
ಅವಿಭಕ್ತ ಕುಂಟುಂಬಗಳು ಕಣ್ಮರೆಯಾಗುತ್ತಿದ್ದಂತೆ ಕೃಷಿ ಕೆಲಸಗಳು ಕಷ್ಟಕರವಾಗತೊಡಗಿದೆ.
ಕುಟುಂಬಗಳು ಒಂದಾಗಿದ್ದಾಗ ರೈತಾಪಿ ಕೆಲಸಗಳನ್ನು ಎಲ್ಲಾ ಸದಸ್ಯರು ಹಂಚಿಕೊಳ್ಳುತ್ತಿದ್ದರು. ಕೆಲಸಗಳು ಸರಾಗವಾಗಿ ನಡೆಯುತ್ತಿದ್ದವು. ಆದರೆ ಈಗ ಹೇಳಿಕೇಳಿ ಒಬ್ಬಂಟಿ ಸಂಸಾರ, ಇನ್ನೆಲ್ಲಿಂದ ಸಾಗಬೇಕು ಕೃಷಿ ಕೆಲಸ ಕಾರ್ಯ. ಆದ್ದರಿಂದ ಇಂದು ಕಾಣಸಿಕೊಂಡಿದೆ ಕೃಷಿ ಕಾರ್ಮಿಕರ ಕೊರತೆ.
ಸದ್ಯ ಎಲ್ಲಾ ಕಡೆಯಲ್ಲೂ ಕೆಲಸಗಾರರ ಕೊರತೆಯ ತೀವ್ರತೆ ಎದ್ದುಕಾಣುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಹೆಚ್ಚು ಎನ್ನಬಹುದು. ಇಲ್ಲಿನ ಕೃಷಿಕರಿಗೆ ಮತ್ತೊಂದು ಸಮಸ್ಯೆಯೆಂದರೆ ಒಂದೇ ಕಡೆ ಜಮೀನು ಕೇಂದ್ರಿಕೃತ ವಾಗಿರದೆ ಇರುವುದು. ಒಂದು ಕಡೆ ನಾಲ್ಕು ಭರಣ ಅಡಿಕೆ ತೋಟವಿದ್ದರೆ, ಮತ್ತೊಂದೆಡೆ ಅರ್ಧ ಎಕರೆ ಗದ್ದೆ ಇರುತ್ತದೆ. ಮನೆಯವನೊಂದಿಗೆ ಒಬ್ಬ ಕೆಲಸಗಾರ ಇಲ್ಲದಿದ್ದರೂ ಯಾವ ಕೆಲಸವು ಆಗದಿರುವ ಸ್ಥಿತಿ. ಇದಕ್ಕಾಗಿ ರೈತರು ಕೈಗಾಡಿಗಳನ್ನು ಬಳಕೆಗೆ ತಂದು ಕೊಂಡಿದ್ದಾರೆ.
ಕೈಗಾಡಿಗಳು ಬಹಳಷ್ಟು ವರ್ಷದಿಂದ ಇದ್ದರೂ ಒಂದೆರಡು ಮಾದರಿಯಲ್ಲಿ ಮಾತ್ರ ಇದ್ದವು. ಈಗ ಅನೇಕ ಕೃಷಿಕರು ತಮ್ಮ ಬಳಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಕೈಗಾಡಿಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ. ಕೃಷಿಕರ ಮನಸ್ಥಿತಿಯನ್ನು ಅರಿತುಕೊಂಡ ಚಿಕ್ಕಮಗಳೂರಿನ ಕೊಪ್ಪದ ನರಸಿಂಹ ಬಂಡಾರಿ ವಿವಿಧ ನಮೂನೆಯ ಕೈಗಾಡಿಗಳನ್ನು ತಯಾರಿಸುವದರಲ್ಲಿ ಪ್ರವೀಣರು.
ಕೊಪ್ಪದಲ್ಲಿ ದುರ್ಗಾ ಎಂಜನಿಯರಿಂಗ್ ವರ್ಕ್ಸ್ ನಡೆಸುತ್ತಿರುವ ಬಂಡಾರಿ, ಕೃಷಿ ಉಪಯೋಗದ ವಸ್ತುಗಳನ್ನು ಹೆಚ್ಚು ಹೆಚ್ಚು ತಯಾರಿಸುತ್ತಿದ್ದರೆ. ಕೃಷಿ ಉಪಯೋಗಕ್ಕಾಗಿ ಸುಮಾರು ಎಂಟು ತರಹದ ಕೈಗಾಡಿಗಳನ್ನು ಇವರು ತಯಾರಿಸಿದ್ದಾರೆ. ಇದರಲ್ಲಿ ಒಂದು ಗಾಲಿಯ ಗಾಡಿಯಿಂದ ಹಿಡಿದು ನಾಲ್ಕು ಗಾಲಿಯವರೆಗೂ. ಒಂದೇ ಗಾಲಿಯ ಗಾಡಿಯನ್ನು ಎರಡು ತರಹದಲ್ಲಿ ತಯಾರಿಸಿದ್ದಾರೆ. ಒಂದು ಸೈಕಲ್ ಗಾಲಿಯಂತೆ ಕಡ್ಡಿಯನ್ನು ಹೊಂದಿದ್ದರೆ, ಮತ್ತೊಂದು ಟ್ಯೂಬ್ ರಹಿತ ಗಾಲಿಯದ್ದು. ಇದರಲ್ಲಿ ಐದಾರು ಬಗೆಯವು ಇವೆ. 30 ಕಿಲೋ ಬಾರದಿಂದ 60 ಕಿಲೋ ತೂಕದವರೆಗಿನ ಸಾಮಗ್ರಿಯನ್ನು ಸಲೀಸಾಗಿ ಸಾಗಿಸಬಹುದು. ಹಾಗೆಯೇ ನೆಲಕ್ಕೆ ಇಡುವಲ್ಲಿ ಸ್ಟ್ಯಾಂಡ್ ಬದಲು ಎರಡು ಚಿಕ್ಕ ಚಿಕ್ಕ ಗಾಲಿಗಳನ್ನು ಜೋಡಿಸಿದ್ದಾರೆ. ಸಮತಟ್ಟಾದ ಜಾಗದಲ್ಲಿ ಮೂರು ಗಾಲಿಗಳನ್ನು ಬಳಸಿಕೊಳ್ಳುವ ಅವಕಾಶ ಈ ಗಾಡಿಗಿದೆ.
ಮೂರು ಮತ್ತು ನಾಲ್ಕು ಗಾಲಿಯ ಗಾಡಿಗಳನ್ನು ಬಂಡಾರಿ ತಯಾರಿಸಿದ್ದಾರೆ. ಇದರಲ್ಲಿ ಐದರಿಂದ ಎಂಟು ಕ್ವಿಂಟಾಲ್ವರೆಗೆ ಸಾಗಿಸಬಹುದು. ತಯಾರಿಸಿದ ಎಲ್ಲಾ ಗಾಡಿಗಳ ತೂಕ ಕಡಿಮೆ, ಆದರೆ ಹೆಚ್ಚಿಗೆ ತೂಕವನ್ನು ಹೊರಲು ಸಮರ್ಥ. ಹಾಗೆಯೇ ಗೂಡಿನ ತರಹದ ಕೈಗಾಡಿಗಳನ್ನು ಮಾಡಿದ್ದಾರೆ. ಇದರಲ್ಲಿ ಸಗಣಿ, ಗೊಬ್ಬರವನ್ನು ಸಾಗಿಸಲು ಅನುಕೂಲವಾಗುತ್ತದೆ. `ನಾನೊಬ್ಬ ಮೆಕ್ಯಾನಿಕ್. ನನ್ನ ಕೆಲಸವೇ ಕೃಷಿ ಉಪಕಣಗಳ ರಿಪೇರಿ. ಇದರಿಂದಾಗಿ ಕೃಷಿಕರ ಒಡನಾಟ. ಅವರು ಎದುರಿಸುತ್ತಿರುವ ಕಾರ್ಮಿಕರ ಸಮಸ್ಯೆಯನ್ನು ಗಮನಿಸಿದ್ದೇನೆ. ಹಲವು ಜನ ರೈತಾಪಿ ಮಿತ್ರರು ಗಾಡಿಗಳನ್ನು ತಯಾರಿಸಿ ಕೊಡುವಂತೆ ವಿನಂತಿ ಮಾಡಿದರು. ಗಾಡಿಗಳ ವಿನ್ಯಾಸಕ್ಕಾಗಿ ಸಲಹೆ ನೀಡಿದರು. ಈಗ ನಾನೇ ಅವರಿಗೆ ಯಾವ ರೀತಿಯ ಗಾಡಿಗಳು ಉಪಯೋಗವಾಗಬಹುದೆಂದು ತಿಳಿದು ತಯಾರಿಸುತ್ತಿದ್ದೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಂಡಾರಿ.
ಉತ್ತರಕನ್ನಡ ಹೊನ್ನಜ್ಜಿ ಮಂಜುನಾಥ್ ಹೆಗಡೆ ಅವರು ಹುಬ್ಬಳ್ಳಿಯಿಂದ ನೀರು ಸಾಗಿಸುವ ಗಾಡಿಯನ್ನು ತಂದು ಅದನ್ನು ತಮ್ಮ ಕೃಷಿ ಉಪಯೋಗಕ್ಕಾಗಿ ಬಳಸುತ್ತಿದ್ದಾರೆ. ಸಿದ್ದಾಪುರ ಗೋಡ್ವೆಮನೆ ಭಟ್ಟರ ಕುಟುಂಬದವರು ಸುಮಾರು ಇಪ್ಪತ್ತು ವರ್ಷದಿಂದ ಕೈಗಾಡಿಯನ್ನು ಬಳಸುತ್ತಿದ್ದಾರೆ. ಯಜಡಿ ಟೈಯರ್, ಹಾಗೂ ಕಬ್ಬಿಣದ ಪಟ್ಟಿಗಳನ್ನು ಬಳಸಿ ಗಾಡಿ ತಯಾರಿಸಿಕೊಂಡಿದ್ದಾರೆ. ಇದರಲ್ಲಿ ಹುಲ್ಲು, ದರಕುಗಳನ್ನು ಸಾಗಿಸುತ್ತಾರೆ. `ನಾಲ್ಕು ಜನ ಹೊರುವ ತಲೆ ಹೊರೆಯನ್ನು ಒಮ್ಮೆಲೆ ಗಾಡಿಯಲ್ಲಿ ತರಬಹುದು. ಇದರಿಂದ ಕೂಲಿ ಉಳಿತಾಯವಾಗುತ್ತದೆ ' ಎನ್ನುವುದು ಭಟ್ಟರ ಕುಟುಂಬದವರ ಮಾತು.
ಶಿವಮೊಗ್ಗ ಸಾಗರ ಹತ್ತಿರದ ಮಾವಿನಸರದ ಶ್ರೀಪಾದರಾವ್ ಅವರದ್ದು ಎರೆಗೊಬ್ಬರ ಉದ್ಯಮವಿದೆ. ಇರುವ ತೆಂಗಿನ ತೋಟವು ದೂರದಲ್ಲಿದೆ. ತೆಂಗಿನ ಮಧ್ಯೆ ಜಾನುವಾರುಗಳಿಗಾಗಿ ಹುಲ್ಲನ್ನು ಬೆಳೆಸುತ್ತಿದ್ದಾರೆ. ಹುಲ್ಲನ್ನು ಪ್ರತಿದಿನ ತರಬೇಕು. ಒಂದು ದಿನ ಕೆಲಸದವರು ಕೈಕೊಟ್ಟರು ತೊಂದರೆ. ಅದಕ್ಕಾಗಿ ಇವರು ಮೂರು ಗಾಲಿಯ ಕೈಗಾಡಿಯನ್ನು ಬಳಸುತ್ತಿದ್ದಾರೆ. ಗಟ್ಟುಮುಟ್ಟಾದ ಕಬ್ಬಿಣದ ರಾಡ್ಗಳನ್ನು ಈ ಗಾಡಿಗೆ ಬಳಸಿದ್ದರೆ, ಟ್ಯೂಬ್ ಲೆಸ್ ಟೈಯರ್ ಇದಕ್ಕಿದೆ. ಈ ಗಟಡಿಯನ್ನು ಇವರೇ ವಿನ್ಯಾಸ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ.
ಪಕ್ಕದ ಮನೆಯ ರಾಘವೇಂದ್ರ ಇದೇ ಮಾದರಿ ಗಾಡಿ ಬಳಸುತ್ತಿದ್ದಾರೆ. ಆದರೆ ಇದರ ಹೊರ ವಿನ್ಯಾಸ ಸ್ವಲ್ಪ ವ್ಯತ್ಯಾಸವಿದೆ. ಮಣ್ಣು ಕಲ್ಲು, ಚೀಲ, ಅಡಿಕೆಗೊನೆ ಎಲ್ಲವನ್ನು ಹೇರಬಹುದು. ಇದರ ಕ್ಯಾರಿಯರ್ ಮತ್ರ ಗೂಟ್ಸ್ ರಿಕ್ಷಾದಂತೆ ಇದೆ. ಈ ರೀತಿ ಕ್ಯಾರಿಯರ್ ಇರುವುದರಿಂದ ಮಣ್ಣು, ಕಲ್ಲು, ಅಡಿಕೆ ತುಂಬಿದರು ಆರಾಮಾಗಿ ಸಾಗಿಸಬಹುದು. `ಶ್ರೀಪಾದಣ್ಣ ನಾನು ಒಬ್ಬನೇ ಮೆಕ್ಯಾನಿಕ್ ಹತ್ತಿರ ಗಾಡಿ ರೆಡಿ ಮಾಡಿಸಿದ್ದೇವೆ. ನನ್ನದು ಸ್ವಲ್ಪ ಚಿಕ್ಕ ಗಾಡಿ. ನನ್ನ ತೋಟ ಅರ್ಧ ಕಿಲೋ ಮೀಟರ್ ದೂರದಲ್ಲಿದೆ. ಅಡಿಕೆಗೊನೆ ಸಾಗಾಟಕ್ಕೆ ತುಂಬ ತೊಂದರೆಯಾಗುತ್ತಿತ್ತು. ಆದರೆ ಈಗ ಮಾತ್ರ ಒಬ್ಬ ಕೂಲಿಯಾಳು ಇದ್ದರೆ ನೂರುಗೊನೆಯನ್ನು ಆರಾಮದಲ್ಲಿ ಇಬ್ಬರೇ ಸಾಗಿಸಬಹುದು. ಮಣ್ಣು ತುಂಬಲಿಕ್ಕೆ ಹೆಚ್ಚಿಗೆ ಆಳು ಬೇಕಾಗುತ್ತಿತ್ತು. ಈಗ ತೊಂದರೆಯಿಲ್ಲ' ಎನ್ನುವುದು ರಾಘವೇಂದ್ರ ಅವರ ಅಭಿಪ್ರಾಯ.
ಕೃಷಿ ಕೆಲಸಗಾರರ ತೊಂದರೆ ಹೆಚ್ಚು ಹೆಚ್ಚು ಕೃಷಿ ಸಾಮಗ್ರಿಗಳನ್ನು ಅನುಶೋಧನೆ ಮಾಡಲು ಸಹಕಾರಿಯಾಗುತ್ತಿದೆ. ಇದರಲ್ಲಿ ರೈತರು ಬಳಕೆ ಮಾಡಲ್ಪಡುತ್ತಿರುವ ಕೈಗಾಡಿಗಳು ನವ ನವೀನವಾಗಿ ಮಾರ್ಪಾಡುಗೊಂಡು ಬಳಕೆ ಮಾಡುತ್ತಿರುವುದು ಕಾರ್ಮಿಕರ ಕೊರತೆ ನೀಗಿಸುತ್ತಿವೆ. ಜತೆಗೆ ಹಣ ಕೂಡ ಉಳಿತಾಯವಾಗುತ್ತಿದೆ.
ನಾಗರಾಜ ಮತ್ತಿಗಾರ
ಕುಟುಂಬಗಳು ಒಂದಾಗಿದ್ದಾಗ ರೈತಾಪಿ ಕೆಲಸಗಳನ್ನು ಎಲ್ಲಾ ಸದಸ್ಯರು ಹಂಚಿಕೊಳ್ಳುತ್ತಿದ್ದರು. ಕೆಲಸಗಳು ಸರಾಗವಾಗಿ ನಡೆಯುತ್ತಿದ್ದವು. ಆದರೆ ಈಗ ಹೇಳಿಕೇಳಿ ಒಬ್ಬಂಟಿ ಸಂಸಾರ, ಇನ್ನೆಲ್ಲಿಂದ ಸಾಗಬೇಕು ಕೃಷಿ ಕೆಲಸ ಕಾರ್ಯ. ಆದ್ದರಿಂದ ಇಂದು ಕಾಣಸಿಕೊಂಡಿದೆ ಕೃಷಿ ಕಾರ್ಮಿಕರ ಕೊರತೆ.
ಸದ್ಯ ಎಲ್ಲಾ ಕಡೆಯಲ್ಲೂ ಕೆಲಸಗಾರರ ಕೊರತೆಯ ತೀವ್ರತೆ ಎದ್ದುಕಾಣುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಹೆಚ್ಚು ಎನ್ನಬಹುದು. ಇಲ್ಲಿನ ಕೃಷಿಕರಿಗೆ ಮತ್ತೊಂದು ಸಮಸ್ಯೆಯೆಂದರೆ ಒಂದೇ ಕಡೆ ಜಮೀನು ಕೇಂದ್ರಿಕೃತ ವಾಗಿರದೆ ಇರುವುದು. ಒಂದು ಕಡೆ ನಾಲ್ಕು ಭರಣ ಅಡಿಕೆ ತೋಟವಿದ್ದರೆ, ಮತ್ತೊಂದೆಡೆ ಅರ್ಧ ಎಕರೆ ಗದ್ದೆ ಇರುತ್ತದೆ. ಮನೆಯವನೊಂದಿಗೆ ಒಬ್ಬ ಕೆಲಸಗಾರ ಇಲ್ಲದಿದ್ದರೂ ಯಾವ ಕೆಲಸವು ಆಗದಿರುವ ಸ್ಥಿತಿ. ಇದಕ್ಕಾಗಿ ರೈತರು ಕೈಗಾಡಿಗಳನ್ನು ಬಳಕೆಗೆ ತಂದು ಕೊಂಡಿದ್ದಾರೆ.
ಕೈಗಾಡಿಗಳು ಬಹಳಷ್ಟು ವರ್ಷದಿಂದ ಇದ್ದರೂ ಒಂದೆರಡು ಮಾದರಿಯಲ್ಲಿ ಮಾತ್ರ ಇದ್ದವು. ಈಗ ಅನೇಕ ಕೃಷಿಕರು ತಮ್ಮ ಬಳಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಕೈಗಾಡಿಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ. ಕೃಷಿಕರ ಮನಸ್ಥಿತಿಯನ್ನು ಅರಿತುಕೊಂಡ ಚಿಕ್ಕಮಗಳೂರಿನ ಕೊಪ್ಪದ ನರಸಿಂಹ ಬಂಡಾರಿ ವಿವಿಧ ನಮೂನೆಯ ಕೈಗಾಡಿಗಳನ್ನು ತಯಾರಿಸುವದರಲ್ಲಿ ಪ್ರವೀಣರು.
ಕೊಪ್ಪದಲ್ಲಿ ದುರ್ಗಾ ಎಂಜನಿಯರಿಂಗ್ ವರ್ಕ್ಸ್ ನಡೆಸುತ್ತಿರುವ ಬಂಡಾರಿ, ಕೃಷಿ ಉಪಯೋಗದ ವಸ್ತುಗಳನ್ನು ಹೆಚ್ಚು ಹೆಚ್ಚು ತಯಾರಿಸುತ್ತಿದ್ದರೆ. ಕೃಷಿ ಉಪಯೋಗಕ್ಕಾಗಿ ಸುಮಾರು ಎಂಟು ತರಹದ ಕೈಗಾಡಿಗಳನ್ನು ಇವರು ತಯಾರಿಸಿದ್ದಾರೆ. ಇದರಲ್ಲಿ ಒಂದು ಗಾಲಿಯ ಗಾಡಿಯಿಂದ ಹಿಡಿದು ನಾಲ್ಕು ಗಾಲಿಯವರೆಗೂ. ಒಂದೇ ಗಾಲಿಯ ಗಾಡಿಯನ್ನು ಎರಡು ತರಹದಲ್ಲಿ ತಯಾರಿಸಿದ್ದಾರೆ. ಒಂದು ಸೈಕಲ್ ಗಾಲಿಯಂತೆ ಕಡ್ಡಿಯನ್ನು ಹೊಂದಿದ್ದರೆ, ಮತ್ತೊಂದು ಟ್ಯೂಬ್ ರಹಿತ ಗಾಲಿಯದ್ದು. ಇದರಲ್ಲಿ ಐದಾರು ಬಗೆಯವು ಇವೆ. 30 ಕಿಲೋ ಬಾರದಿಂದ 60 ಕಿಲೋ ತೂಕದವರೆಗಿನ ಸಾಮಗ್ರಿಯನ್ನು ಸಲೀಸಾಗಿ ಸಾಗಿಸಬಹುದು. ಹಾಗೆಯೇ ನೆಲಕ್ಕೆ ಇಡುವಲ್ಲಿ ಸ್ಟ್ಯಾಂಡ್ ಬದಲು ಎರಡು ಚಿಕ್ಕ ಚಿಕ್ಕ ಗಾಲಿಗಳನ್ನು ಜೋಡಿಸಿದ್ದಾರೆ. ಸಮತಟ್ಟಾದ ಜಾಗದಲ್ಲಿ ಮೂರು ಗಾಲಿಗಳನ್ನು ಬಳಸಿಕೊಳ್ಳುವ ಅವಕಾಶ ಈ ಗಾಡಿಗಿದೆ.
ಮೂರು ಮತ್ತು ನಾಲ್ಕು ಗಾಲಿಯ ಗಾಡಿಗಳನ್ನು ಬಂಡಾರಿ ತಯಾರಿಸಿದ್ದಾರೆ. ಇದರಲ್ಲಿ ಐದರಿಂದ ಎಂಟು ಕ್ವಿಂಟಾಲ್ವರೆಗೆ ಸಾಗಿಸಬಹುದು. ತಯಾರಿಸಿದ ಎಲ್ಲಾ ಗಾಡಿಗಳ ತೂಕ ಕಡಿಮೆ, ಆದರೆ ಹೆಚ್ಚಿಗೆ ತೂಕವನ್ನು ಹೊರಲು ಸಮರ್ಥ. ಹಾಗೆಯೇ ಗೂಡಿನ ತರಹದ ಕೈಗಾಡಿಗಳನ್ನು ಮಾಡಿದ್ದಾರೆ. ಇದರಲ್ಲಿ ಸಗಣಿ, ಗೊಬ್ಬರವನ್ನು ಸಾಗಿಸಲು ಅನುಕೂಲವಾಗುತ್ತದೆ. `ನಾನೊಬ್ಬ ಮೆಕ್ಯಾನಿಕ್. ನನ್ನ ಕೆಲಸವೇ ಕೃಷಿ ಉಪಕಣಗಳ ರಿಪೇರಿ. ಇದರಿಂದಾಗಿ ಕೃಷಿಕರ ಒಡನಾಟ. ಅವರು ಎದುರಿಸುತ್ತಿರುವ ಕಾರ್ಮಿಕರ ಸಮಸ್ಯೆಯನ್ನು ಗಮನಿಸಿದ್ದೇನೆ. ಹಲವು ಜನ ರೈತಾಪಿ ಮಿತ್ರರು ಗಾಡಿಗಳನ್ನು ತಯಾರಿಸಿ ಕೊಡುವಂತೆ ವಿನಂತಿ ಮಾಡಿದರು. ಗಾಡಿಗಳ ವಿನ್ಯಾಸಕ್ಕಾಗಿ ಸಲಹೆ ನೀಡಿದರು. ಈಗ ನಾನೇ ಅವರಿಗೆ ಯಾವ ರೀತಿಯ ಗಾಡಿಗಳು ಉಪಯೋಗವಾಗಬಹುದೆಂದು ತಿಳಿದು ತಯಾರಿಸುತ್ತಿದ್ದೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಂಡಾರಿ.
ಉತ್ತರಕನ್ನಡ ಹೊನ್ನಜ್ಜಿ ಮಂಜುನಾಥ್ ಹೆಗಡೆ ಅವರು ಹುಬ್ಬಳ್ಳಿಯಿಂದ ನೀರು ಸಾಗಿಸುವ ಗಾಡಿಯನ್ನು ತಂದು ಅದನ್ನು ತಮ್ಮ ಕೃಷಿ ಉಪಯೋಗಕ್ಕಾಗಿ ಬಳಸುತ್ತಿದ್ದಾರೆ. ಸಿದ್ದಾಪುರ ಗೋಡ್ವೆಮನೆ ಭಟ್ಟರ ಕುಟುಂಬದವರು ಸುಮಾರು ಇಪ್ಪತ್ತು ವರ್ಷದಿಂದ ಕೈಗಾಡಿಯನ್ನು ಬಳಸುತ್ತಿದ್ದಾರೆ. ಯಜಡಿ ಟೈಯರ್, ಹಾಗೂ ಕಬ್ಬಿಣದ ಪಟ್ಟಿಗಳನ್ನು ಬಳಸಿ ಗಾಡಿ ತಯಾರಿಸಿಕೊಂಡಿದ್ದಾರೆ. ಇದರಲ್ಲಿ ಹುಲ್ಲು, ದರಕುಗಳನ್ನು ಸಾಗಿಸುತ್ತಾರೆ. `ನಾಲ್ಕು ಜನ ಹೊರುವ ತಲೆ ಹೊರೆಯನ್ನು ಒಮ್ಮೆಲೆ ಗಾಡಿಯಲ್ಲಿ ತರಬಹುದು. ಇದರಿಂದ ಕೂಲಿ ಉಳಿತಾಯವಾಗುತ್ತದೆ ' ಎನ್ನುವುದು ಭಟ್ಟರ ಕುಟುಂಬದವರ ಮಾತು.
ಶಿವಮೊಗ್ಗ ಸಾಗರ ಹತ್ತಿರದ ಮಾವಿನಸರದ ಶ್ರೀಪಾದರಾವ್ ಅವರದ್ದು ಎರೆಗೊಬ್ಬರ ಉದ್ಯಮವಿದೆ. ಇರುವ ತೆಂಗಿನ ತೋಟವು ದೂರದಲ್ಲಿದೆ. ತೆಂಗಿನ ಮಧ್ಯೆ ಜಾನುವಾರುಗಳಿಗಾಗಿ ಹುಲ್ಲನ್ನು ಬೆಳೆಸುತ್ತಿದ್ದಾರೆ. ಹುಲ್ಲನ್ನು ಪ್ರತಿದಿನ ತರಬೇಕು. ಒಂದು ದಿನ ಕೆಲಸದವರು ಕೈಕೊಟ್ಟರು ತೊಂದರೆ. ಅದಕ್ಕಾಗಿ ಇವರು ಮೂರು ಗಾಲಿಯ ಕೈಗಾಡಿಯನ್ನು ಬಳಸುತ್ತಿದ್ದಾರೆ. ಗಟ್ಟುಮುಟ್ಟಾದ ಕಬ್ಬಿಣದ ರಾಡ್ಗಳನ್ನು ಈ ಗಾಡಿಗೆ ಬಳಸಿದ್ದರೆ, ಟ್ಯೂಬ್ ಲೆಸ್ ಟೈಯರ್ ಇದಕ್ಕಿದೆ. ಈ ಗಟಡಿಯನ್ನು ಇವರೇ ವಿನ್ಯಾಸ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ.
ಪಕ್ಕದ ಮನೆಯ ರಾಘವೇಂದ್ರ ಇದೇ ಮಾದರಿ ಗಾಡಿ ಬಳಸುತ್ತಿದ್ದಾರೆ. ಆದರೆ ಇದರ ಹೊರ ವಿನ್ಯಾಸ ಸ್ವಲ್ಪ ವ್ಯತ್ಯಾಸವಿದೆ. ಮಣ್ಣು ಕಲ್ಲು, ಚೀಲ, ಅಡಿಕೆಗೊನೆ ಎಲ್ಲವನ್ನು ಹೇರಬಹುದು. ಇದರ ಕ್ಯಾರಿಯರ್ ಮತ್ರ ಗೂಟ್ಸ್ ರಿಕ್ಷಾದಂತೆ ಇದೆ. ಈ ರೀತಿ ಕ್ಯಾರಿಯರ್ ಇರುವುದರಿಂದ ಮಣ್ಣು, ಕಲ್ಲು, ಅಡಿಕೆ ತುಂಬಿದರು ಆರಾಮಾಗಿ ಸಾಗಿಸಬಹುದು. `ಶ್ರೀಪಾದಣ್ಣ ನಾನು ಒಬ್ಬನೇ ಮೆಕ್ಯಾನಿಕ್ ಹತ್ತಿರ ಗಾಡಿ ರೆಡಿ ಮಾಡಿಸಿದ್ದೇವೆ. ನನ್ನದು ಸ್ವಲ್ಪ ಚಿಕ್ಕ ಗಾಡಿ. ನನ್ನ ತೋಟ ಅರ್ಧ ಕಿಲೋ ಮೀಟರ್ ದೂರದಲ್ಲಿದೆ. ಅಡಿಕೆಗೊನೆ ಸಾಗಾಟಕ್ಕೆ ತುಂಬ ತೊಂದರೆಯಾಗುತ್ತಿತ್ತು. ಆದರೆ ಈಗ ಮಾತ್ರ ಒಬ್ಬ ಕೂಲಿಯಾಳು ಇದ್ದರೆ ನೂರುಗೊನೆಯನ್ನು ಆರಾಮದಲ್ಲಿ ಇಬ್ಬರೇ ಸಾಗಿಸಬಹುದು. ಮಣ್ಣು ತುಂಬಲಿಕ್ಕೆ ಹೆಚ್ಚಿಗೆ ಆಳು ಬೇಕಾಗುತ್ತಿತ್ತು. ಈಗ ತೊಂದರೆಯಿಲ್ಲ' ಎನ್ನುವುದು ರಾಘವೇಂದ್ರ ಅವರ ಅಭಿಪ್ರಾಯ.
ಕೃಷಿ ಕೆಲಸಗಾರರ ತೊಂದರೆ ಹೆಚ್ಚು ಹೆಚ್ಚು ಕೃಷಿ ಸಾಮಗ್ರಿಗಳನ್ನು ಅನುಶೋಧನೆ ಮಾಡಲು ಸಹಕಾರಿಯಾಗುತ್ತಿದೆ. ಇದರಲ್ಲಿ ರೈತರು ಬಳಕೆ ಮಾಡಲ್ಪಡುತ್ತಿರುವ ಕೈಗಾಡಿಗಳು ನವ ನವೀನವಾಗಿ ಮಾರ್ಪಾಡುಗೊಂಡು ಬಳಕೆ ಮಾಡುತ್ತಿರುವುದು ಕಾರ್ಮಿಕರ ಕೊರತೆ ನೀಗಿಸುತ್ತಿವೆ. ಜತೆಗೆ ಹಣ ಕೂಡ ಉಳಿತಾಯವಾಗುತ್ತಿದೆ.
ನಾಗರಾಜ ಮತ್ತಿಗಾರ
No comments:
Post a Comment