Saturday, November 15, 2008

ಕಾರ್ಮಿ­ಕರು `ಕೈ'ಕೊ­ಟ್ಟ­ರೇ­ನಂತೆ, ಗಾಡಿ­ಗ­ಳಿವೆ ನಮ್ಹತ್ರ...


ಅವಿ­ಭಕ್ತ ಕುಂಟುಂ­ಬ­ಗಳು ಕಣ್ಮ­ರೆ­ಯಾ­ಗು­ತ್ತಿ­ದ್ದಂತೆ ಕೃಷಿ ಕೆಲ­ಸ­ಗಳು ಕಷ್ಟ­ಕ­ರ­ವಾ­ಗ­ತೊ­ಡ­ಗಿದೆ.
ಕುಟುಂ­ಬ­ಗಳು ಒಂದಾ­ಗಿ­ದ್ದಾಗ ರೈತಾಪಿ ಕೆಲ­ಸ­ಗ­ಳನ್ನು ಎಲ್ಲಾ ಸದ­ಸ್ಯರು ಹಂಚಿ­ಕೊ­ಳ್ಳು­ತ್ತಿ­ದ್ದರು. ಕೆಲ­ಸ­ಗಳು ಸರಾ­ಗ­ವಾಗಿ ನಡೆ­ಯು­ತ್ತಿ­ದ್ದವು. ಆದರೆ ಈಗ ಹೇಳಿ­ಕೇಳಿ ಒಬ್ಬಂಟಿ ಸಂಸಾರ, ಇನ್ನೆ­ಲ್ಲಿಂದ ಸಾಗ­ಬೇಕು ಕೃಷಿ ಕೆಲಸ ಕಾರ್ಯ. ಆದ್ದ­ರಿಂದ ಇಂದು ಕಾಣ­ಸಿ­ಕೊಂ­ಡಿದೆ ಕೃಷಿ ಕಾರ್ಮಿ­ಕರ ಕೊರತೆ.
ಸದ್ಯ ಎಲ್ಲಾ ಕಡೆ­ಯಲ್ಲೂ ಕೆಲ­ಸ­ಗಾ­ರರ ಕೊರ­ತೆಯ ತೀವ್ರತೆ ಎದ್ದು­ಕಾ­ಣು­ತ್ತಿದೆ. ಅದ­ರಲ್ಲೂ ಮಲೆ­ನಾ­ಡಿ­ನಲ್ಲಿ ಹೆಚ್ಚು ಎನ್ನ­ಬ­ಹುದು. ಇಲ್ಲಿನ ಕೃಷಿ­ಕ­ರಿಗೆ ಮತ್ತೊಂದು ಸಮ­ಸ್ಯೆ­ಯೆಂ­ದರೆ ಒಂದೇ ಕಡೆ ಜಮೀನು ಕೇಂದ್ರಿ­ಕೃತ ವಾಗಿ­ರದೆ ಇರು­ವುದು. ಒಂದು ಕಡೆ ನಾಲ್ಕು ಭರಣ ಅಡಿಕೆ ತೋಟ­ವಿ­ದ್ದರೆ, ಮತ್ತೊಂ­ದೆಡೆ ಅರ್ಧ ಎಕರೆ ಗದ್ದೆ ಇರು­ತ್ತದೆ. ಮನೆ­ಯ­ವ­ನೊಂ­ದಿಗೆ ಒಬ್ಬ ಕೆಲ­ಸ­ಗಾರ ಇಲ್ಲ­ದಿ­ದ್ದರೂ ಯಾವ ಕೆಲ­ಸವು ಆಗ­ದಿ­ರುವ ಸ್ಥಿತಿ. ಇದ­ಕ್ಕಾಗಿ ರೈತರು ಕೈಗಾ­ಡಿ­ಗ­ಳನ್ನು ಬಳ­ಕೆಗೆ ತಂದು ಕೊಂಡಿ­ದ್ದಾರೆ.
ಕೈಗಾ­ಡಿ­ಗಳು ಬಹ­ಳಷ್ಟು ವರ್ಷ­ದಿಂದ ಇದ್ದರೂ ಒಂದೆ­ರಡು ಮಾದ­ರಿ­ಯಲ್ಲಿ ಮಾತ್ರ ಇದ್ದವು. ಈಗ ಅನೇಕ ಕೃಷಿ­ಕರು ತಮ್ಮ ಬಳಕೆ ಮತ್ತು ಅನು­ಕೂ­ಲಕ್ಕೆ ತಕ್ಕಂತೆ ಕೈಗಾ­ಡಿ­ಗ­ಳನ್ನು ತಯಾ­ರಿ­ಸಿ­ಕೊ­ಳ್ಳು­ತ್ತಿ­ದ್ದಾರೆ. ಕೃಷಿ­ಕರ ಮನ­ಸ್ಥಿ­ತಿ­ಯನ್ನು ಅರಿ­ತು­ಕೊಂಡ ಚಿಕ್ಕ­ಮ­ಗ­ಳೂ­ರಿನ ಕೊಪ್ಪದ ನರ­ಸಿಂಹ ಬಂಡಾರಿ ವಿವಿಧ ನಮೂ­ನೆಯ ಕೈಗಾ­ಡಿ­ಗ­ಳನ್ನು ತಯಾ­ರಿ­ಸು­ವ­ದ­ರಲ್ಲಿ ಪ್ರವೀ­ಣರು.
ಕೊಪ್ಪ­ದಲ್ಲಿ ದುರ್ಗಾ ಎಂಜ­ನಿ­ಯ­ರಿಂಗ್‌ ವರ್ಕ್ಸ್‌ ನಡೆ­ಸು­ತ್ತಿ­ರುವ ಬಂಡಾರಿ, ಕೃಷಿ ಉಪ­ಯೋ­ಗದ ವಸ್ತು­ಗ­ಳನ್ನು ಹೆಚ್ಚು ಹೆಚ್ಚು ತಯಾ­ರಿ­ಸು­ತ್ತಿ­ದ್ದರೆ. ಕೃಷಿ ಉಪ­ಯೋ­ಗ­ಕ್ಕಾಗಿ ಸುಮಾರು ಎಂಟು ತರ­ಹದ ಕೈಗಾ­ಡಿ­ಗ­ಳನ್ನು ಇವರು ತಯಾ­ರಿ­ಸಿ­ದ್ದಾರೆ. ಇದ­ರಲ್ಲಿ ಒಂದು ಗಾಲಿಯ ಗಾಡಿ­ಯಿಂದ ಹಿಡಿದು ನಾಲ್ಕು ಗಾಲಿ­ಯ­ವ­ರೆಗೂ. ಒಂದೇ ಗಾಲಿಯ ಗಾಡಿ­ಯನ್ನು ಎರಡು ತರ­ಹ­ದಲ್ಲಿ ತಯಾ­ರಿ­ಸಿ­ದ್ದಾರೆ. ಒಂದು ಸೈಕಲ್‌ ಗಾಲಿ­ಯಂತೆ ಕಡ್ಡಿ­ಯನ್ನು ಹೊಂದಿ­ದ್ದರೆ, ಮತ್ತೊಂದು ಟ್ಯೂಬ್‌ ರಹಿತ ಗಾಲಿ­ಯದ್ದು. ಇದ­ರಲ್ಲಿ ಐದಾರು ಬಗೆ­ಯವು ಇವೆ. 30 ಕಿಲೋ ಬಾರ­ದಿಂದ 60 ಕಿಲೋ ತೂಕ­ದ­ವ­ರೆ­ಗಿನ ಸಾಮ­ಗ್ರಿ­ಯನ್ನು ಸಲೀ­ಸಾಗಿ ಸಾಗಿ­ಸ­ಬ­ಹುದು. ಹಾಗೆಯೇ ನೆಲಕ್ಕೆ ಇಡು­ವಲ್ಲಿ ಸ್ಟ್ಯಾಂಡ್‌ ಬದಲು ಎರಡು ಚಿಕ್ಕ ಚಿಕ್ಕ ಗಾಲಿ­ಗ­ಳನ್ನು ಜೋಡಿ­ಸಿ­ದ್ದಾರೆ. ಸಮ­ತ­ಟ್ಟಾದ ಜಾಗ­ದಲ್ಲಿ ಮೂರು ಗಾಲಿ­ಗ­ಳನ್ನು ಬಳ­ಸಿ­ಕೊ­ಳ್ಳುವ ಅವ­ಕಾಶ ಈ ಗಾಡಿ­ಗಿದೆ.
ಮೂರು ಮತ್ತು ನಾಲ್ಕು ಗಾಲಿಯ ಗಾಡಿ­ಗ­ಳನ್ನು ಬಂಡಾರಿ ತಯಾ­ರಿ­ಸಿ­ದ್ದಾರೆ. ಇದ­ರಲ್ಲಿ ಐದ­ರಿಂದ ಎಂಟು ಕ್ವಿಂಟಾ­ಲ್‌­ವ­ರೆಗೆ ಸಾಗಿ­ಸ­ಬ­ಹುದು. ತಯಾ­ರಿ­ಸಿದ ಎಲ್ಲಾ ಗಾಡಿ­ಗಳ ತೂಕ ಕಡಿಮೆ, ಆದರೆ ಹೆಚ್ಚಿಗೆ ತೂಕ­ವನ್ನು ಹೊರಲು ಸಮರ್ಥ. ಹಾಗೆಯೇ ಗೂಡಿನ ತರ­ಹದ ಕೈಗಾ­ಡಿ­ಗ­ಳನ್ನು ಮಾಡಿ­ದ್ದಾರೆ. ಇದ­ರಲ್ಲಿ ಸಗಣಿ, ಗೊಬ್ಬ­ರ­ವನ್ನು ಸಾಗಿ­ಸಲು ಅನು­ಕೂ­ಲ­ವಾ­ಗು­ತ್ತದೆ. `ನಾ­ನೊಬ್ಬ ಮೆಕ್ಯಾ­ನಿಕ್‌. ನನ್ನ ಕೆಲ­ಸವೇ ಕೃಷಿ ಉಪ­ಕ­ಣ­ಗಳ ರಿಪೇರಿ. ಇದ­ರಿಂ­ದಾಗಿ ಕೃಷಿ­ಕರ ಒಡ­ನಾಟ. ಅವರು ಎದು­ರಿ­ಸು­ತ್ತಿ­ರುವ ಕಾರ್ಮಿ­ಕರ ಸಮ­ಸ್ಯೆ­ಯನ್ನು ಗಮ­ನಿ­ಸಿ­ದ್ದೇನೆ. ಹಲವು ಜನ ರೈತಾಪಿ ಮಿತ್ರರು ಗಾಡಿ­ಗ­ಳನ್ನು ತಯಾ­ರಿಸಿ ಕೊಡು­ವಂತೆ ವಿನಂತಿ ಮಾಡಿ­ದರು. ಗಾಡಿ­ಗಳ ವಿನ್ಯಾ­ಸ­ಕ್ಕಾಗಿ ಸಲಹೆ ನೀಡಿ­ದರು. ಈಗ ನಾನೇ ಅವ­ರಿಗೆ ಯಾವ ರೀತಿಯ ಗಾಡಿ­ಗಳು ಉಪ­ಯೋ­ಗ­ವಾ­ಗ­ಬ­ಹು­ದೆಂದು ತಿಳಿದು ತಯಾ­ರಿ­ಸು­ತ್ತಿ­ದ್ದೇನೆ' ಎಂದು ಹೆಮ್ಮೆ­ಯಿಂದ ಹೇಳಿ­ಕೊ­ಳ್ಳು­ತ್ತಾರೆ ಬಂಡಾರಿ.
ಉತ್ತ­ರ­ಕ­ನ್ನಡ ಹೊನ್ನಜ್ಜಿ ಮಂಜು­ನಾಥ್‌ ಹೆಗಡೆ ಅವರು ಹುಬ್ಬ­ಳ್ಳಿ­ಯಿಂದ ನೀರು ಸಾಗಿ­ಸುವ ಗಾಡಿ­ಯನ್ನು ತಂದು ಅದನ್ನು ತಮ್ಮ ಕೃಷಿ ಉಪ­ಯೋ­ಗ­ಕ್ಕಾಗಿ ಬಳ­ಸು­ತ್ತಿ­ದ್ದಾರೆ. ಸಿದ್ದಾ­ಪುರ ಗೋಡ್ವೆ­ಮನೆ ಭಟ್ಟರ ಕುಟುಂ­ಬ­ದ­ವರು ಸುಮಾರು ಇಪ್ಪತ್ತು ವರ್ಷ­ದಿಂದ ಕೈಗಾ­ಡಿ­ಯನ್ನು ಬಳ­ಸು­ತ್ತಿ­ದ್ದಾರೆ. ಯಜಡಿ ಟೈಯರ್‌, ಹಾಗೂ ಕಬ್ಬಿ­ಣದ ಪಟ್ಟಿ­ಗ­ಳನ್ನು ಬಳಸಿ ಗಾಡಿ ತಯಾ­ರಿ­ಸಿ­ಕೊಂ­ಡಿ­ದ್ದಾರೆ. ಇದ­ರಲ್ಲಿ ಹುಲ್ಲು, ದರ­ಕು­ಗ­ಳನ್ನು ಸಾಗಿ­ಸು­ತ್ತಾರೆ. `ನಾಲ್ಕು ಜನ ಹೊರುವ ತಲೆ ಹೊರೆ­ಯನ್ನು ಒಮ್ಮೆಲೆ ಗಾಡಿ­ಯಲ್ಲಿ ತರ­ಬ­ಹುದು. ಇದ­ರಿಂದ ಕೂಲಿ ಉಳಿ­ತಾ­ಯ­ವಾ­ಗು­ತ್ತದೆ ' ಎನ್ನು­ವುದು ಭಟ್ಟರ ಕುಟುಂ­ಬ­ದ­ವರ ಮಾತು.
ಶಿವ­ಮೊಗ್ಗ ಸಾಗರ ಹತ್ತಿ­ರದ ಮಾವಿ­ನ­ಸ­ರದ ಶ್ರೀಪಾ­ದ­ರಾವ್‌ ಅವ­ರದ್ದು ಎರೆ­ಗೊ­ಬ್ಬರ ಉದ್ಯ­ಮ­ವಿದೆ. ಇರುವ ತೆಂಗಿನ ತೋಟವು ದೂರ­ದ­ಲ್ಲಿದೆ. ತೆಂಗಿನ ಮಧ್ಯೆ ಜಾನು­ವಾ­ರು­ಗ­ಳಿ­ಗಾಗಿ ಹುಲ್ಲನ್ನು ಬೆಳೆ­ಸು­ತ್ತಿ­ದ್ದಾರೆ. ಹುಲ್ಲನ್ನು ಪ್ರತಿ­ದಿನ ತರ­ಬೇಕು. ಒಂದು ದಿನ ಕೆಲ­ಸ­ದ­ವರು ಕೈಕೊ­ಟ್ಟರು ತೊಂದರೆ. ಅದ­ಕ್ಕಾಗಿ ಇವರು ಮೂರು ಗಾಲಿಯ ಕೈಗಾ­ಡಿ­ಯನ್ನು ಬಳ­ಸು­ತ್ತಿ­ದ್ದಾರೆ. ಗಟ್ಟು­ಮು­ಟ್ಟಾದ ಕಬ್ಬಿ­ಣದ ರಾಡ್‌­ಗ­ಳನ್ನು ಈ ಗಾಡಿಗೆ ಬಳ­ಸಿ­ದ್ದರೆ, ಟ್ಯೂಬ್‌ ಲೆಸ್‌ ಟೈಯರ್‌ ಇದ­ಕ್ಕಿದೆ. ಈ ಗಟ­ಡಿ­ಯನ್ನು ಇವರೇ ವಿನ್ಯಾಸ ಮಾಡಿ ತಮ್ಮ ಅನು­ಕೂ­ಲಕ್ಕೆ ತಕ್ಕಂತೆ ಮಾಡಿ­ಕೊಂ­ಡಿ­ದ್ದಾರೆ.
ಪಕ್ಕದ ಮನೆಯ ರಾಘ­ವೇಂದ್ರ ಇದೇ ಮಾದರಿ ಗಾಡಿ ಬಳ­ಸು­ತ್ತಿ­ದ್ದಾರೆ. ಆದರೆ ಇದರ ಹೊರ ವಿನ್ಯಾಸ ಸ್ವಲ್ಪ ವ್ಯತ್ಯಾ­ಸ­ವಿದೆ. ಮಣ್ಣು ಕಲ್ಲು, ಚೀಲ, ಅಡಿ­ಕೆ­ಗೊನೆ ಎಲ್ಲ­ವನ್ನು ಹೇರ­ಬ­ಹುದು. ಇದರ ಕ್ಯಾರಿ­ಯರ್‌ ಮತ್ರ ಗೂಟ್ಸ್‌ ರಿಕ್ಷಾ­ದಂತೆ ಇದೆ. ಈ ರೀತಿ ಕ್ಯಾರಿ­ಯರ್‌ ಇರು­ವು­ದ­ರಿಂದ ಮಣ್ಣು, ಕಲ್ಲು, ಅಡಿಕೆ ತುಂಬಿ­ದರು ಆರಾ­ಮಾಗಿ ಸಾಗಿ­ಸ­ಬ­ಹುದು. `ಶ್ರೀ­ಪಾ­ದಣ್ಣ ನಾನು ಒಬ್ಬನೇ ಮೆಕ್ಯಾ­ನಿಕ್‌ ಹತ್ತಿರ ಗಾಡಿ ರೆಡಿ ಮಾಡಿ­ಸಿ­ದ್ದೇವೆ. ನನ್ನದು ಸ್ವಲ್ಪ ಚಿಕ್ಕ ಗಾಡಿ. ನನ್ನ ತೋಟ ಅರ್ಧ ಕಿಲೋ ಮೀಟರ್‌ ದೂರ­ದ­ಲ್ಲಿದೆ. ಅಡಿ­ಕೆ­ಗೊನೆ ಸಾಗಾ­ಟಕ್ಕೆ ತುಂಬ ತೊಂದ­ರೆ­ಯಾ­ಗು­ತ್ತಿತ್ತು. ಆದರೆ ಈಗ ಮಾತ್ರ ಒಬ್ಬ ಕೂಲಿ­ಯಾಳು ಇದ್ದರೆ ನೂರು­ಗೊ­ನೆ­ಯನ್ನು ಆರಾ­ಮ­ದಲ್ಲಿ ಇಬ್ಬರೇ ಸಾಗಿ­ಸ­ಬ­ಹುದು. ಮಣ್ಣು ತುಂಬ­ಲಿಕ್ಕೆ ಹೆಚ್ಚಿಗೆ ಆಳು ಬೇಕಾ­ಗು­ತ್ತಿತ್ತು. ಈಗ ತೊಂದ­ರೆ­ಯಿಲ್ಲ' ಎನ್ನು­ವುದು ರಾಘ­ವೇಂದ್ರ ಅವರ ಅಭಿ­ಪ್ರಾಯ.
ಕೃಷಿ ಕೆಲ­ಸ­ಗಾ­ರರ ತೊಂದರೆ ಹೆಚ್ಚು ಹೆಚ್ಚು ಕೃಷಿ ಸಾಮ­ಗ್ರಿ­ಗ­ಳನ್ನು ಅನು­ಶೋ­ಧನೆ ಮಾಡಲು ಸಹ­ಕಾ­ರಿ­ಯಾ­ಗು­ತ್ತಿದೆ. ಇದ­ರಲ್ಲಿ ರೈತರು ಬಳಕೆ ಮಾಡ­ಲ್ಪ­ಡು­ತ್ತಿ­ರುವ ಕೈಗಾ­ಡಿ­ಗಳು ನವ ನವೀ­ನ­ವಾಗಿ ಮಾರ್ಪಾ­ಡು­ಗೊಂಡು ಬಳಕೆ ಮಾಡು­ತ್ತಿ­ರು­ವುದು ಕಾರ್ಮಿ­ಕರ ಕೊರತೆ ನೀಗಿ­ಸು­ತ್ತಿವೆ. ಜತೆಗೆ ಹಣ ಕೂಡ ಉಳಿ­ತಾ­ಯ­ವಾ­ಗು­ತ್ತಿದೆ.

ನಾಗ­ರಾಜ ಮತ್ತಿ­ಗಾರ

No comments: