Wednesday, November 5, 2008

ಬಳ್ಳಿ ಭೂ ಸಾರ!


ರಸ­ಗೊ­ಬ್ಬರ ಇಲ್ಲದೆ ಬೆಳೆ ಬೆಳೆ­ಯು­ವುದು ಅಸಾಧ್ಯ ಎನ್ನುವ ಸ್ಥಿತಿಗೆ ಇಂದಿನ ರೈತರು ತುಲು­ಪಿ­ದ್ದಾರೆ. ಹಸಿರು ಕ್ರಾಂತಿಯ ಪೂರ್ವ­ದಲ್ಲಿ ರೈತರು ರಸ­ಗೊ­ಬ್ಬ­ರ­ವಿ­ಲ್ಲದೆ ಸುಲ­ಲಿ­ತ­ವಾಗಿ ಬೆಳೆ ಬೆಳೆ­ಯು­ತ್ತಿ­ದ್ದರು. ಉತ್ಪಾ­ದನೆ ಹೆಚ್ಚು ಮಾಡ­ಬೇ­ಕೆಂಬ ಉತ್ಕಟ ಆಸೆ­ಯಿಂದ ತಮ್ಮ ನೆಲ ಜ್ಞಾನ­ವನ್ನು ಅವರು ಮರೆ­ತಿ­ದ್ದಾ­ರೆಯೇ? ಉತ್ತರ ಅವರ ಆತ್ಮ­ಸಾ­ಕ್ಷಿಯೇ ಹೇಳ­ಬೇಕು!
ಹಿಂದೆ ನಮ್ಮಲ್ಲಿ ಪೌಷ್ಠಿ­ಕ­ವಾದ ಬಳ್ಳಿ ಬೆಳೆ­ಯನ್ನು ಮೊದಲು ಬೆಳೆದು ನಂತರ ಭತ್ತ, ರಾಗಿ ಮುಂತಾ­ದ­ವನ್ನು ಬೆಳೆ­ಯು­ತ್ತಿ­ದ್ದರು. ಇಂತಹ ಬಳ್ಳಿ ಬೆಳೆ­ಗಳೂ ಭೂಮಿ­ಯಲ್ಲಿ ತೇವಾಂಶ ಹಿಡಿ­ದಿ­ಡು­ವು­ದ­ಲ್ಲದೇ ಮುಂದಿನ ಬೆಳೆಗೆ ಗೊಬ್ಬ­ರ­ವಾಗಿ ಬದ­ಲಾ­ಗು­ತ್ತಿತ್ತು. ಆದರೆ, ಈಗ ಅಂತಹ ಬೆಳೆ­ಗಳ ಬಗ್ಗೆ ರೈತರು ನಿರ್ಲ­ಕ್ಷಿ­ಸಿ­ದ್ದಾರೆ.
ಬಳ್ಳಿ ಬೆಳೆಯ ಬಗ್ಗೆ ಹೇಳ­ಬೇ­ಕಾ­ದರೆ, ಬರ­ಗಾ­ಲದ ಅವ­ಧಿ­ಯಲ್ಲಿ ಅಡಿಕೆ ತೋಟ­ವನ್ನು ಉಳಿ­ಸಿ­ಕೊ­ಳ್ಳ­ಬೇ­ಕಾದ ಅನಿ­ವಾ­ರ್ಯದ ಸ್ಥಿತಿ. ಮತ್ತೊಂ­ದೆಡೆ ಭತ್ತ­ವನ್ನು ಬೆಳೆ­ಯಲೇ ಬೇಕಾದ ಪರಿ­ಸ್ಥಿತಿ. ನಂತರ ಬಳ್ಳಿ ಬೆಳೆ­ಗ­ಳಿಗೆ ಮೊರೆ ಹೋಗಿ ಯಶ ಕಂಡ ರೈತರು ತುಂಬಾ ವಿರಳ. ಅಂತ­ಹ­ವ­ರಲ್ಲಿ ಶಿಕಾ­ರಿ­ಪುರ ಚುರ್ಚಿ­ಗುಂ­ಡಿಯ ಬಿ.ಎನ್‌. ನಂದೀಶ್‌ ಅವರು ಒಬ್ಬರು. ಇವರು ವೆಲ್ವೆಟ್‌ ಬೀನ್ಸ್‌ ಬಳ್ಳಿ­ಯನ್ನು ಬೆಳೆದು ಇತ­ರ­ರಿಗೆ ಮಾದ­ರಿ­ಯಾ­ಗಿ­ದ್ದಾರೆ.
ಸಾಮಾ­ನ್ಯ­ವಾಗಿ ಕಾಡು­ಬ­ಳ್ಳಿ­ಯಾದ ನಸ­ಗುನ್ನಿ ಎನ್ನುವ ಬಳ್ಳಿ ಪ್ರಭೇ­ದಕ್ಕೆ ಸೇರು­ತ್ತದೆ ವೆಲ್ವೆಟ್‌ ಬೀನ್ಸ್‌. ಇದೇ ಜಾತಿಗೆ ಸೇರುವ ಮತ್ತೊಂದು ಬಳ್ಳಿ ಮುಕೋನಾ. ಇದು ಆಫ್ರಿಕಾ ಖಂಡ­ದಲ್ಲಿ ಹೆಚ್ಚಾಗಿ ಬೆಳೆ­ಯುವ ಬೆಳೆ. ನಮ್ಮ­ಲ್ಲಿ­ರುವ ನಸು­ಗುನ್ನಿ ಬಳ್ಳಿ­ಯನ್ನು ಮುಟ್ಟಿ­ದರೆ ಅಥವಾ ತಾಗಿ­ದರೆ ತುರಿಕೆ ಆರಂ­ಭ­ವಾ­ಗು­ತ್ತದೆ. ಆದರೆ ಮುಕೋನಾ ಮತ್ತು ವೆಲ್ವೆಟ್‌ ಬೀನ್ಸ್‌ ಬಳ್ಳಿ­ಗ­ಳಿಗೆ ತುರಿಕೆ ಬರಿ­ಸುವ ಗುಣ­ವಿಲ್ಲ. ಇದೇ ಇದರ ವಿಶೇಷ.
ವೆಲ್ವೆಟ್‌ ಬೀನ್ಸ್‌ ಬಳ್ಳಿ­ಯನ್ನು ಯಾವುದೇ ತರ­ಹದ ತೋಟ­ಗ­ಳಲ್ಲಿ, ಭತ್ತ, ರಾಗಿ ಗದ್ದೆ­ಗ­ಳಲ್ಲಿ ಹಿಂಗಾರು ಬೆಳೆ­ಯಾ­ಗಿಯೂ ಬೆಳೆ­ಯ­ಬ­ಹುದು. ಮುಕೋ­ನಾ­ವನ್ನು ಸಾಮಾ­ನ್ಯ­ವಾಗಿ ಮುಚ್ಚಲು ಬೆಳೆ­ಯಾಗಿ ರಬ್ಬರ್‌ ತೋಟ­ದಲ್ಲಿ ಬೆಳೆ­ಯು­ತ್ತಾರೆ. ವೆಲ್ವೆಟ್‌ ಬೀನ್ಸ್‌ ಕೇವಲ ಮಣ್ಣು ಫಲ­ವತ್ತು ಮಾಡು­ವುದು ಅಲ್ಲದೆ, ಆದಾಯ ತರುವ ಬೆಳೆ ಕೂಡ. ಇದ­ನ್ನೊಂದು ಪರ್ಯಾಯ ಬೆಳೆ­ಯ­ನ್ನಾಗಿ ಮಾಡಿ ಮಾರು­ಕ­ಟ್ಟೆ­ಯಲ್ಲಿ ಸೂಕ್ತ ಬೆಲೆ ಕೊಡಿ­ಸುವ ಪ್ರಯ­ತ್ನವು ಈಚೇಗೆ ನಡೆ­ಯು­ತ್ತಿದೆ. ಈ ಬಳ್ಳಿ­ಯಲ್ಲಿ ಬಿಡುವ ಬಿನ್ಸ್‌­ನಲ್ಲಿ ಔಷ­ಧೀಯ ಗುಣ­ವಿ­ರು­ವುದು ಅಧ್ಯ­ಯ­ನ­ದಿಂದ ತಿಳಿ­ದು­ಬಂ­ದಿದೆ. ಇದ­ರಲ್ಲಿ ಎಣ್ಣೆಯ ಅಂಶ­ವಿ­ರು­ವು­ದ­ರಿಂದ ಎಣ್ಣೆ ಉತ್ಪಾ­ದ­ನೆಗೂ ಇದು ಸಹ­ಕಾರಿ. ಇಷ್ಟೇ ಅಲ್ಲದೇ ಈ ಬಳ್ಳಿ­ಯನ್ನು ಹಣದ ದೃಷ್ಠಿ­ಯಿಂದ ಬೆಳೆ­ಯದೇ ಹಾಗೇ ಬೆಳೆ­ಸಿ­ದರು ರೈತ­ರಿಗೆ ಬೇರೆ ರೂಪ­ದಲ್ಲಿ ಲಾಭ­ವಂತೂ ಇದ್ದೇ ಇದೆ.
ರೈತರು ವೆಲ್ವೆಟ್‌ ಬೀನ್ಸ್‌ ಅನ್ನು ಬೆಳೆ­ಯ­ಬೇ­ಕಾ­ದರೆ ಇತರೆ ಬೀನ್ಸ್‌­ಗ­ಳನ್ನು ಬೆಳೆ­ಯು­ವಾಗ ಅನು­ಸ­ರಿ­ಸುವ ಕೃಷಿ ಪದ್ಧ­ತಿ­ಯನ್ನು ಅನಿ­ಸ­ರಿ­ಸ­ಬೇ­ಕಾದ ಅವ­ಶ್ಯ­ಕತೆ ಇಲ್ಲ. ಸುಮ್ಮನೆ ಈ ಬಳ್ಳಿಯ ಬೀಜ­ಗ­ಳನ್ನು ಬಿತ್ತಿ­ದರೆ ಸಾಕು. ಬಳ್ಳಿ ಟೀಸಿಲು ಬರು­ವಷ್ಟು ಭೂಮಿ ತೇವಾಂ­ಶ­ವಿ­ದ್ದರೆ ಸಾಕು. ಒಮ್ಮೆ ಬದು­ಕಿ­ದರೆ ಒಂದು ವರ್ಷ­ದ­ವ­ರೆಗೆ ಯಾವುದೇ ಸಮಸ್ಯೆ ಇಲ್ಲ! ಇದೊಂದು ನೆಲ­ದಲ್ಲಿ ಹಬ್ಬುವ ಬಳ್ಳಿ­ಯಾ­ದ­ರಿಂದ ವ್ಯಾಪ­ಕ­ವಾಗಿ ಹಬ್ಬು­ತ್ತದೆ. ಅಡಿಕೆ ಅಥವಾ ಬೇರೆ ಯಾವುದೇ ಬಹು­ವಾ­ರ್ಷಿಕ ಬೆಳೆ­ಗಳ ನಡುವೆ ಬೆಳೆ­ದರೆ ಇತರೆ ಕೆಲ­ಸ­ಗ­ಳಿಗೆ ತೊಂದ­ರೆ­ಯಾ­ಗುವ ಸಾಧ್ಯ­ತೆಯು ಇರು­ತ್ತದೆ. ಆದರೆ ಯೋಜ­ನಾ­ಬ­ದ್ಧ­ವಾಗಿ ಬೆಳೆ­ದರೆ ತೊಡ­ಕಾ­ದಂತೆ ಬೆಳೆ­ಸ­ಬ­ಹುದು. ಹಾಗೆ ಇದಕ್ಕೆ ನೀರಾ­ವರಿ ಬೇಕೇ ಬೇಕು ಎನ್ನುವ ಆಗಿಲ್ಲ, ಇದರ ಅಗತ್ಯ ಕಡಿಮೆ. ಮೂಲ ಬೆಳೆ­ಗ­ಳಿಗೆ ಬೇಕಾದ ಸಾರ­ಜ­ನ­ಕ­ವನ್ನು ಭೂಮಿಗೆ ಒದ­ಗಿ­ಸು­ತ್ತದೆ. ಬೀನ್ಸ್‌ ಅನ್ನು ಕೊಯ್ದಾದ ಮೇಲೆ ಬಳ್ಳಿ­ಗಳ ಮೇಲೆ ಉಳಿಮೆ ಮಾಡಿ­ದರೆ ಅಲ್ಲಿಯೇ ಇದು ಗೊಬ್ಬ­ರ­ವಾಗಿ ಮಾರ್ಪ­ಡು­ತ್ತದೆ. ಇದನ್ನು ಬೆಳೆ­ಸು­ವು­ದ­ರಿಂದ ಬೇಡದೆ ಹೋದ ಕಳೆ­ಗಳು ನಾಶ­ವಾ­ಗು­ತ್ತದೆ. ಆಲ್ಲಿ ಜೈವಿಕ ವಾತ­ವ­ರ­ಣ­ವನ್ನು ಸೃಷ್ಟಿ ಮಾಡು­ತ್ತದೆ.
ವೆಲ್ವೆಟ್‌ ಬೀನ್ಸ್‌ ಉತ್ತಮ ಪಶು ಆಹಾ­ರವೂ ಹೌದು. ಇದೊಂದು ದ್ವಿದಳ ಧಾನ್ಯ­ವಾ­ದ­ರಿಂದ ಜಾನ­ವಾ­ರು­ಗ­ಳಿಗೆ ಹೆಚ್ಚಿಗೆ ಪೌಷ್ಠಿ­ಕಾಂಶ ಒದ­ಗಿ­ಸು­ತ್ತದೆ. ಒಣ ಮೇವಾಗಿ ಇದನ್ನು ಬಳ­ಸು­ವು­ದ­ರಿಂದ ಹಾಲಿನ ಉತ್ಪಾ­ದನೆ ಹೆಚ್ಚಿಗೆ ಆಗು­ತ್ತದೆ. `ತೋಟ ಮತ್ತು ಹೊಲ­ಗ­ಳಲ್ಲಿ ವೆಲ್ವೆಟ್‌ ಬೀನ್ಸ್‌ ಬೆಳೆ­ದಿ­ದ್ದೇನೆ. ನಮ್ಮಲ್ಲಿ ಮಲೆ­ನಾ­ಡಿ­ನಷ್ಟು ಸಮೃದ್ಧ ಮಣ್ಣು ಇಲ್ಲ­ದಿ­ರು­ವು­ದ­ರಿಂದ ಇಂತಹ ಬೆಳೆ­ಗ­ಳನ್ನು ಬೆಳೆ­ಸಿಯೇ ಮಣ್ಣು ಫಲ­ವತ್ತು ಮಾಡಿ­ಕೊ­ಳ್ಳ­ಬೇ­ಕಾದ ಸ್ಥಿತಿ ಇದೆ. ಅಡಿಕೆ ತೋಟ­ಗ­ಳಿಗೆ ನಾನು ಗೊಬ್ಬರ ಹಾಕು­ವು­ದಿಲ್ಲ. ಹಸಿರು ಸಸ್ಯ­ಗ­ಳಿಗೆ ಅವು­ಗಳೇ ಬೇಕಾದ ಗೊಬ್ಬರ ಒದ­ಗಿ­ಸು­ತ್ತದೆ. ಇಂತಹ ಮುಚ್ಚಲು ಬಳ್ಳಿ­ಯನ್ನು ಬೆಳೆ­ಯು­ವು­ದ­ರಿಂದ ರಸ­ಗೊ­ಬ್ಬ­ರಕ್ಕೆ ಪರ­ದಾಟ ನಡೆ­ಸು­ವುದು ತಪ್ಪು­ತ್ತದೆ. ಬೆಳೆಯ ಇಳು­ವ­ರಿ­ಯಲ್ಲೂ ಅಂತಹ ವ್ಯತ್ಯಾ­ಸ­ವೇನು ಆಗು­ವು­ದಿಲ್ಲ' ಅನ್ನು­ತ್ತಾರೆ ನಂದೀಶ್‌. ಅವರ ಮಾತಿ­ನಲ್ಲಿ ಸಾವ­ಯವ ಕೃಷಿ ಮಾಡಿದ ಸಂತೃಪ್ತಿ ಇತ್ತು.
ಇನ್ನು ಮುಕೋನಾ, ಇದನ್ನು ರಬ್ಬರ್‌ ತೋಟ­ದಲ್ಲಿ ಸಾರ­ಜ­ನಕ ಒದ­ಗಿ­ಸಿ­ಕೊ­ಳ್ಳು­ವು­ದ­ಕ್ಕಾಗಿ ಬೆಳೆ­ಯು­ತ್ತಾರೆ. ರಬ್ಬರ್‌ ಬೇರು­ಗಳು ಬಹಳ ವಿಸ್ತಾ­ರ­ವಾಗಿ ಹರ­ಡಿ­ಕೊಂ­ಡಿ­ರು­ವು­ದ­ರಿಂದ ಈ ಬಳ್ಳಿ­ಗ­ಳನ್ನು ರಬ್ಬರ್‌ ಗಿಡ­ಗಳ ಎರಡು ಸಾಲು­ಗಳ ಮಧ್ಯೆ ಬೆಳೆ­ಸು­ತ್ತಾರೆ. ಇದ­ರಲ್ಲಿ ಬೀನ್ಸ್‌ ಬಿಡುವ ಪ್ರಮಾಣ ಕಡಿಮೆ. ಉಳಿ­ದಂತೆ ವಾಣಿಜ್ಯ ಮಹತ್ವ ಇದಕ್ಕೆ ಇಲ್ಲ­ದಿ­ದ್ದರೂ ವೆಲ್ವೆಟ್‌ ಬೀನ್ಸ್‌ನ ಪರಿ­ಣಾ­ಮ­ವನ್ನೇ ಭೂಮಿಗೆ ನೀಡು­ತ್ತದೆ.
ವೆಲ್ವೆಟ್‌ ಬೀನ್ಸ್‌ ಕುರಿತು ಪತ್ರ­ಕರ್ತ, ಕೃಷಿ ಬರ­ಹ­ಗಾರ ಗಾಣ­ದಾಳು ಶ್ರೀಕಂಠ ಅವರು ವಿಸ್ತಾ­ರ­ವಾದ ಮಾಹಿ­ತಿ­ಯುಳ್ಳ ಪುಸ್ತಕ (ವೆ­ಲ್ವೆಟ್‌ ಬೀನ್ಸ್‌)ವನ್ನು ಬರೆ­ದಿ­ದ್ದಾರೆ. ಈ ಬೆಳೆಯ ಕುರಿತು ಹೆಚ್ಚಿನ ಮಾಹಿ­ತಿಗೆ ಭಾರ­ತೀಯ ಭೂ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ರಾಜೇಂದ್ರ ಹೆಗಡೆ (94487897) ಅವ­ರನ್ನು ಸಂಪ­ರ್ಕಿ­ಸ­ಬ­ಹುದು. ಬೀಜ­ಕ್ಕಾಗಿ ಸಹಜ ಸಮೃದ್ಧ- 080-22715744/ 9880862058 ವಿಚಾ­ರಿ­ಸ­ಬ­ಹುದು.

2 comments:

ವಿನಾಯಕ ಕೆ.ಎಸ್ said...

uttama prayatna. hechechu barahagalu haridu barali..
vinayaka kodsara

PRABHAKARAN said...

Appeal to Donate and Convey your Friends---4/5/2018 ----------------------------
Kindly help me to construct Management College near Bagalur Road Hosur.that to Donote me as your wish to deposit my SB A/c. 186710100098701 and IFS Code ANDB0001867 at Andhra Bank.Bagalur Road Hosur. @ Prabhakaran.MA.M.COM.PGPR.PGOM.Politicen ..Whatup 8105719697