Saturday, October 31, 2009

ಮಳೆಯೇ ಹೊಲ ಮೇಯ್ದಾಗ





`ಪ್ರತಿ ವರ್ಷ ಬರ­ದಿಂದ ದೀಪಾ­ವಳಿ ಹಬ್ಬ ಮಾಡಾಕ ಆಗೂ­ದಿಲ್ರಿ. ವರ್ಷ ನಾವು ಬೆಳಿ ಚೆನ್ನಾಗಿ ಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡ­­ಬ್ಬಕ್ಕ ದೀಪ ಹಚ್ಚಾಕ ಮನಿನೇ ಕೊಚ್ಚಿ ಹೋಗ್ಯಾವ್ರಿ' ಎನ್ನು­ವಾಗ ನೆರೆ ಪೀಡಿತ ಪ್ರದೇ­ಶದ ರೈತನ ಕಣ್ಣಂ­ಚಿ­ನಿಂದ ನೀರು...

ನಿಜ, ಏನು ಆಗ­ಬಾ­ರ­ದಿತ್ತೋ ಅದು ಆಗ­ಬಾ­ರದ ಸಮ­ಯ­ದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರ­ಬಾ­ರದ ಸಮ­ಯ­ದಲ್ಲಿ ಬಂದ ಮಳೆಯ ಆರ್ಭ­ಟಕ್ಕೆ ಸಹ­ಸ್ರಾರು ರೈತರು ಬೆಳೆಯ ಜೊತೆಗೆ ನೆಲೆ­ಯನ್ನು ಕಳೆ­ದು­ಕೊಂಡು ಸಂತ್ರ­ಸ್ತ­ರಾ­ಗಿ­ದ್ದಾರೆ. ನಾಲ್ಕು ದಿನದ ಮಳೆ­ಯಲ್ಲಿ ಕೊಚ್ಚಿ ಹೋದ ಸಂಪ­ತ್ತನ್ನು ಪುನಃ ಸಂಗ್ರ­ಹಿ­ಸಲು ನಲ­ವತ್ತು ವರ್ಷ ಬೇಕಾ­ಗ­ಬ­ಹುದು ಎಂದರೆ ಅತಿ­ಶ­ಯೋ­ಕ್ತಿ­ಯಲ್ಲ.

ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆ­ಗಳು ಸಂಪೂರ್ಣ ನಾಶ­ವಾ­ಗಿದೆ. ಸಹ­ಸ್ರಾರು ಕೋಟಿ ರೂಪಾಯಿ ನಷ್ಟ­ವಾ­ಗಿದೆ. ರಾಜ್ಯದ ಜನ­ತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನ­ಕ್ಕಾಗಿ ಕೈಚಾ­ಚುವ ಪರಿ­ಸ್ಥಿತಿ ಬಂದಿ­ರು­ವುದು ವಿಪ­ರ್ಯಾ­ಸದ ಸಂಗತಿ.


ನೆರೆ­ಯಿಂದ ಬೆಳೆ ಹಾನಿ: ನೆರೆ ಇಳಿ­ಯು­ತ್ತಿ­ದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾ­ಗು­ತ್ತಿದೆ. ಆದರೆ ನಿಖರ ಮಾಹಿತಿ ಲಭ್ಯ­ವಾ­ಗು­ತ್ತಿಲ್ಲ. ಒಂದು ಅಂದಾ­ಜಿನ ಪ್ರಕಾರ ಬೆಳ­ಗಾ­ವಿ­ಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್‌ ಬೆಳೆ ನಾಶ­ವಾ­ಗಿದೆ. ಹಾವೇ­ರಿ­ಯಲ್ಲಿ ಒಂದು ಲಕ್ಷ, ಧಾರ­ವಾ­ಡ­ದಲ್ಲಿ ಒಂದು ಲಕ್ಷ, ಗದ­ಗ­ದಲ್ಲಿ ತೊಂಬ­ತ್ತೊಂ­ಬತ್ತು ಸಾವಿರ, ಕಲ­ಬು­ರ್ಗಿ­ಯಲ್ಲಿ ಎರಡು ಲಕ್ಷ ಹೆಕ್ಟೇರ್‌ ಬಾಗ­ಲ­ಕೋ­ಟೆ­ಯಲ್ಲಿ ನಲ­ವತ್ತು ಸಾವಿರ, ವಿಜಾ­ಪು­ರ­ದಲ್ಲಿ ಮೂವ­ತ್ತೆ­ರಡು ಸಾವಿರ ಹೆಕ್ಟೇರ್‌ ಭೂಮಿ­ಯ­ಲ್ಲಿನ ಬೆಳೆ­ಗಳು ನಾಶ­ವಾ­ಗಿದೆ. ಬಳ್ಳಾರಿ, ಶಿರ­ಗುಪ್ಪ, ಹೊಸ­ಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶ­ವಾ­ಗಿದೆ.


ರೈತರ ಅಳಲು: `ನಾವು ಭತ್ತ, ಮೆಣ­ಸಿ­ನ­ಕಾಯಿ, ಮೆಕ್ಕೆ ಜೋಳ­ವನ್ನು ಬೆಳೆ­ಯು­ತ್ತೆವೆ. ನಮಗೆ ಭತ್ತದ ಬೆಳೆ­ಯಲ್ಲಿ ಒಂದು ಎಕ­ರೆಗೆ ಸುಮಾರು ಇಪ್ಪತ್ತು ಸಾವಿ­ರಕ್ಕೂ ಹೆಚ್ಚಿಗೆ ನಷ್ಟ­ವಾ­ಗಿದೆ. ಮೆಕ್ಕೆ ಜೋಳ ಒಂದು ಎಕ­ರೆಗೆ 30 ಚೀಲ ಬರು­ತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣ­ಸಿನ ಬೆಳೆ ಸಂಪೂರ್ಣ ನಾಶ­ವಾ­ಗಿದೆ. ಇದನ್ನು ಕಿತ್ತು ಹಾಕ­ಬೇಕು. ನಮ್ಮೂ­ರಿನ ಕೆರೆ ಒಡೆದು ನೂರಾರು ಪಂಪ್‌ ಸೆಟ್‌­ಗಳು ಕೊಚ್ಚಿ­ಹೋ­ಗಿದೆ. ಈಗ ನಮ್ಮ ಜಮೀ­ನ­ನನ್ನು ನೋಡಿ­ದರೆ ಕಣ್ಣಲ್ಲಿ ನೀರು ಬರು­ತ್ತದೆ. ನಾಲ್ಕು ತಿಂಗ­ಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾ­ಯ­ವನ್ನು ಪಡೆ­ಯು­ತ್ತೇವೆ ಎನ್ನುವ ಆಸೆ­ಯ­ಲ್ಲಿ­ದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆ­ಯೊಂ­ದಿಗೆ ನೆರೆ­ಯ­ಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡು­ತ್ತಾರೆ ಬಳ್ಳಾ­ರಿಯ ಬಾಗ­ನ­ಹ­ಟ್ಟಿಯ ರೈತ ಶಿವ­ಶಂ­ಕರ್‌.

ಗಂಗಾ­ವ­ತಿಯ ರೈತರ ಗೋಳು ಮತ್ತೊಂದು ರೀತಿ­ಯದ್ದು. ಒಂದು ಕಡೆ ನೆರೆ­ಯಿಂದ ಭತ್ತದ ಬೆಳೆ ನಾಶ­ವಾ­ದರೆ, ಮತ್ತೊಂದು ಕಡೆ­ಯಲ್ಲಿ ತುಂಗ­ಭದ್ರಾ ನಾಲೆ ಒಡೆದು ಬೆಳೆ ನಾಶ­ವಾ­ಗಿದೆ. ಇಲ್ಲಿನ ರೈತ ವೇಣು­ಗೋ­ಪಾಲ್‌ ಅವರ ಪ್ರಕಾರ `ಸಾವಿ­ರಾರು ಎಕರೆ ಭತ್ತದ ಹೊಲ­ಗ­ಳಲ್ಲಿ ಎಕ­ರೆಗೆ ಹತ್ತು ಚೀಲ ಬೆಳೆಯು ಸಿಗು­ವು­ದಿಲ್ಲ. ನೆರೆ­ಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರ­ಯಿಸಿ ಸಿಂದ­ನೂರು, ಗಂಗಾ­ವತಿ, ಮಸ್ಕಿ, ಮಾನ್ವಿ ಯ ಸಾವಿ­ರಾರು ರೈತರು ಭತ್ತ, ಕೆಂಪು ಮೆಣ­ಸಿ­ನ­ಕಾಯಿ, ಹತ್ತಿ ಬೆಳೆ­ಯು­ತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮ­ಯಕ್ಕೆ ನೀರನ್ನು ಬಿಡ­ಲಾ­ಗದೆ ಬೆಳೆ­ಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿ­ಯಾ­ದರೆ, ಮತ್ತೊಂದು ಕಡೆ ನೀರಿ­ಲ್ಲದೆ ಸಂತ್ರ­ಸ್ತ­ರಾ­ಗಿ­ದ್ದೇವೆ' ಎನ್ನು­ತ್ತಾರೆ.

ಗದ­ಗದ ರೈತರ ಸಂಕಷ್ಟ ಮತ್ತೊಂದು ರೀತಿ­ಯದ್ದು. ಇಲ್ಲಿನ ರೈತ ಮುಖಂಡ ಗೋಣಿ­ಬ­ಸಪ್ಪ ಕೊರ್ಲ­ಹಳ್ಳಿ ಇವ­ರನ್ನು ಮಾತ­ನಾ­ಡಿ­ಸಿ­ದಾಗ ನೆರೆಗೆ ಒಳ­ಗಾದ ರೈತರ ಕಷ್ಟ­ವನ್ನು ಎಳೆ­ಎ­ಳೆ­ಯಾಗಿ ಬಿಡಿ­ಸಿ­ಡು­ತ್ತಾರೆ. `ಗದ­ಗದ ಹುಲ­ಗ­ನ­ಗೇರಿ, ಮೆಣಸಿ, ಕಾಡ­ಗೂಳಿ, ಕುರ­ವಿ­ನ­ಕೊ­ಪ್ಪ­ದಲ್ಲಿ ರೈತರು ಅಕ್ಷ­ರಶಃ ನಿರ್ಗ­ತಿ­ಕ­ರಾ­ಗಿ­ದ್ದಾರೆ. ಈ ಭಾಗ­ದಲ್ಲಿ ಈರು­ಳ್ಳಿ­ಯನ್ನು ಹೆಚ್ಚಾಗಿ ಬೆಳೆ­ಯು­ತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟು­ಕೊಂ­ಡಿ­ದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆ­ದರೆ ದೈವ ಮತ್ತೊಂದು ಬಗೆ­ಯಿತು ಎನ್ನುವ ಹಾಗೆ. ನಮ್ಮ ಅನ್ನ­ವಾದ ಜೋಳ, ರಾಗಿ ಎಲ್ಲ ನೀರು ಪಾಲಾ­ಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿ­ದರೆ ಹೂಳು ಮಾತ್ರ ಇದೆ. ನೆರೆ ಬೆಳೆ­ಯನ್ನು ಮಾಯ ಮಾಡಿ­ಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾ­ಗಿದೆ. ರೈತರು ಶಾಲೆ, ರೈಲು ನಿಲ್ದಾ­ಣ­ದಲ್ಲಿ ವಾಸಿ­ಸು­ತ್ತಿ­ದ್ದಾರೆ.

ರೋಣ ತಾಲೂ­ಕಿ­ನಲ್ಲಿ ಬೆಣ್ಣೆ­ಹಳ್ಳ ಮತ್ತು ಮಲ­ಪ್ರಭಾ ನದಿ ಸೇರುವ ಜಾಗ­ದಲ್ಲಿ ಯಾವಾ­ಗಲೂ ನೆರೆ ಆಗು­ತ್ತಿತ್ತು. ಆದರೆ ಈ ಬಾರಿ ನಿರೀ­ಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆ­ಹ­ಳ್ಳದ ಬಗ್ಗೆ ಬಹ­ಳಷ್ಟು ವರ್ಷ­ದಿಂದ ಗೊತ್ತಿ­ರುವ ಜನ­ಪ್ರ­ತಿ­ನಿ­ಧಿ­ಗಳು ಮೌನ ವಹಿ­ಸಿ­ರು­ವುದು ನೋವಿನ ಸಂಗತಿ. ಇದು ಒಂದೆ­ಡೆಗೆ ಆದರೆ ಬಡ ರೈತರು ಮನೆ­ಯಲ್ಲಿ ಕಣಜ ಮಾಡಿ­ಕೊಂಡು ದಾಸ್ತಾನು ಮಾಡಿ­ಟ್ಟು­ಕೊಂಡ ಬೆಳೆ­ಯೆಲ್ಲ ಕೊಚ್ಚಿ ಹೋಗಿದೆ' ಎನ್ನು­ತ್ತಾರೆ.

ಸೋಯಾ ಬೀನ್‌, ಭತ್ತ, ರಾಗಿ, ಜೋಳ, ಸೂರ್ಯ­ಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರ­ಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆ­ಗಳು ನಾಶ­ವಾ­ಗಿದೆ. ಸದಾ ಕಷ್ಟ­ದ­ಲ್ಲಿಯೇ ಜೀವನ ಸಾಗಿ­ಸುವ ರೈತ­ನಿಗೆ ನೆರೆ ಎನ್ನು­ವುದು ಗಾಯದ ಮೇಲೆ ಬರೆ ಹಾಕಿ­ದಂತೆ ಆಗಿದೆ. ಬೆಳೆ ಬೆಳೆ­ಯಲು ಹಾಕಿದ ಬಂಡ­ವಾಳ ಸಮೇತ ಬೆಳೆಯು ಇಲ್ಲ­ದಂ­ತಾ­ಗಿದೆ. ಜೊತೆ­ಯಲ್ಲಿ ಖಾಸಗಿ ಸಾಲ, ಬ್ಯಾಂಕ್‌ ಸಾಲ ತೀರಿ­ಸುವ ಹೊಣೆಯು ರೈತ­ನಿ­ಗಿದೆ.

ಇಂತಹ ರೈತ­ರಿಗೆ ಪರಿ­ಹಾ­ರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದು­ಕುವ ಉತ್ಸಾ­ವನ್ನೇ ಕಳೆದು ಕೊಂಡಿ­ದ್ದಾರೆ. ಇವ­ರಿಗೆ ಪರಿ­ಹಾರ ನೀಡಿ­ದರೆ ಸಾಲದು ಬದು­ಕುವ ಉತ್ಸಾ­ಹ­ವನ್ನು ಮೂಡಿ­ಸುವ ಅಗ­ತ್ಯ­ವಿದೆ.


ಮುಗಿ­ಸುವ ಮುನ್ನ: ಬದು­ಕಲು ಅವ­ಶ್ಯ­ಕ­ವಾದ ಆಹಾರ ಬೆಳೆ­ಗಳು ನಾಶ­ವಾ­ಗಿ­ರು­ವುದು ಕೇವಲ ಬೆಳೆ ಬೆಳೆ­ಯುವ ರೈತ­ನಿಗೆ ಮಾತ್ರ­ವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನ­ತೆಯ ಮೇಲೂ ಪರಿ­ಣಾಮ ಬೀರ­ಲಿದೆ.


ನಾಗರಾಜ ಮತ್ತಿಗಾರ

2 comments:

Unknown said...

uttama baraha
ಬದು­ಕಲು ಅವ­ಶ್ಯ­ಕ­ವಾದ ಆಹಾರ ಬೆಳೆ­ಗಳು ನಾಶ­ವಾ­ಗಿ­ರು­ವುದು ಕೇವಲ ಬೆಳೆ ಬೆಳೆ­ಯುವ ರೈತ­ನಿಗೆ ಮಾತ್ರ­ವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನ­ತೆಯ ಮೇಲೂ ಪರಿ­ಣಾಮ ಬೀರ­ಲಿದೆ.


tumba tukada matu

Navajeevana Savayava krushiparivar(R) said...

ನಿಜವಾಗಿ ರೈತರು ಊಟ ಮನೆ ಇಲ್ಲದೇ ತೊಂದರೆಯಲ್ಲಿದ್ದಾರೆ.ಆದರೆ ನಮ್ಮ ನಾಯಕರು ಪಾಪ ತಮ್ಮ ಸೀಟಿಗಾಗಿ ಪರದಾಡುತ್ತಿದ್ದಾರೆ.