಿಯ ರೈತ ಬೋರೇಗೌಡರ ಹೊಲ.

ಹೈಬ್ರೀಡ್ ಭತ್ತ, ಗೊಬ್ಬರದ ಭರಾಟೆಯಲ್ಲಿ ನಮ್ಮ ನೆಲ ಮೂಲದ ದೇಶೀ ಭತ್ತದ ತಳಿಗಳು ಕಣ್ಮರೆಯಾಗುತ್ತವೆ. 'ದೇಶೀ ಭತ್ತ ಉಳಿಸಿ' ಆಂದೋಲನಕ್ಕೆ ಮೂರ್ತ ರೂಪದಲ್ಲಿ ಹೋರಾಟ ಮಾಡುತ್ತಿರುವ ರೈತ ಇವರು. ಎಲ್ಲರಂತೆ ಇವರೂ ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುತ್ತಿದ್ದರು. ಇದರಿಂದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬಂತು. ಉತ್ಪಾದನೆಯ ವೆಚ್ಚಕ್ಕೂ ಹುಟ್ಟುವಳಿಗೂ ಸಮನಾಗ ತೊಡಗಿತು.

ಇಂತಹ ಸಮಯದಲ್ಲಿ ವರನ್ನು ಪಾಳೇಕರ್ ಕೃಷಿ ಪದ್ಧತಿ ಸೆಳೆಯಿತು. ಇದರೊಂದಿಗೆ ಸಾವಯವ ಕೃಷಿಯ ಕುರಿತು ಪತ್ರಿಕೆಗಳಲ್ಲಿ ಬರುವ ಲೇಖನಗಳು ಇವರನ್ನು ಆಕಷರ್ಿಸಿತು.

ಸಾವಯವ ಕೃಷಿ ಮಾಡಲು ಪ್ರಾರಂಭಿಸಿದರು. ಹೈಬ್ರೀಡ್ ಭತ್ತದ ಬೆಳೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ಯತ್ನಿಸಿದರು. ಆದರೆ ಪ್ರಯೋಜನ ಶೂನ್ಯ. ಸಾವಯವ ಕೃಷಿ ಯಶ ಕಾಣಬೇಕಿದ್ದರೆ ನಮ್ಮ ನೆಲದ ಭತ್ತದ ತಳಿಗಳಿಗೆ ಸೂಕ್ತ ಎಂದು ಮನಗಂಡರು. ದೇಶೀ ಭತ್ತದ ತಳಿಗಳ ಹುಟುಕಾಟಕ್ಕೆ ಪ್ರಾರಂಭಿಸಿದರು. ಆಗ ಪರಿಚವಾದವರು ಬೆಳ್ತಂಗಡಿ ಹತ್ತಿರದ ಕಿಲ್ಲೂರು ದೇವರಾಯರು. ಇವರು ಕೂಡಾ ಅಪರೂಪದ ಭತ್ತದ ಸಂರಕ್ಷಕರು. ಇವರಲ್ಲಿಗೆ ಹೋಗಿ ನಾಲ್ಕೈದು ತಳಿಯ ಭತ್ತವನ್ನು ತಲಾ 200 ಗ್ರಾಂ ಭತ್ತದ ಬೀಜಗಳನ್ನು ತಂದು ನಾಟಿ ಮಾಡಿದರು. 2003ನೇ ಸಾಲಿನಲ್ಲಿ 30 ಗುಂಟೆ ಜಮೀನಿನಲ್ಲಿ 26 ತಳಿಗಳನ್ನು ಬೆಳೆದರು. ಇದರ ಪರಿಣಾಮ ಇಂದು 70 ಭತ್ತದ ತಳಿಗಳನ್ನು ಬೆಳೆಯಲಿಕ್ಕೆ ಪ್ರೇರಕವಾಯಿತು.

ಇವರಲ್ಲಿರುವ ಭತ್ತದ ತಳಿಗಳು: ಸಿಪ್ಪಾಗಂಗ್, ಗಿಡ್ಡ ಬಾಸ್ಮತಿ, ಕಲನಮಕ್, ಅಂಬೆಮೋರ್, ಹೊಳೆಸಾಲು ಚಿಪ್ಪಿಗ, ಪರಿಮಳಸಣ್ಣ, ಮುಕ್ಕಣ್ಣುಸಣ್ಣ, ಕೃಷ್ಣಲೀಲಾ, ಬಾಸ್ಮತಿ ಸುಗಂಧ, ಗಂಧಸಾಲೆ, ಎಚ್ಎಂಟಿ, ಜೀರಿಗೆ ಸಾಂಬಾ, ರತ್ನಚೂಡಿ, ನಾಗಾಭತ್ತ, ಗೌರಿಸಣ್ಣ, ಬಂಗಾರಸಣ್ಣ, ನವರ, ಬಾದ್ಷಾ ಬೋಗ್, ಬೋರೇಗೌಡ 1, 2, 3, 4, 5, 6, 7, ಮಾಲ್ಗುಡಿಸಣ್ಣ, ರಾಜ್ ಬೋಗ್, ಕಪ್ಪು ಬಾಸ್ಮತಿ, ಕುರಿಗೆ ನೆಲ್ಲು, ದೆಹಲಿ ಬಾಸ್ಮತಿ, ಮೆಹಾಡಿ, ಚೋಮಲ್, ಎಂಎನ್ನೆಸ್-2, ಜಿರಿಗೆ ಸಣ್ಣ, ಸೇಲಂಸಣ್ಣ, ಮಲ್ಲಾನ್ಛೆನ್ನಾ, ತೊಂಡಿ, ತೊನ್ನುರು ರಾಮಾತೊಂಡಿ, ಜಿರಿಗೆ ಸಾಲಾ, ಅಚ್ಯುತನ್, ಮುಲ್ಲಾಪುಂಡಿ, ಕಲಾದ್ಯಾನ್, ರಾಯಚೂರು ಸಣ್ಣ, ಆನಂದನೂರ್ಸಣ್ಣ, ಬಿಳಿನೆಲ್ಲು, ಆಂದಾನೂರ ಸಣ್ಣ, ಚಿನ್ನಾಪೊನ್ನಿ ಕರಿಗಿಜಿಬಿಲಿ, ಕಾಲಾಜಿರಾ, ಬಮರ್ಾಬ್ಲಾಕ್, ರಸದ್ಕಂ ಮುಂತಾದ ತಳಿಗಳನ್ನು ಬೋರೇಗೌಡರು ಬೆಳೆಸುತ್ತಿದ್ದಾರೆ. ಇವುಗಳಲ್ಲಿ ಔಷಧಿಯ ಗುಣ ಮತ್ತು ಸುಗಂಧ ಭರಿತ ಭತ್ತದ ತಳಿಗಳು ಇವೆ.

ಹಸಿರು ಗೊಬ್ಬರ, ಜೀವಾಮೃತ ಕೃಷಿ: ಎಲ್ಲ ಭತ್ತದ ತಳಿಗಳು ಸರಿಯಾಗಿ ಬೆಳೆಯಲು ರಾಸಾಯನಿಕ ಗೊಬ್ಬರ ಖರೀದಿ ಮಾಡುವುದನ್ನು ನಿಲ್ಲಿಸಿದ ಬೋರೇಗೌಡರು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಹುರುಳಿ, ಅಲಸಂಡೆ, ಡಾಯಂಚಾ, ಸೆಣಬು, ಎಳ್ಳು ಇವುಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಸಿದರು. ಹೊಲ ಹದ ಮಾಡುವ ಸಮಯದಲ್ಲಿ ಇವುಗಳನ್ನು ಸೇರಿಸಿ ಉಳುಮೆ ಮಾಡಿದರು. ನಂತರ ಭೂಮಿ ಮತ್ತಷ್ಟು ಫಲವತ್ತಾಗಲು ಜೀವಾಮೃತ ಬಳಸಲು ಪ್ರಾರಂಭಿಸಿದರು. ಇದರಿಂದ ಭೂಮಿಯ ಫಲವತ್ತತೆ ದ್ವಿಗುಣವಾಗಿ, ಇಳುವರಿಯು ಹೆಚ್ಚಾಯಿತು.

ಸುಗಂಧ ಭತ್ತದ ಬಳಕೆ

ಸುಗಂಧ ಭತ್ತಗಳ ಅಕ್ಕಿಯನ್ನು ಮಾತ್ರ ಅಡುಗೆಗೆ ಬಳಸಬಾರದು. ಒನ್ನೊಮ್ಮೆ ಕೇವಲ ಸುಗಂಧ ಭತ್ತಗಳನ್ನು ಬಳಸಿದರೆ ಸೆಂಟಿನ ಬಾಟಲಿ ಪೂರ್ಣ ಮೈಮೇಲೆ ಸುರಿದುಕೊಂಡ ಹಾಗಾಗುತ್ತದೆ. ಅದನ್ನೇ ಹಿತಮಿತವಾಗಿ ಬಳಸಿದರೆ ಎಲ್ಲರಿಗೂ ಹಿತ. ಹಾಗೆಯೇ ಸುಗಂಧ ಅಕ್ಕಿ ಬಳಸುವ ವೇಳೆ ಸಾದಾ ಅಕ್ಕಿಯ ಜೊತೆ ಒಂದು ಮುಷ್ಠಿ ಸುಗಂಧ ಅಕ್ಕಿಯನ್ನು ಬಳಸಿರೆ ಬಹಳ ಚೆನ್ನಾಗಿರುತ್ತದೆ ಎನ್ನುವ ಮಾಹಿತಿಯನ್ನು ಬೋರೇಗೌಡರು ನೀಡುತ್ತಾರೆ.

ರಾಸಾಯನಿಕ ಕೃಷಿ, ಹೈಬ್ರೀಡ್ ಭತ್ತದಲ್ಲಿ ಬರುವ ಲಾಭಕ್ಕಿಂತ ಹೆಚ್ಚಿನ ಲಾಭ ಸಾವಯವ ಕೃಷಿ ಮತ್ತು ದೇಶೀ ಭತ್ತದ ಬೆಳೆಯಿಂದ ಬರುತ್ತದೆ ಎನ್ನುವುದು ಬೋರೇಗೌಡರ ಅಭಿಮತ. ಇವರು ನಾಲ್ಕು ವರ್ಷಗಳಿಂದ ಸುಮಾರು 150 ಕ್ವಿಂಟಾಲ್ ಭತ್ತದ ಬೀಜ ಮಾರಾಟ ಮಾಡಿದ್ದಾರೆ. ರೀತಿಯಲ್ಲಿ ದೇಶೀ ಭತ್ತದ ತಳಿಗಳನ್ನು ರಕ್ಷಿಸುತ್ತಿರುವ ಬೋರೇಗೌಡರು ಕಾರ್ಯ ಶ್ಲಾಘನೀಯ.

ಭತ್ತದ ತಳಿಗಳ ಬಗ್ಗೆ ಮಾಹಿತಿಗಾಗಿ ಬೋರೇಗೌಡ-9986381167, ಎಸ್. ಶಂಕರ್- 9886853858

-ನಾಗರಾಜ ಮತ್ತಿಗಾರ

Wednesday, November 11, 2009

ಹಸಿರು ಹುಲ್ಲಿನ ಮೇಲೆ ಹೈನುಗಾರಿಕೆ ಲಾಭ!




ಲಾಭದಾಯಕ ಹೈನುಗಾರಿಕೆ! ಪಶುಸಂಗೋಪನೆಯಿಂದ ಕೃಷಿಕನಿಗೆ ಆದಾಯ.... ಎಂಬರ್ಥದ ಶೀರ್ಷಿಕೆಯ ಕೃಷಿ ಲೇಖನಗಳು ರೈತರನ್ನು ಜಾನುವಾರು ಸಾಕಲು ಪ್ರೇರೇಪಿಸಬಹುದು. ಒಳಹೊಕ್ಕ ನಂತರವೇ ಸತ್ಯ ಗೊತ್ತಾಗುವುದು. ನಿಜಕ್ಕಾದರೆ ಹೈನುಗಾರಿಕೆಗೆ ಮೊತ್ತಮೊದಲಾಗಿ ರೈತನಿಗೆ ಅಗತ್ಯವಿದ್ದಷ್ಟು ಹಸಿರು ಹುಲ್ಲು ಬೆಳೆದುಕೊಳ್ಳಲು ತಕ್ಕ ಭೂಮಿಯಿರಬೇಕು. ಇಲ್ಲದಿದ್ದರೆ ಬದುಕು ತಂತಿ ಮೇಲಿನ ನಡಿಗೆ, ಲಾಭ ಮರೀಚಿಕೆ! ಕೊಂಡು ತರುವ ಬೈಹುಲ್ಲು, ಜಾನುವಾರು ತಿಂಡಿಗಳು ವರ್ಷಾಂತ್ಯಕ್ಕೆ ನಷ್ಟ ತರದಿದ್ದರೆ ಪುಣ್ಯ! ಸರಳವಾಗಿ ಹೇಳುವುದಾದರೆ ಹಸಿರು ಹುಲ್ಲು ಬೆಳೆದರೆ ಮಾತ್ರ ಹೈನುಗಾರಿಕೆ ಕೈಹಿಡಿದು ನಡೆಸುತ್ತದೆ. ಇಲ್ಲದಿದ್ದರೆ ತೊಂದರೆ.
ಎರಡನೇ ಹಂತದ ತಪ್ಪು ಹಸಿರು ಹುಲ್ಲಿನ ಕೃಷಿ ಮಾಡುವಲ್ಲಿ ಆಗುತ್ತದೆ. ರೈತ ಪರಮಾವಧಿ ಪ್ರಮಾಣದ ಹುಲ್ಲು ಬೆಳೆಯಬೇಕು. ಅದಕ್ಕೆ ಪೂರಕವಾದ ಸಲಹೆಗಳನ್ನು ಇಲ್ಲಿ ಒದಗಿಸಲಾಗಿದೆ. ಅನುಭವಿಕರ ಮಾತಿನ ಸಾರವಿದು ಎಂಬುದು ನಿಮ್ಮ ಗಮನದಲ್ಲಿರಲಿ. ಭೂಮಿಯನ್ನು ಸಣ್ಣದಾಗಿ ಉಳುಮೆ ಮಾಡಿ ಅರ್ಧ ಅಡಿ ಎತ್ತರದ ಏರು ಮಡಿ ಮಾಡಿಕೊಳ್ಳಬೇಕು. ಭೂಮಿ ಸಮತಟ್ಟಾಗಿರಲೇಬೇಕು ಎಂಬುದಿಲ್ಲ. ಅದರ ಮೇಲೆ ಎರಡು ಅಡಿಗಿಂತ ಹೆಚ್ಚಿನ ಉದ್ದವಿರದ ಹುಲ್ಲು ಬೀಜದ ದಂಟುಗಳನ್ನು ಮಲಗಿಸಿ ನೆಡಬೇಕು. ಇದೂ ಕಬ್ಬಿನ ಬಿತ್ತನೆಯ ತರಹವೇ. ಎರಡು ಅಡಿಗಿಂತ ಜಾಸ್ತಿ ಉದ್ದನೆಯ ದಂಟು ಮಡಿಯ ಮೇಲೆ ಸರಿಯಾಗಿ ಮಲಗುವುದಿಲ್ಲ. ಅಂದರೆ ಹಲವು ಗಣ್ಣುಗಳಲ್ಲಿ ಮೊಳಕೆ ಬಾರದೆಯೇ ಹೋಗುತ್ತದೆ.
ನಾಟಿ ಮಾಡಿದಾಗ ತೆಳುವಾಗಿ ಮಣ್ಣು ಹರಡಿದರೆ ಸಾಕು. ಒಮ್ಮೆ ಚಿಗುರು ಬಂದ ನಂತರ ಇನ್ನೊಮ್ಮೆ ಮಣ್ಣು ಏರಿಸಬೇಕು. ಮಳೆಗಾಲದ ಆರಂಭದಲ್ಲಿ ನಾಟಿ ಯುಕ್ತ. ಅರ್ಥಾತ್ ಜೂನ್, ಜುಲೈ ವೇಳೆಯೇ ಪ್ರಶಸ್ತ. ಸೆಪ್ಟೆಂಬರ್‌ನ ಗಣೇಶ ಚತುರ್ಥಿ ಆಸುಪಾಸಿನಲ್ಲೂ ನಾಟಿ ಮಾಡಬಹುದು. ಬಾಹ್ಯವಾಗಿ ಆ ವೇಳೆ ನೀರು ಒದಗಿಸುವಂತಿರಬೇಕಷ್ಟೇ. ಮೊದಲ ಒಂದು ವರ್ಷ ಹುಲ್ಲಿಗೆ ನೀರು ಕೊಡುವಂತಿದ್ದರೆ ಒಳ್ಳೆಯದು. ಇದಕ್ಕೂ ಮೊದಲು ನಾಟಿಗೆ ಯೋಗ್ಯ ಭೂಮಿ ಯಾವುದು ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಹಸಿರು ಹುಲ್ಲಿಗೆ ಸದಾ ನೀರಿನ ತೇವ ಇರುವ ತಂಗಲು ಭೂಮಿ ಅಗತ್ಯ. ಮರಗಳ ನೆರಳು ಧಾರಾಳವಾಗಿದ್ದಲ್ಲಿ ಹುಲ್ಲಿನ ಇಳುವರಿ ಚೆನ್ನಾಗಿ ಬಾರದು.
ಸಾಗರ ತಾಲ್ಲೂಕಿನ ಮಾವಿನಸರದ ಎಂ.ಜಿ.ಶ್ರೀಪಾದರಾವ್ ಕಳೆದ ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆಯ ಜೊತೆಜೊತೆಗೆ ಹಸಿರು ಹುಲ್ಲಿನ ಕೃಷಿಯನ್ನೂ ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ವಿಚಾರದಲ್ಲಿ ಅವರದು ಅನುಭವದಲ್ಲಿ ಅದ್ದಿ ತೆಗೆದ ಮಾತುಗಳು. ಅವರ ಪ್ರಕಾರ, ತೆಂಗಿನ ತೋಟಗಳಲ್ಲಿಯೂ ಹಸಿರು ಹುಲ್ಲು ಕೃಷಿ ಓ.ಕೆ! ತೆಂಗಿನ ಮರದ ಬುಡದಲ್ಲಿ ಮಾತ್ರ ಬೇಡ ಎನ್ನುತ್ತಾರವರು. ಅಡಿಕೆ ತೋಟದಲ್ಲಿಯೂ ಹುಲ್ಲು ಬೆಳೆಯಬಹುದೇನೋ. ಆದರೆ ದೊಡ್ಡದಾಗುತ್ತ ಹೋಗುವ ಹುಲ್ಲಿನ ಬುಡ ಅಡಿಕೆ ಇಳುವರಿಗೆ ಪೆಟ್ಟು ಕೊಟ್ಟೀತು. ಶ್ರೀಪಾದ್‌ರ ತೆಂಗಿನ ತೋಟದಲ್ಲಿ ಹಸಿರು ಹುಲ್ಲನ್ನು ಇಡೀ ನಾಲ್ಕು ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಅಡಿಕೆ ತೋಟದಲ್ಲಿ ಹಚ್ಚಲು ಹೋಗಿಲ್ಲ.
ಹುಲ್ಲಿಗೆ ವರ್ಷಕ್ಕೊಮ್ಮೆ ಮಣ್ಣು ಕೊಡಲೇಬೇಕು. ಅದು ವರ್ಷದ ಯಾವುದೇ ಕಾಲದಲ್ಲಾದರೂ ಸೈ. ಹಾಗೆಂದು ಗೊಬ್ಬರವನ್ನು ಬಳಸಿದರೆ ತಪ್ಪಾಗುತ್ತದೆ. ಗೊಬ್ಬರವನ್ನು ಉಪಯೋಗಿಸುವುದರಿಂದ ಹುಲ್ಲಿನ ಗಡ್ಡೆ ಮೇಲು ಬೇರಾಗಿ ಎರಡೇ ವರ್ಷಕ್ಕೆ ಮೂಲ ಬುಡವನ್ನೇ ಕಳೆದುಕೊಳ್ಳುವಂತಾಗುತ್ತದೆ. ಒಮ್ಮೆ ಹುಲ್ಲಿನ ನಾಟಿ ಮಾಡಿದ ನಂತರ ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಕೊಯ್ಲಿಗೆ ಸಿಕ್ಕುತ್ತದೆ. ಚಳಿಗಾಲ, ವಿಪರೀತ ಮಳೆ ಹೊಯ್ಯುವ ಮಳೆಗಾಲದಲ್ಲಿ ಹುಲ್ಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ವರ್ಷಕ್ಕೆ ೫-೬ ಕೊಯ್ಲು ಮಾಡಬಹುದಷ್ಟೇ.
ದನವೊಂದಕ್ಕೆ ದಿನಕ್ಕೆ ೧೫ ಕೆ.ಜಿ.ಯಷ್ಟು ಹಸಿ ಹುಲ್ಲು ಕೊಡಬಹುದು. ಕತ್ತರಿಸಿ ಕೊಡುವುದರಿಂದ ತಿನ್ನದೆ ಬಿಡುವ ಭಾಗ ಕಡಿಮೆಯಾಗುತ್ತದೆ. ತಿಂಡಿಯ ಜೊತೆಗೂ ಬೆರೆಸಿ ಕೊಡುವುದರಿಂದ ತಿಂಡಿಯ ಪ್ರಮಾಣ ಅಷ್ಟರಮಟ್ಟಿಗೆ ಉಳಿತಾಯ ಸಾಧ್ಯ. ಪುಷ್ಕಳ ಹಸಿರು ಹುಲ್ಲು ಇದ್ದರೆ ಕ್ಯಾಟಲ್ ಫೀಡ್ ಬಳಸದೇ ಕರಾವು ನಡೆಸಲು ಶಕ್ಯವಿದೆ ಎನ್ನುತ್ತಾರೆ ಶ್ರೀಪಾದ್. ಆದರೆ ಜಾನುವಾರುಗಳಿಗೆ ಬರೇ ಹಸಿರು ಹುಲ್ಲು ನೀಡುವುದು ಸಮಂಜಸವಲ್ಲ. ಲಾಭಕ್ಕಿಂತ ನಷ್ಟವೇ ಹೆಚ್ಚು. ಜೀರ್ಣಕ್ರಿಯೆಗೆ ನಾರಿನ ಅಂಶ ಅತ್ಯಗತ್ಯವಾಗಿ ಬೇಕು. ಹಸಿರು ಹುಲ್ಲಿನಿಂದ ನಾರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಲಭ್ಯ. ಹಾಗಾಗಿ ನಾವು ಪ್ರತಿದಿನ ಬೈಹುಲ್ಲನ್ನೂ ಸ್ವಲ್ಪ ಪ್ರಮಾಣದಲ್ಲಿ, ಒಂದು ಅವಧಿಗೆ ಉಣಿಸಬೇಕು. ಬೈಹುಲ್ಲಿನಲ್ಲಿ ನಾರಿನಂಶ ಧಾರಾಳ.
ಕೆಲವು ಗಮನಿಸಲೇಬೇಕಾದ ಅನುಭವಗಳು ಎಂಜಿಎಸ್‌ರ ಬುತ್ತಿಯಲ್ಲಿವೆ. ಯಾವತ್ತೂ ಎಳೆಯದಾದ ಹುಲ್ಲನ್ನು ಜಾನುವಾರುಗಳಿಗೆ ಕೊಡಲೇಬಾರದು. ಆ ಹುಲ್ಲಿನಲ್ಲಿ ಪಶುಗಳಿಗೆ ವಿಷವಾಗುವಂತ ಅಂಶಗಳಿರುವುದು ದೃಢಪಟ್ಟಿದೆ. ಅಷ್ಟೇಕೆ, ಗರ್ಭ ಧರಿಸಿದ ಹಸು ಎಮ್ಮೆಗಳು ಎಳೆ ಹಸಿರು ಹುಲ್ಲು ತಿಂದರೆ ಗರ್ಭಪಾತ ಆಗಿಬಿಡಬಹುದಂತೆ. ಹುಲ್ಲು ಕೊಯ್ಲಿನಲ್ಲೂ ಕೆಲವು ಕಿವಿಮಾತುಗಳಿವೆ. ಹರಿತವಾದ ಕತ್ತಿಯನ್ನೇ ಬಳಸಿ ಕೊಯ್ಲು ಮಾಡಬೇಕು. ಸಾಧ್ಯವಾದಷ್ಟೂ ನೆಲಮಟ್ಟಕ್ಕೆ ಹುಲ್ಲನ್ನು ಕತ್ತರಿಸಬೇಕು. ಹರಿತವಿಲ್ಲದ ಕತ್ತಿಯನ್ನು ಉಪಯೋಗಿಸಿದರೆ ಬುಡದ ದಂಟಿಗೆ ಘಾಸಿಯಾಗುತ್ತದೆ, ಒಡೆದೀತು. ಆಗ ನೀರು ಸಿಕ್ಕಿ ಕೊಳೆಯುವುದು ಸಂಭವನೀಯ. ನೀರು ತನ್ನ ಬುಡದಲ್ಲಿ ನಿಂತರೆ ಈ ಹುಲ್ಲು ಸಹಿಸುವುದಿಲ್ಲ. ಕೊಳೆತು ಪ್ರತಿಭಟಿಸುತ್ತದೆ.
ವರ್ಷಕ್ಕೊಮ್ಮೆ ಹೊಸ ಮಣ್ಣು ಕೊಟ್ಟರೆ ಅದಕ್ಕೆ ಸಮಾಧಾನ. ಸ್ವಲ್ಪ ಪ್ರಮಾಣದಲ್ಲಿ ಎರೆಗೊಬ್ಬರವನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಒಂದೊಮ್ಮೆ ಎರೆಜಲ ಸಿಗುತ್ತದೆಂದಾದರಂತೂ ಅದನ್ನು ಎಲೆಯ ಮೇಲೆ ಸಿಂಪಡಿಸುತ್ತಿದ್ದರೆ ಒಳ್ಳೆಯ ಕೊಯ್ಲು ಖಚಿತ. ಹೈನುಗಾರಿಕೆಗೆ ತೊಡಗುವವರು ಸ್ವತಃ ಹಸಿರು ಹುಲ್ಲು ಬೆಳೆಯುವವರಾಗಿದ್ದರೆ ಮಾತ್ರ ಅವರು ಹಾಲಿನ ಮಾರಾಟದಲ್ಲಿ ಲಾಭ ಕಾಣಬಹುದು. ವಾಸ್ತವವಾಗಿ, ನಾಟಿ ಮಾಡುವಾಗ ಒಮ್ಮೆ ಸ್ವಲ್ಪ ಕೂಲಿಯಾಳಿನ ಖರ್ಚು ಬರುತ್ತದೇ ವಿನಃ ಆನಂತರ ಯಾವುದೇ ಗಣನೀಯ ವೆಚ್ಚವಿಲ್ಲ. ರಾಸಾಯನಿಕ ಸಿಂಪಡಿಸದ ಹಸಿರು ಹುಲ್ಲು ಜಾನುವಾರುಗಳ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಈಗ ಎಲ್ಲರಿಗೂ ಗೊತ್ತು. ಬೈಹುಲ್ಲು ಬಳಕೆ ಎಂದರೆ ಸಮಸ್ಯೆ ಹೆಚ್ಚು, ತಿಂಡಿಯೂ ತುಸು ಜಾಸ್ತಿಯೇ ಬೇಕು. ಆಗ ಹೈನುಗಾರಿಕೆ ಕೈ ಕಚ್ಚುವ ಅಪಾಯ ಕಾಡುತ್ತದೆ.
ಈಗ ಹುಲ್ಲಿನಲ್ಲಿ ಹಲವು ಜಾತಿಗಳಿವೆ. ಕೃಷಿ ವಿಶ್ವವಿದ್ಯಾಲಯಗಳು ನೂತನ ತಳಿಗಳನ್ನು ಸಂಶೋಧಿಸಿವೆ. ಅವುಗಳಲ್ಲಿ ಎನ್‌ಬಿ ೨೨, ಎಲಿಫೆಂಟ್ ಗ್ರಾಸ್, ಕೋ-೩, ಪ್ಯಾರಾ ಮುಂತಾದ ಮಾದರಿಗಳಿವೆ. ಕೋ-೩, ಎಲಿಫೆಂಟ್ ಗ್ರಾಸ್ ಹೆಚ್ಚು ಮಳೆಯನ್ನೂ ಸುಧಾರಿಸಿಕೊಂಡಿವೆ. ಈ ತಳಿಗಳ ವಿಚಾರದಲ್ಲಿ ಮಾತ್ರ ನಿಮ್ಮ ಪ್ರದೇಶಕ್ಕೆ ಯಾವುದು ಸೂಕ್ತವೆಂದು ಕೃಷಿ ತಜ್ಞರ ಸಲಹೆ ಪಡೆದು ಅಥವಾ ಈಗಾಗಲೇ ಹುಲ್ಲು ಬೆಳೆಯುತ್ತಿರುವವರ ಅನುಭವ ತಿಳಿದು ಮುಂದುವರೆಯುವುದು ಬುದ್ಧಿವಂತಿಕೆ.

-ಮಾವೆಂಸ
please see his another blog..... http://mavemsa.blogspot.com/ for more information on other subjects.

Saturday, October 31, 2009

ಮಳೆಯೇ ಹೊಲ ಮೇಯ್ದಾಗ





`ಪ್ರತಿ ವರ್ಷ ಬರ­ದಿಂದ ದೀಪಾ­ವಳಿ ಹಬ್ಬ ಮಾಡಾಕ ಆಗೂ­ದಿಲ್ರಿ. ವರ್ಷ ನಾವು ಬೆಳಿ ಚೆನ್ನಾಗಿ ಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡ­­ಬ್ಬಕ್ಕ ದೀಪ ಹಚ್ಚಾಕ ಮನಿನೇ ಕೊಚ್ಚಿ ಹೋಗ್ಯಾವ್ರಿ' ಎನ್ನು­ವಾಗ ನೆರೆ ಪೀಡಿತ ಪ್ರದೇ­ಶದ ರೈತನ ಕಣ್ಣಂ­ಚಿ­ನಿಂದ ನೀರು...

ನಿಜ, ಏನು ಆಗ­ಬಾ­ರ­ದಿತ್ತೋ ಅದು ಆಗ­ಬಾ­ರದ ಸಮ­ಯ­ದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರ­ಬಾ­ರದ ಸಮ­ಯ­ದಲ್ಲಿ ಬಂದ ಮಳೆಯ ಆರ್ಭ­ಟಕ್ಕೆ ಸಹ­ಸ್ರಾರು ರೈತರು ಬೆಳೆಯ ಜೊತೆಗೆ ನೆಲೆ­ಯನ್ನು ಕಳೆ­ದು­ಕೊಂಡು ಸಂತ್ರ­ಸ್ತ­ರಾ­ಗಿ­ದ್ದಾರೆ. ನಾಲ್ಕು ದಿನದ ಮಳೆ­ಯಲ್ಲಿ ಕೊಚ್ಚಿ ಹೋದ ಸಂಪ­ತ್ತನ್ನು ಪುನಃ ಸಂಗ್ರ­ಹಿ­ಸಲು ನಲ­ವತ್ತು ವರ್ಷ ಬೇಕಾ­ಗ­ಬ­ಹುದು ಎಂದರೆ ಅತಿ­ಶ­ಯೋ­ಕ್ತಿ­ಯಲ್ಲ.

ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆ­ಗಳು ಸಂಪೂರ್ಣ ನಾಶ­ವಾ­ಗಿದೆ. ಸಹ­ಸ್ರಾರು ಕೋಟಿ ರೂಪಾಯಿ ನಷ್ಟ­ವಾ­ಗಿದೆ. ರಾಜ್ಯದ ಜನ­ತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನ­ಕ್ಕಾಗಿ ಕೈಚಾ­ಚುವ ಪರಿ­ಸ್ಥಿತಿ ಬಂದಿ­ರು­ವುದು ವಿಪ­ರ್ಯಾ­ಸದ ಸಂಗತಿ.


ನೆರೆ­ಯಿಂದ ಬೆಳೆ ಹಾನಿ: ನೆರೆ ಇಳಿ­ಯು­ತ್ತಿ­ದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾ­ಗು­ತ್ತಿದೆ. ಆದರೆ ನಿಖರ ಮಾಹಿತಿ ಲಭ್ಯ­ವಾ­ಗು­ತ್ತಿಲ್ಲ. ಒಂದು ಅಂದಾ­ಜಿನ ಪ್ರಕಾರ ಬೆಳ­ಗಾ­ವಿ­ಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್‌ ಬೆಳೆ ನಾಶ­ವಾ­ಗಿದೆ. ಹಾವೇ­ರಿ­ಯಲ್ಲಿ ಒಂದು ಲಕ್ಷ, ಧಾರ­ವಾ­ಡ­ದಲ್ಲಿ ಒಂದು ಲಕ್ಷ, ಗದ­ಗ­ದಲ್ಲಿ ತೊಂಬ­ತ್ತೊಂ­ಬತ್ತು ಸಾವಿರ, ಕಲ­ಬು­ರ್ಗಿ­ಯಲ್ಲಿ ಎರಡು ಲಕ್ಷ ಹೆಕ್ಟೇರ್‌ ಬಾಗ­ಲ­ಕೋ­ಟೆ­ಯಲ್ಲಿ ನಲ­ವತ್ತು ಸಾವಿರ, ವಿಜಾ­ಪು­ರ­ದಲ್ಲಿ ಮೂವ­ತ್ತೆ­ರಡು ಸಾವಿರ ಹೆಕ್ಟೇರ್‌ ಭೂಮಿ­ಯ­ಲ್ಲಿನ ಬೆಳೆ­ಗಳು ನಾಶ­ವಾ­ಗಿದೆ. ಬಳ್ಳಾರಿ, ಶಿರ­ಗುಪ್ಪ, ಹೊಸ­ಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶ­ವಾ­ಗಿದೆ.


ರೈತರ ಅಳಲು: `ನಾವು ಭತ್ತ, ಮೆಣ­ಸಿ­ನ­ಕಾಯಿ, ಮೆಕ್ಕೆ ಜೋಳ­ವನ್ನು ಬೆಳೆ­ಯು­ತ್ತೆವೆ. ನಮಗೆ ಭತ್ತದ ಬೆಳೆ­ಯಲ್ಲಿ ಒಂದು ಎಕ­ರೆಗೆ ಸುಮಾರು ಇಪ್ಪತ್ತು ಸಾವಿ­ರಕ್ಕೂ ಹೆಚ್ಚಿಗೆ ನಷ್ಟ­ವಾ­ಗಿದೆ. ಮೆಕ್ಕೆ ಜೋಳ ಒಂದು ಎಕ­ರೆಗೆ 30 ಚೀಲ ಬರು­ತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣ­ಸಿನ ಬೆಳೆ ಸಂಪೂರ್ಣ ನಾಶ­ವಾ­ಗಿದೆ. ಇದನ್ನು ಕಿತ್ತು ಹಾಕ­ಬೇಕು. ನಮ್ಮೂ­ರಿನ ಕೆರೆ ಒಡೆದು ನೂರಾರು ಪಂಪ್‌ ಸೆಟ್‌­ಗಳು ಕೊಚ್ಚಿ­ಹೋ­ಗಿದೆ. ಈಗ ನಮ್ಮ ಜಮೀ­ನ­ನನ್ನು ನೋಡಿ­ದರೆ ಕಣ್ಣಲ್ಲಿ ನೀರು ಬರು­ತ್ತದೆ. ನಾಲ್ಕು ತಿಂಗ­ಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾ­ಯ­ವನ್ನು ಪಡೆ­ಯು­ತ್ತೇವೆ ಎನ್ನುವ ಆಸೆ­ಯ­ಲ್ಲಿ­ದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆ­ಯೊಂ­ದಿಗೆ ನೆರೆ­ಯ­ಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡು­ತ್ತಾರೆ ಬಳ್ಳಾ­ರಿಯ ಬಾಗ­ನ­ಹ­ಟ್ಟಿಯ ರೈತ ಶಿವ­ಶಂ­ಕರ್‌.

ಗಂಗಾ­ವ­ತಿಯ ರೈತರ ಗೋಳು ಮತ್ತೊಂದು ರೀತಿ­ಯದ್ದು. ಒಂದು ಕಡೆ ನೆರೆ­ಯಿಂದ ಭತ್ತದ ಬೆಳೆ ನಾಶ­ವಾ­ದರೆ, ಮತ್ತೊಂದು ಕಡೆ­ಯಲ್ಲಿ ತುಂಗ­ಭದ್ರಾ ನಾಲೆ ಒಡೆದು ಬೆಳೆ ನಾಶ­ವಾ­ಗಿದೆ. ಇಲ್ಲಿನ ರೈತ ವೇಣು­ಗೋ­ಪಾಲ್‌ ಅವರ ಪ್ರಕಾರ `ಸಾವಿ­ರಾರು ಎಕರೆ ಭತ್ತದ ಹೊಲ­ಗ­ಳಲ್ಲಿ ಎಕ­ರೆಗೆ ಹತ್ತು ಚೀಲ ಬೆಳೆಯು ಸಿಗು­ವು­ದಿಲ್ಲ. ನೆರೆ­ಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರ­ಯಿಸಿ ಸಿಂದ­ನೂರು, ಗಂಗಾ­ವತಿ, ಮಸ್ಕಿ, ಮಾನ್ವಿ ಯ ಸಾವಿ­ರಾರು ರೈತರು ಭತ್ತ, ಕೆಂಪು ಮೆಣ­ಸಿ­ನ­ಕಾಯಿ, ಹತ್ತಿ ಬೆಳೆ­ಯು­ತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮ­ಯಕ್ಕೆ ನೀರನ್ನು ಬಿಡ­ಲಾ­ಗದೆ ಬೆಳೆ­ಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿ­ಯಾ­ದರೆ, ಮತ್ತೊಂದು ಕಡೆ ನೀರಿ­ಲ್ಲದೆ ಸಂತ್ರ­ಸ್ತ­ರಾ­ಗಿ­ದ್ದೇವೆ' ಎನ್ನು­ತ್ತಾರೆ.

ಗದ­ಗದ ರೈತರ ಸಂಕಷ್ಟ ಮತ್ತೊಂದು ರೀತಿ­ಯದ್ದು. ಇಲ್ಲಿನ ರೈತ ಮುಖಂಡ ಗೋಣಿ­ಬ­ಸಪ್ಪ ಕೊರ್ಲ­ಹಳ್ಳಿ ಇವ­ರನ್ನು ಮಾತ­ನಾ­ಡಿ­ಸಿ­ದಾಗ ನೆರೆಗೆ ಒಳ­ಗಾದ ರೈತರ ಕಷ್ಟ­ವನ್ನು ಎಳೆ­ಎ­ಳೆ­ಯಾಗಿ ಬಿಡಿ­ಸಿ­ಡು­ತ್ತಾರೆ. `ಗದ­ಗದ ಹುಲ­ಗ­ನ­ಗೇರಿ, ಮೆಣಸಿ, ಕಾಡ­ಗೂಳಿ, ಕುರ­ವಿ­ನ­ಕೊ­ಪ್ಪ­ದಲ್ಲಿ ರೈತರು ಅಕ್ಷ­ರಶಃ ನಿರ್ಗ­ತಿ­ಕ­ರಾ­ಗಿ­ದ್ದಾರೆ. ಈ ಭಾಗ­ದಲ್ಲಿ ಈರು­ಳ್ಳಿ­ಯನ್ನು ಹೆಚ್ಚಾಗಿ ಬೆಳೆ­ಯು­ತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟು­ಕೊಂ­ಡಿ­ದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆ­ದರೆ ದೈವ ಮತ್ತೊಂದು ಬಗೆ­ಯಿತು ಎನ್ನುವ ಹಾಗೆ. ನಮ್ಮ ಅನ್ನ­ವಾದ ಜೋಳ, ರಾಗಿ ಎಲ್ಲ ನೀರು ಪಾಲಾ­ಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿ­ದರೆ ಹೂಳು ಮಾತ್ರ ಇದೆ. ನೆರೆ ಬೆಳೆ­ಯನ್ನು ಮಾಯ ಮಾಡಿ­ಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾ­ಗಿದೆ. ರೈತರು ಶಾಲೆ, ರೈಲು ನಿಲ್ದಾ­ಣ­ದಲ್ಲಿ ವಾಸಿ­ಸು­ತ್ತಿ­ದ್ದಾರೆ.

ರೋಣ ತಾಲೂ­ಕಿ­ನಲ್ಲಿ ಬೆಣ್ಣೆ­ಹಳ್ಳ ಮತ್ತು ಮಲ­ಪ್ರಭಾ ನದಿ ಸೇರುವ ಜಾಗ­ದಲ್ಲಿ ಯಾವಾ­ಗಲೂ ನೆರೆ ಆಗು­ತ್ತಿತ್ತು. ಆದರೆ ಈ ಬಾರಿ ನಿರೀ­ಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆ­ಹ­ಳ್ಳದ ಬಗ್ಗೆ ಬಹ­ಳಷ್ಟು ವರ್ಷ­ದಿಂದ ಗೊತ್ತಿ­ರುವ ಜನ­ಪ್ರ­ತಿ­ನಿ­ಧಿ­ಗಳು ಮೌನ ವಹಿ­ಸಿ­ರು­ವುದು ನೋವಿನ ಸಂಗತಿ. ಇದು ಒಂದೆ­ಡೆಗೆ ಆದರೆ ಬಡ ರೈತರು ಮನೆ­ಯಲ್ಲಿ ಕಣಜ ಮಾಡಿ­ಕೊಂಡು ದಾಸ್ತಾನು ಮಾಡಿ­ಟ್ಟು­ಕೊಂಡ ಬೆಳೆ­ಯೆಲ್ಲ ಕೊಚ್ಚಿ ಹೋಗಿದೆ' ಎನ್ನು­ತ್ತಾರೆ.

ಸೋಯಾ ಬೀನ್‌, ಭತ್ತ, ರಾಗಿ, ಜೋಳ, ಸೂರ್ಯ­ಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರ­ಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆ­ಗಳು ನಾಶ­ವಾ­ಗಿದೆ. ಸದಾ ಕಷ್ಟ­ದ­ಲ್ಲಿಯೇ ಜೀವನ ಸಾಗಿ­ಸುವ ರೈತ­ನಿಗೆ ನೆರೆ ಎನ್ನು­ವುದು ಗಾಯದ ಮೇಲೆ ಬರೆ ಹಾಕಿ­ದಂತೆ ಆಗಿದೆ. ಬೆಳೆ ಬೆಳೆ­ಯಲು ಹಾಕಿದ ಬಂಡ­ವಾಳ ಸಮೇತ ಬೆಳೆಯು ಇಲ್ಲ­ದಂ­ತಾ­ಗಿದೆ. ಜೊತೆ­ಯಲ್ಲಿ ಖಾಸಗಿ ಸಾಲ, ಬ್ಯಾಂಕ್‌ ಸಾಲ ತೀರಿ­ಸುವ ಹೊಣೆಯು ರೈತ­ನಿ­ಗಿದೆ.

ಇಂತಹ ರೈತ­ರಿಗೆ ಪರಿ­ಹಾ­ರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದು­ಕುವ ಉತ್ಸಾ­ವನ್ನೇ ಕಳೆದು ಕೊಂಡಿ­ದ್ದಾರೆ. ಇವ­ರಿಗೆ ಪರಿ­ಹಾರ ನೀಡಿ­ದರೆ ಸಾಲದು ಬದು­ಕುವ ಉತ್ಸಾ­ಹ­ವನ್ನು ಮೂಡಿ­ಸುವ ಅಗ­ತ್ಯ­ವಿದೆ.


ಮುಗಿ­ಸುವ ಮುನ್ನ: ಬದು­ಕಲು ಅವ­ಶ್ಯ­ಕ­ವಾದ ಆಹಾರ ಬೆಳೆ­ಗಳು ನಾಶ­ವಾ­ಗಿ­ರು­ವುದು ಕೇವಲ ಬೆಳೆ ಬೆಳೆ­ಯುವ ರೈತ­ನಿಗೆ ಮಾತ್ರ­ವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನ­ತೆಯ ಮೇಲೂ ಪರಿ­ಣಾಮ ಬೀರ­ಲಿದೆ.


ನಾಗರಾಜ ಮತ್ತಿಗಾರ

Tuesday, October 20, 2009

ಸುರೇಶಣ್ಣನ ಜೇನು ಕೃಷಿ



ಹೆದ್ದಾರಿ ಬದಿಯ ಬಯಲು. ಅಲ್ಲ ಜೇನು ಪೆಟ್ಟಿ­ಗೆ­ಗಳ ಸಾಲು! ಮಧ್ಯೆ ಒಂದು ಸಣ್ಣ ಟೆಂಟ್‌. ರಸ್ತೆ ಬದಿ­ಯಲ್ಲಿ ಜೇನು ತುಂಬಿದ ಬಾಟಲಿ. ಕೂತು­ಹಲ, ಜೇನು ಇರುವ ಜಾಗಕ್ಕೆ ಬಂದರೆ ಬಿಡಾ­ರದ ಒಳ­ಗಿಂದ ಕೆಂಪು ಕಪ್ಪು ಮಿಶ್ರಿತ ಗಡ್ಡ ಇರುವ ವ್ಯಕ್ತಿ ಬನ್ನಿ ಎಂದು ಟೆಂಟ್‌ಗೆ ಸ್ವಾಗ­ತಿ­ಸು­ತ್ತಾರೆ. ಉಪ­ಚಾ­ರ­ಕ್ಕಾಗಿ ಆಗಷ್ಟೇ ಹಿಂಡಿದ ಮಧು­ವನ್ನು ನೀಡು­ತ್ತಾರೆ.
ಇವರು ನಮ್ಮ ರಾಜ್ಯದ ಸಂಚಾರಿ ಜೇನು ಕೃಷಿ­ಯಲ್ಲಿ ಅಗ್ರ ಪಂಕ್ತಿ­ಯ­ಲ್ಲಿ­ರುವ ಸುರೇಶ ಕರ್ಕೇರಾ(9448409675). ಉಡುಪಿ ಜಿಲ್ಲೆಯ ಬ್ರಹ್ಮಾ­ವರ ಇವ­ರೂರು.
ಪ್ರಾಥ­ಮಿಕ ಶಿಕ್ಷ­ಣಕ್ಕೆ ವಿದ್ಯೆ ಮುಕ್ತಾಯ. ಹೋಟೆಲ್‌ ಮಾಣಿ­ಯಾಗಿ ಸ್ವಯಂ ಸಂಪಾ­ದ­ನೆಯ ಜೀವನ ಆರಂಭ. ಸ್ವತಃ ಹೋಟೆಲ್‌ ಪ್ರಾರಂ­ಭಿಸಿ, ನಷ್ಟ ಅನು­ಭ­ವಿಸಿ ಕೈ ಸೋತು ಉದ್ಯೋ­ಗಾ­ಕಾಂ­ಕ್ಷಿ­ಯಾಗಿ ನಿರು­ದ್ಯೋ­ಗ­ದಿಂದ ಕುಳಿ­ತಾಗ ರುಡ್‌­ಸೆಟ್‌ ಸಂಸ್ತೆ­ಯಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ. ನಂತರ ಜೇನು ಜೀವನ ಶುರು.
ಸ್ವಂತ ಸಾಕಾ­ಣಿಕೆ ಮಾಡುವ ಮೊದಲು ಹಲ­ವ­ರಿಗೆ ಜೇನು ತುಪ್ಪ ಸರ­ಬ­ರಾಜು ಮಾಡು­ವುದು, ಜೇನು ಸಾಕಾ­ಣಿಕೆ ಮಾಡು­ವ­ವ­ರಿಗೆ ಜೇನು ಹಿಳು­ಗ­ಳನ್ನು ಹಿಡಿದು ಕೊಡು­ವುದು, ಜೇನು ಪೆಟ್ಟಿಗೆ ತಂದು ಕೊಡುವ ಕೆಲಸ ಮಾಡು­ತ್ತಿ­ದ್ದ­ರಂತೆ. ಇವರು ಜೇನು ಕುಟುಂ­ಬ­ಗಳು ಒಂದು ವರ್ಷ­ಕ್ಕಿಂತ ಹೆಚ್ಚಿಗೆ ದಿನ ನಿಲ್ಲದೆ ಹಾರಿ ಹೋಗು­ತ್ತಿ­ದ್ದವು. ಕೆಲ­ವಕ್ಕೆ ಕಾಯಿಲೆ ಬಂದು ಸತ್ತು ಹೋದವು. ಈ ರೀತಿಯ ಅನು­ಭವ ಸ್ವಂತ ಸಾಕಾ­ಣಿಕೆ ಮಾಡು­ವಲ್ಲಿ ಸಹ­ಕಾ­ರಿ­ಯಾ­ಯಿತು. ಅವು­ಗಳ ಬೇಡ­ಗಳ ಅರಿ­ವಾ­ಯಿತು. ಯಾವ ರೀತಿಯ ಪರಿ­ಸ­ರ­ದಲ್ಲಿ ಇವು ಉತ್ತ­ಮ­ವಾಗಿ ಕೆಲಸ ಮಾಡು­ತ್ತೇವೆ ಎಂದು ತಿಳಿ­ಯಿತು. ಜೇನು ಕುಟುಂ­ಬ­ವನ್ನು ಉಳಿ­ಸಿ­ಕೊ­ಳ್ಳ­ಲಿ­ಕ್ಕಾಗಿ ಇವು­ಗ­ಳಗೆ ಬೇಕಾದ ಸೂಕ್ತ ಪರಿ­ಸರ ಒದ­ಗಿ­ಸ­ಲಿ­ಕ್ಕಾಗಿ ಸಂಚಾರ ಪ್ರಾರಂ­ಭ­ವಾ­ಯಿತು. ಒಂದು ಪೆಟ್ಟಿಗೆ ನೂರಾ­ದವು.
ಯಾವ ಪ್ರದೇ­ಶ­ದಲ್ಲಿ ಹೆಚ್ಚು ಹೂ ಬಿಡು­ತ್ತದೋ, ಎಂತಹ ಹೂವಿ­ನಲ್ಲಿ ಜೇನು ಅಂಥ ಕಡೆ ಜೇನಿನ ಕುಟುಂ­ಬ­ವನ್ನು ಇಟ್ಟು ಅವಿ­ರತ ದುಡಿ­ಯುವ ಕಾರ್ಮಿ­ಕ­ರಿಂದ ಕೆಲಸ ಮಾಡಿ­ಕೊ­ಳ್ಳುವ ಸಂಚಾರಿ ಜೇನು ಕೃಷಿ­ಗಾಗಿ ಆಯ್ಕೆ ಮಾಡಿ­ಕೊಂ­ಡಿ­ರು­ವುದು ಮೆಲ್ಲಿ­ಫೆರಾ ಜೇನು ತಳಿ. ವಿದೇಶಿ ತಳಿ­ಯಾದ ಇದು ಬಹ­ಳಷ್ಟು ವರ್ಷ ಒಂದೇ ಇರು­ತ್ತದೆ. ಸ್ವಭಾ­ವವು ಸಭ್ಯ. ಒಂದೆ­ಡೆ­ಯಿಂದ ಮತ್ತೊಂ­ದೆ­ಡೆಗೆ ಪೆಟ್ಟಿ­ಗೆ­ಯನ್ನು ಸಾಗಿ­ಸು­ವುದು ಸುಲಭ. ಇವರ ಊರು ಕರಾ­ವ­ಳಿ­ಯಾ­ದರೂ ಮೆಲ್ಲಿ­ಫೆರಾ ತಳಿಗೆ ಬಯಲು ಸೀಮೆ ಪ್ರಶಸ್ತ ಸ್ಥಳ. ಸಮು­ದ್ರದ ಅಂಚಿ­ನಲ್ಲಿ ಜೇನಿಗೆ ಉಪ­ದ್ರವ ನೀಡುವ ಬಿಗ್‌ ಬಿ ಈಟರ್‌ ಮತ್ತು ಸ್ಮಾಲ್‌ ಬಿ ಈಟರ್‌ ಕಾಟ ಜಾಸ್ತಿ.
ಅದ­ಕ್ಕಾಗಿ ಸುರೇಶ್‌ ಅವರ ಜೇನು ಪೆಟ್ಟಿ­ಗೆ­ಗಳು ಈಡಿ ರಾಜ್ಯ ಸುತ್ತು­ತ್ತಿವೆ. ಇವ­ರದ್ದು ಒಟ್ಟು ಮೂರು ಕ್ಯಾಂಪ್‌ ಇದೆ. ಒಂದು ಕ್ಯಾಂಪ್‌ ಮಲೆ­ನಾ­ಡಿ­ನ­ಲ್ಲಿ­ದ್ದರೆ ಮತ್ತೊಂದು ಬಯಲು ಸೀಮೆ­ಯ­ಲ್ಲಿ­ರು­ತ್ತದೆ. ಇನ್ನೊಂದು ಸ್ವಂತ ಊರು ಬ್ರಹ್ಮಾ­ವ­ರ­ದ­ಲ್ಲಿ­ರು­ತ್ತದೆ. ಊರಿ­ನ­ಲ್ಲಿ­ರುವ ಪೆಟ್ಟಿ­ಗೆ­ಗ­ಳನ್ನು ಹೆಂಡತಿ ವಾಸಂತಿ, ಮಗ ಕೀರ್ತನ್‌ ರಾಜ್‌, ರಾಘ­ವೇಂದ್ರ ನೋಡಿ­ಕೊ­ಳ್ಳು­ತ್ತಾರೆ. ಇವೆ­ಲ್ಲ­ವನ್ನು ವ್ಯವ­ಸ್ಥ­ತ­ವಾಗಿ ನೋಡಿ ಕೊಲ್ಳುವ ಜವಾ­ಬ್ದಾರಿ ಸುರೇಶ್‌ ಅವ­ರದ್ದು.
ಇವರು ಜೇನು ಪೆಟ್ಟಿ­ಗೆ­ಗ­ಳನ್ನು ಇಡಲು ಹೆದ್ದಾರಿ ಬದಿಯ ಹೊಲ­ಗ­ಳನ್ನು ಆಯ್ಕೆ ಮಾಡಿ­ಕೊ­ಳ್ಳು­ತ್ತಾರೆ. ಜೋ, ಸೂರ್ಯ­ಕಾಂತಿ ಬೆಳೆ­ಯುವ ರೈತರು ಇವ­ರಿಗೆ ಪೆಟ್ಟ­ಗೆ­ಗ­ಳನ್ನು ಇಡಲು ಪ್ರೀತಿ­ಯಿಂದ ಅವ­ಕಾಶ ಮಾಡಿ­ಕೊ­ಡು­ತ್ತಾರೆ. ಉತ್ತಮ ಪರಾ­ಗ­ಸ್ವ­ರ್ಶ­ದಿಂದ ಅವ­ರಿಗೆ ಬೆಳೆ­ಯಲ್ಲಿ ಅಧಿಕ ಫಸಲು. ಇವ­ರಿಗೆ ತುಪ್ಪ. ಸೂರ್ಯ­ಕಾಂ­ತಿಗೆ ಜೇನಿ­ನಿಂದ ಪರಾ­ಗ­ಸ್ಪ­ರ್ಶ­ವಾ­ದರೆ ಶೇ 40 ಹೆಚ್ಚಗೆ ಇಳು­ವರಿ ಬರು­ತ್ತದೆ ಎನ್ನು­ವುದು ರೈತರ ಅಂಬೋಣ.
ಜೇನು ಸಾಕಾ­ಣಿ­ಕೆಗೆ ಮೊದಲು ಹಾಕುವ ಬಂಡ­ವಾಳ ಬಿಟ್ಟರೆ ನಂತರ ಹೇಳು­ವಂ­ತಹ ಖರ್ಚಿಲ್ಲ. ಹೊಸ­ಮ­ಸಾರ ಬಂದಾಗ ಅವ­ಕ್ಕೊಂದು ಮನೆ ಒದ­ಗಿ­ಸ­ಲಿಕ್ಕೆ ಖರ್ಚಾ­ಗು­ತ್ತದೆ. ಇಷ್ಟೇ ಅಲ್ಲದೆ ಹೂ ಇಲ್ಲದ ಸಮ­ಯ­ದಲ್ಲಿ ಜೇನು ಹುಳು­ಗ­ಳಿಗೆ ಸಕ್ಕರೆ ಪಾಕ­ವನ್ನು ಮಾಡಿ ಒದ­ಗಿ­ಸ­ಬೇ­ಕಾ­ಗು­ತ್ತದೆ. ಇದು ಜೆನು ಸಾಕು­ವ­ವ­ರಿಗೆ ಕಷ್ಟದ ದಿನ. ಆದರೆ ಹಾಕಿದ ಆಹಾ­ರಕ್ಕೆ ಧೋಕಾ ಇಲ್ಲದೆ ತುಪ್ಪ ನೀಡು­ತ್ತದೆ. ಊರಿಂದ ಊರಿಗೆ ತಿರು­ಗು­ವಾಗ ಸಿಗುವ ಲೋಕಲ್‌ ತುಡುವೆ (ಸೆರೆನಾ ಇಂಡಿಕಾ) ಹಿಡಿದು ತಮ್ಮ ಫ್ಯಾಕ್ಟ­ರಿಗೆ ಸೇರಿ­ಸಿ­ಕೊ­ಳ್ಳು­ತ್ತಾರೆ. ಜೇನು ತುಂಬಾ ಸೂಕ್ಷ್ಮ ಜೀವಿ. ಒಂದೇ ಕಡೆ ನೂರಾರು ಪೆಟ್ಟಿ­ಗೆ­ಯ­ನ್ನಿ­ಟ್ಟರು ಅವು­ಗಳು ತಮ್ಮ ಗೂಡಿಗೆ ಮರ­ಳು­ತ್ತವೆ. ಒಂದರ ಹುಳು ಮತ್ತೊಂ­ದಕ್ಕೆ ಹೋಗು­ವು­ದಿಲ್ಲ. ಇವು­ಗ­ಳಿಗೆ ನೋವಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು ಎನ್ನುವ ಇವರು ಜೇನು ಹುಳು ಸಾಕಾ­ಣಿ­ಕೆ­ಯಲ್ಲಿ ಹಲ­ವಾರು ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ, ಕೆಂಪು, ಕಪ್ಪು ಎಂಬೆ­ರಡು ತಳಿ­ಗ­ಳನ್ನು ಒಂದೇ ಪೆಟ್ಟಿ­ಗೆ­ಯ­ಲ್ಲಿಟ್ಟು, ಸಂಕರ ತಳಿ­ಯಾಗಿ ಮಾರ್ಪ­ಡಿ­ಸಿ­ದ್ದಾರೆ. ಇದರ ತುಪ್ಪ ಬಹಳ ಸವಿ ಎನ್ನು­ತ್ತಾರೆ.
ಇವರು ಒಂದು ಕ್ಯಾಂಪಿ­ನಲ್ಲಿ ಆರೆಂಟು ಬಾರಿ ಜೇನು­ತು­ಪ್ಪ­ವ­ನ್ತೆ­ಗೆ­ಯು­ತ್ತಾರೆ. ಮೆಲ್ಲಿ­ಫೆರಾ ಜೇನು 15 ದಿನ­ಕ್ಕೊಮ್ಮೆ ತುಪ್ಪ ಮಾಡು­ತ್ತದೆ. ಒಮ್ಮ ಹಿಂಡಿ­ದರೆ ಎರ­ಡ­ರಿಂದ ನಾಲ್ಕು ಕೆ.ಜಿ. ಯವ­ರೆಗೆ ತುಪ್ಪ ಗ್ಯಾರಂಟಿ. ಕಾಲು ಹಿಲೋ ಮೆಣವು ಸಿಗು­ತ್ತದೆ. ಇವರು ತುಪ್ಪ­ವನ್ನು ಸ್ವತಃ ಮಾರು­ಕಟ್ಟೆ ಮಾಡ್ತಿ­ದ್ದಾರೆ. ತಮ್ಮ ಟೆಂಟಿನ ಪಕ್ಕ­ದ­ಲ್ಲಿಯೇ ಇರುವ ಹೆದ್ದಾಯೇ ಇವರ ದೊಡ್ಡ ಮಾರಾಟ ಮಳಿಗೆ. ಒಮದು ಕಿಲೋಕ್ಕೆ140 ರೂಪಾಯಿ. ಒಮ್ಮೆ ಆಲ­ಮಟ್ಟಿ ಕ್ಯಾಂಪಿ­ನ­ಲ್ಲಿ­ರು­ವಾಗ ಅಂದಿನ ಮುಖ್ಯ­ಮಂತ್ರ ಎಸ್‌. ಎಂ. ಕೃಷ್ಣ ಇವ­ರ­ಲ್ಲಿಗೆ ಬಂದು ಜೇನನ್ನು ಕೊಂಡಿ­ದ್ದಾರೆ. ಹಾಗೇಯೆ ಬಹ­ಳಷ್ಟು ಮಂಧಿ ಈ ತುಪ್ಪ­ವನ್ನು ಇಷ್ಟ ಪಡು­ತ್ತಾರೆ. ಯಾಕೆಂ­ದರೆ ಕಣ್ಣೆ­ದು­ರಿಗೆ ಜೇನಿನ ಪೆಟ್ಟಿಗೆ, ಗ್ರಾಹ­ಕ­ರೆ­ದು­ರಿಗೆ ತುಪ್ಪ ತೆಗೆ­ಯುವ ರೀತಿ, ಒರಿ­ಜಿ­ನಲ್‌ ತುಪ್ಪ ಎನ್ನುವ ಗ್ಯಾರಂಟಿ. ಸುರೇಶ್‌ ಅವರು ಬೇರೆ ಕಡೆ ಮಾರು­ಕಟ್ಟೆ ಮಾಡಿ­ಕೊಂ­ಡಿ­ದ್ದರೆ. ಕಿಲೋಕ್ಕೆ ಅತೀ ಕಡಿಮೆ ಬೆಲೆ ಸಿಗು­ತ್ತಿತ್ತು. ಇನ್ನೂ ಕಿಲೋ ಮೇಣಕ್ಕೆ ಮಾರು­ಕ­ಟ್ಟೆ­ಯಲ್ಲಿ 200 ರೂವ­ರೆಗೆ ಇದೆ. ಇದ­ರಿಂ­ದಲೂ ಸುರೇಶ್‌ ಅವ­ರಿಗೆ ಆದಾ­ಯ­ವಿದೆ. ನಿರು­ದ್ಯೋ­ಗಿ­ಯಾ­ಗಿದ್ದ ಸುರೇಶ್‌ ಅವರು ಇಂದು ಎಂಟು ಜನ­ರಿಗೆ ಅನ್ನ­ದಾ­ತರು.
ಇವರು ಜೇನು ಸಾಕು­ವು­ದೊಂದೆ ಅಲ್ಲದೆ ಶಾಲಾ­ಮ­ಕ್ಕ­ಳಿಗೆ ರಜಾ ದಿನ­ಗ­ಳಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ ನೀಡು­ತ್ತಿ­ದ್ದಾರೆ. ಅದು ಪ್ರಾತ್ಯ­ಕ್ಷಿಕೆ ಮೂಲಕ. ಭಾಷ­ಣ­ಕ್ಕಿಂತ ಪ್ರತ್ಯಕ್ಷ ಅನು­ಭ­ವ­ದಲ್ಲಿ ಕಲಿ­ಸಿ­ದರೆ ಪರಿ­ಣಾಮ ಹೆಚ್ಚು. ಮಕ್ಕ­ಳಿಗೆ ಜೇನಿನ ಬಗ್ಗೆ ಸದ­ಭಿ­ಪ್ರಾಯ ಮೂಡಲಿ ಎಂಬುದು ಇವರ ಭಾವನೆ. ಊರು ಸುತ್ತುವ ಇವ­ರಿಗೆ ಕೆಟ್ಟ ಅನು­ಭ­ವ­ಕ್ಕಿಂತ ಪ್ರೀತಿಯ ಅನು­ಭ­ವವೇ ಹೆಚ್ಚು. ಒಮ್ಮ ಮಾತ್ರ ಅಧಿ­ಕಾ­ರಿ­ಯೊ­ಬ್ಬರು ಕಿರು­ಕುಳ ನೀಡಿ­ದ್ದಾ­ರೆ­ಮದು ವಿಷಾ­ಧಿ­ಸು­ತ್ತಾರೆ.
ಹೆಜ್ಜೇನು ಅಥವಾ ತುಡವಿ ಜೇನನ್ನು ಬೆಂಕಿ ಇಟ್ಟು ಸಾಯಿಸಿ ತುಪ್ಪ­ವನ್ನು ತೆಗೆ­ಯು­ವ­ವ­ರನ್ನು ಕಂಡರೆ ಇವ­ರಿಗೆ ಎಲ್ಲಿ­ಲ್ಲದ ಕೋಪ. ಹ್ತಿರ­ದಲ್ಲಿ ಯಾರಾ­ದರೂ ಹೀಗೆ ಮಾಡು­ವುದು ಕಂಡರೆ ತಾವೇ ಹೋಗಿ ತುಪ್ಪ­ವನ್ನು ತೆಗೆದು ಕೊಟ್ಟು ಬರು­ತ್ತಾರೆ.
ಜೇನಿನ ಕುಟುಂ­ಬ­ದಲ್ಲಿ ಆಲ­ಸಿ­ಗ­ಳಿಗೆ ಅವ­ಕಾ­ಶ­ವಿಲ್ಲ. ಅವ­ರೆ­ಲ್ಲರೂ ವೃತ್ತಿ­ನಿ­ರ­ತರು. ಆಗಷ್ಟೇ ಹುಟ್ಟಿ­ದ­ವ­ರಿಗೆ ಗೂಡಿ­ನೊ­ಳಗೆ ಕೆಲಸ. ಸ್ವಲ್ಪ ದೊಡ್ಡ­ದಾದ ಮೇಲೆ ಮೇಣ ಮಾಡುವ ಕಾರ್ಯ. ಇನ್ನೊಂದು ಚೂರು ಬೆಳೆ­ದ­ವ­ರಗೆ ಮಕ­ರ­ಮದ ಹೀರಿ ತರುವ ಬದುಕು. ವಯ­ಸ್ಸಾದ ಮೇಲೆ ಕಾವಲು ಕಾಯುವ ಕಾಯಕ. ಒಟ್ಟಾರೆ ಒಂದು ಸೆಕೆಂಡ್‌ ಸುಮ್ಮನೆ ಕೂರು­ವಂ­ತಿಲ್ಲ. ಈ ರಿತಿ ಬದುಕು ಸಾಗಿ­ಸುವ ಸಂಸಾರ ಕಾಣು­ವುದು ಜೀವ ಜಗ­ತ್ತಿ­ನಲ್ಲಿ ಜೇನಿ­ನಲ್ಲಿ ಮಾತ್ರ. ಇಂತಹ ಜೇನನ್ನು ಸಾಕು­ವುದು ಸುಲ­ಭ­ವಲ್ಲ. ಅಲ್ಲಿ ಸೋಮಾ­ರಿಗೆ ಸಾವಿನ ಶಿಕ್ಷೆ. ಹೀಗಿ­ರು­ವಾಗ ನಾವು ನಾವು ಸೋಮಾ­ರಿ­ಗ­ಳಾ­ಗದೆ ಅವು­ಗಳ ಸೂಕ್ಷ್ಮ­ವನ್ನು ಅರಿತು ಅವಕ್ಕೆ ಬೇಕಾದ ಪರಿ­ಸ­ರ­ವನ್ನು ಒದ­ಗಿ­ಸಿ­ಕೊಟ್ಟು ಅವು­ಗಳ ಜೀವನ್ದ ಎಳೆ ಎಳೆ­ಯನ್ನು ಅಧ್ಯ­ಯನ ಮಾಡಿ, ಜೇನಿನ ಭಾಷೆ­ಯನ್ನು ತಿಳಿದು ಸಾಕಿ­ದರೆ ನಮ್ಮಲ್ಲೂ ಮಧು ಪ್ರಪಂಚ ಸೃಷ್ಟಿ­ಯಾ­ಗು­ತ್ತದೆ ಎನ್ನುವ ಸುರೇಶ್‌ ಜೇನಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ್ವನ್ನು ಮಾಡಿ­ಕೊಂ­ಡಿ­ದ್ದಾರೆ. ಎಲ್ಲಿ­ಯಾ­ದರೂ ಸಾಲಾಗಿ ಜೇನಿನ ಪೆಟ್ಟಿಗೆ, ಟೆ0ಟ್‌ ಕ0­ಡರೆ ಒಮ್ಮ ಭೇಟಿ ನೀಡಿ ಸುರೇ­ಶಣ್ಣ ಸಿಗ­ಬ­ಹುದು ಜೊತೆ­ಯಲ್ಲಿ ಜೇನು ತುಪ್ಪ ಕೂಡಾ.
ನಾಗ­ರಾಜ ಮತ್ತಿ­ಗಾರ