ಇಂದು ಕೃಷಿ ಕಾರ್ಮಿಕರ ಕೊರತೆಯ ತೀವ್ರತೆ ಇರುವುದು ಸ್ಪಷ್ಟ. ಕೆಲಸಗಾರರ ಇಲ್ಲ ಎಂದು ಕೃಷಿ ಕೆಲಸವನ್ನು ಬಿಡಲಿಕ್ಕೆ ಸಾಧ್ಯವೇ? ಇಂತಹ ಕೊರತೆ ಹೊಸ ಹೊಸ ಕೃಷಿ ಉಪಕರಣಗಳ ಅನುಶೋಧನೆಗಳಿಗೂ ಕಾರಣವಾಗುತ್ತಿರುವುದು ಸ್ಪಷ್ಟ. ಕೃಷಿಯನ್ನು ಸುಲಭಗೊಳಿಸಿ ಕೊಳ್ಳುವ ಅನೇಕ ಸಾಧನಗಳು ಕೃಷಿಕರ ಮನೆಯಲ್ಲಿ ಇದೆ. ಬೇಸಾಯ ಸುಲಭ ಮಾಡಿಕೊಳ್ಳುವ ಸಲುವಾಗಿ ಹಲವಾರು ರೈತರು ಕೈಗಾಡಿಗಳನ್ನು ಮಾಡಿಕೊಂಡಿದ್ದಾರೆ. ಅದೇ ಉತ್ತರ ಕನ್ನಡ, ಸಿದ್ದಾಪುರದ ಸುಳಗಾರ ಗಣಪತಿ ಹೆಗಡೆ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಂದರೆ ಇವರದ್ದು ಮೋಟಾರ್ ಸೈಕಲ್ಗೆ ಜೋಡಿಸುವ ಗಾಡಿ.
ಮೋಟಾರ್ ಸೈಕಲ್ ಇಂದು ಎಲ್ಲರ ಹತ್ತಿರವೂ ಇರುತ್ತದೆ. ಹೀಗಿರುವಾಗ ಬೈಕ್ ಅನ್ನು ಕೇವಲ ಓಡಾಡಲಿಕ್ಕೆ ಬಳಸಿಕೊಳ್ಳುವುದರ ಜೊತೆಗೆ ಕೃಷಿಕರು ಅದನ್ನು ತಮ್ಮ ಬೇಸಾಯದ ಬಳಕೆಗೂ ಯಾಕೆ ಬಳಸಿ ಕೊಳ್ಳಬಾರದು ಎನ್ನುವ ಪ್ರಶ್ನೆ ಗಣಪತಿ ಅವರಿಗೆ ಹುಟ್ಟಿತು. ಇವರು ತಮ್ಮ ಯೋಚನೆಯನ್ನು ಗೆಳೆಯರಾದ ಹುಲಿಮನೆ ನಾಗರಾಜ, ಮತ್ತಿಗಾರ ರಾಮಚಂದ್ರ ಅವರಲ್ಲಿ ಹೇಳಿಕೊಂಡಿದ್ದಾರೆ. ಮತ್ತ್ಯಾಕೆ ತಡ, ಶುರುವಾಯಿತು ಕಾರ್ಯಚರಣೆ. ಮರು ದಿನವೇ ಗಾಡಿ ತಯಾರಿಕೆಯಲ್ಲಿ ತೊಡಗಿದರು.
ಗಣಪತಿ ಅವರದ್ದು 125 ಸಿಸಿ ಬೈಕ್. ಅದಕ್ಕೆ ಯಾವ ರೀತಿ ಟ್ರ್ಯಾಲಿಯನ್ನು ಅಳವಡಿಸಿದರೆ ಅನುಕೂಲ ಎಂದು ಮೊದ ಮೊದಲು ಯೋಜನೆ ಹಾಕಿದರು. ಗುಜರಿಯಿಂದ ಕಬ್ಬಿಣ ಮತ್ತು ಯಜಡಿ ಬೈಕಿನ ಗಾಲಿಯನ್ನು ಖರೀದಿಸಿ ತಮಗೆ ಬೇಕಾದ ರೀತಿ ಗಾಡಿ ಮಾಡಿಸಿಕೊಂಡರು. ಬೈಕ್ ಜೋರಾಗಿ ಹೋದರು ಹಿಂದಿರುವ ಟ್ರ್ಯಾಲಿ ಸರಿಯಾಗಿದ್ದು, ಯಾವುದೇ ಕಡೇ ವಾಲದೇ ಸಲೀಸಾಗಿ ಚಲಿಸುವಂತೆ ಮಾರ್ಪಡಿಸಿ ಕೊಂಡರು. ಆದರೆ ಗಾಡಿ ವೇಗಕ್ಕೂ ಟ್ರ್ಯಾಲಿಯ ವೇಗಕ್ಕೂ ಇದು ಸರಿ ಬರಲಿಲ್ಲ. ಯಾಕೆಂದರೆ, ಟ್ರ್ಯಾಲಿಯ ಉದ್ದ ನಾಲ್ಕು ಅಡಿ ಇತ್ತು. ತಕ್ಷಣ ಅದಕ್ಕಾಗಿ ಟ್ರ್ಯಾಲಿ ಉದ್ದ ಕಡಿಮೆ ಮಾಡಬೇಕಾಯಿತು. ಜತೆಗೆ ಗೋಡ್ವೆಮನೆ ರವಿ ಈ ಗಾಡಿ ತಯಾರಿಕೆಗೆ ಹೊಸ ಇಂಜನಿಯರ್ ಆಗಿ ಸೇರ್ಪಡೆಗೊಂಡರು.
ರವಿ ಅವರು ಟ್ರ್ಯಾಲಿ ಅಳತೆಯನ್ನು ಮೂರು, ಮೂರರ ಅಳತೆಗೆ ಮಾರ್ಪಡಿಸಿಕೊಂಡರು. ಬೈಕಿನ ಚಾರ್ಸ್ಸಿಯಿಂದಲೇ ಟ್ರ್ಯಾಲಿ ಜೋಡಿಸುವ ವ್ಯವಸ್ಥೆ ಮಾಡಿದರು. ಬೈಕಿನ ಹೊಂದಿದ ಗಾಲಿಯ ಬ್ರೇಕ್ನಿಂದಲೇ ಟ್ರ್ಯಾಲಿ ಗಾಲಿಗಳಿಗೂ ಬ್ರೇಕ್ ಅಳವಡಿಸಿದರು. ಈಗ ಗಾಡಿಯಲ್ಲಿ ಯಾವುದೇ ತರಹದ ವಸ್ತುಗಳನ್ನು ಹಾಕಿಕೊಂಡು ಸರಾಗವಾಗಿ ಓಡಿಸಬಹುದು.
ಗಾಡಿಯ ಸಮಸ್ಯೆ
ಬೈಕಿಗೆ ಗಾಡಿಯನ್ನು ಅಳವಡಿಸಿದ ನಂತರ ಕನಿಷ್ಠ 15 ಕಿ.ಮೀ. ವೇಗವಾದಲ್ಲಾದರೂ ಬೈಕ್ ಚಲಿಸಬೇಕು. ಇಲ್ಲವೆಂದರೆ ಬ್ಯಾಲೆನ್ಸ್ ತಪ್ಪುತ್ತದೆ ಎನ್ನುವುದು ಗಣಪತಿ ಅವರ ಅನುಭವದ ಮಾತು. ಸಮರಸ್ತೆಯಲ್ಲಿ ಮತ್ತು ಉತ್ತಮ ರಸ್ತೆಗಳಲ್ಲಿ ಏಷ್ಟೇ ವೇಗವಾಗಿ ಮತ್ತು ನಿಧಾನವಾಗಿ ಹೋದರು ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಮಲೆನಾಡಿನ ಕೊರಕಲು ರಸ್ತೆಯಲ್ಲಿ ಈ ಗಾಡಿಯನ್ನು ಸರಾಗವಾಗಿ ಓಡಿಸುವುದು ಕಷ್ಟ. ಹಳ್ಳಿ ರಸ್ತೆಯಲ್ಲಿ ಬಹಳ ತಗ್ಗು ಮತ್ತು ಗಾಟಿಯಿರುವುದೇ ಈ ಗಾಡಿಗಿರುವ ತೊಂದರೆ.
5 ಕ್ವಿಂಟಾಲ್ ಭಾರವನ್ನು ಗಾಡಿಯ ಮೇಲೆ ಹೇರಿದರೂ ಆರಾಮವಾಗಿ ಬೈಕ್ ಎಳೆಯುತ್ತದೆ. ಮೊದಲ ಸಲ ಈ ಗಾಡಿಯನ್ನು ತಯಾರಿಸಿರುವುದರಿಂದ ಎಳು ಸಾವಿರ ಖರ್ಚಾಗಿದ್ದು. ಮತ್ತೊಮ್ಮೆ ತಯಾರಿಸುವಾಗ ಇಷ್ಟು ಖರ್ಚು ಬರುವುದಿಲ್ಲ. ಕಬ್ಬಣ, ಗುಜುರಿಯಿಂದ ಎರಡು ಗಾಲಿ, ಟ್ರ್ಯಾಲಿಯನ್ನು ತಯಾರಿಸುವ ಕೂಲಿ ಇದಕ್ಕೆ ಬೇಕಾದ ಸಾಮಗ್ರಿ. ಈಗ ಕಬ್ಬಿಣದ ಬೆಲೆ ಹೆಚ್ಚಾಗಿರುವುದರಿಂದ ಐದು ಸಾವಿರದ ಹತ್ತಿರ ಖರ್ಚಾಗಬಹುದು ಅನ್ನುತ್ತಾರೆ ಗಣಪತಿ.
ಮಳೆಗಾಲದಲ್ಲಿ ಹಟ್ಟಿಗೆ ಬೇಕಾಗುವ ಸೊಪ್ಪು, ಬೇಸಿಗೆಯಲ್ಲಿ ತರಗೆಲೆಯನ್ನು, ಕೃಷಿ ಉತ್ಪನ್ನಗಳನ್ನು ಸರಾಗವಾಗಿ ಇದರಲ್ಲಿ ಸಾಗಿಸಬಹುದಾದ್ದರಿಂದ ಇದೊಂದು ಬಹುಪಯೋಗ ಬೈಕ್ ಗಾಡಿ ಅನ್ನಬಹುದು. ಕೃಷಿ ಕಾರ್ಮಿಕರ ಕೊರತೆ ರೈತರನ್ನೇ ಹೊಸ ಹೊಸ ಅನುಶೋಧನೆ ಮಾಡುವ ವಿಜ್ಞಾನಿಗಳನ್ನಾಗಿ ರೂಪಿಸುತ್ತಿರುವುದಂತೂ ಸತ್ಯ.
ಬೈಕ್ ಗಾಡಿ ಬಗ್ಗೆ ಮಾಹಿತಿಗಾಗಿ: ಗಣಪತಿ ಹೆಗಡೆ ಸುಳಗಾರ, ಅಂಚೆ: ಸಂಪಗೋಡ
ಸಿದ್ದಾಪುರ, ಉತ್ತರ ಕನ್ನಡ- 581355. ದೂ: 08389-248408
ನಾಗರಾಜ ಮತ್ತಿಗಾರ
ಮೋಟಾರ್ ಸೈಕಲ್ ಇಂದು ಎಲ್ಲರ ಹತ್ತಿರವೂ ಇರುತ್ತದೆ. ಹೀಗಿರುವಾಗ ಬೈಕ್ ಅನ್ನು ಕೇವಲ ಓಡಾಡಲಿಕ್ಕೆ ಬಳಸಿಕೊಳ್ಳುವುದರ ಜೊತೆಗೆ ಕೃಷಿಕರು ಅದನ್ನು ತಮ್ಮ ಬೇಸಾಯದ ಬಳಕೆಗೂ ಯಾಕೆ ಬಳಸಿ ಕೊಳ್ಳಬಾರದು ಎನ್ನುವ ಪ್ರಶ್ನೆ ಗಣಪತಿ ಅವರಿಗೆ ಹುಟ್ಟಿತು. ಇವರು ತಮ್ಮ ಯೋಚನೆಯನ್ನು ಗೆಳೆಯರಾದ ಹುಲಿಮನೆ ನಾಗರಾಜ, ಮತ್ತಿಗಾರ ರಾಮಚಂದ್ರ ಅವರಲ್ಲಿ ಹೇಳಿಕೊಂಡಿದ್ದಾರೆ. ಮತ್ತ್ಯಾಕೆ ತಡ, ಶುರುವಾಯಿತು ಕಾರ್ಯಚರಣೆ. ಮರು ದಿನವೇ ಗಾಡಿ ತಯಾರಿಕೆಯಲ್ಲಿ ತೊಡಗಿದರು.
ಗಣಪತಿ ಅವರದ್ದು 125 ಸಿಸಿ ಬೈಕ್. ಅದಕ್ಕೆ ಯಾವ ರೀತಿ ಟ್ರ್ಯಾಲಿಯನ್ನು ಅಳವಡಿಸಿದರೆ ಅನುಕೂಲ ಎಂದು ಮೊದ ಮೊದಲು ಯೋಜನೆ ಹಾಕಿದರು. ಗುಜರಿಯಿಂದ ಕಬ್ಬಿಣ ಮತ್ತು ಯಜಡಿ ಬೈಕಿನ ಗಾಲಿಯನ್ನು ಖರೀದಿಸಿ ತಮಗೆ ಬೇಕಾದ ರೀತಿ ಗಾಡಿ ಮಾಡಿಸಿಕೊಂಡರು. ಬೈಕ್ ಜೋರಾಗಿ ಹೋದರು ಹಿಂದಿರುವ ಟ್ರ್ಯಾಲಿ ಸರಿಯಾಗಿದ್ದು, ಯಾವುದೇ ಕಡೇ ವಾಲದೇ ಸಲೀಸಾಗಿ ಚಲಿಸುವಂತೆ ಮಾರ್ಪಡಿಸಿ ಕೊಂಡರು. ಆದರೆ ಗಾಡಿ ವೇಗಕ್ಕೂ ಟ್ರ್ಯಾಲಿಯ ವೇಗಕ್ಕೂ ಇದು ಸರಿ ಬರಲಿಲ್ಲ. ಯಾಕೆಂದರೆ, ಟ್ರ್ಯಾಲಿಯ ಉದ್ದ ನಾಲ್ಕು ಅಡಿ ಇತ್ತು. ತಕ್ಷಣ ಅದಕ್ಕಾಗಿ ಟ್ರ್ಯಾಲಿ ಉದ್ದ ಕಡಿಮೆ ಮಾಡಬೇಕಾಯಿತು. ಜತೆಗೆ ಗೋಡ್ವೆಮನೆ ರವಿ ಈ ಗಾಡಿ ತಯಾರಿಕೆಗೆ ಹೊಸ ಇಂಜನಿಯರ್ ಆಗಿ ಸೇರ್ಪಡೆಗೊಂಡರು.
ರವಿ ಅವರು ಟ್ರ್ಯಾಲಿ ಅಳತೆಯನ್ನು ಮೂರು, ಮೂರರ ಅಳತೆಗೆ ಮಾರ್ಪಡಿಸಿಕೊಂಡರು. ಬೈಕಿನ ಚಾರ್ಸ್ಸಿಯಿಂದಲೇ ಟ್ರ್ಯಾಲಿ ಜೋಡಿಸುವ ವ್ಯವಸ್ಥೆ ಮಾಡಿದರು. ಬೈಕಿನ ಹೊಂದಿದ ಗಾಲಿಯ ಬ್ರೇಕ್ನಿಂದಲೇ ಟ್ರ್ಯಾಲಿ ಗಾಲಿಗಳಿಗೂ ಬ್ರೇಕ್ ಅಳವಡಿಸಿದರು. ಈಗ ಗಾಡಿಯಲ್ಲಿ ಯಾವುದೇ ತರಹದ ವಸ್ತುಗಳನ್ನು ಹಾಕಿಕೊಂಡು ಸರಾಗವಾಗಿ ಓಡಿಸಬಹುದು.
ಗಾಡಿಯ ಸಮಸ್ಯೆ
ಬೈಕಿಗೆ ಗಾಡಿಯನ್ನು ಅಳವಡಿಸಿದ ನಂತರ ಕನಿಷ್ಠ 15 ಕಿ.ಮೀ. ವೇಗವಾದಲ್ಲಾದರೂ ಬೈಕ್ ಚಲಿಸಬೇಕು. ಇಲ್ಲವೆಂದರೆ ಬ್ಯಾಲೆನ್ಸ್ ತಪ್ಪುತ್ತದೆ ಎನ್ನುವುದು ಗಣಪತಿ ಅವರ ಅನುಭವದ ಮಾತು. ಸಮರಸ್ತೆಯಲ್ಲಿ ಮತ್ತು ಉತ್ತಮ ರಸ್ತೆಗಳಲ್ಲಿ ಏಷ್ಟೇ ವೇಗವಾಗಿ ಮತ್ತು ನಿಧಾನವಾಗಿ ಹೋದರು ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಮಲೆನಾಡಿನ ಕೊರಕಲು ರಸ್ತೆಯಲ್ಲಿ ಈ ಗಾಡಿಯನ್ನು ಸರಾಗವಾಗಿ ಓಡಿಸುವುದು ಕಷ್ಟ. ಹಳ್ಳಿ ರಸ್ತೆಯಲ್ಲಿ ಬಹಳ ತಗ್ಗು ಮತ್ತು ಗಾಟಿಯಿರುವುದೇ ಈ ಗಾಡಿಗಿರುವ ತೊಂದರೆ.
5 ಕ್ವಿಂಟಾಲ್ ಭಾರವನ್ನು ಗಾಡಿಯ ಮೇಲೆ ಹೇರಿದರೂ ಆರಾಮವಾಗಿ ಬೈಕ್ ಎಳೆಯುತ್ತದೆ. ಮೊದಲ ಸಲ ಈ ಗಾಡಿಯನ್ನು ತಯಾರಿಸಿರುವುದರಿಂದ ಎಳು ಸಾವಿರ ಖರ್ಚಾಗಿದ್ದು. ಮತ್ತೊಮ್ಮೆ ತಯಾರಿಸುವಾಗ ಇಷ್ಟು ಖರ್ಚು ಬರುವುದಿಲ್ಲ. ಕಬ್ಬಣ, ಗುಜುರಿಯಿಂದ ಎರಡು ಗಾಲಿ, ಟ್ರ್ಯಾಲಿಯನ್ನು ತಯಾರಿಸುವ ಕೂಲಿ ಇದಕ್ಕೆ ಬೇಕಾದ ಸಾಮಗ್ರಿ. ಈಗ ಕಬ್ಬಿಣದ ಬೆಲೆ ಹೆಚ್ಚಾಗಿರುವುದರಿಂದ ಐದು ಸಾವಿರದ ಹತ್ತಿರ ಖರ್ಚಾಗಬಹುದು ಅನ್ನುತ್ತಾರೆ ಗಣಪತಿ.
ಮಳೆಗಾಲದಲ್ಲಿ ಹಟ್ಟಿಗೆ ಬೇಕಾಗುವ ಸೊಪ್ಪು, ಬೇಸಿಗೆಯಲ್ಲಿ ತರಗೆಲೆಯನ್ನು, ಕೃಷಿ ಉತ್ಪನ್ನಗಳನ್ನು ಸರಾಗವಾಗಿ ಇದರಲ್ಲಿ ಸಾಗಿಸಬಹುದಾದ್ದರಿಂದ ಇದೊಂದು ಬಹುಪಯೋಗ ಬೈಕ್ ಗಾಡಿ ಅನ್ನಬಹುದು. ಕೃಷಿ ಕಾರ್ಮಿಕರ ಕೊರತೆ ರೈತರನ್ನೇ ಹೊಸ ಹೊಸ ಅನುಶೋಧನೆ ಮಾಡುವ ವಿಜ್ಞಾನಿಗಳನ್ನಾಗಿ ರೂಪಿಸುತ್ತಿರುವುದಂತೂ ಸತ್ಯ.
ಬೈಕ್ ಗಾಡಿ ಬಗ್ಗೆ ಮಾಹಿತಿಗಾಗಿ: ಗಣಪತಿ ಹೆಗಡೆ ಸುಳಗಾರ, ಅಂಚೆ: ಸಂಪಗೋಡ
ಸಿದ್ದಾಪುರ, ಉತ್ತರ ಕನ್ನಡ- 581355. ದೂ: 08389-248408
ನಾಗರಾಜ ಮತ್ತಿಗಾರ
1 comment:
ವಿಶಿಷ್ಟವಾಗಿದೆ! ಪರಿಚಯಿಸಿದ್ದಕ್ಕೆ ಧನ್ಯವಾದಗಳು
Post a Comment