Tuesday, November 11, 2008

ಬಂಡವಾಳ ಬೇಡದ ದಾಲ್ಚಿನಿ ಕೃಷಿ


ನಮ್ಮ ದೇಶ ಇತರ ರಾಷ್ಟ್ರ­ಗ­ಳಿಗೆ ಬಹಳ ಹಿಂದಿ­ನಿಂ­ದಲೂ ಆಕ­ರ್ಷಣೆ ಆಗು­ತ್ತಿ­ರು­ವುದು ಇಲ್ಲಿನ ನೈಸ­ರ್ಗಿಕ ಕಾರ­ಣ­ದಿಂದ. ಪ್ರಕೃ­ತಿ­ಯಲ್ಲಿ ತಾನಾ­ಗಿಯೇ ಬೆಳೆ­ಯುವ ಮೌಲ್ಯ­ಯುತ ಸಾಂಬಾರ ಪದಾ­ರ್ಥ­ಗ­ಳಿಂ­ದಾಗಿ. ಬ್ರಿಟಿ­ಷರು 200 ವರ್ಷ­ಗಳ ಕಾಲ ಇಲ್ಲಿನ ಸಾಂಬಾರ ಪದಾ­ರ್ಥ­ಗ­ಳನ್ನು ಲೂಟಿ ಮಾಡಿ ಹೋದರು. ಇಲ್ಲಿ ಇನ್ನು ಅವು­ಗಳ ಬೆಳೆ ಯಥೇಚ್ಚ. ಆಂಗ್ಲರು ಶ್ರೀಲಂ­ಕಾ­ದಿಂದ ಕೆಲವು ಸಾಂಬಾರ ಸಸ್ಯ­ಗ­ಳನ್ನು ಭಾರ­ತ­ದಲ್ಲಿ ನಾಟಿ ಮಾಡಿ­ದರು. ಹೀಗೆ ನಾಟಿ ಮಾಡಿದ ಸಸ್ಯ­ಗ­ಳಲ್ಲಿ ದಾಲ್ಚಿನಿ (ದಾಂ­ಚಿನಿ)ಯು ಒಂದು.
ಕಾಡಿ­ನ­ಲ್ಲಿಯೇ ಇರುವ ದಾಲ್ಚಿನಿ ಮರದ ಚಕ್ಕೆ­ಯನ್ನು ತೆಗೆದು ಉಪ­ಯೋ­ಗಿ­ಸುವ ರೂಢಿ ಬಹಳ ಜನ­ಕ್ಕಿದೆ. ಸದ್ಯ ಕಾಡಿ­ನಲ್ಲಿ ಸಿಗು­ತ್ತಿ­ರು­ವುದು ದಾಲ್ಚಿ­ನಿಯ ಜಾತಿಗೆ ಸೇರಿದ ನಿಶಣೆ. ಇದ­ರಲ್ಲಿ ದಾಲ್ಚಿ­ನಿ­ಗಿ­ರುವ ಗುಣ­ಗ­ಳೆಲ್ಲ ಇದ್ದರೂ ಇದು ಪಕ್ಕಾ ದಾಲ್ಚಿ­ನಿ­ಯಲ್ಲ. ವರಿ­ಜ­ನಲ್‌ ದಾಂಚಿ­ನಿ­ಯನ್ನು ಸ್ವಂತ ಜಾಗ­ದಲ್ಲಿ ಪ್ರತ್ಯೇ­ಕ­ವಾಗಿ ಕೃಷಿ ಮಾಡು­ತ್ತಿ­ರು­ವ­ವರು ಸೊರಬ ತಾಲೂ­ಕಿನ ಹೊಸ­ಬಾಳೆ ಮಂಜು­ನಾಥ.
ಸುಮಾರು 60ನೇ ದಶ­ಕ­ದಲ್ಲಿ ಮಂಜು­ನಾಥ ಅವರ ತಂದೆ ಎಚ್‌. ನಾರಾ­ಯಣ ರಾವ್‌ ಅವರು ಕೇರ­ಳದ ಅಚ­ರ­ಕಂ­ಡಿಯ ಬ್ರಿಟಿಷ್‌ ಫಾರಂ­ನಿಂದ ದಾಲ್ಚಿ­ನಿ­ಯನ್ನು ತಂದು ಕೃಷಿ ಆರಂ­ಭಿ­ಸಿ­ದರು. ಅವರು ಇದರ ಸಸಿ­ಯನ್ನು ಮೊದಲು ಬ್ರಿಟಿಷ್‌ ಫಾರಂ­ನಲ್ಲಿ ಕೆಲ­ಸಕ್ಕೆ ಸೇರಿ ಗಿಡ ತಂದ­ರಂತೆ. ಇದು ಮೂಲತಃ ಶ್ರೀಲಂ­ಕಾ­ದ­ಲ್ಲಿ­ರುವ ದಾಲ್ಚಿನಿ ತಳಿ.
ಶೂನ್ಯ ಕೃಷಿ
ಒಣ ಮತ್ತು ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯ­ವಾ­ದದ್ದು ದಾಲ್ಚಿನಿ. ಸಸಿ­ಯನ್ನು ನಾಟಿ ಮಾಡಿದ ನಾಲ್ಕು ವರ್ಷ­ಗಳ ಕಾಲ ಬೆಂಕಿ­ಯಿಂದ ರಕ್ಷಣೆ ಮಾಡಿ­ಕೊ­ಳ್ಳ­ಬೇಕು. ಒಮ್ಮೆ ನಾಟಿ ಮಾಡಿದ ಮೇಲೆ ಇದಕ್ಕೆ ವಿಶೇಷ ಕೃಷಿ ಮಾಡುವ ಅಗ­ತ್ಯ­ವಿಲ್ಲ. ಮೇಲು ಗೊಬ್ಬರ ನೀಡಿ­ದರೆ ಗಿಡದ ಬೆಳ­ವ­ಣಿಗೆ ಉತ್ತ­ಮ­ವಾ­ಗು­ತ್ತವೆ. ಇಳು­ವರಿ ಪ್ರಮಾ­ಣವು ಹೆಚ್ಚಾ­ಗು­ತ್ತದೆ ಎನ್ನು­ವುದು ಮಂಜು­ನಾ­ಥರ ಅಭಿ­ಪ್ರಾಯ.
ಗಿಡ­ವನ್ನು ನಾಟಿ ಮಾಡಿದ 5-6 ವರ್ಷಕ್ಕೆ ಕೊಯ್ಲಿಗೆ ಬರು­ತ್ತದೆ. ಕೊಯ್ಲು ಅಂದರೆ ಮರದ ಚಕ್ಕೆ­ಯನ್ನು ಕೆತ್ತು­ವುದು. ಇದನ್ನು ದಾಲ್ಚಿನಿ ಮರಕ್ಕೆ ಪೆಟ್ಟಾ­ಗದ ರೀತಿ ತೆಗೆ­ಯ­ಬೇ­ಕಾ­ಗು­ತ್ತದೆ. ಇದರ ಎಲೆಯು ಬಳ­ಕೆಗೆ ಬರು­ತ್ತದೆ. ಮತ್ತು ಇದಕ್ಕೆ ಮಾರು­ಕ­ಟ್ಟೆ­ಯಲ್ಲಿ ಉತ್ತಮ ಬೇಡಿ­ಕೆಯೂ ಇದೆ. ಅಷ್ಟೇ ಅಲ್ಲದೆ ಇದ­ರಲ್ಲಿ ಬಿಡುವ ಕಾಯಿಯು ಕೂಡಾ ಉಪ­ಯೋ­ಗಕ್ಕೆ ಬರು­ತ್ತದೆ. ಚಕ್ಕೆ ಮತ್ತು ಎಲೆ ಸಾಂಬಾರ ಪದಾ­ರ್ಥ­ವಾಗಿ ಬಳ­ಕೆಗೆ ಬಂದರೆ, ಕಾಯಿ­ಗಳು ಎಣ್ಣೆ ತಯಾ­ರಿ­ಕೆಗೆ ಬರು­ತ್ತದೆ. ಇದೊಂದು ಥರಾ ಬಹು­ಪ­ಯೋಗಿ ಬೆಳೆ.
ದಾಲ್ಚಿನಿ ಕೃಷಿ­ಯನ್ನು ಹೊಸ­ಬಾಳೆ ಮಂಜು­ನಾಥ ಅವರು ಮಾಡು­ವು­ದಕ್ಕೆ ತೊಡ­ಗಿದ ಮೇಲೆ ಒಂದಷ್ಟು ಪ್ರಚಾರ ಪಡೆ­ಯಿತು. ಕೆಲವು ಕೃಷಿ­ಕರು ಇದನ್ನು ತಮ್ಮ ತೋಟ­ದಲ್ಲಿ ನಾಟಿ ಮಾಡಿ­ದರು. ಆರ್ಥಿಕ ದೃಷ್ಠಿ­ಯಿಂದ ಅಲ್ಲ­ದಿ­ದ್ದರೂ ಮೊದ ಮೊದಲು ಸ್ವಂತ ಬಳ­ಕೆಗೆ ಬೆಳೆ­ದರು. ಈಗ ಅದೇ ಹಣ ತರುವ ಬೆಳೆ­ಯಾಗಿ ಪರಿ­ಣ­ಮಿ­ಸಿದೆ!
ತೋಟ­ಗಾ­ರಿಕ ಇಲಾ­ಖೆ­ಯ­ವರು ದಾಲ್ಚಿನಿ ಸಸ್ಯ­ಗ­ಳನ್ನು ಬೆಳೆ­ಸು­ತ್ತಿ­ದ್ದಾರೆ. ಅಲ್ಲದೇ ರೈತ­ರಿಗೆ ಬೆಳೆ­ಸ­ಲಿಕ್ಕೂ ಸಸ್ಯ­ಗ­ಳನ್ನು ನೀಡು­ತ್ತಾರೆ. ಇದ­ಕ್ಕಾಗಿ ಇವರು ನರ್ಸ­ರಿ­ಗ­ಳಲ್ಲಿ ಸಸ್ಯಾ­ಭಿ­ವೃದ್ಧಿ ಮಾಡು­ತ್ತಾರೆ. ಇವರ ನರ್ಸ­ರಿಗೆ ಬಹ­ಳಷ್ಟು ವರ್ಷ­ಗಳ ಕಾಲ ಮಂಜು­ನಾಥ ಹೆಗಡೆ ತಮ್ಮ­ಲ್ಲಿ­ರುವ ದಾಲ್ಚಿನಿ ಸಸ್ಯ­ಗ­ಳನ್ನು ನೀಡಿ­ದ್ದಾರೆ.

ದಾಲ್ಚಿ­ನಿಯ ವಿವಿಧ ಉಪ­ಯೋಗ
ಸಾಂಬಾ­ರದ ಉಪ­ಯೋಗ ಮಾತ್ರ­ವ­ಲ್ಲದೇ ಬಹ­ಳಷ್ಟು ಬಗೆಯ ಉಪ­ಯೋ­ಗಕ್ಕೆ ದಾಲ್ಚಿನಿ ಬರು­ತ್ತದೆ. ಎಣ್ಣೆ ತಯಾ­ರಿಕೆ, ಹಳ್ಳಿ­ಗ­ಳಲ್ಲಿ ಸಾಮಾ­ನ್ಯ­ವಾಗಿ ಮರದ ಹಲಿ­ಗೆಯ ಮುಚ್ಚಿಗೆ ಮಾಡು­ತ್ತಾರೆ ಮಾಳಿಗೆ ಮನೆ­ಗ­ಳಿಗೆ. ಅಂತಹ ಸಂಧ­ರ್ಭ­ದಲ್ಲಿ ಇದರ ಸೊಪ್ಪನ್ನು ಮುಚ್ಚಿ ನಂತರ ಮಣ್ಣು ತುಂಬುವ ಪದ್ಧತಿ ಇತ್ತು. ಇದ­ರಿಂದ ಮರಕ್ಕೆ ಬರುವ ಒರ­ಲೆ­ಯಿಂದ ಮುಕ್ತಿ ಸಿಕ್ಕಿ ಬಹ­ಳಷ್ಟು ವರ್ಷ ಮರ ಬಳ­ಕೆಗೆ ಬರು­ತ್ತದೆ. ಹಾಗೆಯೇ ನೋವಿನ ಎಣ್ಣೆ, ದಾಲ್ಚಿ­ನಿ­ಯಲ್ಲಿ ಸಿಗುವ ಯುಜಿ­ನಾಲ್‌ ಮತ್ತು ವೆನಿ­ಲಿ­ಲ್‌­ನಿಂದ ಲೋಕಲ್‌ ಅರ­ವ­ಳಿಕೆ ತಯಾ­ರಿಕೆ ಮಾಡು­ತ್ತಾರೆ. ಹಲ್ಲು ನೋವಿಗೆ ಇದು ರಾಮ­ಬಾ­ಣ­ದಂ­ತಹ ಔಷಧ.
`ದಾ­ಲ್ಚಿನಿ ಒಣ ಭೂಮಿಗೆ ಹೇಳಿ ಮಾಡಿ­ಸಿದ ಬೆಳೆ. ಕಡಿಮೆ ಬಂಡ­ವಾಳ- ಹೆಚ್ಚು ಆದಾಯ. ಎರಡು ವರ್ಷ­ಕ್ಕೊಮ್ಮೆ 45 ಸಾವಿ­ರ­ದಿಂದ 50 ಸಾವಿರ ರೂಪಾಯಿ ಗಳಿಕೆ ತರು­ತ್ತದೆ. ಅವ­ಕಾ­ಶ­ವಿದ್ದು ನರ್ಸರಿ ಮಾಡು­ವಷ್ಟು ಜಾಗದ ಸೌಕ­ರ್ಯ­ವಿ­ದ್ದರೆ ಮತ್ತಷ್ಟು ಹೆಚ್ಚಿನ ಆದಾಯ ಪಡೆ­ಯ­ಬ­ಹುದು. ನನ­ಗೆಂತು ದಾಲ್ಚಿನಿ ಇರು­ವು­ದ­ರಿಂದ ತೊಂದ­ರೆ­ಯಾ­ಗ­ಲಿಲ್ಲ. ಅದ­ಕ್ಕಾಗಿ ಅಪ್ಪ ಆಸ­ಕ್ತಿ­ಯಿಂದ ಮಾಡಿದ ಈ ಗಿಡ­ಗ­ಳನ್ನು ತೆಗೆದು ಬೇರೆ ಕೃಷಿ ಮಾಡಲು ಹೋಗ­ಲಿಲ್ಲ'- ತಮ್ಮ ಪೂರ್ವಿ­ಕರು ನೀಡಿದ ಈ ಬೆಳೆಯ ಬಗ್ಗೆ ಮಂಜು­ನಾಥ ಅವರ ಮೆಚ್ಚು­ಗೆಯ ನುಡಿ ಇದು.
ದಾಲ್ಚಿನಿ ಕೃಷಿಗೆ ಯಾವುದೇ ತರ­ಹದ ರಾಸಾ­ಯ­ನಿಕ ಬಳ­ಸದೆ ಇರು­ವು­ದ­ರಿಂದ ಸಾವ­ಯವ ಮಾರು­ಕ­ಟ್ಟೆ­ಯಲ್ಲಿ ಹೆಚ್ಚಿನ ಬೇಡಿ­ಕೆ­ಯಿದೆ. ಖಾಸಗಿ ವ್ಯಾಪಾ­ರಿ­ಗಳು, ಕಂಪೆ­ನಿ­ಗಳು ಇವ­ರ­ಲ್ಲಿಗೆ ಬಂದು ದಾಲ್ಚಿ­ನಿ­ಯನ್ನು ಖರೀ­ದಿ­ಸಿ­ಕೊಂಡು ಹೋಗು­ತ್ತಾರೆ. ಲಾಲ್‌­ಬಾಗ್‌ ಸಸ್ಯ ಪ್ರದ­ರ್ಶ­ನ­ದಲ್ಲಿ ಆರೇಳೇ ವರ್ಷ ಇವರ ದಾಲ್ಚಿನಿ ಕೃಷಿಗೆ ಪ್ರಶ­ಸ್ತಿಯೂ ಲಭಿ­ಸಿದೆ. ಸುಮಾರು ಎರಡು ಎಕರೆ ಪ್ರದೇ­ಶ­ದಲ್ಲಿ ದಾಲ್ಚಿ­ನಿ­ಯನ್ನು ಬೆಳೆ­ಸು­ತ್ತಿ­ರುವ ಮಂಜು­ನಾಥ ಅವರ ಕೆಲಸ ಶ್ಲಾಘ­ನೀಯ.
ಮಾಹಿತಿ ಬೇಕಾ­ದರೆ: ಮಂಜು­ನಾಥ್‌ ಹೊಸ­ಬಾಳೆ, ಸೊರಬ ತಾಲೂಕು, ಶಿವ­ಮೊಗ್ಗ ಜಿಲ್ಲೆ. ದೂ: 08184-263437.
ನಾಗ­ರಾಜ ಮತ್ತಿ­ಗಾರ

No comments: