ರಸಗೊಬ್ಬರ ಇಲ್ಲದೆ ಬೆಳೆ ಬೆಳೆಯುವುದು ಅಸಾಧ್ಯ ಎನ್ನುವ ಸ್ಥಿತಿಗೆ ಇಂದಿನ ರೈತರು ತುಲುಪಿದ್ದಾರೆ. ಹಸಿರು ಕ್ರಾಂತಿಯ ಪೂರ್ವದಲ್ಲಿ ರೈತರು ರಸಗೊಬ್ಬರವಿಲ್ಲದೆ ಸುಲಲಿತವಾಗಿ ಬೆಳೆ ಬೆಳೆಯುತ್ತಿದ್ದರು. ಉತ್ಪಾದನೆ ಹೆಚ್ಚು ಮಾಡಬೇಕೆಂಬ ಉತ್ಕಟ ಆಸೆಯಿಂದ ತಮ್ಮ ನೆಲ ಜ್ಞಾನವನ್ನು ಅವರು ಮರೆತಿದ್ದಾರೆಯೇ? ಉತ್ತರ ಅವರ ಆತ್ಮಸಾಕ್ಷಿಯೇ ಹೇಳಬೇಕು!
ಹಿಂದೆ ನಮ್ಮಲ್ಲಿ ಪೌಷ್ಠಿಕವಾದ ಬಳ್ಳಿ ಬೆಳೆಯನ್ನು ಮೊದಲು ಬೆಳೆದು ನಂತರ ಭತ್ತ, ರಾಗಿ ಮುಂತಾದವನ್ನು ಬೆಳೆಯುತ್ತಿದ್ದರು. ಇಂತಹ ಬಳ್ಳಿ ಬೆಳೆಗಳೂ ಭೂಮಿಯಲ್ಲಿ ತೇವಾಂಶ ಹಿಡಿದಿಡುವುದಲ್ಲದೇ ಮುಂದಿನ ಬೆಳೆಗೆ ಗೊಬ್ಬರವಾಗಿ ಬದಲಾಗುತ್ತಿತ್ತು. ಆದರೆ, ಈಗ ಅಂತಹ ಬೆಳೆಗಳ ಬಗ್ಗೆ ರೈತರು ನಿರ್ಲಕ್ಷಿಸಿದ್ದಾರೆ.
ಬಳ್ಳಿ ಬೆಳೆಯ ಬಗ್ಗೆ ಹೇಳಬೇಕಾದರೆ, ಬರಗಾಲದ ಅವಧಿಯಲ್ಲಿ ಅಡಿಕೆ ತೋಟವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯದ ಸ್ಥಿತಿ. ಮತ್ತೊಂದೆಡೆ ಭತ್ತವನ್ನು ಬೆಳೆಯಲೇ ಬೇಕಾದ ಪರಿಸ್ಥಿತಿ. ನಂತರ ಬಳ್ಳಿ ಬೆಳೆಗಳಿಗೆ ಮೊರೆ ಹೋಗಿ ಯಶ ಕಂಡ ರೈತರು ತುಂಬಾ ವಿರಳ. ಅಂತಹವರಲ್ಲಿ ಶಿಕಾರಿಪುರ ಚುರ್ಚಿಗುಂಡಿಯ ಬಿ.ಎನ್. ನಂದೀಶ್ ಅವರು ಒಬ್ಬರು. ಇವರು ವೆಲ್ವೆಟ್ ಬೀನ್ಸ್ ಬಳ್ಳಿಯನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ ಕಾಡುಬಳ್ಳಿಯಾದ ನಸಗುನ್ನಿ ಎನ್ನುವ ಬಳ್ಳಿ ಪ್ರಭೇದಕ್ಕೆ ಸೇರುತ್ತದೆ ವೆಲ್ವೆಟ್ ಬೀನ್ಸ್. ಇದೇ ಜಾತಿಗೆ ಸೇರುವ ಮತ್ತೊಂದು ಬಳ್ಳಿ ಮುಕೋನಾ. ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆ. ನಮ್ಮಲ್ಲಿರುವ ನಸುಗುನ್ನಿ ಬಳ್ಳಿಯನ್ನು ಮುಟ್ಟಿದರೆ ಅಥವಾ ತಾಗಿದರೆ ತುರಿಕೆ ಆರಂಭವಾಗುತ್ತದೆ. ಆದರೆ ಮುಕೋನಾ ಮತ್ತು ವೆಲ್ವೆಟ್ ಬೀನ್ಸ್ ಬಳ್ಳಿಗಳಿಗೆ ತುರಿಕೆ ಬರಿಸುವ ಗುಣವಿಲ್ಲ. ಇದೇ ಇದರ ವಿಶೇಷ.
ವೆಲ್ವೆಟ್ ಬೀನ್ಸ್ ಬಳ್ಳಿಯನ್ನು ಯಾವುದೇ ತರಹದ ತೋಟಗಳಲ್ಲಿ, ಭತ್ತ, ರಾಗಿ ಗದ್ದೆಗಳಲ್ಲಿ ಹಿಂಗಾರು ಬೆಳೆಯಾಗಿಯೂ ಬೆಳೆಯಬಹುದು. ಮುಕೋನಾವನ್ನು ಸಾಮಾನ್ಯವಾಗಿ ಮುಚ್ಚಲು ಬೆಳೆಯಾಗಿ ರಬ್ಬರ್ ತೋಟದಲ್ಲಿ ಬೆಳೆಯುತ್ತಾರೆ. ವೆಲ್ವೆಟ್ ಬೀನ್ಸ್ ಕೇವಲ ಮಣ್ಣು ಫಲವತ್ತು ಮಾಡುವುದು ಅಲ್ಲದೆ, ಆದಾಯ ತರುವ ಬೆಳೆ ಕೂಡ. ಇದನ್ನೊಂದು ಪರ್ಯಾಯ ಬೆಳೆಯನ್ನಾಗಿ ಮಾಡಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಕೊಡಿಸುವ ಪ್ರಯತ್ನವು ಈಚೇಗೆ ನಡೆಯುತ್ತಿದೆ. ಈ ಬಳ್ಳಿಯಲ್ಲಿ ಬಿಡುವ ಬಿನ್ಸ್ನಲ್ಲಿ ಔಷಧೀಯ ಗುಣವಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಇದರಲ್ಲಿ ಎಣ್ಣೆಯ ಅಂಶವಿರುವುದರಿಂದ ಎಣ್ಣೆ ಉತ್ಪಾದನೆಗೂ ಇದು ಸಹಕಾರಿ. ಇಷ್ಟೇ ಅಲ್ಲದೇ ಈ ಬಳ್ಳಿಯನ್ನು ಹಣದ ದೃಷ್ಠಿಯಿಂದ ಬೆಳೆಯದೇ ಹಾಗೇ ಬೆಳೆಸಿದರು ರೈತರಿಗೆ ಬೇರೆ ರೂಪದಲ್ಲಿ ಲಾಭವಂತೂ ಇದ್ದೇ ಇದೆ.
ರೈತರು ವೆಲ್ವೆಟ್ ಬೀನ್ಸ್ ಅನ್ನು ಬೆಳೆಯಬೇಕಾದರೆ ಇತರೆ ಬೀನ್ಸ್ಗಳನ್ನು ಬೆಳೆಯುವಾಗ ಅನುಸರಿಸುವ ಕೃಷಿ ಪದ್ಧತಿಯನ್ನು ಅನಿಸರಿಸಬೇಕಾದ ಅವಶ್ಯಕತೆ ಇಲ್ಲ. ಸುಮ್ಮನೆ ಈ ಬಳ್ಳಿಯ ಬೀಜಗಳನ್ನು ಬಿತ್ತಿದರೆ ಸಾಕು. ಬಳ್ಳಿ ಟೀಸಿಲು ಬರುವಷ್ಟು ಭೂಮಿ ತೇವಾಂಶವಿದ್ದರೆ ಸಾಕು. ಒಮ್ಮೆ ಬದುಕಿದರೆ ಒಂದು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲ! ಇದೊಂದು ನೆಲದಲ್ಲಿ ಹಬ್ಬುವ ಬಳ್ಳಿಯಾದರಿಂದ ವ್ಯಾಪಕವಾಗಿ ಹಬ್ಬುತ್ತದೆ. ಅಡಿಕೆ ಅಥವಾ ಬೇರೆ ಯಾವುದೇ ಬಹುವಾರ್ಷಿಕ ಬೆಳೆಗಳ ನಡುವೆ ಬೆಳೆದರೆ ಇತರೆ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆಯು ಇರುತ್ತದೆ. ಆದರೆ ಯೋಜನಾಬದ್ಧವಾಗಿ ಬೆಳೆದರೆ ತೊಡಕಾದಂತೆ ಬೆಳೆಸಬಹುದು. ಹಾಗೆ ಇದಕ್ಕೆ ನೀರಾವರಿ ಬೇಕೇ ಬೇಕು ಎನ್ನುವ ಆಗಿಲ್ಲ, ಇದರ ಅಗತ್ಯ ಕಡಿಮೆ. ಮೂಲ ಬೆಳೆಗಳಿಗೆ ಬೇಕಾದ ಸಾರಜನಕವನ್ನು ಭೂಮಿಗೆ ಒದಗಿಸುತ್ತದೆ. ಬೀನ್ಸ್ ಅನ್ನು ಕೊಯ್ದಾದ ಮೇಲೆ ಬಳ್ಳಿಗಳ ಮೇಲೆ ಉಳಿಮೆ ಮಾಡಿದರೆ ಅಲ್ಲಿಯೇ ಇದು ಗೊಬ್ಬರವಾಗಿ ಮಾರ್ಪಡುತ್ತದೆ. ಇದನ್ನು ಬೆಳೆಸುವುದರಿಂದ ಬೇಡದೆ ಹೋದ ಕಳೆಗಳು ನಾಶವಾಗುತ್ತದೆ. ಆಲ್ಲಿ ಜೈವಿಕ ವಾತವರಣವನ್ನು ಸೃಷ್ಟಿ ಮಾಡುತ್ತದೆ.
ವೆಲ್ವೆಟ್ ಬೀನ್ಸ್ ಉತ್ತಮ ಪಶು ಆಹಾರವೂ ಹೌದು. ಇದೊಂದು ದ್ವಿದಳ ಧಾನ್ಯವಾದರಿಂದ ಜಾನವಾರುಗಳಿಗೆ ಹೆಚ್ಚಿಗೆ ಪೌಷ್ಠಿಕಾಂಶ ಒದಗಿಸುತ್ತದೆ. ಒಣ ಮೇವಾಗಿ ಇದನ್ನು ಬಳಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಿಗೆ ಆಗುತ್ತದೆ. `ತೋಟ ಮತ್ತು ಹೊಲಗಳಲ್ಲಿ ವೆಲ್ವೆಟ್ ಬೀನ್ಸ್ ಬೆಳೆದಿದ್ದೇನೆ. ನಮ್ಮಲ್ಲಿ ಮಲೆನಾಡಿನಷ್ಟು ಸಮೃದ್ಧ ಮಣ್ಣು ಇಲ್ಲದಿರುವುದರಿಂದ ಇಂತಹ ಬೆಳೆಗಳನ್ನು ಬೆಳೆಸಿಯೇ ಮಣ್ಣು ಫಲವತ್ತು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಅಡಿಕೆ ತೋಟಗಳಿಗೆ ನಾನು ಗೊಬ್ಬರ ಹಾಕುವುದಿಲ್ಲ. ಹಸಿರು ಸಸ್ಯಗಳಿಗೆ ಅವುಗಳೇ ಬೇಕಾದ ಗೊಬ್ಬರ ಒದಗಿಸುತ್ತದೆ. ಇಂತಹ ಮುಚ್ಚಲು ಬಳ್ಳಿಯನ್ನು ಬೆಳೆಯುವುದರಿಂದ ರಸಗೊಬ್ಬರಕ್ಕೆ ಪರದಾಟ ನಡೆಸುವುದು ತಪ್ಪುತ್ತದೆ. ಬೆಳೆಯ ಇಳುವರಿಯಲ್ಲೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ' ಅನ್ನುತ್ತಾರೆ ನಂದೀಶ್. ಅವರ ಮಾತಿನಲ್ಲಿ ಸಾವಯವ ಕೃಷಿ ಮಾಡಿದ ಸಂತೃಪ್ತಿ ಇತ್ತು.
ಇನ್ನು ಮುಕೋನಾ, ಇದನ್ನು ರಬ್ಬರ್ ತೋಟದಲ್ಲಿ ಸಾರಜನಕ ಒದಗಿಸಿಕೊಳ್ಳುವುದಕ್ಕಾಗಿ ಬೆಳೆಯುತ್ತಾರೆ. ರಬ್ಬರ್ ಬೇರುಗಳು ಬಹಳ ವಿಸ್ತಾರವಾಗಿ ಹರಡಿಕೊಂಡಿರುವುದರಿಂದ ಈ ಬಳ್ಳಿಗಳನ್ನು ರಬ್ಬರ್ ಗಿಡಗಳ ಎರಡು ಸಾಲುಗಳ ಮಧ್ಯೆ ಬೆಳೆಸುತ್ತಾರೆ. ಇದರಲ್ಲಿ ಬೀನ್ಸ್ ಬಿಡುವ ಪ್ರಮಾಣ ಕಡಿಮೆ. ಉಳಿದಂತೆ ವಾಣಿಜ್ಯ ಮಹತ್ವ ಇದಕ್ಕೆ ಇಲ್ಲದಿದ್ದರೂ ವೆಲ್ವೆಟ್ ಬೀನ್ಸ್ನ ಪರಿಣಾಮವನ್ನೇ ಭೂಮಿಗೆ ನೀಡುತ್ತದೆ.
ವೆಲ್ವೆಟ್ ಬೀನ್ಸ್ ಕುರಿತು ಪತ್ರಕರ್ತ, ಕೃಷಿ ಬರಹಗಾರ ಗಾಣದಾಳು ಶ್ರೀಕಂಠ ಅವರು ವಿಸ್ತಾರವಾದ ಮಾಹಿತಿಯುಳ್ಳ ಪುಸ್ತಕ (ವೆಲ್ವೆಟ್ ಬೀನ್ಸ್)ವನ್ನು ಬರೆದಿದ್ದಾರೆ. ಈ ಬೆಳೆಯ ಕುರಿತು ಹೆಚ್ಚಿನ ಮಾಹಿತಿಗೆ ಭಾರತೀಯ ಭೂ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ರಾಜೇಂದ್ರ ಹೆಗಡೆ (94487897) ಅವರನ್ನು ಸಂಪರ್ಕಿಸಬಹುದು. ಬೀಜಕ್ಕಾಗಿ ಸಹಜ ಸಮೃದ್ಧ- 080-22715744/ 9880862058 ವಿಚಾರಿಸಬಹುದು.
ಹಿಂದೆ ನಮ್ಮಲ್ಲಿ ಪೌಷ್ಠಿಕವಾದ ಬಳ್ಳಿ ಬೆಳೆಯನ್ನು ಮೊದಲು ಬೆಳೆದು ನಂತರ ಭತ್ತ, ರಾಗಿ ಮುಂತಾದವನ್ನು ಬೆಳೆಯುತ್ತಿದ್ದರು. ಇಂತಹ ಬಳ್ಳಿ ಬೆಳೆಗಳೂ ಭೂಮಿಯಲ್ಲಿ ತೇವಾಂಶ ಹಿಡಿದಿಡುವುದಲ್ಲದೇ ಮುಂದಿನ ಬೆಳೆಗೆ ಗೊಬ್ಬರವಾಗಿ ಬದಲಾಗುತ್ತಿತ್ತು. ಆದರೆ, ಈಗ ಅಂತಹ ಬೆಳೆಗಳ ಬಗ್ಗೆ ರೈತರು ನಿರ್ಲಕ್ಷಿಸಿದ್ದಾರೆ.
ಬಳ್ಳಿ ಬೆಳೆಯ ಬಗ್ಗೆ ಹೇಳಬೇಕಾದರೆ, ಬರಗಾಲದ ಅವಧಿಯಲ್ಲಿ ಅಡಿಕೆ ತೋಟವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯದ ಸ್ಥಿತಿ. ಮತ್ತೊಂದೆಡೆ ಭತ್ತವನ್ನು ಬೆಳೆಯಲೇ ಬೇಕಾದ ಪರಿಸ್ಥಿತಿ. ನಂತರ ಬಳ್ಳಿ ಬೆಳೆಗಳಿಗೆ ಮೊರೆ ಹೋಗಿ ಯಶ ಕಂಡ ರೈತರು ತುಂಬಾ ವಿರಳ. ಅಂತಹವರಲ್ಲಿ ಶಿಕಾರಿಪುರ ಚುರ್ಚಿಗುಂಡಿಯ ಬಿ.ಎನ್. ನಂದೀಶ್ ಅವರು ಒಬ್ಬರು. ಇವರು ವೆಲ್ವೆಟ್ ಬೀನ್ಸ್ ಬಳ್ಳಿಯನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ ಕಾಡುಬಳ್ಳಿಯಾದ ನಸಗುನ್ನಿ ಎನ್ನುವ ಬಳ್ಳಿ ಪ್ರಭೇದಕ್ಕೆ ಸೇರುತ್ತದೆ ವೆಲ್ವೆಟ್ ಬೀನ್ಸ್. ಇದೇ ಜಾತಿಗೆ ಸೇರುವ ಮತ್ತೊಂದು ಬಳ್ಳಿ ಮುಕೋನಾ. ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆ. ನಮ್ಮಲ್ಲಿರುವ ನಸುಗುನ್ನಿ ಬಳ್ಳಿಯನ್ನು ಮುಟ್ಟಿದರೆ ಅಥವಾ ತಾಗಿದರೆ ತುರಿಕೆ ಆರಂಭವಾಗುತ್ತದೆ. ಆದರೆ ಮುಕೋನಾ ಮತ್ತು ವೆಲ್ವೆಟ್ ಬೀನ್ಸ್ ಬಳ್ಳಿಗಳಿಗೆ ತುರಿಕೆ ಬರಿಸುವ ಗುಣವಿಲ್ಲ. ಇದೇ ಇದರ ವಿಶೇಷ.
ವೆಲ್ವೆಟ್ ಬೀನ್ಸ್ ಬಳ್ಳಿಯನ್ನು ಯಾವುದೇ ತರಹದ ತೋಟಗಳಲ್ಲಿ, ಭತ್ತ, ರಾಗಿ ಗದ್ದೆಗಳಲ್ಲಿ ಹಿಂಗಾರು ಬೆಳೆಯಾಗಿಯೂ ಬೆಳೆಯಬಹುದು. ಮುಕೋನಾವನ್ನು ಸಾಮಾನ್ಯವಾಗಿ ಮುಚ್ಚಲು ಬೆಳೆಯಾಗಿ ರಬ್ಬರ್ ತೋಟದಲ್ಲಿ ಬೆಳೆಯುತ್ತಾರೆ. ವೆಲ್ವೆಟ್ ಬೀನ್ಸ್ ಕೇವಲ ಮಣ್ಣು ಫಲವತ್ತು ಮಾಡುವುದು ಅಲ್ಲದೆ, ಆದಾಯ ತರುವ ಬೆಳೆ ಕೂಡ. ಇದನ್ನೊಂದು ಪರ್ಯಾಯ ಬೆಳೆಯನ್ನಾಗಿ ಮಾಡಿ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಕೊಡಿಸುವ ಪ್ರಯತ್ನವು ಈಚೇಗೆ ನಡೆಯುತ್ತಿದೆ. ಈ ಬಳ್ಳಿಯಲ್ಲಿ ಬಿಡುವ ಬಿನ್ಸ್ನಲ್ಲಿ ಔಷಧೀಯ ಗುಣವಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಇದರಲ್ಲಿ ಎಣ್ಣೆಯ ಅಂಶವಿರುವುದರಿಂದ ಎಣ್ಣೆ ಉತ್ಪಾದನೆಗೂ ಇದು ಸಹಕಾರಿ. ಇಷ್ಟೇ ಅಲ್ಲದೇ ಈ ಬಳ್ಳಿಯನ್ನು ಹಣದ ದೃಷ್ಠಿಯಿಂದ ಬೆಳೆಯದೇ ಹಾಗೇ ಬೆಳೆಸಿದರು ರೈತರಿಗೆ ಬೇರೆ ರೂಪದಲ್ಲಿ ಲಾಭವಂತೂ ಇದ್ದೇ ಇದೆ.
ರೈತರು ವೆಲ್ವೆಟ್ ಬೀನ್ಸ್ ಅನ್ನು ಬೆಳೆಯಬೇಕಾದರೆ ಇತರೆ ಬೀನ್ಸ್ಗಳನ್ನು ಬೆಳೆಯುವಾಗ ಅನುಸರಿಸುವ ಕೃಷಿ ಪದ್ಧತಿಯನ್ನು ಅನಿಸರಿಸಬೇಕಾದ ಅವಶ್ಯಕತೆ ಇಲ್ಲ. ಸುಮ್ಮನೆ ಈ ಬಳ್ಳಿಯ ಬೀಜಗಳನ್ನು ಬಿತ್ತಿದರೆ ಸಾಕು. ಬಳ್ಳಿ ಟೀಸಿಲು ಬರುವಷ್ಟು ಭೂಮಿ ತೇವಾಂಶವಿದ್ದರೆ ಸಾಕು. ಒಮ್ಮೆ ಬದುಕಿದರೆ ಒಂದು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲ! ಇದೊಂದು ನೆಲದಲ್ಲಿ ಹಬ್ಬುವ ಬಳ್ಳಿಯಾದರಿಂದ ವ್ಯಾಪಕವಾಗಿ ಹಬ್ಬುತ್ತದೆ. ಅಡಿಕೆ ಅಥವಾ ಬೇರೆ ಯಾವುದೇ ಬಹುವಾರ್ಷಿಕ ಬೆಳೆಗಳ ನಡುವೆ ಬೆಳೆದರೆ ಇತರೆ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆಯು ಇರುತ್ತದೆ. ಆದರೆ ಯೋಜನಾಬದ್ಧವಾಗಿ ಬೆಳೆದರೆ ತೊಡಕಾದಂತೆ ಬೆಳೆಸಬಹುದು. ಹಾಗೆ ಇದಕ್ಕೆ ನೀರಾವರಿ ಬೇಕೇ ಬೇಕು ಎನ್ನುವ ಆಗಿಲ್ಲ, ಇದರ ಅಗತ್ಯ ಕಡಿಮೆ. ಮೂಲ ಬೆಳೆಗಳಿಗೆ ಬೇಕಾದ ಸಾರಜನಕವನ್ನು ಭೂಮಿಗೆ ಒದಗಿಸುತ್ತದೆ. ಬೀನ್ಸ್ ಅನ್ನು ಕೊಯ್ದಾದ ಮೇಲೆ ಬಳ್ಳಿಗಳ ಮೇಲೆ ಉಳಿಮೆ ಮಾಡಿದರೆ ಅಲ್ಲಿಯೇ ಇದು ಗೊಬ್ಬರವಾಗಿ ಮಾರ್ಪಡುತ್ತದೆ. ಇದನ್ನು ಬೆಳೆಸುವುದರಿಂದ ಬೇಡದೆ ಹೋದ ಕಳೆಗಳು ನಾಶವಾಗುತ್ತದೆ. ಆಲ್ಲಿ ಜೈವಿಕ ವಾತವರಣವನ್ನು ಸೃಷ್ಟಿ ಮಾಡುತ್ತದೆ.
ವೆಲ್ವೆಟ್ ಬೀನ್ಸ್ ಉತ್ತಮ ಪಶು ಆಹಾರವೂ ಹೌದು. ಇದೊಂದು ದ್ವಿದಳ ಧಾನ್ಯವಾದರಿಂದ ಜಾನವಾರುಗಳಿಗೆ ಹೆಚ್ಚಿಗೆ ಪೌಷ್ಠಿಕಾಂಶ ಒದಗಿಸುತ್ತದೆ. ಒಣ ಮೇವಾಗಿ ಇದನ್ನು ಬಳಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಿಗೆ ಆಗುತ್ತದೆ. `ತೋಟ ಮತ್ತು ಹೊಲಗಳಲ್ಲಿ ವೆಲ್ವೆಟ್ ಬೀನ್ಸ್ ಬೆಳೆದಿದ್ದೇನೆ. ನಮ್ಮಲ್ಲಿ ಮಲೆನಾಡಿನಷ್ಟು ಸಮೃದ್ಧ ಮಣ್ಣು ಇಲ್ಲದಿರುವುದರಿಂದ ಇಂತಹ ಬೆಳೆಗಳನ್ನು ಬೆಳೆಸಿಯೇ ಮಣ್ಣು ಫಲವತ್ತು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಅಡಿಕೆ ತೋಟಗಳಿಗೆ ನಾನು ಗೊಬ್ಬರ ಹಾಕುವುದಿಲ್ಲ. ಹಸಿರು ಸಸ್ಯಗಳಿಗೆ ಅವುಗಳೇ ಬೇಕಾದ ಗೊಬ್ಬರ ಒದಗಿಸುತ್ತದೆ. ಇಂತಹ ಮುಚ್ಚಲು ಬಳ್ಳಿಯನ್ನು ಬೆಳೆಯುವುದರಿಂದ ರಸಗೊಬ್ಬರಕ್ಕೆ ಪರದಾಟ ನಡೆಸುವುದು ತಪ್ಪುತ್ತದೆ. ಬೆಳೆಯ ಇಳುವರಿಯಲ್ಲೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ' ಅನ್ನುತ್ತಾರೆ ನಂದೀಶ್. ಅವರ ಮಾತಿನಲ್ಲಿ ಸಾವಯವ ಕೃಷಿ ಮಾಡಿದ ಸಂತೃಪ್ತಿ ಇತ್ತು.
ಇನ್ನು ಮುಕೋನಾ, ಇದನ್ನು ರಬ್ಬರ್ ತೋಟದಲ್ಲಿ ಸಾರಜನಕ ಒದಗಿಸಿಕೊಳ್ಳುವುದಕ್ಕಾಗಿ ಬೆಳೆಯುತ್ತಾರೆ. ರಬ್ಬರ್ ಬೇರುಗಳು ಬಹಳ ವಿಸ್ತಾರವಾಗಿ ಹರಡಿಕೊಂಡಿರುವುದರಿಂದ ಈ ಬಳ್ಳಿಗಳನ್ನು ರಬ್ಬರ್ ಗಿಡಗಳ ಎರಡು ಸಾಲುಗಳ ಮಧ್ಯೆ ಬೆಳೆಸುತ್ತಾರೆ. ಇದರಲ್ಲಿ ಬೀನ್ಸ್ ಬಿಡುವ ಪ್ರಮಾಣ ಕಡಿಮೆ. ಉಳಿದಂತೆ ವಾಣಿಜ್ಯ ಮಹತ್ವ ಇದಕ್ಕೆ ಇಲ್ಲದಿದ್ದರೂ ವೆಲ್ವೆಟ್ ಬೀನ್ಸ್ನ ಪರಿಣಾಮವನ್ನೇ ಭೂಮಿಗೆ ನೀಡುತ್ತದೆ.
ವೆಲ್ವೆಟ್ ಬೀನ್ಸ್ ಕುರಿತು ಪತ್ರಕರ್ತ, ಕೃಷಿ ಬರಹಗಾರ ಗಾಣದಾಳು ಶ್ರೀಕಂಠ ಅವರು ವಿಸ್ತಾರವಾದ ಮಾಹಿತಿಯುಳ್ಳ ಪುಸ್ತಕ (ವೆಲ್ವೆಟ್ ಬೀನ್ಸ್)ವನ್ನು ಬರೆದಿದ್ದಾರೆ. ಈ ಬೆಳೆಯ ಕುರಿತು ಹೆಚ್ಚಿನ ಮಾಹಿತಿಗೆ ಭಾರತೀಯ ಭೂ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ರಾಜೇಂದ್ರ ಹೆಗಡೆ (94487897) ಅವರನ್ನು ಸಂಪರ್ಕಿಸಬಹುದು. ಬೀಜಕ್ಕಾಗಿ ಸಹಜ ಸಮೃದ್ಧ- 080-22715744/ 9880862058 ವಿಚಾರಿಸಬಹುದು.
2 comments:
uttama prayatna. hechechu barahagalu haridu barali..
vinayaka kodsara
Appeal to Donate and Convey your Friends---4/5/2018 ----------------------------
Kindly help me to construct Management College near Bagalur Road Hosur.that to Donote me as your wish to deposit my SB A/c. 186710100098701 and IFS Code ANDB0001867 at Andhra Bank.Bagalur Road Hosur. @ Prabhakaran.MA.M.COM.PGPR.PGOM.Politicen ..Whatup 8105719697
Post a Comment