Wednesday, November 11, 2009

ಹಸಿರು ಹುಲ್ಲಿನ ಮೇಲೆ ಹೈನುಗಾರಿಕೆ ಲಾಭ!




ಲಾಭದಾಯಕ ಹೈನುಗಾರಿಕೆ! ಪಶುಸಂಗೋಪನೆಯಿಂದ ಕೃಷಿಕನಿಗೆ ಆದಾಯ.... ಎಂಬರ್ಥದ ಶೀರ್ಷಿಕೆಯ ಕೃಷಿ ಲೇಖನಗಳು ರೈತರನ್ನು ಜಾನುವಾರು ಸಾಕಲು ಪ್ರೇರೇಪಿಸಬಹುದು. ಒಳಹೊಕ್ಕ ನಂತರವೇ ಸತ್ಯ ಗೊತ್ತಾಗುವುದು. ನಿಜಕ್ಕಾದರೆ ಹೈನುಗಾರಿಕೆಗೆ ಮೊತ್ತಮೊದಲಾಗಿ ರೈತನಿಗೆ ಅಗತ್ಯವಿದ್ದಷ್ಟು ಹಸಿರು ಹುಲ್ಲು ಬೆಳೆದುಕೊಳ್ಳಲು ತಕ್ಕ ಭೂಮಿಯಿರಬೇಕು. ಇಲ್ಲದಿದ್ದರೆ ಬದುಕು ತಂತಿ ಮೇಲಿನ ನಡಿಗೆ, ಲಾಭ ಮರೀಚಿಕೆ! ಕೊಂಡು ತರುವ ಬೈಹುಲ್ಲು, ಜಾನುವಾರು ತಿಂಡಿಗಳು ವರ್ಷಾಂತ್ಯಕ್ಕೆ ನಷ್ಟ ತರದಿದ್ದರೆ ಪುಣ್ಯ! ಸರಳವಾಗಿ ಹೇಳುವುದಾದರೆ ಹಸಿರು ಹುಲ್ಲು ಬೆಳೆದರೆ ಮಾತ್ರ ಹೈನುಗಾರಿಕೆ ಕೈಹಿಡಿದು ನಡೆಸುತ್ತದೆ. ಇಲ್ಲದಿದ್ದರೆ ತೊಂದರೆ.
ಎರಡನೇ ಹಂತದ ತಪ್ಪು ಹಸಿರು ಹುಲ್ಲಿನ ಕೃಷಿ ಮಾಡುವಲ್ಲಿ ಆಗುತ್ತದೆ. ರೈತ ಪರಮಾವಧಿ ಪ್ರಮಾಣದ ಹುಲ್ಲು ಬೆಳೆಯಬೇಕು. ಅದಕ್ಕೆ ಪೂರಕವಾದ ಸಲಹೆಗಳನ್ನು ಇಲ್ಲಿ ಒದಗಿಸಲಾಗಿದೆ. ಅನುಭವಿಕರ ಮಾತಿನ ಸಾರವಿದು ಎಂಬುದು ನಿಮ್ಮ ಗಮನದಲ್ಲಿರಲಿ. ಭೂಮಿಯನ್ನು ಸಣ್ಣದಾಗಿ ಉಳುಮೆ ಮಾಡಿ ಅರ್ಧ ಅಡಿ ಎತ್ತರದ ಏರು ಮಡಿ ಮಾಡಿಕೊಳ್ಳಬೇಕು. ಭೂಮಿ ಸಮತಟ್ಟಾಗಿರಲೇಬೇಕು ಎಂಬುದಿಲ್ಲ. ಅದರ ಮೇಲೆ ಎರಡು ಅಡಿಗಿಂತ ಹೆಚ್ಚಿನ ಉದ್ದವಿರದ ಹುಲ್ಲು ಬೀಜದ ದಂಟುಗಳನ್ನು ಮಲಗಿಸಿ ನೆಡಬೇಕು. ಇದೂ ಕಬ್ಬಿನ ಬಿತ್ತನೆಯ ತರಹವೇ. ಎರಡು ಅಡಿಗಿಂತ ಜಾಸ್ತಿ ಉದ್ದನೆಯ ದಂಟು ಮಡಿಯ ಮೇಲೆ ಸರಿಯಾಗಿ ಮಲಗುವುದಿಲ್ಲ. ಅಂದರೆ ಹಲವು ಗಣ್ಣುಗಳಲ್ಲಿ ಮೊಳಕೆ ಬಾರದೆಯೇ ಹೋಗುತ್ತದೆ.
ನಾಟಿ ಮಾಡಿದಾಗ ತೆಳುವಾಗಿ ಮಣ್ಣು ಹರಡಿದರೆ ಸಾಕು. ಒಮ್ಮೆ ಚಿಗುರು ಬಂದ ನಂತರ ಇನ್ನೊಮ್ಮೆ ಮಣ್ಣು ಏರಿಸಬೇಕು. ಮಳೆಗಾಲದ ಆರಂಭದಲ್ಲಿ ನಾಟಿ ಯುಕ್ತ. ಅರ್ಥಾತ್ ಜೂನ್, ಜುಲೈ ವೇಳೆಯೇ ಪ್ರಶಸ್ತ. ಸೆಪ್ಟೆಂಬರ್‌ನ ಗಣೇಶ ಚತುರ್ಥಿ ಆಸುಪಾಸಿನಲ್ಲೂ ನಾಟಿ ಮಾಡಬಹುದು. ಬಾಹ್ಯವಾಗಿ ಆ ವೇಳೆ ನೀರು ಒದಗಿಸುವಂತಿರಬೇಕಷ್ಟೇ. ಮೊದಲ ಒಂದು ವರ್ಷ ಹುಲ್ಲಿಗೆ ನೀರು ಕೊಡುವಂತಿದ್ದರೆ ಒಳ್ಳೆಯದು. ಇದಕ್ಕೂ ಮೊದಲು ನಾಟಿಗೆ ಯೋಗ್ಯ ಭೂಮಿ ಯಾವುದು ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಹಸಿರು ಹುಲ್ಲಿಗೆ ಸದಾ ನೀರಿನ ತೇವ ಇರುವ ತಂಗಲು ಭೂಮಿ ಅಗತ್ಯ. ಮರಗಳ ನೆರಳು ಧಾರಾಳವಾಗಿದ್ದಲ್ಲಿ ಹುಲ್ಲಿನ ಇಳುವರಿ ಚೆನ್ನಾಗಿ ಬಾರದು.
ಸಾಗರ ತಾಲ್ಲೂಕಿನ ಮಾವಿನಸರದ ಎಂ.ಜಿ.ಶ್ರೀಪಾದರಾವ್ ಕಳೆದ ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆಯ ಜೊತೆಜೊತೆಗೆ ಹಸಿರು ಹುಲ್ಲಿನ ಕೃಷಿಯನ್ನೂ ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ವಿಚಾರದಲ್ಲಿ ಅವರದು ಅನುಭವದಲ್ಲಿ ಅದ್ದಿ ತೆಗೆದ ಮಾತುಗಳು. ಅವರ ಪ್ರಕಾರ, ತೆಂಗಿನ ತೋಟಗಳಲ್ಲಿಯೂ ಹಸಿರು ಹುಲ್ಲು ಕೃಷಿ ಓ.ಕೆ! ತೆಂಗಿನ ಮರದ ಬುಡದಲ್ಲಿ ಮಾತ್ರ ಬೇಡ ಎನ್ನುತ್ತಾರವರು. ಅಡಿಕೆ ತೋಟದಲ್ಲಿಯೂ ಹುಲ್ಲು ಬೆಳೆಯಬಹುದೇನೋ. ಆದರೆ ದೊಡ್ಡದಾಗುತ್ತ ಹೋಗುವ ಹುಲ್ಲಿನ ಬುಡ ಅಡಿಕೆ ಇಳುವರಿಗೆ ಪೆಟ್ಟು ಕೊಟ್ಟೀತು. ಶ್ರೀಪಾದ್‌ರ ತೆಂಗಿನ ತೋಟದಲ್ಲಿ ಹಸಿರು ಹುಲ್ಲನ್ನು ಇಡೀ ನಾಲ್ಕು ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಅಡಿಕೆ ತೋಟದಲ್ಲಿ ಹಚ್ಚಲು ಹೋಗಿಲ್ಲ.
ಹುಲ್ಲಿಗೆ ವರ್ಷಕ್ಕೊಮ್ಮೆ ಮಣ್ಣು ಕೊಡಲೇಬೇಕು. ಅದು ವರ್ಷದ ಯಾವುದೇ ಕಾಲದಲ್ಲಾದರೂ ಸೈ. ಹಾಗೆಂದು ಗೊಬ್ಬರವನ್ನು ಬಳಸಿದರೆ ತಪ್ಪಾಗುತ್ತದೆ. ಗೊಬ್ಬರವನ್ನು ಉಪಯೋಗಿಸುವುದರಿಂದ ಹುಲ್ಲಿನ ಗಡ್ಡೆ ಮೇಲು ಬೇರಾಗಿ ಎರಡೇ ವರ್ಷಕ್ಕೆ ಮೂಲ ಬುಡವನ್ನೇ ಕಳೆದುಕೊಳ್ಳುವಂತಾಗುತ್ತದೆ. ಒಮ್ಮೆ ಹುಲ್ಲಿನ ನಾಟಿ ಮಾಡಿದ ನಂತರ ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಕೊಯ್ಲಿಗೆ ಸಿಕ್ಕುತ್ತದೆ. ಚಳಿಗಾಲ, ವಿಪರೀತ ಮಳೆ ಹೊಯ್ಯುವ ಮಳೆಗಾಲದಲ್ಲಿ ಹುಲ್ಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ವರ್ಷಕ್ಕೆ ೫-೬ ಕೊಯ್ಲು ಮಾಡಬಹುದಷ್ಟೇ.
ದನವೊಂದಕ್ಕೆ ದಿನಕ್ಕೆ ೧೫ ಕೆ.ಜಿ.ಯಷ್ಟು ಹಸಿ ಹುಲ್ಲು ಕೊಡಬಹುದು. ಕತ್ತರಿಸಿ ಕೊಡುವುದರಿಂದ ತಿನ್ನದೆ ಬಿಡುವ ಭಾಗ ಕಡಿಮೆಯಾಗುತ್ತದೆ. ತಿಂಡಿಯ ಜೊತೆಗೂ ಬೆರೆಸಿ ಕೊಡುವುದರಿಂದ ತಿಂಡಿಯ ಪ್ರಮಾಣ ಅಷ್ಟರಮಟ್ಟಿಗೆ ಉಳಿತಾಯ ಸಾಧ್ಯ. ಪುಷ್ಕಳ ಹಸಿರು ಹುಲ್ಲು ಇದ್ದರೆ ಕ್ಯಾಟಲ್ ಫೀಡ್ ಬಳಸದೇ ಕರಾವು ನಡೆಸಲು ಶಕ್ಯವಿದೆ ಎನ್ನುತ್ತಾರೆ ಶ್ರೀಪಾದ್. ಆದರೆ ಜಾನುವಾರುಗಳಿಗೆ ಬರೇ ಹಸಿರು ಹುಲ್ಲು ನೀಡುವುದು ಸಮಂಜಸವಲ್ಲ. ಲಾಭಕ್ಕಿಂತ ನಷ್ಟವೇ ಹೆಚ್ಚು. ಜೀರ್ಣಕ್ರಿಯೆಗೆ ನಾರಿನ ಅಂಶ ಅತ್ಯಗತ್ಯವಾಗಿ ಬೇಕು. ಹಸಿರು ಹುಲ್ಲಿನಿಂದ ನಾರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಲಭ್ಯ. ಹಾಗಾಗಿ ನಾವು ಪ್ರತಿದಿನ ಬೈಹುಲ್ಲನ್ನೂ ಸ್ವಲ್ಪ ಪ್ರಮಾಣದಲ್ಲಿ, ಒಂದು ಅವಧಿಗೆ ಉಣಿಸಬೇಕು. ಬೈಹುಲ್ಲಿನಲ್ಲಿ ನಾರಿನಂಶ ಧಾರಾಳ.
ಕೆಲವು ಗಮನಿಸಲೇಬೇಕಾದ ಅನುಭವಗಳು ಎಂಜಿಎಸ್‌ರ ಬುತ್ತಿಯಲ್ಲಿವೆ. ಯಾವತ್ತೂ ಎಳೆಯದಾದ ಹುಲ್ಲನ್ನು ಜಾನುವಾರುಗಳಿಗೆ ಕೊಡಲೇಬಾರದು. ಆ ಹುಲ್ಲಿನಲ್ಲಿ ಪಶುಗಳಿಗೆ ವಿಷವಾಗುವಂತ ಅಂಶಗಳಿರುವುದು ದೃಢಪಟ್ಟಿದೆ. ಅಷ್ಟೇಕೆ, ಗರ್ಭ ಧರಿಸಿದ ಹಸು ಎಮ್ಮೆಗಳು ಎಳೆ ಹಸಿರು ಹುಲ್ಲು ತಿಂದರೆ ಗರ್ಭಪಾತ ಆಗಿಬಿಡಬಹುದಂತೆ. ಹುಲ್ಲು ಕೊಯ್ಲಿನಲ್ಲೂ ಕೆಲವು ಕಿವಿಮಾತುಗಳಿವೆ. ಹರಿತವಾದ ಕತ್ತಿಯನ್ನೇ ಬಳಸಿ ಕೊಯ್ಲು ಮಾಡಬೇಕು. ಸಾಧ್ಯವಾದಷ್ಟೂ ನೆಲಮಟ್ಟಕ್ಕೆ ಹುಲ್ಲನ್ನು ಕತ್ತರಿಸಬೇಕು. ಹರಿತವಿಲ್ಲದ ಕತ್ತಿಯನ್ನು ಉಪಯೋಗಿಸಿದರೆ ಬುಡದ ದಂಟಿಗೆ ಘಾಸಿಯಾಗುತ್ತದೆ, ಒಡೆದೀತು. ಆಗ ನೀರು ಸಿಕ್ಕಿ ಕೊಳೆಯುವುದು ಸಂಭವನೀಯ. ನೀರು ತನ್ನ ಬುಡದಲ್ಲಿ ನಿಂತರೆ ಈ ಹುಲ್ಲು ಸಹಿಸುವುದಿಲ್ಲ. ಕೊಳೆತು ಪ್ರತಿಭಟಿಸುತ್ತದೆ.
ವರ್ಷಕ್ಕೊಮ್ಮೆ ಹೊಸ ಮಣ್ಣು ಕೊಟ್ಟರೆ ಅದಕ್ಕೆ ಸಮಾಧಾನ. ಸ್ವಲ್ಪ ಪ್ರಮಾಣದಲ್ಲಿ ಎರೆಗೊಬ್ಬರವನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಒಂದೊಮ್ಮೆ ಎರೆಜಲ ಸಿಗುತ್ತದೆಂದಾದರಂತೂ ಅದನ್ನು ಎಲೆಯ ಮೇಲೆ ಸಿಂಪಡಿಸುತ್ತಿದ್ದರೆ ಒಳ್ಳೆಯ ಕೊಯ್ಲು ಖಚಿತ. ಹೈನುಗಾರಿಕೆಗೆ ತೊಡಗುವವರು ಸ್ವತಃ ಹಸಿರು ಹುಲ್ಲು ಬೆಳೆಯುವವರಾಗಿದ್ದರೆ ಮಾತ್ರ ಅವರು ಹಾಲಿನ ಮಾರಾಟದಲ್ಲಿ ಲಾಭ ಕಾಣಬಹುದು. ವಾಸ್ತವವಾಗಿ, ನಾಟಿ ಮಾಡುವಾಗ ಒಮ್ಮೆ ಸ್ವಲ್ಪ ಕೂಲಿಯಾಳಿನ ಖರ್ಚು ಬರುತ್ತದೇ ವಿನಃ ಆನಂತರ ಯಾವುದೇ ಗಣನೀಯ ವೆಚ್ಚವಿಲ್ಲ. ರಾಸಾಯನಿಕ ಸಿಂಪಡಿಸದ ಹಸಿರು ಹುಲ್ಲು ಜಾನುವಾರುಗಳ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಈಗ ಎಲ್ಲರಿಗೂ ಗೊತ್ತು. ಬೈಹುಲ್ಲು ಬಳಕೆ ಎಂದರೆ ಸಮಸ್ಯೆ ಹೆಚ್ಚು, ತಿಂಡಿಯೂ ತುಸು ಜಾಸ್ತಿಯೇ ಬೇಕು. ಆಗ ಹೈನುಗಾರಿಕೆ ಕೈ ಕಚ್ಚುವ ಅಪಾಯ ಕಾಡುತ್ತದೆ.
ಈಗ ಹುಲ್ಲಿನಲ್ಲಿ ಹಲವು ಜಾತಿಗಳಿವೆ. ಕೃಷಿ ವಿಶ್ವವಿದ್ಯಾಲಯಗಳು ನೂತನ ತಳಿಗಳನ್ನು ಸಂಶೋಧಿಸಿವೆ. ಅವುಗಳಲ್ಲಿ ಎನ್‌ಬಿ ೨೨, ಎಲಿಫೆಂಟ್ ಗ್ರಾಸ್, ಕೋ-೩, ಪ್ಯಾರಾ ಮುಂತಾದ ಮಾದರಿಗಳಿವೆ. ಕೋ-೩, ಎಲಿಫೆಂಟ್ ಗ್ರಾಸ್ ಹೆಚ್ಚು ಮಳೆಯನ್ನೂ ಸುಧಾರಿಸಿಕೊಂಡಿವೆ. ಈ ತಳಿಗಳ ವಿಚಾರದಲ್ಲಿ ಮಾತ್ರ ನಿಮ್ಮ ಪ್ರದೇಶಕ್ಕೆ ಯಾವುದು ಸೂಕ್ತವೆಂದು ಕೃಷಿ ತಜ್ಞರ ಸಲಹೆ ಪಡೆದು ಅಥವಾ ಈಗಾಗಲೇ ಹುಲ್ಲು ಬೆಳೆಯುತ್ತಿರುವವರ ಅನುಭವ ತಿಳಿದು ಮುಂದುವರೆಯುವುದು ಬುದ್ಧಿವಂತಿಕೆ.

-ಮಾವೆಂಸ
please see his another blog..... http://mavemsa.blogspot.com/ for more information on other subjects.

Saturday, October 31, 2009

ಮಳೆಯೇ ಹೊಲ ಮೇಯ್ದಾಗ





`ಪ್ರತಿ ವರ್ಷ ಬರ­ದಿಂದ ದೀಪಾ­ವಳಿ ಹಬ್ಬ ಮಾಡಾಕ ಆಗೂ­ದಿಲ್ರಿ. ವರ್ಷ ನಾವು ಬೆಳಿ ಚೆನ್ನಾಗಿ ಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡ­­ಬ್ಬಕ್ಕ ದೀಪ ಹಚ್ಚಾಕ ಮನಿನೇ ಕೊಚ್ಚಿ ಹೋಗ್ಯಾವ್ರಿ' ಎನ್ನು­ವಾಗ ನೆರೆ ಪೀಡಿತ ಪ್ರದೇ­ಶದ ರೈತನ ಕಣ್ಣಂ­ಚಿ­ನಿಂದ ನೀರು...

ನಿಜ, ಏನು ಆಗ­ಬಾ­ರ­ದಿತ್ತೋ ಅದು ಆಗ­ಬಾ­ರದ ಸಮ­ಯ­ದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರ­ಬಾ­ರದ ಸಮ­ಯ­ದಲ್ಲಿ ಬಂದ ಮಳೆಯ ಆರ್ಭ­ಟಕ್ಕೆ ಸಹ­ಸ್ರಾರು ರೈತರು ಬೆಳೆಯ ಜೊತೆಗೆ ನೆಲೆ­ಯನ್ನು ಕಳೆ­ದು­ಕೊಂಡು ಸಂತ್ರ­ಸ್ತ­ರಾ­ಗಿ­ದ್ದಾರೆ. ನಾಲ್ಕು ದಿನದ ಮಳೆ­ಯಲ್ಲಿ ಕೊಚ್ಚಿ ಹೋದ ಸಂಪ­ತ್ತನ್ನು ಪುನಃ ಸಂಗ್ರ­ಹಿ­ಸಲು ನಲ­ವತ್ತು ವರ್ಷ ಬೇಕಾ­ಗ­ಬ­ಹುದು ಎಂದರೆ ಅತಿ­ಶ­ಯೋ­ಕ್ತಿ­ಯಲ್ಲ.

ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆ­ಗಳು ಸಂಪೂರ್ಣ ನಾಶ­ವಾ­ಗಿದೆ. ಸಹ­ಸ್ರಾರು ಕೋಟಿ ರೂಪಾಯಿ ನಷ್ಟ­ವಾ­ಗಿದೆ. ರಾಜ್ಯದ ಜನ­ತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನ­ಕ್ಕಾಗಿ ಕೈಚಾ­ಚುವ ಪರಿ­ಸ್ಥಿತಿ ಬಂದಿ­ರು­ವುದು ವಿಪ­ರ್ಯಾ­ಸದ ಸಂಗತಿ.


ನೆರೆ­ಯಿಂದ ಬೆಳೆ ಹಾನಿ: ನೆರೆ ಇಳಿ­ಯು­ತ್ತಿ­ದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾ­ಗು­ತ್ತಿದೆ. ಆದರೆ ನಿಖರ ಮಾಹಿತಿ ಲಭ್ಯ­ವಾ­ಗು­ತ್ತಿಲ್ಲ. ಒಂದು ಅಂದಾ­ಜಿನ ಪ್ರಕಾರ ಬೆಳ­ಗಾ­ವಿ­ಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್‌ ಬೆಳೆ ನಾಶ­ವಾ­ಗಿದೆ. ಹಾವೇ­ರಿ­ಯಲ್ಲಿ ಒಂದು ಲಕ್ಷ, ಧಾರ­ವಾ­ಡ­ದಲ್ಲಿ ಒಂದು ಲಕ್ಷ, ಗದ­ಗ­ದಲ್ಲಿ ತೊಂಬ­ತ್ತೊಂ­ಬತ್ತು ಸಾವಿರ, ಕಲ­ಬು­ರ್ಗಿ­ಯಲ್ಲಿ ಎರಡು ಲಕ್ಷ ಹೆಕ್ಟೇರ್‌ ಬಾಗ­ಲ­ಕೋ­ಟೆ­ಯಲ್ಲಿ ನಲ­ವತ್ತು ಸಾವಿರ, ವಿಜಾ­ಪು­ರ­ದಲ್ಲಿ ಮೂವ­ತ್ತೆ­ರಡು ಸಾವಿರ ಹೆಕ್ಟೇರ್‌ ಭೂಮಿ­ಯ­ಲ್ಲಿನ ಬೆಳೆ­ಗಳು ನಾಶ­ವಾ­ಗಿದೆ. ಬಳ್ಳಾರಿ, ಶಿರ­ಗುಪ್ಪ, ಹೊಸ­ಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶ­ವಾ­ಗಿದೆ.


ರೈತರ ಅಳಲು: `ನಾವು ಭತ್ತ, ಮೆಣ­ಸಿ­ನ­ಕಾಯಿ, ಮೆಕ್ಕೆ ಜೋಳ­ವನ್ನು ಬೆಳೆ­ಯು­ತ್ತೆವೆ. ನಮಗೆ ಭತ್ತದ ಬೆಳೆ­ಯಲ್ಲಿ ಒಂದು ಎಕ­ರೆಗೆ ಸುಮಾರು ಇಪ್ಪತ್ತು ಸಾವಿ­ರಕ್ಕೂ ಹೆಚ್ಚಿಗೆ ನಷ್ಟ­ವಾ­ಗಿದೆ. ಮೆಕ್ಕೆ ಜೋಳ ಒಂದು ಎಕ­ರೆಗೆ 30 ಚೀಲ ಬರು­ತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣ­ಸಿನ ಬೆಳೆ ಸಂಪೂರ್ಣ ನಾಶ­ವಾ­ಗಿದೆ. ಇದನ್ನು ಕಿತ್ತು ಹಾಕ­ಬೇಕು. ನಮ್ಮೂ­ರಿನ ಕೆರೆ ಒಡೆದು ನೂರಾರು ಪಂಪ್‌ ಸೆಟ್‌­ಗಳು ಕೊಚ್ಚಿ­ಹೋ­ಗಿದೆ. ಈಗ ನಮ್ಮ ಜಮೀ­ನ­ನನ್ನು ನೋಡಿ­ದರೆ ಕಣ್ಣಲ್ಲಿ ನೀರು ಬರು­ತ್ತದೆ. ನಾಲ್ಕು ತಿಂಗ­ಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾ­ಯ­ವನ್ನು ಪಡೆ­ಯು­ತ್ತೇವೆ ಎನ್ನುವ ಆಸೆ­ಯ­ಲ್ಲಿ­ದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆ­ಯೊಂ­ದಿಗೆ ನೆರೆ­ಯ­ಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡು­ತ್ತಾರೆ ಬಳ್ಳಾ­ರಿಯ ಬಾಗ­ನ­ಹ­ಟ್ಟಿಯ ರೈತ ಶಿವ­ಶಂ­ಕರ್‌.

ಗಂಗಾ­ವ­ತಿಯ ರೈತರ ಗೋಳು ಮತ್ತೊಂದು ರೀತಿ­ಯದ್ದು. ಒಂದು ಕಡೆ ನೆರೆ­ಯಿಂದ ಭತ್ತದ ಬೆಳೆ ನಾಶ­ವಾ­ದರೆ, ಮತ್ತೊಂದು ಕಡೆ­ಯಲ್ಲಿ ತುಂಗ­ಭದ್ರಾ ನಾಲೆ ಒಡೆದು ಬೆಳೆ ನಾಶ­ವಾ­ಗಿದೆ. ಇಲ್ಲಿನ ರೈತ ವೇಣು­ಗೋ­ಪಾಲ್‌ ಅವರ ಪ್ರಕಾರ `ಸಾವಿ­ರಾರು ಎಕರೆ ಭತ್ತದ ಹೊಲ­ಗ­ಳಲ್ಲಿ ಎಕ­ರೆಗೆ ಹತ್ತು ಚೀಲ ಬೆಳೆಯು ಸಿಗು­ವು­ದಿಲ್ಲ. ನೆರೆ­ಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರ­ಯಿಸಿ ಸಿಂದ­ನೂರು, ಗಂಗಾ­ವತಿ, ಮಸ್ಕಿ, ಮಾನ್ವಿ ಯ ಸಾವಿ­ರಾರು ರೈತರು ಭತ್ತ, ಕೆಂಪು ಮೆಣ­ಸಿ­ನ­ಕಾಯಿ, ಹತ್ತಿ ಬೆಳೆ­ಯು­ತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮ­ಯಕ್ಕೆ ನೀರನ್ನು ಬಿಡ­ಲಾ­ಗದೆ ಬೆಳೆ­ಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿ­ಯಾ­ದರೆ, ಮತ್ತೊಂದು ಕಡೆ ನೀರಿ­ಲ್ಲದೆ ಸಂತ್ರ­ಸ್ತ­ರಾ­ಗಿ­ದ್ದೇವೆ' ಎನ್ನು­ತ್ತಾರೆ.

ಗದ­ಗದ ರೈತರ ಸಂಕಷ್ಟ ಮತ್ತೊಂದು ರೀತಿ­ಯದ್ದು. ಇಲ್ಲಿನ ರೈತ ಮುಖಂಡ ಗೋಣಿ­ಬ­ಸಪ್ಪ ಕೊರ್ಲ­ಹಳ್ಳಿ ಇವ­ರನ್ನು ಮಾತ­ನಾ­ಡಿ­ಸಿ­ದಾಗ ನೆರೆಗೆ ಒಳ­ಗಾದ ರೈತರ ಕಷ್ಟ­ವನ್ನು ಎಳೆ­ಎ­ಳೆ­ಯಾಗಿ ಬಿಡಿ­ಸಿ­ಡು­ತ್ತಾರೆ. `ಗದ­ಗದ ಹುಲ­ಗ­ನ­ಗೇರಿ, ಮೆಣಸಿ, ಕಾಡ­ಗೂಳಿ, ಕುರ­ವಿ­ನ­ಕೊ­ಪ್ಪ­ದಲ್ಲಿ ರೈತರು ಅಕ್ಷ­ರಶಃ ನಿರ್ಗ­ತಿ­ಕ­ರಾ­ಗಿ­ದ್ದಾರೆ. ಈ ಭಾಗ­ದಲ್ಲಿ ಈರು­ಳ್ಳಿ­ಯನ್ನು ಹೆಚ್ಚಾಗಿ ಬೆಳೆ­ಯು­ತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟು­ಕೊಂ­ಡಿ­ದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆ­ದರೆ ದೈವ ಮತ್ತೊಂದು ಬಗೆ­ಯಿತು ಎನ್ನುವ ಹಾಗೆ. ನಮ್ಮ ಅನ್ನ­ವಾದ ಜೋಳ, ರಾಗಿ ಎಲ್ಲ ನೀರು ಪಾಲಾ­ಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿ­ದರೆ ಹೂಳು ಮಾತ್ರ ಇದೆ. ನೆರೆ ಬೆಳೆ­ಯನ್ನು ಮಾಯ ಮಾಡಿ­ಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾ­ಗಿದೆ. ರೈತರು ಶಾಲೆ, ರೈಲು ನಿಲ್ದಾ­ಣ­ದಲ್ಲಿ ವಾಸಿ­ಸು­ತ್ತಿ­ದ್ದಾರೆ.

ರೋಣ ತಾಲೂ­ಕಿ­ನಲ್ಲಿ ಬೆಣ್ಣೆ­ಹಳ್ಳ ಮತ್ತು ಮಲ­ಪ್ರಭಾ ನದಿ ಸೇರುವ ಜಾಗ­ದಲ್ಲಿ ಯಾವಾ­ಗಲೂ ನೆರೆ ಆಗು­ತ್ತಿತ್ತು. ಆದರೆ ಈ ಬಾರಿ ನಿರೀ­ಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆ­ಹ­ಳ್ಳದ ಬಗ್ಗೆ ಬಹ­ಳಷ್ಟು ವರ್ಷ­ದಿಂದ ಗೊತ್ತಿ­ರುವ ಜನ­ಪ್ರ­ತಿ­ನಿ­ಧಿ­ಗಳು ಮೌನ ವಹಿ­ಸಿ­ರು­ವುದು ನೋವಿನ ಸಂಗತಿ. ಇದು ಒಂದೆ­ಡೆಗೆ ಆದರೆ ಬಡ ರೈತರು ಮನೆ­ಯಲ್ಲಿ ಕಣಜ ಮಾಡಿ­ಕೊಂಡು ದಾಸ್ತಾನು ಮಾಡಿ­ಟ್ಟು­ಕೊಂಡ ಬೆಳೆ­ಯೆಲ್ಲ ಕೊಚ್ಚಿ ಹೋಗಿದೆ' ಎನ್ನು­ತ್ತಾರೆ.

ಸೋಯಾ ಬೀನ್‌, ಭತ್ತ, ರಾಗಿ, ಜೋಳ, ಸೂರ್ಯ­ಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರ­ಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆ­ಗಳು ನಾಶ­ವಾ­ಗಿದೆ. ಸದಾ ಕಷ್ಟ­ದ­ಲ್ಲಿಯೇ ಜೀವನ ಸಾಗಿ­ಸುವ ರೈತ­ನಿಗೆ ನೆರೆ ಎನ್ನು­ವುದು ಗಾಯದ ಮೇಲೆ ಬರೆ ಹಾಕಿ­ದಂತೆ ಆಗಿದೆ. ಬೆಳೆ ಬೆಳೆ­ಯಲು ಹಾಕಿದ ಬಂಡ­ವಾಳ ಸಮೇತ ಬೆಳೆಯು ಇಲ್ಲ­ದಂ­ತಾ­ಗಿದೆ. ಜೊತೆ­ಯಲ್ಲಿ ಖಾಸಗಿ ಸಾಲ, ಬ್ಯಾಂಕ್‌ ಸಾಲ ತೀರಿ­ಸುವ ಹೊಣೆಯು ರೈತ­ನಿ­ಗಿದೆ.

ಇಂತಹ ರೈತ­ರಿಗೆ ಪರಿ­ಹಾ­ರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದು­ಕುವ ಉತ್ಸಾ­ವನ್ನೇ ಕಳೆದು ಕೊಂಡಿ­ದ್ದಾರೆ. ಇವ­ರಿಗೆ ಪರಿ­ಹಾರ ನೀಡಿ­ದರೆ ಸಾಲದು ಬದು­ಕುವ ಉತ್ಸಾ­ಹ­ವನ್ನು ಮೂಡಿ­ಸುವ ಅಗ­ತ್ಯ­ವಿದೆ.


ಮುಗಿ­ಸುವ ಮುನ್ನ: ಬದು­ಕಲು ಅವ­ಶ್ಯ­ಕ­ವಾದ ಆಹಾರ ಬೆಳೆ­ಗಳು ನಾಶ­ವಾ­ಗಿ­ರು­ವುದು ಕೇವಲ ಬೆಳೆ ಬೆಳೆ­ಯುವ ರೈತ­ನಿಗೆ ಮಾತ್ರ­ವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನ­ತೆಯ ಮೇಲೂ ಪರಿ­ಣಾಮ ಬೀರ­ಲಿದೆ.


ನಾಗರಾಜ ಮತ್ತಿಗಾರ

Tuesday, October 20, 2009

ಸುರೇಶಣ್ಣನ ಜೇನು ಕೃಷಿ



ಹೆದ್ದಾರಿ ಬದಿಯ ಬಯಲು. ಅಲ್ಲ ಜೇನು ಪೆಟ್ಟಿ­ಗೆ­ಗಳ ಸಾಲು! ಮಧ್ಯೆ ಒಂದು ಸಣ್ಣ ಟೆಂಟ್‌. ರಸ್ತೆ ಬದಿ­ಯಲ್ಲಿ ಜೇನು ತುಂಬಿದ ಬಾಟಲಿ. ಕೂತು­ಹಲ, ಜೇನು ಇರುವ ಜಾಗಕ್ಕೆ ಬಂದರೆ ಬಿಡಾ­ರದ ಒಳ­ಗಿಂದ ಕೆಂಪು ಕಪ್ಪು ಮಿಶ್ರಿತ ಗಡ್ಡ ಇರುವ ವ್ಯಕ್ತಿ ಬನ್ನಿ ಎಂದು ಟೆಂಟ್‌ಗೆ ಸ್ವಾಗ­ತಿ­ಸು­ತ್ತಾರೆ. ಉಪ­ಚಾ­ರ­ಕ್ಕಾಗಿ ಆಗಷ್ಟೇ ಹಿಂಡಿದ ಮಧು­ವನ್ನು ನೀಡು­ತ್ತಾರೆ.
ಇವರು ನಮ್ಮ ರಾಜ್ಯದ ಸಂಚಾರಿ ಜೇನು ಕೃಷಿ­ಯಲ್ಲಿ ಅಗ್ರ ಪಂಕ್ತಿ­ಯ­ಲ್ಲಿ­ರುವ ಸುರೇಶ ಕರ್ಕೇರಾ(9448409675). ಉಡುಪಿ ಜಿಲ್ಲೆಯ ಬ್ರಹ್ಮಾ­ವರ ಇವ­ರೂರು.
ಪ್ರಾಥ­ಮಿಕ ಶಿಕ್ಷ­ಣಕ್ಕೆ ವಿದ್ಯೆ ಮುಕ್ತಾಯ. ಹೋಟೆಲ್‌ ಮಾಣಿ­ಯಾಗಿ ಸ್ವಯಂ ಸಂಪಾ­ದ­ನೆಯ ಜೀವನ ಆರಂಭ. ಸ್ವತಃ ಹೋಟೆಲ್‌ ಪ್ರಾರಂ­ಭಿಸಿ, ನಷ್ಟ ಅನು­ಭ­ವಿಸಿ ಕೈ ಸೋತು ಉದ್ಯೋ­ಗಾ­ಕಾಂ­ಕ್ಷಿ­ಯಾಗಿ ನಿರು­ದ್ಯೋ­ಗ­ದಿಂದ ಕುಳಿ­ತಾಗ ರುಡ್‌­ಸೆಟ್‌ ಸಂಸ್ತೆ­ಯಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ. ನಂತರ ಜೇನು ಜೀವನ ಶುರು.
ಸ್ವಂತ ಸಾಕಾ­ಣಿಕೆ ಮಾಡುವ ಮೊದಲು ಹಲ­ವ­ರಿಗೆ ಜೇನು ತುಪ್ಪ ಸರ­ಬ­ರಾಜು ಮಾಡು­ವುದು, ಜೇನು ಸಾಕಾ­ಣಿಕೆ ಮಾಡು­ವ­ವ­ರಿಗೆ ಜೇನು ಹಿಳು­ಗ­ಳನ್ನು ಹಿಡಿದು ಕೊಡು­ವುದು, ಜೇನು ಪೆಟ್ಟಿಗೆ ತಂದು ಕೊಡುವ ಕೆಲಸ ಮಾಡು­ತ್ತಿ­ದ್ದ­ರಂತೆ. ಇವರು ಜೇನು ಕುಟುಂ­ಬ­ಗಳು ಒಂದು ವರ್ಷ­ಕ್ಕಿಂತ ಹೆಚ್ಚಿಗೆ ದಿನ ನಿಲ್ಲದೆ ಹಾರಿ ಹೋಗು­ತ್ತಿ­ದ್ದವು. ಕೆಲ­ವಕ್ಕೆ ಕಾಯಿಲೆ ಬಂದು ಸತ್ತು ಹೋದವು. ಈ ರೀತಿಯ ಅನು­ಭವ ಸ್ವಂತ ಸಾಕಾ­ಣಿಕೆ ಮಾಡು­ವಲ್ಲಿ ಸಹ­ಕಾ­ರಿ­ಯಾ­ಯಿತು. ಅವು­ಗಳ ಬೇಡ­ಗಳ ಅರಿ­ವಾ­ಯಿತು. ಯಾವ ರೀತಿಯ ಪರಿ­ಸ­ರ­ದಲ್ಲಿ ಇವು ಉತ್ತ­ಮ­ವಾಗಿ ಕೆಲಸ ಮಾಡು­ತ್ತೇವೆ ಎಂದು ತಿಳಿ­ಯಿತು. ಜೇನು ಕುಟುಂ­ಬ­ವನ್ನು ಉಳಿ­ಸಿ­ಕೊ­ಳ್ಳ­ಲಿ­ಕ್ಕಾಗಿ ಇವು­ಗ­ಳಗೆ ಬೇಕಾದ ಸೂಕ್ತ ಪರಿ­ಸರ ಒದ­ಗಿ­ಸ­ಲಿ­ಕ್ಕಾಗಿ ಸಂಚಾರ ಪ್ರಾರಂ­ಭ­ವಾ­ಯಿತು. ಒಂದು ಪೆಟ್ಟಿಗೆ ನೂರಾ­ದವು.
ಯಾವ ಪ್ರದೇ­ಶ­ದಲ್ಲಿ ಹೆಚ್ಚು ಹೂ ಬಿಡು­ತ್ತದೋ, ಎಂತಹ ಹೂವಿ­ನಲ್ಲಿ ಜೇನು ಅಂಥ ಕಡೆ ಜೇನಿನ ಕುಟುಂ­ಬ­ವನ್ನು ಇಟ್ಟು ಅವಿ­ರತ ದುಡಿ­ಯುವ ಕಾರ್ಮಿ­ಕ­ರಿಂದ ಕೆಲಸ ಮಾಡಿ­ಕೊ­ಳ್ಳುವ ಸಂಚಾರಿ ಜೇನು ಕೃಷಿ­ಗಾಗಿ ಆಯ್ಕೆ ಮಾಡಿ­ಕೊಂ­ಡಿ­ರು­ವುದು ಮೆಲ್ಲಿ­ಫೆರಾ ಜೇನು ತಳಿ. ವಿದೇಶಿ ತಳಿ­ಯಾದ ಇದು ಬಹ­ಳಷ್ಟು ವರ್ಷ ಒಂದೇ ಇರು­ತ್ತದೆ. ಸ್ವಭಾ­ವವು ಸಭ್ಯ. ಒಂದೆ­ಡೆ­ಯಿಂದ ಮತ್ತೊಂ­ದೆ­ಡೆಗೆ ಪೆಟ್ಟಿ­ಗೆ­ಯನ್ನು ಸಾಗಿ­ಸು­ವುದು ಸುಲಭ. ಇವರ ಊರು ಕರಾ­ವ­ಳಿ­ಯಾ­ದರೂ ಮೆಲ್ಲಿ­ಫೆರಾ ತಳಿಗೆ ಬಯಲು ಸೀಮೆ ಪ್ರಶಸ್ತ ಸ್ಥಳ. ಸಮು­ದ್ರದ ಅಂಚಿ­ನಲ್ಲಿ ಜೇನಿಗೆ ಉಪ­ದ್ರವ ನೀಡುವ ಬಿಗ್‌ ಬಿ ಈಟರ್‌ ಮತ್ತು ಸ್ಮಾಲ್‌ ಬಿ ಈಟರ್‌ ಕಾಟ ಜಾಸ್ತಿ.
ಅದ­ಕ್ಕಾಗಿ ಸುರೇಶ್‌ ಅವರ ಜೇನು ಪೆಟ್ಟಿ­ಗೆ­ಗಳು ಈಡಿ ರಾಜ್ಯ ಸುತ್ತು­ತ್ತಿವೆ. ಇವ­ರದ್ದು ಒಟ್ಟು ಮೂರು ಕ್ಯಾಂಪ್‌ ಇದೆ. ಒಂದು ಕ್ಯಾಂಪ್‌ ಮಲೆ­ನಾ­ಡಿ­ನ­ಲ್ಲಿ­ದ್ದರೆ ಮತ್ತೊಂದು ಬಯಲು ಸೀಮೆ­ಯ­ಲ್ಲಿ­ರು­ತ್ತದೆ. ಇನ್ನೊಂದು ಸ್ವಂತ ಊರು ಬ್ರಹ್ಮಾ­ವ­ರ­ದ­ಲ್ಲಿ­ರು­ತ್ತದೆ. ಊರಿ­ನ­ಲ್ಲಿ­ರುವ ಪೆಟ್ಟಿ­ಗೆ­ಗ­ಳನ್ನು ಹೆಂಡತಿ ವಾಸಂತಿ, ಮಗ ಕೀರ್ತನ್‌ ರಾಜ್‌, ರಾಘ­ವೇಂದ್ರ ನೋಡಿ­ಕೊ­ಳ್ಳು­ತ್ತಾರೆ. ಇವೆ­ಲ್ಲ­ವನ್ನು ವ್ಯವ­ಸ್ಥ­ತ­ವಾಗಿ ನೋಡಿ ಕೊಲ್ಳುವ ಜವಾ­ಬ್ದಾರಿ ಸುರೇಶ್‌ ಅವ­ರದ್ದು.
ಇವರು ಜೇನು ಪೆಟ್ಟಿ­ಗೆ­ಗ­ಳನ್ನು ಇಡಲು ಹೆದ್ದಾರಿ ಬದಿಯ ಹೊಲ­ಗ­ಳನ್ನು ಆಯ್ಕೆ ಮಾಡಿ­ಕೊ­ಳ್ಳು­ತ್ತಾರೆ. ಜೋ, ಸೂರ್ಯ­ಕಾಂತಿ ಬೆಳೆ­ಯುವ ರೈತರು ಇವ­ರಿಗೆ ಪೆಟ್ಟ­ಗೆ­ಗ­ಳನ್ನು ಇಡಲು ಪ್ರೀತಿ­ಯಿಂದ ಅವ­ಕಾಶ ಮಾಡಿ­ಕೊ­ಡು­ತ್ತಾರೆ. ಉತ್ತಮ ಪರಾ­ಗ­ಸ್ವ­ರ್ಶ­ದಿಂದ ಅವ­ರಿಗೆ ಬೆಳೆ­ಯಲ್ಲಿ ಅಧಿಕ ಫಸಲು. ಇವ­ರಿಗೆ ತುಪ್ಪ. ಸೂರ್ಯ­ಕಾಂ­ತಿಗೆ ಜೇನಿ­ನಿಂದ ಪರಾ­ಗ­ಸ್ಪ­ರ್ಶ­ವಾ­ದರೆ ಶೇ 40 ಹೆಚ್ಚಗೆ ಇಳು­ವರಿ ಬರು­ತ್ತದೆ ಎನ್ನು­ವುದು ರೈತರ ಅಂಬೋಣ.
ಜೇನು ಸಾಕಾ­ಣಿ­ಕೆಗೆ ಮೊದಲು ಹಾಕುವ ಬಂಡ­ವಾಳ ಬಿಟ್ಟರೆ ನಂತರ ಹೇಳು­ವಂ­ತಹ ಖರ್ಚಿಲ್ಲ. ಹೊಸ­ಮ­ಸಾರ ಬಂದಾಗ ಅವ­ಕ್ಕೊಂದು ಮನೆ ಒದ­ಗಿ­ಸ­ಲಿಕ್ಕೆ ಖರ್ಚಾ­ಗು­ತ್ತದೆ. ಇಷ್ಟೇ ಅಲ್ಲದೆ ಹೂ ಇಲ್ಲದ ಸಮ­ಯ­ದಲ್ಲಿ ಜೇನು ಹುಳು­ಗ­ಳಿಗೆ ಸಕ್ಕರೆ ಪಾಕ­ವನ್ನು ಮಾಡಿ ಒದ­ಗಿ­ಸ­ಬೇ­ಕಾ­ಗು­ತ್ತದೆ. ಇದು ಜೆನು ಸಾಕು­ವ­ವ­ರಿಗೆ ಕಷ್ಟದ ದಿನ. ಆದರೆ ಹಾಕಿದ ಆಹಾ­ರಕ್ಕೆ ಧೋಕಾ ಇಲ್ಲದೆ ತುಪ್ಪ ನೀಡು­ತ್ತದೆ. ಊರಿಂದ ಊರಿಗೆ ತಿರು­ಗು­ವಾಗ ಸಿಗುವ ಲೋಕಲ್‌ ತುಡುವೆ (ಸೆರೆನಾ ಇಂಡಿಕಾ) ಹಿಡಿದು ತಮ್ಮ ಫ್ಯಾಕ್ಟ­ರಿಗೆ ಸೇರಿ­ಸಿ­ಕೊ­ಳ್ಳು­ತ್ತಾರೆ. ಜೇನು ತುಂಬಾ ಸೂಕ್ಷ್ಮ ಜೀವಿ. ಒಂದೇ ಕಡೆ ನೂರಾರು ಪೆಟ್ಟಿ­ಗೆ­ಯ­ನ್ನಿ­ಟ್ಟರು ಅವು­ಗಳು ತಮ್ಮ ಗೂಡಿಗೆ ಮರ­ಳು­ತ್ತವೆ. ಒಂದರ ಹುಳು ಮತ್ತೊಂ­ದಕ್ಕೆ ಹೋಗು­ವು­ದಿಲ್ಲ. ಇವು­ಗ­ಳಿಗೆ ನೋವಾ­ಗ­ದಂತೆ ನೋಡಿ­ಕೊ­ಳ್ಳ­ಬೇಕು ಎನ್ನುವ ಇವರು ಜೇನು ಹುಳು ಸಾಕಾ­ಣಿ­ಕೆ­ಯಲ್ಲಿ ಹಲ­ವಾರು ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ, ಕೆಂಪು, ಕಪ್ಪು ಎಂಬೆ­ರಡು ತಳಿ­ಗ­ಳನ್ನು ಒಂದೇ ಪೆಟ್ಟಿ­ಗೆ­ಯ­ಲ್ಲಿಟ್ಟು, ಸಂಕರ ತಳಿ­ಯಾಗಿ ಮಾರ್ಪ­ಡಿ­ಸಿ­ದ್ದಾರೆ. ಇದರ ತುಪ್ಪ ಬಹಳ ಸವಿ ಎನ್ನು­ತ್ತಾರೆ.
ಇವರು ಒಂದು ಕ್ಯಾಂಪಿ­ನಲ್ಲಿ ಆರೆಂಟು ಬಾರಿ ಜೇನು­ತು­ಪ್ಪ­ವ­ನ್ತೆ­ಗೆ­ಯು­ತ್ತಾರೆ. ಮೆಲ್ಲಿ­ಫೆರಾ ಜೇನು 15 ದಿನ­ಕ್ಕೊಮ್ಮೆ ತುಪ್ಪ ಮಾಡು­ತ್ತದೆ. ಒಮ್ಮ ಹಿಂಡಿ­ದರೆ ಎರ­ಡ­ರಿಂದ ನಾಲ್ಕು ಕೆ.ಜಿ. ಯವ­ರೆಗೆ ತುಪ್ಪ ಗ್ಯಾರಂಟಿ. ಕಾಲು ಹಿಲೋ ಮೆಣವು ಸಿಗು­ತ್ತದೆ. ಇವರು ತುಪ್ಪ­ವನ್ನು ಸ್ವತಃ ಮಾರು­ಕಟ್ಟೆ ಮಾಡ್ತಿ­ದ್ದಾರೆ. ತಮ್ಮ ಟೆಂಟಿನ ಪಕ್ಕ­ದ­ಲ್ಲಿಯೇ ಇರುವ ಹೆದ್ದಾಯೇ ಇವರ ದೊಡ್ಡ ಮಾರಾಟ ಮಳಿಗೆ. ಒಮದು ಕಿಲೋಕ್ಕೆ140 ರೂಪಾಯಿ. ಒಮ್ಮೆ ಆಲ­ಮಟ್ಟಿ ಕ್ಯಾಂಪಿ­ನ­ಲ್ಲಿ­ರು­ವಾಗ ಅಂದಿನ ಮುಖ್ಯ­ಮಂತ್ರ ಎಸ್‌. ಎಂ. ಕೃಷ್ಣ ಇವ­ರ­ಲ್ಲಿಗೆ ಬಂದು ಜೇನನ್ನು ಕೊಂಡಿ­ದ್ದಾರೆ. ಹಾಗೇಯೆ ಬಹ­ಳಷ್ಟು ಮಂಧಿ ಈ ತುಪ್ಪ­ವನ್ನು ಇಷ್ಟ ಪಡು­ತ್ತಾರೆ. ಯಾಕೆಂ­ದರೆ ಕಣ್ಣೆ­ದು­ರಿಗೆ ಜೇನಿನ ಪೆಟ್ಟಿಗೆ, ಗ್ರಾಹ­ಕ­ರೆ­ದು­ರಿಗೆ ತುಪ್ಪ ತೆಗೆ­ಯುವ ರೀತಿ, ಒರಿ­ಜಿ­ನಲ್‌ ತುಪ್ಪ ಎನ್ನುವ ಗ್ಯಾರಂಟಿ. ಸುರೇಶ್‌ ಅವರು ಬೇರೆ ಕಡೆ ಮಾರು­ಕಟ್ಟೆ ಮಾಡಿ­ಕೊಂ­ಡಿ­ದ್ದರೆ. ಕಿಲೋಕ್ಕೆ ಅತೀ ಕಡಿಮೆ ಬೆಲೆ ಸಿಗು­ತ್ತಿತ್ತು. ಇನ್ನೂ ಕಿಲೋ ಮೇಣಕ್ಕೆ ಮಾರು­ಕ­ಟ್ಟೆ­ಯಲ್ಲಿ 200 ರೂವ­ರೆಗೆ ಇದೆ. ಇದ­ರಿಂ­ದಲೂ ಸುರೇಶ್‌ ಅವ­ರಿಗೆ ಆದಾ­ಯ­ವಿದೆ. ನಿರು­ದ್ಯೋ­ಗಿ­ಯಾ­ಗಿದ್ದ ಸುರೇಶ್‌ ಅವರು ಇಂದು ಎಂಟು ಜನ­ರಿಗೆ ಅನ್ನ­ದಾ­ತರು.
ಇವರು ಜೇನು ಸಾಕು­ವು­ದೊಂದೆ ಅಲ್ಲದೆ ಶಾಲಾ­ಮ­ಕ್ಕ­ಳಿಗೆ ರಜಾ ದಿನ­ಗ­ಳಲ್ಲಿ ಜೇನು ಸಾಕಾ­ಣಿ­ಕೆಯ ತರ­ಬೇತಿ ನೀಡು­ತ್ತಿ­ದ್ದಾರೆ. ಅದು ಪ್ರಾತ್ಯ­ಕ್ಷಿಕೆ ಮೂಲಕ. ಭಾಷ­ಣ­ಕ್ಕಿಂತ ಪ್ರತ್ಯಕ್ಷ ಅನು­ಭ­ವ­ದಲ್ಲಿ ಕಲಿ­ಸಿ­ದರೆ ಪರಿ­ಣಾಮ ಹೆಚ್ಚು. ಮಕ್ಕ­ಳಿಗೆ ಜೇನಿನ ಬಗ್ಗೆ ಸದ­ಭಿ­ಪ್ರಾಯ ಮೂಡಲಿ ಎಂಬುದು ಇವರ ಭಾವನೆ. ಊರು ಸುತ್ತುವ ಇವ­ರಿಗೆ ಕೆಟ್ಟ ಅನು­ಭ­ವ­ಕ್ಕಿಂತ ಪ್ರೀತಿಯ ಅನು­ಭ­ವವೇ ಹೆಚ್ಚು. ಒಮ್ಮ ಮಾತ್ರ ಅಧಿ­ಕಾ­ರಿ­ಯೊ­ಬ್ಬರು ಕಿರು­ಕುಳ ನೀಡಿ­ದ್ದಾ­ರೆ­ಮದು ವಿಷಾ­ಧಿ­ಸು­ತ್ತಾರೆ.
ಹೆಜ್ಜೇನು ಅಥವಾ ತುಡವಿ ಜೇನನ್ನು ಬೆಂಕಿ ಇಟ್ಟು ಸಾಯಿಸಿ ತುಪ್ಪ­ವನ್ನು ತೆಗೆ­ಯು­ವ­ವ­ರನ್ನು ಕಂಡರೆ ಇವ­ರಿಗೆ ಎಲ್ಲಿ­ಲ್ಲದ ಕೋಪ. ಹ್ತಿರ­ದಲ್ಲಿ ಯಾರಾ­ದರೂ ಹೀಗೆ ಮಾಡು­ವುದು ಕಂಡರೆ ತಾವೇ ಹೋಗಿ ತುಪ್ಪ­ವನ್ನು ತೆಗೆದು ಕೊಟ್ಟು ಬರು­ತ್ತಾರೆ.
ಜೇನಿನ ಕುಟುಂ­ಬ­ದಲ್ಲಿ ಆಲ­ಸಿ­ಗ­ಳಿಗೆ ಅವ­ಕಾ­ಶ­ವಿಲ್ಲ. ಅವ­ರೆ­ಲ್ಲರೂ ವೃತ್ತಿ­ನಿ­ರ­ತರು. ಆಗಷ್ಟೇ ಹುಟ್ಟಿ­ದ­ವ­ರಿಗೆ ಗೂಡಿ­ನೊ­ಳಗೆ ಕೆಲಸ. ಸ್ವಲ್ಪ ದೊಡ್ಡ­ದಾದ ಮೇಲೆ ಮೇಣ ಮಾಡುವ ಕಾರ್ಯ. ಇನ್ನೊಂದು ಚೂರು ಬೆಳೆ­ದ­ವ­ರಗೆ ಮಕ­ರ­ಮದ ಹೀರಿ ತರುವ ಬದುಕು. ವಯ­ಸ್ಸಾದ ಮೇಲೆ ಕಾವಲು ಕಾಯುವ ಕಾಯಕ. ಒಟ್ಟಾರೆ ಒಂದು ಸೆಕೆಂಡ್‌ ಸುಮ್ಮನೆ ಕೂರು­ವಂ­ತಿಲ್ಲ. ಈ ರಿತಿ ಬದುಕು ಸಾಗಿ­ಸುವ ಸಂಸಾರ ಕಾಣು­ವುದು ಜೀವ ಜಗ­ತ್ತಿ­ನಲ್ಲಿ ಜೇನಿ­ನಲ್ಲಿ ಮಾತ್ರ. ಇಂತಹ ಜೇನನ್ನು ಸಾಕು­ವುದು ಸುಲ­ಭ­ವಲ್ಲ. ಅಲ್ಲಿ ಸೋಮಾ­ರಿಗೆ ಸಾವಿನ ಶಿಕ್ಷೆ. ಹೀಗಿ­ರು­ವಾಗ ನಾವು ನಾವು ಸೋಮಾ­ರಿ­ಗ­ಳಾ­ಗದೆ ಅವು­ಗಳ ಸೂಕ್ಷ್ಮ­ವನ್ನು ಅರಿತು ಅವಕ್ಕೆ ಬೇಕಾದ ಪರಿ­ಸ­ರ­ವನ್ನು ಒದ­ಗಿ­ಸಿ­ಕೊಟ್ಟು ಅವು­ಗಳ ಜೀವನ್ದ ಎಳೆ ಎಳೆ­ಯನ್ನು ಅಧ್ಯ­ಯನ ಮಾಡಿ, ಜೇನಿನ ಭಾಷೆ­ಯನ್ನು ತಿಳಿದು ಸಾಕಿ­ದರೆ ನಮ್ಮಲ್ಲೂ ಮಧು ಪ್ರಪಂಚ ಸೃಷ್ಟಿ­ಯಾ­ಗು­ತ್ತದೆ ಎನ್ನುವ ಸುರೇಶ್‌ ಜೇನಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ್ವನ್ನು ಮಾಡಿ­ಕೊಂ­ಡಿ­ದ್ದಾರೆ. ಎಲ್ಲಿ­ಯಾ­ದರೂ ಸಾಲಾಗಿ ಜೇನಿನ ಪೆಟ್ಟಿಗೆ, ಟೆ0ಟ್‌ ಕ0­ಡರೆ ಒಮ್ಮ ಭೇಟಿ ನೀಡಿ ಸುರೇ­ಶಣ್ಣ ಸಿಗ­ಬ­ಹುದು ಜೊತೆ­ಯಲ್ಲಿ ಜೇನು ತುಪ್ಪ ಕೂಡಾ.
ನಾಗ­ರಾಜ ಮತ್ತಿ­ಗಾರ

Friday, October 16, 2009

ಪ್ರಾಯೋಗಿಕ ಜಲ ಶಾಲೆ

ಮಲೆ­ನಾಡು ಮಳೆ­ನಾಡು ಎಂಬುದು ಹಿಂದಿನ ಮಾತು. ಈಗ ಪರಿ­ಸ್ಥಿತಿ ಬದ­ಲಾ­ಗಿದೆ. ಬೇಸಿ­ಗೆ­ಯಲ್ಲಿ ನೀರಿನ ತೊಂದರೆ ಅನು­ಭ­ವಿ­ಸು­ವ­ವ­ರಲ್ಲಿ ಮಲೆ­ನಾ­ಡಿ­ಗರೂ ಇದ್ದಾರೆ. ಈ ತೊಂದರೆ ನೀಗಿ­ಸುವ ನಿಟ್ಟಿ­ನಲ್ಲಿ ಮಳೆ­ಕೊ­ಯ್ಲಿನ ಬಗ್ಗೆ ಜಾಗೃತಿ ಮುಡಿ­ಸುವ ಕೆಲಸ ನಡೆದೇ ಇದೆ. ಆದರೆ ಹೆಚ್ಚಿ­ನ­ವರು ಅದನ್ನು ಗಂಭೀ­ರ­ವಾಗಿ ತೆಗೆದು ಕೊಳ್ಳ­ಲಿಲ್ಲ. ಗಂಭೀ­ರ­ವಾಗಿ ತೆಗೆದು ಕೊಂಡಿ­ರು­ವ­ವರು ಬೆಳ­ಕಿಗೆ ಬಳ­ಕಿಗೆ ಬರು­ತ್ತಿಲ್ಲ. ಮಳೆ­ಕೊ­ಯ್ಲಿನ ಬಗ್ಗೆ ಗಂಭೀರ ಚಿಂತನೆ ನಡೆಸಿ, ಜನ­ಜಾ­ಗೃ­ತಿಯ ಬೆಳಕು ಹರ­ಡಲಿ ಎಂಬ ಆಶಯ ಹೊಂದಿ­ರುವ ಹವ್ಯಾಸಿ ಪತ್ರ­ಕರ್ತ, ಕೃಷಿಕ ಶಿವಾ­ನಂದ ಕಳವೆ ಅವರ `ಪ್ರಯೋ­ಗ­ಶೀ­ಲತೆ' ಮಾದ­ರಿ­ಯಾ­­ಬ­ಹುದು.
ಶಿವಾ­ನಂ­ದರ ಅಡಿಕೆ ತೋಟದ ಜೊತೆ ಒಂದಷ್ಟು ಸೊಪ್ಪಿನ ಬೆಟ್ಟ ಸಹ ಇದೆ. ಹದಿ­ನಾರು ಎಕರೆ ಬೆಟ್ಟ­ದಲ್ಲಿ ಸುಮಾರು ಹನ್ನೆ­ರಡು ಎಕರೆ ಬೆಟ್ಟ ಒಂದೇ ಕಡೆ ಇದೆ. ಈ ಬೆಟ್ಟದ ಶೇಕಡಾ ಎಪ್ಪ­ತ್ತು­ರಷ್ಟು ಭಾಗ­ದಲ್ಲಿ ಕಳ­ವೆ­ಯ­ವರು ಮಳೆ ಕೊಯ್ಲಿನ ವಿವಿಧ ಪ್ರಯೋ­ಗ­ಗ­ಳನ್ನು ಮಾಡಿ­ದ್ದಾರೆ. ಜೊತೆ­ಯಲ್ಲಿ ಅಪ­ರೂ­ಪದ ಸಸ್ಯ ಪ್ರಭೇ­ಧ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ.
ಮಳೆ­ಕೊ­ಯ್ಲಿನ ಬಗ್ಗೆ ಬಹ­ಳಷ್ಟು ಅಧ್ಯ­ಯ­ನ­ವನ್ನು ನಡೆ­ಸಿ­ರಿ­ರು­ವ­ವರು ಕಳ­ವೆ­ಯ­ವರು. ಈ ಕುರಿತು ಸಾಕಷ್ಟು ಯಶಸ್ವೀ ಪ್ರಯೋ­ಗ­ಗ­ಳನ್ನು ಬಲ್ಲ­ವರು. ನಿರು ಇಂಗಿ­ಸುವ ಕುರಿತು ಸ್ಲೈಡ್‌ ಶೋ ನಡೆಸಿ ನೀರಿನ ಮಹ­ತ್ವ­ವನ್ನು ಜನ­ರಿಗೆ ತಿಳಿ­ಸಿ­ದ­ವರು. ಒಂದು ಕಡೆ ಸ್ಲೈಡ್‌ ಶೋ ನಡೆ­ಸು­ವಾಗ ಹಿರಿ­ಯ­ರೊ­ಬ್ಬರು ಕೇಳಿ­ದ­ರಂತೆ- `ನಿಮಗೆ ನೀರಿಂ­ಗಿ­ಸುವ ಬಗ್ಗೆ ಸ್ವ ಅನು­ಭ­ವ­ವೇನು?' ಎಂದು.
ಅಂದೇ ಕಳವೆ ಅವರು ನಿರ್ಧ­ರಿ­ಸಿ­ದರು: `ನಾನು ಮೊದಲು ನೀರಿಂ­ಗಿ­ಸುವ ಕೆಲಸ ಮಾಡ­ಬೇಕು ನಂತರ ಪ್ರವ­ಚನ. ಹಾಗೆಯೇ ಪ್ರತಿ ವರ್ಷ ನನ್ನ ದುಡಿ­ಮೆಯ ಒಂದು ಭಾಗ­ವನ್ನು ನೀರಿಂ­ಗಿ­ಸುವ ಕೆಲ­ಸಕ್ಕೆ ಬಳ­ಸ­ಬೇಕು'
ಸೊಪ್ಪಿನ ಬೆಟ್ಟದ ಪಕ್ಕ­ದಲ್ಲಿ ಕಳ­ವೆ­ಯ­ವರ ಅಡಿಕೆ ತೋಟ­ವಿದೆ. ಆ ತೋಟ ಮುಂಚೆ ಸೋರ­ಗು­ತ್ತಿತ್ತು. ನೋಡಲು ಬಂದ­ವರು `ಮಳೆ­ಗಾ­ಲ­ದಲ್ಲಿ ನೀರು ಹೆಚ್ಚಾಗಿ ಜವ­ಳಾ­ಗು­ತ್ತಿದೆ. ತೋಟದ ಕಾಲು­ವೆ­ಯನ್ನು ಆಳ ಮಾಡ­ಬೇಕು' ಎಂದು ಸಲಹೆ ನೀಡು­ತ್ತಿ­ದ್ದರು. ಸರಿ ತೋಟದ ಕಾಲು­ವೆ­ಯನ್ನು ಆಳ ಮಾಡಿ­ದ್ದಾ­ಯಿತು. ಪಂಪ್‌­ಸೆಟ್‌ ಹಾಕಿ­ಯಾಯ್ತು. ಆದರೆ ಪ್ರಯೋ­ಜನ ಬರ­ಲಿಲ್ಲ. ಕಾರಣ ತೋಟ­ದಲ್ಲಿ ತೆಗೆದ ಬಾವಿ­ಯಲ್ಲಿ ನೀರೇ ಇರು­ತ್ತಿ­ರ­ಲಿಲ್ಲ. ತೋಟ ಮತ್ತೂ ಸೊರ­ಗಿತು ಇಳು­ವ­ರಿಯೂ ಕಡಿ­ಮೆ­ಯಾ­ಯಿತು.
ಈಗ ಕಳವೆ ಅವರ ಮಳೆ ಕೊಯ್ಲಿನ ಅಭಿ­ಯಾನ ಆರಂ­ಭ­ವಾ­ಯಿತು. ಮೊದಲು ಸೊಪ್ಪಿನ ಬೆಟ್ಟ­ದಲ್ಲಿ ಉತ್ತಮ ಜಾತಿಯ ಸಸ್ಯ ಪ್ರಭೇ­ದ­ಗ­ಳನ್ನು ನಾಟಿ ಮಾಡಿ­ದರು. ನಾಟಿ ಮಾಡಿದ ಈ ಸಸ್ಯ­ಗಳ ಮೇಲ್ಬಾ­ಗ­ದಲ್ಲಿ ಅರ್ಧ ಚಂದ್ರಾ­ಕೃ­ತಿ­ಯಲ್ಲಿ ಇರು ಕಾಲುವೆ ನಿರ್ಮಾಣ. ಬೆಟ್ಟದ ಬುಡ­ದ­ಲ್ಲಿ­ರುವ ಕೆರೆಗೆ ನೀರನ್ನು ಇಂಗಿ­ಸುವ ಯತ್ನ­ವಾಗಿ ಬೆಟ್ಟ­ದಲ್ಲಿ ಅಲ್ಲಲ್ಲಿ ಇಂಗು­ಗುಂ­ಡಿ­ಗ­ಳನ್ನು ತೋಡಿ­ಸಿ­ದರು. ಅವು­ಗಳ ಮುಂದೆ ಪುನಃ ಕಾಲು­ವೆ­ಗಳು. ಇಂಗು­ಗುಂ­ಡಿ­ಯಲ್ಲಿ ಉಕ್ಕಿದ ನೀರು ಈ ಕಾಲು­ವೆಗೆ ಬಂದು ಬೀಳು­ವಂ­ತಾ­ಯಿತು. ಈ ರೀತಿ ಮಾಡಿ­ರು­ವು­ದ­ರಿಂದ ಅನಾದಿ ಕಾಲ­ದಿಂದ ಕಳ­ವೆ­ಯ­ಲ್ಲಿ­ರುವ `ಹಾರ್ನಳ್ಳಿ ಕೆರೆ`ಗೆ ನೀರನ ಬರ ನೀಗಿತು. ಈಗ ಈ ಕೆರೆಯ ಕೂಡ ಹೂಳೆತ್ತಿ ಸ್ವಚ್ಛ ಮಾಡ­ಲಾ­ಗಿದೆ. ಬೆಟ್ಟದ ಒಂದು ಮಗ್ಗು­ಲಲ್ಲಿ ಇಂಗುವ ನೀರು ಹಾರ್ನಳ್ಳಿ ಕೆರೆಗೆ ಆಸ­ರೆ­ಯಾ­ಯಿತು.
ಬೆಟ್ಟದ ಇನ್ನೊಂದು ದಿಕ್ಕಿ­ನಲ್ಲಿ ಕಳ­ವೆ­ಯ­ವರೇ ಒಂದು ಕೆರೆಯ ನಿರ್ಮಿ­ಸಿ­ದ್ದಾರೆ.ಇದು 16 ಅಡಿ ಆಳ 35 ಅಡಿ ವಿಸ್ತೀರ್ಣ ಈ ಕೆರೆ ಹೊಂದಿದೆ. ಈ ಕೆರೆಗೆ ಸುಮಾರು ಭಾಗದ ನೀರು ಬಂದು ಶೇಖ­ರಣೆ ಆಗು­ತ್ತದೆ. ಇದ­ರಲ್ಲಿ ಹೆಚ್ಚಾದ ನೀರು ಹಾಳಾ­ಗದೆ ಹಾರ್ನಳ್ಳಿ ಕೆರೆಗೆ ಸೇರಿ ಕೊಳ್ಳು­ತ್ತದೆ. ಕಳೆದ ವರ್ಷ­ದಿಂದ ಇವರು ಬೆಟ್ಟದ ತಲೆ­ಯಲ್ಲಿ ಸುಮಾರು ಒಂದು ಎಕ­ರೆ­ಯಷ್ಟು ಜಾಗ­ವನ್ನು ಸಮ­ತ­ಟ್ಟಾಗಿ ಮಾಡಿ­ದ್ದಾರೆ. ಇದರ ಸುತ್ತ ಬದು­ಗ­ಳನ್ನು ಹಾಕಿ­ದ್ದಾರೆ. ಇದು ಒಂದು ಕೆರೆಯ ಮಾದ­ರಿ­ಯಲ್ಲೇ ಇದೆ. ಇದರ ಒಳ­ಗಡೆ ಅಪ­ರೂ­ಪದ ಮಾವಿನ ಸಸಿ­ಗ­ಳನ್ನು, ಅಲಂ­ಕಾ­ರಿಕ ಸಸ್ಯ, ಬಹು­ವಿ­ಧದ ಸಸ್ಯ­ಗ­ಳನ್ನು ಇಲ್ಲಿ ನಾಟಿ ಮಾಡಿ­ದ್ದಾರೆ.
ಈ ಜಾಗ­ದಲ್ಲಿ ಲಕ್ಷಾಂ­ತರ ಲೀಟರ್‌ ನೀರು ಇಂಗು­ತ್ತದೆ. ಇದರ ಕೆಳ­ಗಡೆ ಮತ್ತೆ ಒಡ್ಡುನ್ನು ಮಾಡಿ­ದ್ದಾರೆ. ಮೇಲೆ ಹೆಚ್ಚಾದ ನೀರು ಕೆಳ­ಗಡೆ ಒಂದು ಇಂಗು­ತ್ತದೆ. ಒನ್ನೊಮ್ಮೆ ಇಲ್ಲೂ ನೀರು ಹೆಚ್ಚಾ­ದರೆ ಗುಡ್ಡಕ್ಕೆ ಅಡ್ಡ­ದಾಗಿ ತೋಡಿದ ಕಾಲು­ವೆ­ಯಲ್ಲಿ ಬಂದು ಸೇರಿ­ತ್ತದೆ. ಈ ಕಾಲುವೆ ಕೂ ಮೆಟ್ಟಲು ಮಾದ­ರಿ­ಯಲ್ಲಿ ಇರು­ವ­ದ­ರಿಂದ ಅಲ್ಲಿಯೇ ನೀರು ಇಂಗು­ತ್ತದೆ. ಒಟ್ಟಾರೆ ಕಳವೆ ಅವರ ಬೆಟ್ಟ­ದಲ್ಲಿ ಎಲ್ಲಿ ಬಿದ್ದ ಮಳೆ ನೀರು ಅಲ್ಲಯೇ ಇಂಗು­ತ್ತದೆ. ನೀರು ಹರಿದು ಓವ ಅವ­ಕಾ­ಶವೇ ಇಲ್ಲ.
`ಮಳೆ ನೀರನ್ನು ಠೇವಣಿ ಇಟ್ಟು ಅಂರ್ತ­ಜಲ ಹಿಂಪ­ಡೆ­ಯುವ ಪ್ರಯ­ತ್ನ­ವಿದು. ಮಳೆ ನೀರನ್ನು ಸಂಗ್ರ­ಹಿ­ಸು­ವು­ದ­ರಿಂದ ಜಲ ಸಮೃದ್ಧಿ ಪಡಿ­ಯ­ಲಿಕ್ಕೆ ಸಾಧ್ಯ ಎನ್ನು­ವು­ದನ್ನು ನೋಡಿ ಅನು­ಭ­ವಿ­ಸಿದ್ದೆ. ಆದರೆ ಇಂದು ಇದು ನನ್ನ ಸ್ವ ಅನು­ಭ­ವಕ್ಕೆ ಬಂದಿದೆ. ವರ್ಷ ಹತ್ತು ಹದಿ­ನೈದು ಸಾವಿರ ರೂಪ­ಯಿ­ಯನ್ನು ಮಳೆ ಕೊಯ್ಲಿನ ಕೆಲ­ಸಕ್ಕೆ ವಿಯೋ­ಗಿ­ಸು­ತ್ತಿ­ದ್ದೇನೆ. ಆರೆಂಟು ವರ್ಷದ ಹಿಂದೆ ನಮ್ಮ ತೋಟ ಸೋರ­ಗು­ತ್ತಿತ್ತೋ ಇಂದು ಆ ಸಮಸ್ಯೆ ಇಲ್ಲ ತೋಟ ಈಗ ಸದಾ ಹಸಿ­ರಾ­ಗಿ­ರು­ತ್ತದೆ. ನಮ್ಮ ಕೆರೆ­ಯಲ್ಲಿ ಕಡು ಬೇಸಿ­ಗೆ­ಯಲ್ಲು 8 ಅಡಿ ನೀರು ಇರು­ತ್ತದೆ. ತೋಟಕ್ಕೂ ನೀರಾ­ವ­ರಿ­ಯಾ­ಗಿದೆ' ಎನ್ನು­ವುದು ಕಳವೆ ಅವರ ಅನು­ಭ­ವದ ನುಡಿ.
ಕಳವೆ ಅವರ ಬೆಟ್ಟ ಮಳೆ ಕೊಯ್ಲು ಮಾಡುವ ಆಸ­ಕ್ತ­ರಿಗೆ ಒಂದು ಪ್ರಾಯೋ­ಗಿಕ ಸ್ಥಳ. ಮಳೆ ಕೊಯ್ಲು ಮಾದ­ರಿ­ಗಳ ಅಪ­ರೂ­ಪದ ಕ್ಷೇತ್ರ. ಇಂದು ಇದೊಂದು ಅಘೋ­ಷಿತ ಪ್ರವಾಸಿ ತಾಣ­ವಾ­ಗಿದೆ. ಬಹ­ಳಷ್ಟು ಮಂದಿ ಇಲ್ಲಿಗೆ ಬಂದು ಕಳವೆ ಅವರ ಜಲ ಸಾಧನೆ ನೋಡಿ ಹೋಗು­ತ್ತಿ­ದ್ದಾರೆ. ಅಧ್ಯ­ಯನ ತಂಡ­ಗಳು ಇಲ್ಲಿಗೆ ಆಗ­ಮಿ­ಸು­ತ್ತಿದೆ.
ಪ್ರಾಯೋ­ಗಿಕ ಜಲ ಶಾಲೆಗೆ ಬಗ್ಗೆ ವಿವ­ರಣೆ ಬೇಕೇ? +919448023715

ನಾಗ­ರಾಜ ಮತ್ತಿ­ಗಾರ

Sunday, September 27, 2009

ಕೆಲ ಕೆಲಸ ಕುಂತಲ್ಲಿ, ಉಚಿತವಾಗಿ!




ರೈತ ಕಾಲದೊಂದಿಗೆ ಸ್ಪರ್ಧಿಸಲೇಬೇಕು. ಕೃಷಿಗೆ ಮತ್ತು ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಜೊತೆಗೆ ಆ ಪ್ರಕ್ರಿಯೆಗೆ ಪೂರಕವಾದ ಜಾಣ್ಮೆಯನ್ನು ತುಂಬಿಕೊಳ್ಳಬೇಕು. ಹಾಗಂತಲೇ ಈ ಅಂಕಣ ಹಲವು ನಿಟ್ಟಿನ ಮಾಹಿತಿಗಳನ್ನು ನಿಮಗೆ ಕೊಟ್ಟಿದೆ. ಈ ಬಾರಿ ಹಲವು ಸಣ್ಣ ಪುಟ್ಟ ವಿಷಯಗಳು, ಮಾಹಿತಿಗಳತ್ತ ದೃಷ್ಟಿ ಹಾಯಿಸೋಣ. ಬಹುಷಃ ಈ ಕ್ಷಣಕ್ಕೆ ಅವು ಸಹಾಯಕ ಎನ್ನಿಸದಿರಬಹುದು. ಆದರೆ ಒಂದಲ್ಲಾ ಒಂದು ಘಳಿಗೆಯಲ್ಲಿ ಇವು ಬೇಕಾಗುವುದು ಖಚಿತ.
ಕೃಷಿ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಉಚಿತ ದೂರವಾಣಿ ಸೌಲಭ್ಯವನ್ನು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ನಾವು ೧೮೦೦ ೪೨೫ ೩೫೫೩ ಎಂಬ ಸಂಖ್ಯೆಗೆ ಕರೆ ಮಾಡಬಹುದು. ರಾಜ್ಯ ಮಟ್ಟದಲ್ಲಿ ರೈತರ ದೂರು, ಸಲಹೆಗಳನ್ನು ಸ್ವೀಕರಿಸಲು ಹಾಗೂ ಸೂಕ್ತವಾದ ಪರಿಹಾರೋಪಾಯ ನೀಡಲು ಸ್ಥಾಪಿಸಲಾಗಿರುವ ರೈತ ಸಹಾಯವಾಣಿಯಿದು ಎಂದು ರಾಜ್ಯ ಕೃಷಿ ಇಲಾಖೆ ಹೇಳಿಕೊಂಡಿದೆ.
ಕೃಷಿ ಪರಿಕರಗಳ ಲಭ್ಯತೆ, ಇಲಾಖಾ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕ್ರಮಗಳು, ಮಣ್ಣು ಹಾಗೂ ನೀರಿನ ವಿಶ್ಲೇಷಣೆ, ಬೆಳೆ ವಿಮೆ, ಸಾವಯವ ಕೃಷಿ, ಕೃಷಿ ಸಂಬಂಧಿತ ಇತರ ವಿಚಾರಗಳನ್ನು ಈ ದೂರವಾಣಿ ಸಹಾಯದಿಂದ ಕೇಳಬಹುದು. ಈ ಸಂಖ್ಯೆಗೆ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡಬಹುದು.
ಇವಿಷ್ಟು ಕೃಷಿ ಇಲಾಖೆಯ ಪ್ರಚಾರ. ಇದೇ ಅಂಕಣದಲ್ಲಿ ಕೃಷಿಕ ಮಾಹಿತಿಗಾಗಿ ೧೫೫೧ಕ್ಕೆ ಕರೆ ಮಾಡಬಹುದಾದ ಮಾಹಿತಿ ಪ್ರಕಟಗೊಂಡಿದ್ದು ನಿಮಗೆ ನೆನಪಿರಬಹುದು. ಇದು ಕೇಂದ್ರ ಸರ್ಕಾರದಿಂದ ರೂಪಿತವಾಗಿದ್ದು, ಇದರ ಸಮಯ ಬೆಳಿಗ್ಗೆ ಆರರಿಂದ ರಾತ್ರಿ ಹತ್ತು. ಇಲ್ಲಿ ಕೇವಲ ಬೇಸಾಯ, ಕೃಷಿ ತಂತ್ರ ಕುರಿತ ಮಾಹಿತಿ ಲಭ್ಯವಾದರೆ ರಾಜ್ಯದ ರೈತ ಸಹಾಯವಾಣಿಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿ ಗಿಟ್ಟುವುದರಿಂದ ರೈತರು ದುಸ್ಸೆಂದು ಸ್ಥಳೀಯ ಕೃಷಿ ಇಲಾಖೆಯ ಕಛೇರಿಗೆ ಹೋಗಿ ಮಾಹಿತಿ ತಿಳಿಯಬೇಕಾದುದಿಲ್ಲ. ಒಂದು ಫೋನ್ ಕರೆ ಸಾಕು.
ರೈತರ ದುರದೃಷ್ಟವೋ ಏನೋ ಈ ಸಂಖ್ಯೆಗೆ ಕರೆ ಮಾಡಿದಾಗ ಬಹುಪಾಲು ವೇಳೆ ‘ಕರೆ ಸ್ವೀಕರಿಸುವವರು ಸದ್ಯ ಲಭ್ಯವಿಲ್ಲ. ಅವರು ಇನ್ನೊಬ್ಬರೊಂದಿಗೆ ಸಂಭಾಷಣೆಯಲ್ಲಿದ್ದಾರೆ’ ಎಂಬರ್ಥದ ಸೂಚನೆ ಬರುತ್ತದೆ. ಇಡೀ ರಾಜ್ಯಕ್ಕೆ ಒಂದೇ ಲೈನ್‌ನ ದೂರವಾಣಿ ಇದೆಯೇ ಅಥವಾ ಬೇರೊಂದು ವ್ಯವಹಾರದ ದೂರವಾಣಿ ಸಂಖ್ಯೆಗೇ ಈ ಸಹಾಯವಾಣಿಯನ್ನು ಸೇರಿಸಿಬಿಟ್ಟಿದ್ದರೋ ಗೊತ್ತಾಗುತ್ತಿಲ್ಲ. ಕೃಷಿಕರಿಗೆ ಅನುಕೂಲವಾಗುವ ಇಂತಹ ಸೌಲಭ್ಯಗಳ ಕುರಿತು, ಅದರ ವ್ಯವಸ್ಥಿತ ಚಾಲನೆಗೆ ರೈತ ಪರ ಸಂಘಟನೆಗಳು ಗಟ್ಟಿಕೂರಬೇಕು. ಹತ್ತು ಹಲವು ಓಡಾಟ ಒಂದು ಫೋನ್ ಕರೆಯಿಂದ ತಪ್ಪುವುದಾದರೆ ಅಷ್ಟರಮಟ್ಟಿಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?
ಪ್ರತಿಯೊಂದು ಬೆಳೆಯನ್ನು ಕೃಷಿ ವ್ಯಾಪಾರ ಮಾರುಕಟ್ಟೆ - ಎಪಿಎಂಸಿಗೆ ತಂದು ಮಾರುವುದು ಸೂಕ್ತ. ಆದರೆ ರೈತರಿಗೆ ಹತ್ತಾರು ಸಮಸ್ಯೆ. ಎಂದು ಮಾರುಕಟ್ಟೆಗೆ ಬೆಳೆಯನ್ನು ವಿಕ್ರಯಿಸಲು ತೆಗೆದುಕೊಂಡು ಹೋಗುವುದು? ಕೈ ಸಾಲ ಮಾಡಿದರಂತೂ ಮನೆಬಾಗಿಲಿನಲ್ಲಿ ಮಾರಲೇಬೇಕಾದ ಅನಿವಾರ್ಯತೆ. ಅಲ್ಲೂ ಆ ದಿನದ ಮಾರುಕಟ್ಟೆ ದರದ ಅರಿವಿರದೆ ಮಧ್ಯವರ್ತಿ ಹೇಳಿದ ಬೆಲೆಗೆ ಬೆಲೆ ಮಾರಿ ಕೈ ಸುಟ್ಟುಕೊಳ್ಳುವುದಿದೆ. ಖುದ್ದು ಮಾರುಕಟ್ಟೆಗೆ ಹೋಗಿ ಪೇಟೆಧಾರಣೆಯ ಮಾಹಿತಿ ಸಂಗ್ರಹಿಸುವುದು ಕಷ್ಟವಾದುದರಿಂದ ಇನ್ನೊಂದು ಫೋನ್ ಸೌಲಭ್ಯ ರೈತರ ನೆರವಿಗೆ ನಿಲ್ಲುತ್ತದೆ. ೧೮೦೦ ೪೨೫ ೧೫೫೨ಕ್ಕೆ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು. ಇದೂ ಉಚಿತ ವ್ಯವಸ್ಥೆ. ಕರೆ ಮಾಡಿದಾತನಿಗೆ ನಯಾ ಪೈಸೆಯ ವೆಚ್ಚ ತಗಲುವುದಿಲ್ಲ. ನಿಮಗೆ ಗೊತ್ತಿರಲಿ, ೧೮೦೦ಯಿಂದ ಆರಂಭವಾಗುವ ಎಲ್ಲ ೧೧ ಅಂಕಿಗಳ ದೂರವಾಣಿ ಕರೆದಾತರಿಗೆ ಉಚಿತ. ಕರೆ ಸ್ವೀಕರಿಸುವಾತ ಆ ವೆಚ್ಚವನ್ನು ಭರಿಸುತ್ತಾನೆ.
ರೈತರ ಮಗದೊಂದು ಸಂಕಷ್ಟ ಹವಾಮಾನ. ನಿಜ, ಪ್ರಕೃತಿಯನ್ನು ಇದಮಿತ್ಥಂ ಎಂದು ಊಹಿಸುವುದು ಮಾನವನಿಂದ ಸಾಧ್ಯವಿಲ್ಲ. ಆದರೆ ಕೊನೆಪಕ್ಷ ಕೆಲವು ಹವಾಮಾನ ಮುನ್ಸೂಚನೆಗಳಿದ್ದರೆ ಕೃಷಿಕ ತನ್ನ ಕೃಷಿ ಚಟುವಟಿಕೆಗಳನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ಆಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದೇನೋ.
ಸಾಧಾರಣದಿಂದ ಭಾರೀ ಮಳೆ ಎಂಬ ಹವಾಮಾನ ಭವಿಷ್ಯ ಅನಾದಿಕಾಲದಿಂದಲೂ ಟೀಕೆಗೆ ಒಳಗಾಗಿದೆ. ಆದರೆ ಒಮ್ಮೆ ಹವಾಮಾನ ಭವಿಷ್ಯ ಇದ್ದರೆ ಚೆನ್ನ ಎನ್ನಿಸುವುದಿದೆ. ಮಾನ್ಸೂನ್ ಮಾರುತಗಳ ದುರ್ಬಲತೆ ಕುರಿತು, ಅಪ್ಪಳಿಸುವ ಚಂಡಮಾರುತ ಸಾಗುವ ದಿಕ್ಕಿನ ವಿವರ ತಿಳಿಯಲು ಹವಾಮಾನ ವರದಿ ಲಭ್ಯವಾಗಬೇಕು ಎನ್ನಿಸಬಹುದು. ಈಗ ದೈನಿಕವನ್ನು ತೆರೆದು ಯಾವ ಪುಟದ ಮೂಲೆಯಲ್ಲಿ ಹವಾಮಾನ ಮುನ್ಸೂಚನೆ ಪ್ರಕಟವಾಗಿದೆ ಎಂಬುದನ್ನು ಹುಡುಕಬೇಕಾಗಿಲ್ಲ. ಸುಮ್ಮನೆ ನಿಮ್ಮ ದೂರವಾಣಿಯಿಂದ ಡಯಲ್ ಮಾಡಿ, ೧೮೦೦ ೧೮೦ ೧೭೧೭ಕ್ಕೆ! ಇದನ್ನು ಹವಾಮಾನ ವಿವರ ನೀಡಲೆಂದೇ ನಿಯೋಜಿಸಲಾಗಿದೆ.
ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥಗಳನ್ನು ಕೊಡಲು ಸರ್ಕಾರ ಪಡಿತರ ಪದ್ಧತಿಯನ್ನು ಅನುಸರಿಸುತ್ತದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ನಿಗದಿತ ಪಡಿತರ ಒದಗಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪಡಿತರ ಪಡೆಯುವ ಬಹುಸಂಖ್ಯಾತರು ರೈತರು ಹಾಗೂ ರೈತ ಕಾರ್ಮಿಕರು. ಅನಕ್ಷರತೆ ಮತ್ತು ಮುಗ್ಧತೆಯಿಂದಾಗಿ ರೈತ ಕಾರ್ಡುದಾರರು ಹಲವಾರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಒಂದು ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿದೆ.
೧೮೦೦ ೪೨೫ ೯೩೩೯ ಎಂಬುದು ಆ ದೂರವಾಣಿ. ದಿನದ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತರವರೆಗೆ ಕಾರ್ಯನಿರ್ವಹಿಸುತ್ತದೆ. ಸೀಮೆಎಣ್ಣೆ, ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ಪದಾರ್ಥಗಳ ವಿತರಣೆಯಲ್ಲಿ ಲೋಪದೋಷಗಳಿದ್ದರೆ, ಕಾರ್ಡಿಗೆ ನೀಡಬೇಕಾದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರೆ ಅಥವಾ ಹೆಚ್ಚು ಬೆಲೆ ವಸೂಲಿಸುತ್ತಿದ್ದರೆ, ತೂಕದಲ್ಲಿ ವಂಚನೆ ಇಲ್ಲವೇ ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ವಿತರಿಸದಿದ್ದರೆ, ದಾಸ್ತಾನು ಮುಗಿದಿದೆ ಎಂದು ಒಂದು ವಾರದ ನಂತರ ಬಂದವರಿಗೆ ಪಡಿತರ ಪದಾರ್ಥ ಕೊಡದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ದೂರಬಹುದು. ಈ ನ್ಯಾಯ ಬೆಲೆ ಅಂಗಡಿಗಳು ವಾರದ ರಜಾ ದಿನವಾದ ಮಂಗಳವಾರವನ್ನು ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ ೧೨ರವರೆಗೆ ಮತ್ತು ಮಧ್ಯಾಹ್ನ ನಾಲ್ಕರಿಂದ ರಾತ್ರಿ ಎಂಟರವರೆಗಿನ ವೇಳೆಯಲ್ಲಿ ಬಾಗಿಲು ತೆರೆಯದಿದ್ದರೂ ದೂರು ದಾಖಲಿಸಬಹುದು. ದೂರು ನೀಡುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಯಾವ ನ್ಯಾಯಬೆಲೆ ಅಂಗಡಿಯ ವಿರುದ್ಧ ದೂರು ಎಂಬ ವಿವರವನ್ನು ಕರೆ ಮಾಡಿದಾಗ ನೀಡಬೇಕಾಗುತ್ತದೆ. ದೂರುದಾರ ಇಚ್ಛಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.
ದೂರು ಸ್ವೀಕರಿಸಿದವರು ದೂರು ಸಂಖ್ಯೆಯನ್ನು ನೀಡಿರುತ್ತಾರೆ. ದೂರು ಕೊಟ್ಟ ಎರಡು ದಿನದ ನಂತರ ಅದೇ ನಂಬರ್‌ಗೆ ಕರೆ ಮಾಡಿ ಈ ದೂರುಸಂಖ್ಯೆಯನ್ನು ತಿಳಿಸಿದರೆ ತನಿಖೆ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸುತ್ತಾರೆ. ಒಂದೊಮ್ಮೆ ಇದಕ್ಕೂ ತೃಪ್ತಿ ಸಿಗದಿದ್ದರೆ ನಾವು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಕೆಟಿಂಗ್ ಫೆಡರೇಶನ್ ಕಟ್ಟಡ, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು ೫೬೦೦೫೨ಕ್ಕೆ ಲಿಖಿತ ದೂರು ಸಲ್ಲಿಸಬಹುದು.
ಸದ್ಯಕ್ಕೆ ಕೆಲವು ಅಡೆತಡೆಗಳಿವೆ. ಮಾರುಕಟ್ಟೆ ದರ ತಿಳಿಯುವ ಮತ್ತು ಹವಾಮಾನ ಅರಿಯುವ ಉಚಿತ ದೂರವಾಣಿ ಸೇರಿದಂತೆ ಹಲವು ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸಲು ಹಕ್ಕೋತ್ತಾಯ ಮಾಡಲೇಬೇಕು. ಪ್ರತಿ ರೈತ ಆಯಾ ಇಲಾಖೆಗಳಿಗೆ ಸರಿಪಡಿಸುವಂತೆ ಕಾರ್ಡ್ ಚಳುವಳಿ ಹಮ್ಮಿಕೊಂಡರೂ ಫಲ ನೀಡೀತು. ಇನ್ನು ರೈತ ಸಂಘಟನೆಗಳು ಈ ವಿಚಾರವನ್ನು ಆದ್ಯತೆಯ ಮೇಲೆ ತೆಗೆದುಕೊಂಡರಂತೂ ಅದು ಸ್ವಾಗತಾರ್ಹ ನಿಲುವು. ಇನ್ನೇನು ಹೇಳಲಾದೀತು?
-ಮಾವೆಂಸ
ಇಲ್ಲಿನ ಮಾಹಿತಿಗಳ ಬಗ್ಗೆ ಲೇಖಕನಿಂದಲೇ ವಿವರ ಬೇಕಿದ್ದರೆ ಸಂಜೆ ೮ರ ನಂತರ ಸಂಪರ್ಕಿಸಬಹುದು. ಫೋನ್-೦೮೧೮೩ ೨೩೬೦೬೮, ೨೯೬೫೪೩, ೯೮೮೬೪೦೭೫೯೨,
ಇ ಮೇಲ್- mavemsa@gmail.com

Friday, September 11, 2009

ಟೆರೆಸ್ ಕಿಚನ್ ಗಾರ್ಡನ್



ಬೆಂಗಳೂರಿನಲ್ಲಿ ರೋಗ ಬರಲು ಕಾರಣಗಳು ಹಲವು. ಒತ್ತಡದ ಜೀವನದಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು ಇದಕ್ಕೊಂದು ಕಾರಣ. ಮನೆಯ ಹೊರಗಡೆಯ ಆಹಾರ ಸೇವನೆಗೆ ಮೊರೆ ಹೋಗುವವರು ಬಹಳ ಮಂದಿ. ಮನೆಯಲ್ಲೇ ಅಡುಗೆ ಮಾಡಿ ತಿನ್ನುವವರಿಗೆ ಸಿಗುವ ತರಕಾರಿ `ತಾಜಾ' ಎನ್ನಲು ಸಾಧ್ಯವಿಲ್ಲ. ಅದು ರಾಸಾಯನಿಕ ಬಳಸಿ ಬೆಳೆದ ತರಕಾರಿಯೂ ಆಗಿರಬಹುದು. ಅದಕ್ಕಾಗಿ ಶುದ್ಧ ಮತ್ತು ಸಾವಯವ ತರಕಾರಿಯನ್ನು ತಿನ್ನಬಯಸುವ ಮಂದಿ ಸಾವಯವ ತರಕಾರಿ ಮಳಿಗೆಗಳನ್ನು ಆಯ್ದುಕೊಂಡರು. ಆದರೆ ಬೇಕಾದ ತರಕಾರಿಯೆಲ್ಲ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಕೆಲವರು ತಾವೇ ಕೈತೋಟ ಮಾಡಿಕೊಂಡು ತರಕಾರಿ ಬೆಳೆಯಲು ಪ್ರಾರಂಭಿಸಿದರು.

ಬೆಂಗಳೂರಿನಲ್ಲಿ ಕೈತೋಟ ಮಾಡಿಕೊಳ್ಳುವಷ್ಟು ಜಾಗ ಇರುವವರು ಬಹಳ ಕಡಿಮೆ ಮಂದಿ. ಜಾಗದ ಸಮಸ್ಯೆ ಕಂಡುಕೊಂಡ ಉಪಾಯ`ಟೆರೆಸ್ಕಿಚನ್ಗಾರ್ಡನ್‌'.

ಟೆರೆಸ್ಮೇಲೆ ಗಾರ್ಡನ್ಮಾಡುವ ಪದ್ಧತಿ ಹೊಸತೇನಲ್ಲ. ಆದರೆ ಕೇವಲ ತರಕಾರಿ ಬೆಳೆಸುವ ಕ್ರಮ ಹೊಸತು. ಟೆರೆಸ್ಕಿಚನ್ಗಾರ್ಡನ್ಮಾಡುವುದರಲ್ಲೂ ಕೆಲವಷ್ಟು ವಿಧಾನಗಳಿವೆ. ಕುಂಡದಲ್ಲಿ ಮಣ್ಣನ್ನು ಬಳಸಿ ಮಾಡುವಂಥದ್ದು ಒಂದು ಕ್ರಮ. ಆದರೆ ಇದರಿಂದ ತೂಕ ಹೆಚ್ಚಾಗಿ ಟೆರೆಸ್ಗೆ ತೊಂದರೆಯಾಗುವ ಸಾಧ್ಯತೆಯು ಇದೆ. ಅದಕ್ಕಾಗಿ ಹೊಸ ರೀತಿಯಲ್ಲಿ ತರಕಾರಿ ಬೆಳೆಸುವ ವಿಧಾನವನ್ನು ಪೂರ್ಣ ಆರ್ಗಾನಿಕ್ಎನ್ನುವ ಸಂಸ್ಥೆ ಪ್ರಾರಂಭಿಸಿದೆ.

ಸಂಸ್ಥೆಯ ಮುಖ್ಯಸ್ಥ ಟಿ. ಎಂ. ಮಲ್ಲೇಶ್ಅವರು ಮೂಲತಃ ಸಾಪ್ಟ್ವೇರ್ಇಂಜನಿಯರ್‌. ಎನಾದರೂ ಸಾಧನೆ ಮಾಡುವ ತುಮುಲದಿಂದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ನಂಜನಗೂಡು ಸಮೀಪ ಬಾಳೆ ತೋಟ ಮಾಡಿಕೊಂಡರು. ಸಂದರ್ಭದಲ್ಲಿ ಅವರಿಗೆ ಬಂದ ಆಲೋಚನೆಯೇ ಟೆರೆಸ್ಗಾರ್ಡನ್‌. ಮಣ್ಣು ಮತ್ತು ಕುಂಡದಿಂದ ಟೆರೆಸ್ಗೆ ಭಾರವಾಗಬಹುದೆಂದು ತಿಳಿದು ಅದನ್ನು ಬಹಳ ಕಡಿಮೆ ತೂಕ ಬರುವಂತಹ ವಸ್ತುಗಳನ್ನು ಬಳಸಿ ಮಾಡಲು ಪ್ರಾರಂಭಿಸಿದರು. ಅದು ಹೇಗೆ?

ಟರೆಸ್ಗಾರ್ಡನ್ಹೀಗಿರುತ್ತದೆ: ನೇರವಾಗಿ ಟೆರೆಸ್ಮೇಲೆ ಯಾವುದನ್ನೂ ಬೆಳೆಯುವ ಕ್ರಮ ಇಲ್ಲಿಲ್ಲ. ಒಂದು ಅಡಿ ಎತ್ತರ ಮತ್ತು ನಾಲ್ಕು x ನಾಲ್ಕು ಅಡಿ ಅಗಲದ ಕಡಿಮೆ ತೂಕದ ಮರದ ಬಾಕ್ಸ್ಗೆ ಪ್ಲಾಸ್ಟಿಕ್ನ್ನು ಮುಚ್ಚುತ್ತಾರೆ. ನಂತರ ಮಣ್ಣಿನ ಬದಲು ತೆಂಗಿನ ನಾರಿನ ಪುಡಿ ( ಕೊಕೊ ಪಿಟ್‌) ಬಳಸಲಾಗುತ್ತದೆ. ಇದರಲ್ಲಿ ತರಕಾರಿಯನ್ನು ಬೆಳೆಸಲಾಗುತ್ತದೆ.

ಒಂದು ಬಾಕ್ಸ್‌ 16 ಚದರ ಅಡಿ ಇರುತ್ತದೆ. ಇದರಲ್ಲಿ ಒಂದು ಚದರ ಅಡಿಯಲ್ಲಿ ಒಂದೊಂದು ಬಗೆಯ ತರಕಾರಿಯನ್ನು ಬೆಳೆಸಲಾಗುತ್ತದೆ. ಇದನ್ನು ತುಂಬಾ ಯೋಜನಾ ಬದ್ದವಾಗಿ ಮಾಡಲಾಗುತ್ತದೆ. ಟೆರಸ್ಗಾರ್ಡನ್ಮಾಡುವವರು ತಮಗೆ ಬೇಕಾದ ತರಕಾರಿಯ ಪಟ್ಟಿಯನ್ನು ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೇಕಾದ ತರಕಾರಿಗಳನ್ನು ನಾಟಿಮಾಡಲಾಗುತ್ತದೆ.

ಪದ್ಧತಿಯಲ್ಲಿ ಕೃಷಿ ಮಾಡುವಾಗ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡಲಾಗುವುದಿಲ್ಲ. ಸಂಪೂರ್ಣ ಸಾವಯವ ಪದ್ದತಿ. ಟ್ರೈಕೋಡರ್ಮಾ, ನಿಮ್ಕೇಕ್‌, ಹೊಂಗೆ ಹಿಂಡಿ, ಕಡ್ಲೆಕಾಯಿ ಹಿಂಡಿಯನ್ನು ಪೋಷಕಾಂಶಗಳಾಗಿ ಬಳಸುತ್ತಾರೆ. ತರಕಾರಿ ಬೆಳೆಗೆ ರೋಗ ಮತ್ತು ಕೀಟ ಬಂದರೆ ಬೆಳ್ಳುಳ್ಳಿ ರಸ, ಮೆಣಸಿನ ರಸವನ್ನು ಬಳಸಿ ನಿಯಂತ್ರಣಕ್ಕೆ ತರುತ್ತಾರೆ. ರೋಗ ನಿಯಂತ್ರಕ್ಕೆ ಬರದಿದ್ದರೆ ರೋಗ ಬಂದ ಗಿಡವನ್ನು ಕಿತ್ತು ಹಾಕಿ, ಅಲ್ಲಿ ಬೇರೆ ಗಿಡ ನಾಟಿ ಮಾಡಲಾಗುತ್ತದೆ. ನೀರಾವರಿಗಾಗಿ ಇನರ್ಡ್ರಿಫ್ವ್ಯವಸ್ಥೆಯನ್ನು ಮಾಡಿದ್ದಾರೆ. ಹೆಚ್ಚಿಗೆ ನೀರು ವ್ಯಯವಾಗುವುದಿಲ್ಲ. ಬೆಳಗಿನ ಅವಧಿಯಲ್ಲಿ ನೀರು ಬಿಡಬೇಕಾಗುತ್ತದೆ. ಹೀಗೆ ಮಾಡಿದಾಗ ತೇವಾಂಶ ಉಳಿಯುತ್ತದೆ.

ಟೆರೆಸ್ತರಕಾರಿ ತೋಟದಲ್ಲಿ ನಾಟಿ ಮಾಡಿದ 30 ದಿನಗಳಲ್ಲಿ ತರಕಾರಿ ಕೊಯ್ಲಿಗೆ ಬರುತ್ತದೆ. ಅಡುಗೆಗೆ ಫ್ರೆಶ್ತರಕಾರಿ ನಿತ್ಯವೂ ಸಿಗುವುದು ಟೆರೆಸ್ಗಾರ್ಡನ್ ವೈಶಿಷ್ಟ್ಯ.

ಶುದ್ಧ ಮತ್ತು ಫ್ರೆಶ್ತರಕಾರಿಯನ್ನು ನೇರವಾಗಿ ಅಡುಗೆ ಮನೆಗೆ ನೀಡಬೇಕು ಎನ್ನುವ ಕನಸನ್ನು ಕಂಡೆ. ಅದನ್ನು ರೀತಿಯಲ್ಲಿ ಸಾಕಾರ ಗೊಳಿಸುವ ಯತ್ನವನ್ನು ಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ಬಹಳಷ್ಟು ಜನ ಟೆರೆಸ್ಕಿಚನ್ಗಾರ್ಡನ್ಬಗ್ಗೆ ಆಸಕ್ತಿನ್ನು ತೋರಿಸಿದ್ದಾರೆ. ಕೆಲವರು ತಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡುತ್ತಿದ್ದಾರೆಎಂದು ಮಲ್ಲೇಶ್ಅವರು ಹೇಳುತ್ತಾರೆ.

ಈಗಾಗಲೇ ಟೆರೆಸ್ಕಿಚನ್ಗಾರ್ಡನ್ಮಾಡುತ್ತಿರುವ ಮುರುಗವೇಲ್ಅವರು `ಇದೊಂದು ಅನುಕೂಲಕರ ಕೃಷಿ. ನನಗೆ ಹಸಿರ ಮೇಲೆ ಪ್ರೀತಿ ಇತ್ತು. ಇಂತಹ ಕಾನ್ಸೆಪ್ಟ್ ತಿಳಿದಾಗ ನಾನು ನಮ್ಮ ಮನೆಯ ಮೇಲೆ ಕಿಚನ್ಗಾರ್ಡನ್ಮಾಡಿಕೊಂಡೆ. ತುಂಬಾ ಉಪಯೋಗವಿದೆ.ದಿನಾಲೂ ಫ್ರೆಶ್ತರಕಾರಿ ಸಿಗುತ್ತದೆ ಎನ್ನುತ್ತಾರೆ. ವಿಜಯಾ ಅವರು ಟೆರೆಸ್ಗಾರ್ಡನ್ಮಾಡಿಕೊಂಡು ತರಕಾರಿಯನ್ನು ನಿತ್ಯ ಬಳಸುತ್ತಿದ್ದಾರೆ.

ಅಂದ ಹಾಗೆ ಟೆರೇಸ್ಗಾರ್ಡನ್ಅನ್ನು 30 ಚದರ್ಅಡಿಯಿಂದ 80 ಚದರ ಅಡಿಯವರೆಗೆ ಮಾಡುತ್ತಿದ್ದಾರೆ. 80 ಚದರ ಅಡಿ ಕಿಚನ್ಗಾರ್ಡನ್ಮಾಡಲು 20. 000 ರೂಪಾಯಿ ವೆಚ್ಚ ತಗಲುತ್ತದೆ. 15 ದಿನಕ್ಕೊಮ್ಮೆ ಕಂಪನಿಯಿಂದ ಹೋಗಿ ತರಕಾರಿ ಗಿಡಗಳ ದೇಖರೇಖು ನೋಡಿಕೊಂಡು ಬರುತ್ತಾರೆ. ಟೆರೆಸ್ಗಾರ್ಡನ್ನಗರದಲ್ಲಿ ಒಂದು ಹೊಸ ಬೆಳವಣಿಗೆ ಇದರ ಬಗ್ಗೆ ಮಾಹಿತಿಗಾಗಿ: ಟಿ. ಎಂ. ಮಲ್ಲೇಶ್‌ 9972322922


-ನಾಗರಾಜ ಮತ್ತಿಗಾರ