
ನಮ್ಮ ದೇಶ ಇತರ ರಾಷ್ಟ್ರಗಳಿಗೆ ಬಹಳ ಹಿಂದಿನಿಂದಲೂ ಆಕರ್ಷಣೆ ಆಗುತ್ತಿರುವುದು ಇಲ್ಲಿನ ನೈಸರ್ಗಿಕ ಕಾರಣದಿಂದ. ಪ್ರಕೃತಿಯಲ್ಲಿ ತಾನಾಗಿಯೇ ಬೆಳೆಯುವ ಮೌಲ್ಯಯುತ ಸಾಂಬಾರ ಪದಾರ್ಥಗಳಿಂದಾಗಿ. ಬ್ರಿಟಿಷರು 200 ವರ್ಷಗಳ ಕಾಲ ಇಲ್ಲಿನ ಸಾಂಬಾರ ಪದಾರ್ಥಗಳನ್ನು ಲೂಟಿ ಮಾಡಿ ಹೋದರು. ಇಲ್ಲಿ ಇನ್ನು ಅವುಗಳ ಬೆಳೆ ಯಥೇಚ್ಚ. ಆಂಗ್ಲರು ಶ್ರೀಲಂಕಾದಿಂದ ಕೆಲವು ಸಾಂಬಾರ ಸಸ್ಯಗಳನ್ನು ಭಾರತದಲ್ಲಿ ನಾಟಿ ಮಾಡಿದರು. ಹೀಗೆ ನಾಟಿ ಮಾಡಿದ ಸಸ್ಯಗಳಲ್ಲಿ ದಾಲ್ಚಿನಿ (ದಾಂಚಿನಿ)ಯು ಒಂದು.
ಕಾಡಿನಲ್ಲಿಯೇ ಇರುವ ದಾಲ್ಚಿನಿ ಮರದ ಚಕ್ಕೆಯನ್ನು ತೆಗೆದು ಉಪಯೋಗಿಸುವ ರೂಢಿ ಬಹಳ ಜನಕ್ಕಿದೆ. ಸದ್ಯ ಕಾಡಿನಲ್ಲಿ ಸಿಗುತ್ತಿರುವುದು ದಾಲ್ಚಿನಿಯ ಜಾತಿಗೆ ಸೇರಿದ ನಿಶಣೆ. ಇದರಲ್ಲಿ ದಾಲ್ಚಿನಿಗಿರುವ ಗುಣಗಳೆಲ್ಲ ಇದ್ದರೂ ಇದು ಪಕ್ಕಾ ದಾಲ್ಚಿನಿಯಲ್ಲ. ವರಿಜನಲ್ ದಾಂಚಿನಿಯನ್ನು ಸ್ವಂತ ಜಾಗದಲ್ಲಿ ಪ್ರತ್ಯೇಕವಾಗಿ ಕೃಷಿ ಮಾಡುತ್ತಿರುವವರು ಸೊರಬ ತಾಲೂಕಿನ ಹೊಸಬಾಳೆ ಮಂಜುನಾಥ.
ಸುಮಾರು 60ನೇ ದಶಕದಲ್ಲಿ ಮಂಜುನಾಥ ಅವರ ತಂದೆ ಎಚ್. ನಾರಾಯಣ ರಾವ್ ಅವರು ಕೇರಳದ ಅಚರಕಂಡಿಯ ಬ್ರಿಟಿಷ್ ಫಾರಂನಿಂದ ದಾಲ್ಚಿನಿಯನ್ನು ತಂದು ಕೃಷಿ ಆರಂಭಿಸಿದರು. ಅವರು ಇದರ ಸಸಿಯನ್ನು ಮೊದಲು ಬ್ರಿಟಿಷ್ ಫಾರಂನಲ್ಲಿ ಕೆಲಸಕ್ಕೆ ಸೇರಿ ಗಿಡ ತಂದರಂತೆ. ಇದು ಮೂಲತಃ ಶ್ರೀಲಂಕಾದಲ್ಲಿರುವ ದಾಲ್ಚಿನಿ ತಳಿ.
ಶೂನ್ಯ ಕೃಷಿ
ಒಣ ಮತ್ತು ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯವಾದದ್ದು ದಾಲ್ಚಿನಿ. ಸಸಿಯನ್ನು ನಾಟಿ ಮಾಡಿದ ನಾಲ್ಕು ವರ್ಷಗಳ ಕಾಲ ಬೆಂಕಿಯಿಂದ ರಕ್ಷಣೆ ಮಾಡಿಕೊಳ್ಳಬೇಕು. ಒಮ್ಮೆ ನಾಟಿ ಮಾಡಿದ ಮೇಲೆ ಇದಕ್ಕೆ ವಿಶೇಷ ಕೃಷಿ ಮಾಡುವ ಅಗತ್ಯವಿಲ್ಲ. ಮೇಲು ಗೊಬ್ಬರ ನೀಡಿದರೆ ಗಿಡದ ಬೆಳವಣಿಗೆ ಉತ್ತಮವಾಗುತ್ತವೆ. ಇಳುವರಿ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಮಂಜುನಾಥರ ಅಭಿಪ್ರಾಯ.
ಗಿಡವನ್ನು ನಾಟಿ ಮಾಡಿದ 5-6 ವರ್ಷಕ್ಕೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಅಂದರೆ ಮರದ ಚಕ್ಕೆಯನ್ನು ಕೆತ್ತುವುದು. ಇದನ್ನು ದಾಲ್ಚಿನಿ ಮರಕ್ಕೆ ಪೆಟ್ಟಾಗದ ರೀತಿ ತೆಗೆಯಬೇಕಾಗುತ್ತದೆ. ಇದರ ಎಲೆಯು ಬಳಕೆಗೆ ಬರುತ್ತದೆ. ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಅಷ್ಟೇ ಅಲ್ಲದೆ ಇದರಲ್ಲಿ ಬಿಡುವ ಕಾಯಿಯು ಕೂಡಾ ಉಪಯೋಗಕ್ಕೆ ಬರುತ್ತದೆ. ಚಕ್ಕೆ ಮತ್ತು ಎಲೆ ಸಾಂಬಾರ ಪದಾರ್ಥವಾಗಿ ಬಳಕೆಗೆ ಬಂದರೆ, ಕಾಯಿಗಳು ಎಣ್ಣೆ ತಯಾರಿಕೆಗೆ ಬರುತ್ತದೆ. ಇದೊಂದು ಥರಾ ಬಹುಪಯೋಗಿ ಬೆಳೆ.
ದಾಲ್ಚಿನಿ ಕೃಷಿಯನ್ನು ಹೊಸಬಾಳೆ ಮಂಜುನಾಥ ಅವರು ಮಾಡುವುದಕ್ಕೆ ತೊಡಗಿದ ಮೇಲೆ ಒಂದಷ್ಟು ಪ್ರಚಾರ ಪಡೆಯಿತು. ಕೆಲವು ಕೃಷಿಕರು ಇದನ್ನು ತಮ್ಮ ತೋಟದಲ್ಲಿ ನಾಟಿ ಮಾಡಿದರು. ಆರ್ಥಿಕ ದೃಷ್ಠಿಯಿಂದ ಅಲ್ಲದಿದ್ದರೂ ಮೊದ ಮೊದಲು ಸ್ವಂತ ಬಳಕೆಗೆ ಬೆಳೆದರು. ಈಗ ಅದೇ ಹಣ ತರುವ ಬೆಳೆಯಾಗಿ ಪರಿಣಮಿಸಿದೆ!
ತೋಟಗಾರಿಕ ಇಲಾಖೆಯವರು ದಾಲ್ಚಿನಿ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೇ ರೈತರಿಗೆ ಬೆಳೆಸಲಿಕ್ಕೂ ಸಸ್ಯಗಳನ್ನು ನೀಡುತ್ತಾರೆ. ಇದಕ್ಕಾಗಿ ಇವರು ನರ್ಸರಿಗಳಲ್ಲಿ ಸಸ್ಯಾಭಿವೃದ್ಧಿ ಮಾಡುತ್ತಾರೆ. ಇವರ ನರ್ಸರಿಗೆ ಬಹಳಷ್ಟು ವರ್ಷಗಳ ಕಾಲ ಮಂಜುನಾಥ ಹೆಗಡೆ ತಮ್ಮಲ್ಲಿರುವ ದಾಲ್ಚಿನಿ ಸಸ್ಯಗಳನ್ನು ನೀಡಿದ್ದಾರೆ.
ದಾಲ್ಚಿನಿಯ ವಿವಿಧ ಉಪಯೋಗ
ಸಾಂಬಾರದ ಉಪಯೋಗ ಮಾತ್ರವಲ್ಲದೇ ಬಹಳಷ್ಟು ಬಗೆಯ ಉಪಯೋಗಕ್ಕೆ ದಾಲ್ಚಿನಿ ಬರುತ್ತದೆ. ಎಣ್ಣೆ ತಯಾರಿಕೆ, ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮರದ ಹಲಿಗೆಯ ಮುಚ್ಚಿಗೆ ಮಾಡುತ್ತಾರೆ ಮಾಳಿಗೆ ಮನೆಗಳಿಗೆ. ಅಂತಹ ಸಂಧರ್ಭದಲ್ಲಿ ಇದರ ಸೊಪ್ಪನ್ನು ಮುಚ್ಚಿ ನಂತರ ಮಣ್ಣು ತುಂಬುವ ಪದ್ಧತಿ ಇತ್ತು. ಇದರಿಂದ ಮರಕ್ಕೆ ಬರುವ ಒರಲೆಯಿಂದ ಮುಕ್ತಿ ಸಿಕ್ಕಿ ಬಹಳಷ್ಟು ವರ್ಷ ಮರ ಬಳಕೆಗೆ ಬರುತ್ತದೆ. ಹಾಗೆಯೇ ನೋವಿನ ಎಣ್ಣೆ, ದಾಲ್ಚಿನಿಯಲ್ಲಿ ಸಿಗುವ ಯುಜಿನಾಲ್ ಮತ್ತು ವೆನಿಲಿಲ್ನಿಂದ ಲೋಕಲ್ ಅರವಳಿಕೆ ತಯಾರಿಕೆ ಮಾಡುತ್ತಾರೆ. ಹಲ್ಲು ನೋವಿಗೆ ಇದು ರಾಮಬಾಣದಂತಹ ಔಷಧ.
`ದಾಲ್ಚಿನಿ ಒಣ ಭೂಮಿಗೆ ಹೇಳಿ ಮಾಡಿಸಿದ ಬೆಳೆ. ಕಡಿಮೆ ಬಂಡವಾಳ- ಹೆಚ್ಚು ಆದಾಯ. ಎರಡು ವರ್ಷಕ್ಕೊಮ್ಮೆ 45 ಸಾವಿರದಿಂದ 50 ಸಾವಿರ ರೂಪಾಯಿ ಗಳಿಕೆ ತರುತ್ತದೆ. ಅವಕಾಶವಿದ್ದು ನರ್ಸರಿ ಮಾಡುವಷ್ಟು ಜಾಗದ ಸೌಕರ್ಯವಿದ್ದರೆ ಮತ್ತಷ್ಟು ಹೆಚ್ಚಿನ ಆದಾಯ ಪಡೆಯಬಹುದು. ನನಗೆಂತು ದಾಲ್ಚಿನಿ ಇರುವುದರಿಂದ ತೊಂದರೆಯಾಗಲಿಲ್ಲ. ಅದಕ್ಕಾಗಿ ಅಪ್ಪ ಆಸಕ್ತಿಯಿಂದ ಮಾಡಿದ ಈ ಗಿಡಗಳನ್ನು ತೆಗೆದು ಬೇರೆ ಕೃಷಿ ಮಾಡಲು ಹೋಗಲಿಲ್ಲ'- ತಮ್ಮ ಪೂರ್ವಿಕರು ನೀಡಿದ ಈ ಬೆಳೆಯ ಬಗ್ಗೆ ಮಂಜುನಾಥ ಅವರ ಮೆಚ್ಚುಗೆಯ ನುಡಿ ಇದು.
ದಾಲ್ಚಿನಿ ಕೃಷಿಗೆ ಯಾವುದೇ ತರಹದ ರಾಸಾಯನಿಕ ಬಳಸದೆ ಇರುವುದರಿಂದ ಸಾವಯವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಖಾಸಗಿ ವ್ಯಾಪಾರಿಗಳು, ಕಂಪೆನಿಗಳು ಇವರಲ್ಲಿಗೆ ಬಂದು ದಾಲ್ಚಿನಿಯನ್ನು ಖರೀದಿಸಿಕೊಂಡು ಹೋಗುತ್ತಾರೆ. ಲಾಲ್ಬಾಗ್ ಸಸ್ಯ ಪ್ರದರ್ಶನದಲ್ಲಿ ಆರೇಳೇ ವರ್ಷ ಇವರ ದಾಲ್ಚಿನಿ ಕೃಷಿಗೆ ಪ್ರಶಸ್ತಿಯೂ ಲಭಿಸಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ದಾಲ್ಚಿನಿಯನ್ನು ಬೆಳೆಸುತ್ತಿರುವ ಮಂಜುನಾಥ ಅವರ ಕೆಲಸ ಶ್ಲಾಘನೀಯ.
ಮಾಹಿತಿ ಬೇಕಾದರೆ: ಮಂಜುನಾಥ್ ಹೊಸಬಾಳೆ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ. ದೂ: 08184-263437.
ನಾಗರಾಜ ಮತ್ತಿಗಾರ
ಕಾಡಿನಲ್ಲಿಯೇ ಇರುವ ದಾಲ್ಚಿನಿ ಮರದ ಚಕ್ಕೆಯನ್ನು ತೆಗೆದು ಉಪಯೋಗಿಸುವ ರೂಢಿ ಬಹಳ ಜನಕ್ಕಿದೆ. ಸದ್ಯ ಕಾಡಿನಲ್ಲಿ ಸಿಗುತ್ತಿರುವುದು ದಾಲ್ಚಿನಿಯ ಜಾತಿಗೆ ಸೇರಿದ ನಿಶಣೆ. ಇದರಲ್ಲಿ ದಾಲ್ಚಿನಿಗಿರುವ ಗುಣಗಳೆಲ್ಲ ಇದ್ದರೂ ಇದು ಪಕ್ಕಾ ದಾಲ್ಚಿನಿಯಲ್ಲ. ವರಿಜನಲ್ ದಾಂಚಿನಿಯನ್ನು ಸ್ವಂತ ಜಾಗದಲ್ಲಿ ಪ್ರತ್ಯೇಕವಾಗಿ ಕೃಷಿ ಮಾಡುತ್ತಿರುವವರು ಸೊರಬ ತಾಲೂಕಿನ ಹೊಸಬಾಳೆ ಮಂಜುನಾಥ.
ಸುಮಾರು 60ನೇ ದಶಕದಲ್ಲಿ ಮಂಜುನಾಥ ಅವರ ತಂದೆ ಎಚ್. ನಾರಾಯಣ ರಾವ್ ಅವರು ಕೇರಳದ ಅಚರಕಂಡಿಯ ಬ್ರಿಟಿಷ್ ಫಾರಂನಿಂದ ದಾಲ್ಚಿನಿಯನ್ನು ತಂದು ಕೃಷಿ ಆರಂಭಿಸಿದರು. ಅವರು ಇದರ ಸಸಿಯನ್ನು ಮೊದಲು ಬ್ರಿಟಿಷ್ ಫಾರಂನಲ್ಲಿ ಕೆಲಸಕ್ಕೆ ಸೇರಿ ಗಿಡ ತಂದರಂತೆ. ಇದು ಮೂಲತಃ ಶ್ರೀಲಂಕಾದಲ್ಲಿರುವ ದಾಲ್ಚಿನಿ ತಳಿ.
ಶೂನ್ಯ ಕೃಷಿ
ಒಣ ಮತ್ತು ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯವಾದದ್ದು ದಾಲ್ಚಿನಿ. ಸಸಿಯನ್ನು ನಾಟಿ ಮಾಡಿದ ನಾಲ್ಕು ವರ್ಷಗಳ ಕಾಲ ಬೆಂಕಿಯಿಂದ ರಕ್ಷಣೆ ಮಾಡಿಕೊಳ್ಳಬೇಕು. ಒಮ್ಮೆ ನಾಟಿ ಮಾಡಿದ ಮೇಲೆ ಇದಕ್ಕೆ ವಿಶೇಷ ಕೃಷಿ ಮಾಡುವ ಅಗತ್ಯವಿಲ್ಲ. ಮೇಲು ಗೊಬ್ಬರ ನೀಡಿದರೆ ಗಿಡದ ಬೆಳವಣಿಗೆ ಉತ್ತಮವಾಗುತ್ತವೆ. ಇಳುವರಿ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಮಂಜುನಾಥರ ಅಭಿಪ್ರಾಯ.
ಗಿಡವನ್ನು ನಾಟಿ ಮಾಡಿದ 5-6 ವರ್ಷಕ್ಕೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಅಂದರೆ ಮರದ ಚಕ್ಕೆಯನ್ನು ಕೆತ್ತುವುದು. ಇದನ್ನು ದಾಲ್ಚಿನಿ ಮರಕ್ಕೆ ಪೆಟ್ಟಾಗದ ರೀತಿ ತೆಗೆಯಬೇಕಾಗುತ್ತದೆ. ಇದರ ಎಲೆಯು ಬಳಕೆಗೆ ಬರುತ್ತದೆ. ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಅಷ್ಟೇ ಅಲ್ಲದೆ ಇದರಲ್ಲಿ ಬಿಡುವ ಕಾಯಿಯು ಕೂಡಾ ಉಪಯೋಗಕ್ಕೆ ಬರುತ್ತದೆ. ಚಕ್ಕೆ ಮತ್ತು ಎಲೆ ಸಾಂಬಾರ ಪದಾರ್ಥವಾಗಿ ಬಳಕೆಗೆ ಬಂದರೆ, ಕಾಯಿಗಳು ಎಣ್ಣೆ ತಯಾರಿಕೆಗೆ ಬರುತ್ತದೆ. ಇದೊಂದು ಥರಾ ಬಹುಪಯೋಗಿ ಬೆಳೆ.
ದಾಲ್ಚಿನಿ ಕೃಷಿಯನ್ನು ಹೊಸಬಾಳೆ ಮಂಜುನಾಥ ಅವರು ಮಾಡುವುದಕ್ಕೆ ತೊಡಗಿದ ಮೇಲೆ ಒಂದಷ್ಟು ಪ್ರಚಾರ ಪಡೆಯಿತು. ಕೆಲವು ಕೃಷಿಕರು ಇದನ್ನು ತಮ್ಮ ತೋಟದಲ್ಲಿ ನಾಟಿ ಮಾಡಿದರು. ಆರ್ಥಿಕ ದೃಷ್ಠಿಯಿಂದ ಅಲ್ಲದಿದ್ದರೂ ಮೊದ ಮೊದಲು ಸ್ವಂತ ಬಳಕೆಗೆ ಬೆಳೆದರು. ಈಗ ಅದೇ ಹಣ ತರುವ ಬೆಳೆಯಾಗಿ ಪರಿಣಮಿಸಿದೆ!
ತೋಟಗಾರಿಕ ಇಲಾಖೆಯವರು ದಾಲ್ಚಿನಿ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೇ ರೈತರಿಗೆ ಬೆಳೆಸಲಿಕ್ಕೂ ಸಸ್ಯಗಳನ್ನು ನೀಡುತ್ತಾರೆ. ಇದಕ್ಕಾಗಿ ಇವರು ನರ್ಸರಿಗಳಲ್ಲಿ ಸಸ್ಯಾಭಿವೃದ್ಧಿ ಮಾಡುತ್ತಾರೆ. ಇವರ ನರ್ಸರಿಗೆ ಬಹಳಷ್ಟು ವರ್ಷಗಳ ಕಾಲ ಮಂಜುನಾಥ ಹೆಗಡೆ ತಮ್ಮಲ್ಲಿರುವ ದಾಲ್ಚಿನಿ ಸಸ್ಯಗಳನ್ನು ನೀಡಿದ್ದಾರೆ.
ದಾಲ್ಚಿನಿಯ ವಿವಿಧ ಉಪಯೋಗ
ಸಾಂಬಾರದ ಉಪಯೋಗ ಮಾತ್ರವಲ್ಲದೇ ಬಹಳಷ್ಟು ಬಗೆಯ ಉಪಯೋಗಕ್ಕೆ ದಾಲ್ಚಿನಿ ಬರುತ್ತದೆ. ಎಣ್ಣೆ ತಯಾರಿಕೆ, ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮರದ ಹಲಿಗೆಯ ಮುಚ್ಚಿಗೆ ಮಾಡುತ್ತಾರೆ ಮಾಳಿಗೆ ಮನೆಗಳಿಗೆ. ಅಂತಹ ಸಂಧರ್ಭದಲ್ಲಿ ಇದರ ಸೊಪ್ಪನ್ನು ಮುಚ್ಚಿ ನಂತರ ಮಣ್ಣು ತುಂಬುವ ಪದ್ಧತಿ ಇತ್ತು. ಇದರಿಂದ ಮರಕ್ಕೆ ಬರುವ ಒರಲೆಯಿಂದ ಮುಕ್ತಿ ಸಿಕ್ಕಿ ಬಹಳಷ್ಟು ವರ್ಷ ಮರ ಬಳಕೆಗೆ ಬರುತ್ತದೆ. ಹಾಗೆಯೇ ನೋವಿನ ಎಣ್ಣೆ, ದಾಲ್ಚಿನಿಯಲ್ಲಿ ಸಿಗುವ ಯುಜಿನಾಲ್ ಮತ್ತು ವೆನಿಲಿಲ್ನಿಂದ ಲೋಕಲ್ ಅರವಳಿಕೆ ತಯಾರಿಕೆ ಮಾಡುತ್ತಾರೆ. ಹಲ್ಲು ನೋವಿಗೆ ಇದು ರಾಮಬಾಣದಂತಹ ಔಷಧ.
`ದಾಲ್ಚಿನಿ ಒಣ ಭೂಮಿಗೆ ಹೇಳಿ ಮಾಡಿಸಿದ ಬೆಳೆ. ಕಡಿಮೆ ಬಂಡವಾಳ- ಹೆಚ್ಚು ಆದಾಯ. ಎರಡು ವರ್ಷಕ್ಕೊಮ್ಮೆ 45 ಸಾವಿರದಿಂದ 50 ಸಾವಿರ ರೂಪಾಯಿ ಗಳಿಕೆ ತರುತ್ತದೆ. ಅವಕಾಶವಿದ್ದು ನರ್ಸರಿ ಮಾಡುವಷ್ಟು ಜಾಗದ ಸೌಕರ್ಯವಿದ್ದರೆ ಮತ್ತಷ್ಟು ಹೆಚ್ಚಿನ ಆದಾಯ ಪಡೆಯಬಹುದು. ನನಗೆಂತು ದಾಲ್ಚಿನಿ ಇರುವುದರಿಂದ ತೊಂದರೆಯಾಗಲಿಲ್ಲ. ಅದಕ್ಕಾಗಿ ಅಪ್ಪ ಆಸಕ್ತಿಯಿಂದ ಮಾಡಿದ ಈ ಗಿಡಗಳನ್ನು ತೆಗೆದು ಬೇರೆ ಕೃಷಿ ಮಾಡಲು ಹೋಗಲಿಲ್ಲ'- ತಮ್ಮ ಪೂರ್ವಿಕರು ನೀಡಿದ ಈ ಬೆಳೆಯ ಬಗ್ಗೆ ಮಂಜುನಾಥ ಅವರ ಮೆಚ್ಚುಗೆಯ ನುಡಿ ಇದು.
ದಾಲ್ಚಿನಿ ಕೃಷಿಗೆ ಯಾವುದೇ ತರಹದ ರಾಸಾಯನಿಕ ಬಳಸದೆ ಇರುವುದರಿಂದ ಸಾವಯವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಖಾಸಗಿ ವ್ಯಾಪಾರಿಗಳು, ಕಂಪೆನಿಗಳು ಇವರಲ್ಲಿಗೆ ಬಂದು ದಾಲ್ಚಿನಿಯನ್ನು ಖರೀದಿಸಿಕೊಂಡು ಹೋಗುತ್ತಾರೆ. ಲಾಲ್ಬಾಗ್ ಸಸ್ಯ ಪ್ರದರ್ಶನದಲ್ಲಿ ಆರೇಳೇ ವರ್ಷ ಇವರ ದಾಲ್ಚಿನಿ ಕೃಷಿಗೆ ಪ್ರಶಸ್ತಿಯೂ ಲಭಿಸಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ದಾಲ್ಚಿನಿಯನ್ನು ಬೆಳೆಸುತ್ತಿರುವ ಮಂಜುನಾಥ ಅವರ ಕೆಲಸ ಶ್ಲಾಘನೀಯ.
ಮಾಹಿತಿ ಬೇಕಾದರೆ: ಮಂಜುನಾಥ್ ಹೊಸಬಾಳೆ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ. ದೂ: 08184-263437.
ನಾಗರಾಜ ಮತ್ತಿಗಾರ
No comments:
Post a Comment