Wednesday, August 5, 2009

ಹಸಿರು ಗೊಬ್ಬರ ರಾಸಾಯನಿಕ ಕೃಷಿಗೆ ವಿದಾಯ



ಬಿತ್ತನೆ ಸಮಯ ಬಂದಾಗ ರೈತರು ರಸ­ಗೊ­ಬ್ಬ­ರ­ಕ್ಕಾಗಿ ಗೊಬ್ಬ­ರ­ಕ್ಕಾಗಿ ಪರ­ದಾ­ಡುವ ಸ್ಥಿತಿ­ಯನ್ನು ಇಂದು ಕಾಣು­ತ್ತಿ­ದ್ದೇವೆ. ಇಳು­ವರಿ ಹೆಚ್ಚು ಮಾಡುವ ಉದ್ದೇ­ಶ­ದಿಂದ `ಹ­ಸಿರು ಕ್ರಾಂತಿ' ಪ್ರಾರಂ­ಭ­ವಾ­ಯಿತೋ ಅಂದಿ­ನಿಂ­ದಲೇ ರೈತರು ಗೊತ್ತಿ­ಲ್ಲದೆ ಕಷ್ಟದ ಕಡೆ ಹೊರ­ಟಿ­ದ್ದರು. ಹೆಚ್ಚಿಗೆ ಇಳು­ವ­ರಿಗೆ ಹೆಚ್ಚಿಗೆ ಗೊಬ್ಬರ ಎನ್ನುವ ಸಿದ್ಧಾಂ­ತಕ್ಕೆ ಮೋರೆ ಹೋದರು. ಪರಿ­ಣಾಮ ಭೂಮಿ ಹೆಚ್ಚಿಗೆ ಗೊಬ್ಬ­ರ­ವನ್ನು ಕೇಳ ತೊಡ­ಗಿತು. ಇದ­ರಿಂದ ರೈತ ಹೊರ ಬರ­ಬೇ­ಕಾ­ದರೆ ರಸ­ಗೊ­ಬ್ಬ­ರದ ದಿಕ್ಕನ್ನು ಬಿಟ್ಟು ಪುನಃ ದೇಶೀ ಕೃಷಿ­ಯೆ­ಡಗೆ ಹಿಂತಿ­ರು­ಗ­ಬೇಕು.
ರಾಸಾ­ಯ­ನಿಕ ಕೃಷಿ­ಯನ್ನು ಬುಟ್ಟು ದೇಶೀ ಕೃಷಿ­ಯೆ­ಡೆಗೆ ಬಹಳ ಜನ ಬರು­ತ್ತಿ­ದ್ದಾರೆ. ಅಂತ­ವ­ರಲ್ಲಿ ರಾಮ­ನ­ಗರ ಜಿಲ್ಲೆ ಚನ್ನ­ಪ­ಟ್ಟಣ ತಾಲೂ­ಕಿನ ಅರ­ಳಾ­ಳು­ಸಂ­ದ್ರದ ಗಿರೀ­ಶ್‌­ಕೂಡಾ ಒಬ್ಬರು. ಇವರ ಜಮೀನು ಈಗ ರಸ­ಗೊ­ಬ್ಬ­ರ­ವನ್ನು ಕೇಳು­ವು­ದಿಲ್ಲ.
ಇವರು ಪಾಳೇ­ಕರ್‌ ಹೇಳಿ­ರುವ ಜೀವಾ­ಮೃತ ಕೃಷಿ ಹಾಗೂ ಸಹಜ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಜೊತೆ­ಯಲ್ಲಿ ನೀರಿಂ­ಗಿ­ಸುವ ವ್ಯವ­ಸ್ಥೆ­ಯನ್ನು ಮಾಡಿ­ಕೊಂ­ಡಿ­ದ್ದಾರೆ.
ಗಿರೀಶ್‌ ಅವರ ಸಹಜ ಕೃಷಿ: ಇವ­ರಿಗೆ ನಾಲ್ಕು ಎಕರೆ ಜಮೀ­ನಿದೆ. ಅದ­ರಲ್ಲಿ ಮೂರು ಎಕರೆ ಜಾಗ­ದಲ್ಲಿ ಭತ್ತ ಬೆಳೆ­ಯು­ತ್ತಾರೆ. ಭತ್ತ­ವನ್ನು ನಾಟಿ ಮಾಡುವ ಪೂರ್ವ­ದಲ್ಲಿ ಇವರು ಹಸಿರು ಗೊಬ್ಬರ ತಯಾ­ರಿಗೆ ಮೊದಲ ಆದ್ಯತೆ ನೀಡು­ತ್ತಿ­ದ್ದಾರೆ. ಮೇ ತಿಂಗ­ಳ­ಲಿ­ನಲ್ಲಿ ಭತ್ತ ಬೆಳೆ­ಯುವ ಮೂರು ಎಕ­ರೆ­ಯಲ್ಲೂ ಸೆಣ­ಬನ್ನು ಬಿತ್ತು­ತ್ತಾರೆ. ಇದು ಸುಮಾರು ಒಂದು ಆಳು ಎತ್ತ­ರಕ್ಕೆ ಬೆಳೆದ ಮೇಲೆ ಅಲ್ಲಿಯೇ ಕಡಿ­ದು­ಹಾಕಿ ಉಳಿ­ಮೆ­ಯನ್ನು ಮಾಡು­ತ್ತಾರೆ. ಇದು ಸಂಪೂರ್ಣ ಕೊಳೆ­ಯು­ವ­ವ­ರೆಗೂ ಬಿಟ್ಟು ಮತ್ತೊಮ್ಮೆ ಉಳಿಮೆ ಮಾಡು­ತ್ತಾರೆ. ಇದ­ರಿಂದ ಭೂಮಿ ಸಾಕಷ್ಟು ತಾಕತ್‌ ಪಡೆ­ದಿ­ರು­ತ್ತದೆ. ಭೂಮಿ­ಯಲ್ಲಿ ಸಾರ­ಜ­ನಕ ತಾನಾ­ಗಿಯೇ ಹೆಚ್ಚಾ­ಗು­ತ್ತದೆ. ಯೂರಿಯಾ ಗೊಬ್ಬರ ನೀಡಿ­ದರೆ ನೀಡುವ ಪರಿ­ಣಾ­ಮ­ವನ್ನು ಸೆಣಬು ನೀಡು­ತ್ತದೆ.
ಇದ­ಲ್ಲದೇ ಜೀವಾ­ಮೃತ ತಯಾ­ರಿಸಿ ಭತ್ತದ ಬೆಳೆಗೆ ಬಳ­ಸು­ತ್ತಾರೆ. 10 ಲೀ ಗಂಜಲ, 10 ಕಿಲೋ ಸೆಗಣಿ, 2 ಕಿಲೋ ಬೆಲ್ಲ, 2 ಕಿಲೋ ದ್ವಿದಳ ಧಾನ್ಯದ ಹಿಟ್ಟು, ನೀರು, ಮತ್ತು ಮಣ್ಣನ್ನು ಮಿಶ್ರಣ ಮಾಡಿ ಜೀವಾ­ಮೃ­ತ­ವನ್ನು ತಯಾ­ರಿಸಿ ಕೊಳ್ಳು­ತ್ತಾರೆ.
`ನಾನು ಈ ರೀತಿ ಕೃಷಿ ಮಾಡ­ಲಿಕ್ಕೆ ತೊಡ­ಗಿದ ಮೇಲೆ ಇಳು­ವ­ರಿಯು ಒಂದು ಹಂತ­ದಲ್ಲಿ ಹೆಚ್ಚಾ­ಗಿದೆ. ರಾಸಾ­ಯ­ನಿಕ ಗೊಬ್ಬರ ಹಾಕಿ ಕೃಷಿ ಮಾಡು­ವಾಗ ಭತ್ತ ಹೆಚ್ಚಗೆ ಬಂದ­ಹಾಗೆ ಕಾಣು­ತ್ತಿತ್ತು. ಆಗ ಜೊಳ್ಳು ಹೆಚ್ಚಿಗೆ ಬರು­ತ್ತಿತ್ತು. ಆದರೆ ಜೊಳ್ಳು ರಹಿತ ಭತ್ತ ಸಿಗು­ತ್ತಿದೆ. ಆದ­ರಿಂದ ಇಳು­ವ­ರಿ­ಯಲ್ಲಿ ಕಡಿ­ಮೆ­ಯಾದ ಹಾಗೇ ಕಾಣು­ವು­ದಿಲ್ಲ. ಈ ರೀತಿಯ ಕೃಷಿ­ಯಲ್ಲಿ ಭತ್ತಕ್ಕೆ ರೋಗ ತಡೆದು ಕೊಳ್ಳುವ ಶಕ್ತಿ ಬರು­ವುದು ಗಮ­ನಕ್ಕೆ ಬಂದಿದೆ' ಎಂಬು­ದಾಗಿ ತಮ್ಮ ಕೃಷಿ ಅನು­ಭ­ವ­ವನ್ನು ಗಿರೀಶ್‌ ಹಂಚಿ­ಕೊ­ಳ್ಳು­ತ್ತಾರೆ.
ರೇಷ್ಮೆ ಕೃಷಿ: ಅರ್ಧ ಎಕರೆ ಜಾಗ­ದಲ್ಲಿ ರೇಷ್ಮೆ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ. ಸಾವ­ಯವ ಕೃಷಿ­ಯಲ್ಲಿ ಇದನ್ನು ಮಾಡು­ತ್ತಿ­ರು­ವ­ದ­ರಿಂದ ರೋಗ ರಹಿ­ತ­ವಾಗಿ ಒಳ್ಳೆಯ ಗೂಡನ್ನು ಬೆಳೆ­ಯಲು ಸಾಧ್ಯ­ವಾ­ಗಿದೆ. 31 ಕಿಲೋ ರೇಷ್ಮೆ ಗುಡನ್ನು ಪಡೆ­ದಿ­ರು­ವುದು ಇದಕ್ಕೆ ಸಾಕ್ಷಿ.
ರೇಷ್ಮೆ ಸೊಪ್ಪಿನ (ಹಿಪ್ಪು ನೇರಳೆ) ಗಿಡ­ಗಳ ಸಾಲು­ಗಳ ಮಧ್ಯೆ ಹೊಂಗೆ ಸೊಪ್ಪಿನ ಹಾಸನ್ನು ಮಾಡಿ­ದ್ದಾರೆ. ಇದಕ್ಕೆ ಸೆಗಣಿ ಗೊಬ್ಬರ ಮತ್ತು ನೀರನ್ನು ಕಾಲ­ಕಾ­ಲಕ್ಕೆ ಬಿಡು­ವು­ದ­ರಿಂದ ಎರೆ­ಹು­ಳು­ಗಳು ಉತ್ಪ­ತ್ತಿ­ಯಾ­ಗು­ತ್ತಿದೆ. ಗೀಡ­ಗಳು ರೋಗ ರಹಿ­ತ­ವಾಗಿ ಉತ್ತಮ ಸೊಪ್ಪು ಬಿಡು­ತ್ತಿದೆ.
ಇಂಗು ­ಗುಂಡಿ: ಗಿರೀಶ್‌ ಅವರ ಜಮೀನು ದೊಡ್ಡ ಗುಡ್ಡದ ಬುಡ­ದ­ಲ್ಲಿದೆ. ರಾಮ­ನ­ಗರ ಜಿಲ್ಲೆ­ಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರು­ವು­ದ­ರಿಂದ ಜಮೀ­ನಿಗೆ ನೀರಿನ ಅಗ­ತ್ಯ­ವಿತ್ತು. ಅದ­ಕ್ಕಾಗಿ ಇವರು ಕಂಡು ಕೊಂಡ ಪರಿ­ಹಾ­ರ­ವೆಂ­ದರೆ ಇಂಗು­ಗುಂ­ಡಿ­ಯನ್ನು ಮಾಡಿ­ಕೊ­ಳ್ಳು­ವುದು.
ಅದ­ಕ್ಕಾಗಿ ಇವರು ತಮ್ಮ ಜಮೋ­ನಿನ ಮೇಲ್ಬಾ­ದಲ್ಲಿ9 ಹತ್ತು ಅಡಿ ಆಳ, 30 ಅಡಿ ಉದ್ದ, 40 ಅಡಿ ಅಗ­ಲದ ಇಂಗು­ಗುಂ­ಡಿ­ಯನ್ನು ತೊಡಿ­ದರು. ಬಿದ್ದ ಕಡಿಮೆ ಮಳೆಯ ನೀರು ಗುಡ್ಡ­ದಿ­ಮದ ಹರಿದು ಬಂದು ಇಂಗು­ಗುಂ­ಡಿ­ಯಲ್ಲಿ ಶೇಖ­ರಣೆ ಆಗು­ತ್ತಿದೆ. ಇದ­ರಿಂದ ಜಮೀ­ನಲ್ಲಿ ಇರುವ ಬಾವಿ ಸದಾ ತುಂಬಿ­ರು­ತ್ತದೆ. ಅಲ್ಲದೆ ಇವರ ಜಮೀ­ನಿನ ಪಕ್ಕ­ದ­ಲ್ಲಿ­ರುವ ಮಾವಿನ ತೋಟಕ್ಕೂ ಅನು­ಕೂ­ಲ­ವಾ­ಗಿ­ರು­ವುದು ಕಂಡು ಬಂದಿದೆ.
`ರೈತ ಸಂಘದ ಸೋಮ­ಲಿಂ­ಗಯ್ಯ ಹಾಗೂ ಪುಟ್ಟ­ಸ್ವಾಮಿ ಸಹ­ಕಾ­ರ­ದಿಂದ ಸುಸ್ಥಿರ ಕೃಷಿ ತರ­ಬೇ­ತಿಗೆ ಹೋಗಿ ಬಂದ ಮೇಲೆ ಇಂತಹ ದೇಶೀ ಕೃಷಿ ಬಗ್ಗೆ ಜಾಗೃ­ತ­ನಾ­ಗಿ­ದ್ದೇನೆ. ಖರ್ಚು ಕಡಿ­ಮೆ­ಯಾ­ಗು­ತ್ತದೆ. ಇಂಗು ಗುಂಡಿ ಮಾಡಿ­ಕೊಂ­ಡಿ­ರು­ವು­ದ­ರಿಂದ ನೀರಿನ ಸಮಸ್ಯೆ ಇಲ್ಲ. ನಾನು ಮಾಡು­ತ್ತಿರು ಕೃಷಿ ಕ್ರಮಕ್ಕೆ ಮನೆ­ಯ­ವರ ಸಹ­ಕಾ­ರವು ಇದೆ' ಎಂದು ಗಿರೀಶ್‌ ಹೇಳು­ತ್ತಾರೆ.
ಮಾಹಿ­ತಿ­ಗಾಗಿ: ಗಿರೀಶ್‌ s/o ಶಿವಣ್ಣ
ಅರ­ಳಾ­ಳು­ಸಂದ್ರ,
ವಿರು­ಪಾ­ಕ್ಷ­ಪುರ ಹೋಬಳಿ
ಚನ್ನ­ಪ­ಟ್ಟಣ, ರಾಮ­ನ­ಗರ
ದೂರ­ವಾಣಿ: 9900804677

2 comments:

ಕೇಶವ ಪ್ರಸಾದ್.ಬಿ.ಕಿದೂರು said...

ಲೇಖನ ಚೆನ್ನಾಗಿದೆ. ರೈತಾಪಿ ಬ್ಲಾಗ್‌ ಕೂಡ ಅಷ್ಟೇ ಸೊಗಸಾಗಿದೆ. ಇಂಥ ಬ್ಲಾಗ್ ಗಳನ್ನು ನಾಡಿನ ಎಲ್ಲ ರೈತರೂ ನೋಡುವಂತಹ ದಿನಗಳು ಬರಬೇಕು. ತಂತ್ರಜ್ಞಾನದ ಉಪಯೋಗ ಅವರಿಗೂ ಸಿಗಬೇಕು. ಆಲ್ ದಿ ಬೆಸ್ಟ್. ಅಂದ ಹಾಗೆ ಗ್ರಾಮೀಣ ಬದುಕು-ರೈತ ಜನ ಜೀವನ, ನೋವು-ನಲಿವಿನ ಬಗ್ಗೆ ನನ್ನ ನುಡಿಚೈತ್ರ ಬ್ಲಾಗ್ ನಲ್ಲಿ ಆಗಿಂದಾಗ್ಗೆ ಬರೆಯುತ್ತೇನೆ. ಓದಿ ಅಭಿಪ್ರಾಯ ತಿಳಿಸಿ.
ಕೇಶವ ಪ್ರಸಾದ್ ಬಿ ಕಿದೂರು
http://nudichaitra.blogspot.com

ರಮೇಶ್ ಹಿರೇಜಂಬೂರು said...

ನಿಜಕ್ಕೂ ಗುಣಾತ್ಮಕ ಲೇಖನ. ರೈತರು ಹೀಗೆ ಹೊಸ ಹಾದಿ ತುಳಿಯದ ಹೊರತು ಬಹು ರಾಷ್ಟ್ರೀಯ ಕಂಪೆನಿಗಳ ದಾಸರಾಗಿ ದುಡಿಯುವುದು ತಪ್ಪುವುದಿಲ್ಲ.. ಅದಕ್ಕೆ ಬರಹಗಾರರು, ವಿಜ್ಞಾನಿಗಲಿಗಿಂತ ರೈತರೇ ಕೃತಿಯ ಮೂಲಕ ಉತ್ತರ ಕೊಡುವುದನ್ನು ಕಲಿಯಬೇಕು.