Sunday, May 3, 2009

ವಿಷಮುಕ್ತ ಮಾವು


ಬೇಸಿಗೆ ಪ್ರಾರಂ­ಭ­ವಾ­ಗು­ತ್ತಿ­ದ್ದಂತೆ ಹಣ್ಣು­ಗ­ಳಿಗೆ ಎಲ್ಲಿ­ಲ್ಲದ ಬೇಡಿಕೆ ಪ್ರಾರಂ­ಭ­ವಾ­ಗು­ತ್ತದೆ. ಅದ­ರಲ್ಲೂ ಮಾವಿನ ಹಣ್ಣು `ಹ­ಣ್ಣು­ಗಳ ರಾಜ'. ಮಾವಿನ ಹಣ್ಣಿನ ವಾಸನೆ ಬರು­ತ್ತಿ­ದ್ದರೆ ತಿನ್ನಲೇ ಬೇಕೆಂಬ ಬಯಕೆ ಪ್ರತಿ­ಯೊ­ಬ್ಬ­ರಿಗೂ ಬರು­ತ್ತದೆ. ಹಾಗೇ ಈ ಹಣ್ಣಿನ ರುಚಿ­ಯನ್ನು ಆಸ್ವಾ­ದಿ­ಸ­ದ­ವರು ಯಾರೂ ಇರ­ಲಿ­ಕ್ಕಿಲ್ಲ. ಸಾಮಾ­ನ್ಯ­ವಾಗಿ ಎಲ್ಲರ ಮನೆಯ ಹಿತ್ತಿ­ಲಲ್ಲಿ ಒಂದು ಮಾವಿನ ಮರ­ವಾ­ದರೂ ಇರು­ತ್ತದೆ. ಮಲೆ­ನಾಡು ಮತ್ತು ಅರೆ ಮಲೆ­ನಾ­ಡಿನ ಬಹು­ತೇಕ ಕೃಷಿ­ಕರು ಮಾವನ್ನು ವಾಣಿಜ್ಯ ಬೆಳೆ­ಯಾಗಿ ಬೆಳೆ­ಯು­ತ್ತಿ­ದ್ದಾರೆ.
ಆಕ­ರ್ಷ­ಕ­ವಾದ, ಸಿಹಿ­ಯಾದ, ಸತ್ವ­ವುಳ್ಳ ಮಾವು ಇಂದು ವಿಷ­ವಾ­ಗು­ತ್ತಿದೆ. ಮಾವಿನ ಕಸ್ತ್ರ(ಹೂ) ಬಿಡಲು ಆರಂ­ಭ­ವಾ­ದಾ­ಗಿ­ನಿಂದ ಹಿಡಿದು ಹಣ್ಣು ಮಾರು­ಕ­ಟ್ಟೆಗೆ ಹೋಗು­ವ­ವ­ರೆಗೆ ಒಂದಲ್ಲ ಒಂದು ವಿಷ­ವನ್ನು ಅದು ಉಣ್ಣು­ತ್ತಿ­ರು­ತ್ತದೆ. ಮಾವಿನ ವಿಚಾ­ರ­ದಲ್ಲಿ ಗಮ­ನಿಸ ಬೇಕಾದ ಅಂಶ­ವೆಂ­ದರೆ ಇದಕ್ಕೆ ಯಾವುದೇ ಪೋಷ­ಕಾಂ­ಶ­ಗ­ಳನ್ನು ನೀಡ­ದಿ­ದ್ದರೂ ಬೆಳೆ ಬರು­ತ್ತದೆ. ಆದರೂ ಹೆಚ್ಚಿನ ಇಳು­ವ­ರಿಯ ಆಸೆಗೆ ರೈತ ಒಳ­ಗಾಗಿ ಅದನ್ನು ವಿಷ ಮಾಡು­ತ್ತಿ­ದ್ದಾನೆ.
ಬಹ­ಳಷ್ಟು ಕೃಷಿ­ಕರು ಮಾವಿನ ಬೆಳೆ­ಯನ್ನು ಸಾವ­ಯವ ರೀತಿ­ಯಲ್ಲಿ ಅಥವಾ ನೈಸ­ರ್ಗಿಕ ಕೃಷಿ­ಯಲ್ಲಿ ಮಾವನ್ನು ಬೆಳೆ­ಸು­ತ್ತಿ­ದ್ದಾರೆ. ಅವ­ರಲ್ಲಿ ಚಿತ್ರ­ದು­ರ್ಗದ ಎಂ ಮಹಾ­ವೀ­ರ­ಕು­ಮಾರ್‌ ಒಬ್ಬರು.
ಮಹಾ­ವೀರ ಅವರು ಎಲ್ಲ­ರಂತೆ ಮೊದಲು ಪ್ರಾರಂ­ಭಿ­ಸಿದ್ದು ರಾಸಾ­ಯ­ನಿಕ ಕೃಷಿ­ಯನ್ನೇ. ಆದರೆ ಆದಾ­ಯ­ಕ್ಕಿಂತ ಖರ್ಚು ಹೆಚ್ಚಾ­ದಾಗ ಕೃಷಿ ವಿಧಾ­ನ­ವನ್ನು ಬದ­ಲಾ­ಯಿ­ಸಿ­ಕೊ­ಳ್ಳು­ವುದು ಅನಿ­ವಾ­ರ್ಯ­ವಾ­ಯಿತು. ಅದೇ ಸಮ­ಯ­ದಲ್ಲಿ ಇವರು ಸುಭಾಷ್‌ ಪಾಳೇ­ಕರ್‌ ಅವರ ನೈಸ­ರ್ಗಿಕ ಕೃಷಿ ಕಾರ್ಯಾ­ಗಾ­ರ­ದಲ್ಲಿ ಭಾಗ­ವ­ಹಿ­ಸಿ­ದರು. `ನಾನು ಯಾಕೆ ನನ್ನ ಬೆಳೆಗೆ ಇದೇ ಕೃಷಿ ವಿಧಾ­ನ­ವನ್ನು ಅಳ­ವ­ಡಿ­ಸಿ­ಕೊ­ಳ್ಳ­ಬಾ­ರದು?' ಎಂದು­ಕೊಂ­ಡರು. ರಾಸಾ­ಯ­ನಿಕ ಕೃಷಿ­ಯಿಂದ ನೈಸ­ರ್ಗಿಕ ಕೃಷಿಯ ಕಡೆಗೆ ಬಂದರು.
ಮಾವಿನ ಕೃಷಿ ವಿಧಾನ:
ಹದಿ­ಮೂರು ಎಕರೆ ಪ್ರದೇ­ಶ­ದಲ್ಲಿ ಮಹಾ­ವೀರ ಅವರು ಮಾವಿನ ಕೃಷಿ ಮಾಡು­ತ್ತಿ­ದ್ದಾರೆ. ಇದ­ರಲ್ಲಿ ಮಿಶ್ರ ಬೆಳೆ­ಯಾಗಿ ಸೀತಾ­ಫಲ ಮತ್ತು ನುಗ್ಗೆ ಬೆಳೆ­ಸು­ತ್ತಿ­ದ್ದಾರೆ. 25-25 ಅಂತ­ರ­ದಲ್ಲಿ ಮಾವಿನ ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. 1994ರಲ್ಲಿ ಇವರು ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. ಮೂರು ಅಡಿ ಅಗಲ ಮೂರು ಅಡಿ ಆಳದ ಗುಂಡಿ ತೆಗೆದು ಅದ­ರೊ­ಳಗೆ ಹಟ್ಟಿ­ಗೊ­ಬ್ಬರ ಮತ್ತು ಸ್ವಲ್ಪ ರಾಸಾ­ಯ­ನಿಕ ಶೀಲಿಂ­ದ್ರ­ನಾ­ಶ­ಕ­ವನ್ನು ಮಿಶ್ರಣ ಮಾಡಿ ಗಿಡ­ಗ­ಳನ್ನು ನಾಟಿ ಮಾಡಿ­ದ್ದಾರೆ. ಮೊದಲು ಹರಿ ನೀರನ್ನು ಇವರು ಅಳ­ವ­ಡಿ­ಸಿ­ಕೊಂ­ಡಿ­ದ್ದರು. ಆದರೆ ನೀರಿನ ಲಭ್ಯತೆ ಕಡಿಮೆ ಇರು­ವು­ದ­ರಿಂದ ಈಗ ಹನಿ ನೀರಾ­ವ­ರಿ­ಯನ್ನು ಅಳ­ವ­ಡಿ­ಸಿ­ಕೊಂ­ಡಿ­ದ್ದಾರೆ.
ಸಾವ­ಯ­ವ­ದೆ­ಡೆಗೆ ಮಾವಿನ ಕೃಷಿ: 1994ರಿಂದ 2004ರ­ವ­ರೆಗೂ ರಾಸಾ­ಯ­ನಿಕ ಕೃಷಿ­ಯನ್ನು ಮಾಡು­ತ್ತಿದ್ದ ಮಹಾ­ವೀರ ಅವರು ಸಾವ­ಯವ ರೀತಿ­ಯಲ್ಲಿ ಮಾವಿನ ಕೃಷಿ ಮಾಡ­ತೊ­ಡ­ಗಿ­ದರು. ರಾಸಾ­ಯ­ನಿಕ ಕೃಷಿ­ಯಲ್ಲಿ ಮಾವನ್ನು ಬೆಳೆ­ದರೆ ಆಗುವ ಹಾನಿ­ಯನ್ನು ಇವರು ಅರಿ­ತಿ­ರು­ವುದೇ ಇದಕ್ಕೆ ಮುಖ್ಯ ಕಾರಣ. ವಿಷ ಆಹಾ­ರ­ವನ್ನು ಜನ­ರಿಗೆ ನೀಡಿ­ದರೆ ಎಷ್ಟು ಸರಿ? ಎನ್ನು­ವುದು ಇವ­ರಿಗೆ ಕಾಡಿದ ಪ್ರಶ್ನೆ. ಅದ­ಕ್ಕಾಗಿ ಈಗ ಇವರು ಸಂಪೂರ್ಣ ಸಾವ­ಯವ ರೀತಿ­ಯ­ಲ್ಲಿಯೇ ಕೃಷಿ­ಯನ್ನು ಮಾಡು­ತ್ತಿ­ದ್ದಾರೆ.
ಪೋಷ­ಕಾಂಶ ನಿರ್ವ­ಹಣೆ: ಪಾಳೇ­ಕರ್‌ ವಿಧಾ­ನದ ಜೀವಾ­ಮೃತ ಇವರು ಮಾವಿಗೆ ನೀಡುವ ಮುಖ್ಯ ಪೋಷ­ಕಾಂಶ. ನೂರು ಲೀಟರ್‌ ನೀರಿಗೆ 5 ಕಿಲೊ ಸಗಣಿ, 5 ಲೀಟರ್‌ ಗೋ ಮೂತ್ರ, ಒಂದು ಕಿಲೊ ಬೆಲ್ಲ, ಒಂದು ಕಿಲೊ ದ್ವಿದಳ ಧಾನ್ಯದ ಹಿಟ್ಟು ಜೊತೆ ಒಂದು ಕಿಲೊ ಮಣ್ಣನ್ನು ಸೇರಿಸಿ ಜೀವಾ­ಮೃತ ತಯಾ­ರಿಸಿ ಕೊಳ್ಳು­ತ್ತಾರೆ. ಇದನ್ನು ಒಂದು­ವಾರ ಕೊಳೆಸಿ ನಂತರ ಮಾವಿನ ಗಿಡ­ಗ­ಳಿಗೆ ಹಾಕು­ತ್ತಾರೆ. ಮಾವಿನ ಕಸ್ತ್ರ(ಹೂ) ಬಿಡಲು ಪ್ರಾರಂ­ಭಿ­ಸಿ­ದಾ­ಗಿಂದ ನೀಡ­ತೊ­ಡ­ಗು­ತ್ತಾರೆ. ಜೀವಾ­ಮೃ­ತ­ವನ್ನು ಎರಡು ರೀತಿ­ಯಲ್ಲಿ ಗಿಡ­ಗ­ಳಿಗೆ ನೀಡು­ತ್ತಾರೆ. ಮೊದ­ಲ­ನೆ­ಯದು ಹೂ ಬಿಟ್ಟ ನಂತರ ನಿಯ­ಮಿ­ತ­ವಾಗಿ ಸಿಂಪ­ಡಿ­ಸು­ವುದು. ಇನ್ನೊಂದು: ಗಿಡ­ಗಳ ಬುಡಕ್ಕೂ ಎರಡು ಲೀಟರ್‌ ಜೀವಾ­ಮೃ­ತ­ವನ್ನು ಹಾಕು­ವುದು.
ಪೋಷ­ಕಾಂ­ಶ­ಕಕ್ಕೆ ಪೂರ­ಕ­ವಾದ ಮುಚ್ಚಿಗೆ: ಎಲ್ಲರ ಮಾವಿನ ತೋಟ­ದಂತೆ ಇವರ ಮಾವಿನ ತೋಟ ಇಲ್ಲ­ದಿ­ರು­ವುದು ವಿಶೇಷ. ಪೋಷ­ಕಾಂ­ಶಕ್ಕೆ ಪ್ರಾಮು­ಖ್ಯತೆ ನೀಡಿ­ದಂತೆ, ಮುಚ್ಚಿ­ಗೆಗೂ ನೀಡಿ­ದ್ದಾರೆ. ಇವರು ಎರಡು ವಿದಧ ಮುಚ್ಚಿಗೆ ಮಾಡು­ತ್ತಿ­ದ್ದಾರೆ. ಸಜೀವ ಮುಚ್ಚಿಗೆ, ನಿರ್ಜೀವ ಮುಚ್ಚಿಗೆ ಮುಚ್ಚಿಗೆ. ಸಜೀವ ಮುಚ್ಚಿ­ಗೆ­ಯಾಗಿ ಇವರು ಅಲ­ಸಂಡೆ, ತೊಗರಿ, ಅವರೆ, ವೆಲ್ವೆ­ಟ್‌­ಬೀನ್ಸ್‌, ಹುರು­ಳಿ­ಯನ್ನು ಬೆಳೆ­ಯು­ತ್ತಿ­ದ್ದಾರೆ. ಮಳೆ­ಗಾ­ಲ­ದಲ್ಲಿ ಇದನ್ನು ಕಟಾವು ಮಾಡಿ ಗಿಡ­ಗಳ ಬುಡಕ್ಕೆ ಹಾಕು­ತ್ತಾರೆ. ಉಳಿದ ದಿನ­ಗ­ಳಲ್ಲಿ ಇದು ಭೂಮಿಗೆ ಸಾರ­ಜ­ನ­ಕ­ವನ್ನು ಪೂರೈ­ಸು­ತ್ತದೆ. ನಿರ್ಜೀವ ಮುಚ್ಚಿ­ಗೆ­ಯಲ್ಲಿ ಮುಖ್ಯ­ವಾಗಿ ಸೊಪ್ಪು­ಗ­ಳನ್ನು ಬಳ­ಸು­ತ್ತಿ­ದ್ದಾರೆ.
ರೋಗ ನಿರ್ವ­ಹ­ಣೆಗೆ ಅಗ್ನಿ ಅಸ್ತ್ರ:
ಮಾವಿಗೆ ರೋಗ­ಗಳ ತೊಂದ­ರೆಯೂ ಇದೆ. ಸಾಮಾ­ನ್ಯ­ವಾಗಿ ಮಾವಿಗೆ ಬೂದಿ­ರೋಗ, ಅಂಟು­ರೋಗ ಹಾಗೂ ಚಿಟ್ಟೆ­ರೋ­ಗ­ಗಳು ಬರು­ತ್ತದೆ. ರೋಗಕ್ಕೂ ಮಹಾ­ವೀರ ಅವರು ಉಪ­ಯೋ­ಗಿ­ಸು­ವುದು ಶುದ್ಧ ಜೈವಿಕ ಕೀಟ­ನಾ­ಶಕ. ಇದರ ಹೆಸರು`ಅಗ್ನಿ ಅಸ್ತ್ರ'. 20 ಲೀಟರ್‌ ಗೋಮೂತ್ರ, 12 ಕೀಲೊ ಬೇವಿನ ಸೊಪ್ಪು, ಮೂರು ಕೀಲೊ ನಾಟಿ ಬೆಳ್ಳುಳ್ಳಿ, ಒಂದು ಹಸಿ­ಮೆ­ಣಸು ಇವ­ನ್ನೆಲ್ಲ ಸೇರಿಸಿ ರುಬ್ಬು­ತ್ತಾರೆ. ಇದನ್ನು ಹತ್ತು ದಿನ­ಗಳ ಕಾಲ ಕೊಳೆ­ಯಿಸಿ ನಂತರ ಗಿಡ­ಗ­ಳಿಗೆ ಸಿಂಪ­ಡಿ­ಸು­ತ್ತಾರೆ. ಇದನ್ನು ಸಿಂಪ­ಡಿ­ಸು­ವಾಗ 10 ಲೀಟರ್‌ ನೀರಿಗೆ 3 ಲೀಟರ್‌ ಅಗ್ನಿ­ಅ­ಸ್ತ್ರ­ವನ್ನು ಮಿಶ್ರಣ ಮಾಡಿ­ಕೊ­ಳ್ಳು­ತ್ತಾರೆ. ಇದನ್ನು ಸಹ ನಿಯ­ಮಿ­ತ­ವಾಗಿ ನೀಡು­ತ್ತಾರೆ. ಇದನ್ನು ಸಿಂಪ­ಡಿ­ಸು­ವ­ದ­ರಿಂದ ಹೂಗಳ ಮೇಲೆ ಯಾವುದೇ ರೀತಿಯ ಪರಿ­ಣಾಮ ಬೀರದೆ ಹೂವು­ಗಳು ಚೆನ್ನಾಗಿ ಇರು­ತ್ತದೆ ಎನ್ನು­ವುದು ಮಹಾ­ವೀರ ಅವರ ಅನು­ಭ­ವದ ಮಾತು.
ಇಳು­ವರಿ ಮತ್ತು ಮಾರು­ಕಟ್ಟೆ:
ಅಪೋಸ್‌, ತೋತಾ­ಪುರಿ, ಬೆಂಗ­ಪಳಿ ಅಥವಾ ಬ್ಲಾನಿಷ್‌ ಮಾವಿನ ಬಗೆ­ಯನ್ನು ಇವರು ಬೆಳೆ­ಯು­ತ್ತಿ­ದ್ದಾರೆ. `ರಾ­ಸಾ­ಯ­ನಿಕ ಕೃಷಿ ಮಾಡು­ತ್ತಿ­ರು­ವಾಗ 13 ಎಕ­ರೆಗೆ ಹದಿ­ನಾಲ್ಕು ಟನ್‌ ಮಾವು ಬರು­ತ್ತಿತ್ತು. ಈಗ ನೈಸ­ರ್ಗಿಕ ಕೃಷಿ­ಯಲ್ಲಿ ಅದಕ್ಕೂ ಹೆಚ್ಚಿಗೆ ಬೆಳೆ ಬರು­ತ್ತಿದೆ. ಮೊದಲು ಪ್ರತಿ ವರ್ಷವು ಪ್ರತಿ ಗಿಡ­ದಲ್ಲಿ ಹೂವು ಬರು­ತ್ತಿ­ರ­ಲಿಲ್ಲ. ಆದರೆ ಈಗ ಪ್ರತಿ ವರ್ಷವು ಎಲ್ಲಾ ಗಿಡ­ದ­ಲ್ಲಿಯೂ ಕಾಯಿ ಬಿಡು­ತ್ತಿದೆ. ಮಾವಿನ ಗಿಗಳು ಬಲಿ­ತಿವೆ. ಕಳೆದ ವರ್ಷ 13 ಎಕ­ರೆಗೆ 30 ಟನ್‌ ಮಾವು ಬಂದಿತ್ತು. ಈ ಬಾರಿ ವಾತ­ವ­ರಣ ವ್ಯತ್ಯಾ­ಸ­ದಿಂದ ಸ್ವಲ್ಪ ಬೆಳೆ ಕಡಿ­ಮೆ­ಯಾ­ಗುವ ಸಾಧ್ಯ­ತೆ­ಯಿದೆ. ಖರ್ಚು ಕಡಿ­ಮೆ­ಯಾ­ಗಿದೆ. ವಿಷ ಮುಕ್ತ ಮಾವಿನ ಹಣ್ಣನ್ನು ನೀಡು­ತ್ತಿ­ರುವ ತೃಪ್ತಿ­ಯಿದೆ. ಇಳು­ವ­ರಿಯು ಹೆಚ್ಚಾ­ಗಿದೆ' ಎನ್ನು­ವು­ದಾಗಿ ಮಾಹಾ­ವೀರ ಅವರು ಹೇಳು­ತ್ತಾರೆ.
ಇವರ ಮಾವಿನ ಹಣ್ಣು­ಗ­ಳನ್ನು ಯಾವ ದಳ್ಳಾ­ಳಿ­ಗಳ ಮೂಲಕ ಮಾರು­ಕಟ್ಟೆ ಮಾಡದೆ ಸ್ವತಃ ಮಾರು­ತ್ತಿ­ದ್ದಾರೆ. ತೋತಾ­ಪುರಿ ಹಣ್ಣು­ಗ­ಳನ್ನು ತೋಟ­ದ­ಲ್ಲಿಯೇ ನೇರ­ವಾಗಿ ಗುತ್ತಿಗೆ ನೀಡು­ತ್ತಿ­ದ್ದಾರೆ. ಉಳಿದ ಎರಡು ಬಗೆಯ ಮಾವಿನ ಹಣ್ಣು­ಗ­ಳನ್ನು ತಾವೇ ಮನೆ ಮನೆ ಬಾಗಿ­ಲಿಗೆ ಹೋಗಿ ಮಾರು­ತ್ತಾರೆ. ನಾಲ್ಕು ಡಜನ್‌ ಹಣ್ಣು­ಗ­ಳನ್ನು ರಟ್ಟಿನ ಪೆಟ್ಟಿ­ಗೆ­ಯಲ್ಲಿ ಹಾಕಿ ಬಳ್ಳಾರಿ, ಬೆಂಗ­ಳೂರು, ಗದಗ, ಆಂದ್ರದ ಕರ್ನೂ­ಲ್‌­ವ­ರೆಗೆ ತಲು­ಪಿ­ಸು­ತ್ತಿ­ದ್ದಾರೆ.
ಸಾವ­ಯವ ಕೃಷಿ ಹಾಗೂ ಸ್ವತಃ ಮಾರು­ಕ­ಟ್ಟೆ­ಯನ್ನು ಕಂಡು ಕೊಂಡಿ­ರುವ ಮಹಾ­ವೀರ್‌ ಅವರು ಮಾವಿನ ಬೆಳೆ­ಗಾ­ರ­ರಿಗೆ ಮಾದರಿ.
ಇವ­ರನ್ನು ಸಂಪ­ರ್ಕಿ­ಸಲು: ಎಂ. ಮಹಾ­ವೀ­ರ­ಕು­ಮಾರ್‌
1ನೇ ಅಡ್ಡ­ರಸ್ತೆ, ಗುಮಾಸ್ತ ಕಾಲೋನಿ
ಎಪಿ­ಎಂಸಿ ರಸ್ತೆ, ಚಿತ್ರ­ದುರ್ಗ
ದೂರ­ವಾಣಿ: 958194-೨೨೫೨೮೩

-ನಾಗರಾಜ ಮತ್ತಿಗಾರ

No comments: