Thursday, February 5, 2009

ಅವಾಂತರಿ ಕುಲಾಂತರಿ “ತಂತ್ರಜ್ಞಾನ”


ಕಾಡಿ­ನಲ್ಲಿ ಇರುವ ಬದ­ನೆ­ಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದ­ನೆಗೆ ನಾಡ ಬದ­ನೆ­ಯನ್ನು ಸೇರಿಸಿ ಅದ­ಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ. ಇವೆ­ರಡು ಬಿಟ್ಟು ಮತ್ತೊಂದು ಇದೆ, ಇರುವ ಬದ­ನೆಗೆ ಯಾವುದೋ ಜೀವಿಯ ಜೀನ್‌ ತಂದು ಸೇರಿಸಿ, ಅದನ್ನು ಮಾರ್ಪ­ಡಿಸಿ ಅದು ಮುಂದೆಂದು ತನ್ನ ಸಂತಾ­ನ­ವನ್ನು ಪಡೆ­ಯ­ದಿ­ರುವ ಹಾಗೇ ಮಾಡು­ವುದು ವಿಕೃತಿ. ಇದನ್ನು ಇಂದು ಬಹು­ರಾ­ಷ್ಟ್ರೀಯ ಬೀಜ ಕಂಪ­ನಿ­ಗಳು ಮಾಡು­ತ್ತಿವೆ.
ಭಾರತ ಸಾಮಾ­ಜಿ­ಕ­ವಾಗಿ, ಭೌಗೋ­ಳಿ­ಕ­ವಾಗಿ ಮಾತ್ರ ವೈವಿ­ಧ್ಯ­ವಾ­ಗಿ­ರದೆ, ಇಲ್ಲಿನ ಬೇಸಾ­ಯ­ಗ­ಳಲ್ಲೂ ವೈವಿ­ಧ್ಯ­ವಾ­ಗಿದೆ. ತರ­ಕಾ­ರಿ­ಯಲ್ಲೂ ಸಹ. ನಮ್ಮ­ಲ್ಲಿನ ಬಹು­ತೇಕ ಜನರು ಉಪ­ಯೋ­ಗಿ­ಸುವ ಬದನೆ ವೈವಿ­ಧ್ಯ­ತೆ­ಯಿಂದ ಕೂಡಿ­ರುವ ತರ­ಕಾ­ರಿ­ಗ­ಳ­ಲ್ಲೊಂದು. ವಿದೇಶಿ ಕಂಪನಿ ತಮ್ಮ ನೆಲ­ವನ್ನು ಬಿಟ್ಟು ನಮ್ಮ­ಲ್ಲಿಗೆ ಬಂದು `ಬಹು­ವ­ದನೆ'ಯಾದ ಬದ­ನೆಯ `ಕುಲ'ಗೆಡಿ­ಸುವ ಕಾರ್ಯ­ವನ್ನು ಮಾಡು­ತ್ತಿವೆ. ಅಂದರೆ `ಕುಲಾಂ­ತರಿ ತಳಿ­ಯನ್ನು ತಯಾರು ಮಾಡು­ತ್ತಿವೆ. ಆಸ್ಟ್ರಿಯಾ, ಇಟಲಿ ಮತ್ತು ಕೆಲವು ಯುರೋಪ್‌ ದೇಶ­ಗ­ಳಲ್ಲಿ `ಕುಲಾಂ­ತರಿ' ತಳಿ/ ಆಹಾ­ರ­ವನ್ನು ನಿಷೇಧ ಮಾಡಿ­ರು­ವಾ­ಗಲೇ ನಮ್ಮ­ಲ್ಲಿಗೆ ಅವರು ಬಂದಿ­ದ್ದಾರೆ.
ಕುಲಾಂ­ತರಿ ಅಥವಾ ಬಿಟಿ ಬದನೆ:
ಮಣ್ಣಿ­ನ­ಲ್ಲಿ­ರುವ ಬ್ಯಾಸಿ­ಲಸ್‌ ಥುರ­ನ್‌­ಜೆ­ನಿ­ಸಸ್‌ ಎನ್ನುವ ಬ್ಯಾಕ್ಟೀ­ರಿ­ಯಾಕ್ಕೆ ಬಿಟಿ ಎನ್ನು­ತ್ತಾರೆ. ಇದಕ್ಕೆ ಕಾಯಿ ಮತ್ತು ಕಾಂಡ ಕೊರಕ ಕೀಟ­ಗ­ಳಿಗೆ ಮಾರ­ಕ­ವಾ­ಗ­ಬಲ್ಲ ಪ್ರೋಟೀನು ಉತ್ಪಾ­ದಿ­ಸುವ ಸಾಮ­ರ್ಥ್ಯ­ವಿದೆ. ಕೀಟ­ಗ­ಳಿಗೆ ಮೃತ್ಯು­ಕಾ­ರ­ಕ­ವಾ­ಗ­ಬಲ್ಲ ಬ್ಯಾಕ್ಟಿ­ರೀ­ಯಾದ ವಂಶ­ವಾಯಿ(ಜೀನ್‌)ಯನ್ನು ನಮ್ಮ­ಲ್ಲಿಯ ಬದ­ನೆ­ಯೊ­ಳಗೆ ಸೇರಿ­ಸು­ತ್ತಾರೆ. ಇದು ಹೊಲಿ­ಗೆ­ಯವ ಪ್ಯಾಂಟನ್ನು ಕತ್ತ­ರಿಸಿ ಹೋಲಿ­ದಷ್ಟು ಸುಲ­ಭ­ವಲ್ಲ. ಅತ್ಯಾ­ಧು­ನಿಕ ಸಲ­ಕ­ರ­ಣೆ­ಗಳು ಬೇಕು. ಇದು ಕೋಟ್ಯಾಂ­ತರ ಡಾಲರ್‌ ಖರ್ಚಿನ ಬಾಪತ್ತು.
ಹೀಗೆ ತಯಾ­ರಿ­ಸಿದ ಬದನೆ, ಬಿಟಿ­ಯನ್ನು ತನ್ನ ಮೈಯೊ­ಳಗೆ ತುಂಬಿಸಿ ಕೊಳ್ಳು­ತ್ತದೆ. ಇದೊಂದು ರೀತಿ ಮೈಯೆಲ್ಲಾ ವಿಷ ಇರುವ `ಪೂತನಿ'ಯಾಗಿ­ರು­ತ್ತದೆ. ಹೀಗಿ­ರು­ವಾಗ ಬದ­ನೆಯ ಮೇಲೆ ದಾಳಿ ಮಾಡುವ ಕಾಂಡ­ಕೊ­ರಕ, ಕಾಯಿ­ಕೊ­ರಕ ಹುಳು­ಗಳ ಬಾಧೆ ಇದಕ್ಕೆ ಇರು­ವು­ದಿಲ್ಲ. ಕಾರ­ಣ­ವಿಷ್ಟೇ ಬಿಟಿ ಬದ­ನೆ­ಯನ್ನು ತಿಂದ ಹುಳು­ಗಳ ಜೀರ್ಣಾಂಗ ವ್ಯವಸ್ಥೆ ಹದ­ಗೆಟ್ಟು ಸಾಯು­ತ್ತವೆ. ಔಷಧಿ ಹೊಡೆ­ಯುವ ಸಮ­ಸ್ಯೆ­ಯಿ­ರು­ವು­ದಿಲ್ಲ. ಇಳು­ವರಿ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.
ಇದ­ನ್ನೆಲ್ಲಾ ನೋಡಿ­ದಾಗ `ಅಬ್ಬಾ! ಎಂತಹ ತಂತ್ರ­ಜ್ಞಾನ? ಆಗ­ಬ­ಹುದು' ಎಂದು ಕೊಂಡರೆ ತಪ್ಪಾ­ಗು­ತ್ತದೆ. `ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ' ಆಗು­ತ್ತದೆ. ಕಾಂಡ­ವನ್ನೇ ತಿಂದು ಜೀರ್ಣಿ­ಸಿ­ಕೊ­ಳ್ಳುವ ಹುಳು­ಗಳೇ ಸಾಯ­ಬೇ­ಕಾ­ದರೆ. ಬದ­ನೆ­ಯನ್ನು ನಿತ್ಯದ ಆಹಾ­ರ­ಗ­ಳಲ್ಲಿ ಒಂದಾ­ನ್ನಾ­ಗಿಸಿ ಕೊಂಡ ಮನು­ಷ್ಯನ `ಗತಿ' ಎನಾ­ಗ­ಬಾ­ರದು? ಇಂತಹ ಪ್ರಯೋಗ ಈಗಾ­ಗಲೇ ಉಡು­ಪಿಯ ಮಟ್ಟು­ಗು­ಳ್ಳದ ಮೇಲಾ­ಗಿ­ರು­ವುದು ವಿಷಾ­ಧದ ಸಂಗತಿ.
ಕುಲಾಂ­ತರಿ ಬದನೆ ತಿಂದರೆ ನರ­ನಿಗೆ ಪ್ರಾಂಭ­ವಾ­ಗ­ಬ­ಹುದು ನರ­ಳಾಟ:
ಬಿಟಿಯ ದುಷ್ಪ­ರಿ­ಣಾ­ಮದ ಬಗ್ಗೆ ಹೇಳು­ವಾಗ ಬಿಟಿ ಹತ್ತಿ ನೆನ­ಪಾ­ಗು­ತ್ತದೆ. ಯಾವುದೇ ಕೀಟ­ಗಳು ದಾಳಿ ಮಾಡಲು ಸಾಧ್ಯ­ವಿಲ್ಲ ಎನ್ನುವ ಬಿಟಿ ತಳಿ­ಗ­ಳಿಗೆ ರಸ­ಹೀ­ರುವ ಕೀಟ­ಗಳು ದಾಳಿ­ನ­ಡೆ­ಸು­ತ್ತವೆ ಎನ್ನು­ವು­ದನ್ನು ಸರ್ಕಾರಿ ದಾಖ­ಲೆ­ಗಳು ಹೇಳು­ತ್ತವೆ. ಬಿಟಿ ಹತ್ತಿ­ಯನ್ನು ಬೆಳೆದ ರೈತ ಕೀಟ­ನಾ­ಶ­ಕ­ವನ್ನು ಬಳ­ಸ­ಬೇ­ಕಾ­ಗು­ತ್ತದೆ. ಅದಕ್ಕೆ ಮತ್ತಷ್ಟು ಹಣ­ವನ್ನು ವ್ಯಯ ಮಾಡ­ಬೇ­ಕಾ­ಗು­ತ್ತದೆ. ಬಿಟಿ­ಹತ್ತಿ ಬೆಳೆದ ಆಂದ್ರ­ಪ್ರ­ದೇ­ಶದ ವಿಧರ್ಭ ಪ್ರಾಂತ್ಯದ ರೈತರೇ ಆತ್ಮ­ಹತ್ಯೆ ಮಾಡಿ­ಕೊಂ­ಡ­ವ­ರಲ್ಲಿ ಹೆಚ್ಚು.
ಬೆಳೆಯ ನಂತರ ಗಿಡದ ಬಿಟಿ ಜೀನ್‌ ಮಣ್ಣಿನ ಬ್ಯಾಕ್ಟೀ­ರಿಯಾ ವರ್ಗಾ­ವ­ಣೆ­ಯಾ­ಗುವ ಸಾಧ್ಯತೆ ಇದೆ. ಬಿಟಿ ಬೀಟ್‌­ರೂ­ಟ್‌­ನಲ್ಲಿ ಇದು ಆಗಿದೆ. `ಮಣ್ಣಿನ ಸೂಕ್ಷ್ಮ­ಜೀ­ವಿ­ಗಳ ಮೇಲೆ ಬಿಟಿ­ಯಿಂ­ದಾ­ಗುವ ಪರಿ­ಣಾ­ಮದ ಅಧ್ಯ­ಯ­ನ­ಗಳು ಆಗಿಲ್ಲ' ಎನ್ನು­ತ್ತಾರೆ ಹಿರಿಯ ವಿಜ್ಞಾನಿ ಡಾ.ಬಾಲ­ರವಿ.
ಇನ್ನೂ ಬಿಟಿ­ಬ­ದ­ನೆ­ಯನ್ನು ತಿಂದ ಮನು­ಷ್ಯನ ಜೀರ್ಣಾಂ­ಗದ ಕರು­ಳಿನ ಬ್ಯಾಕ್ಟೀ­ರಿ­ಯಾಕ್ಕೆ ವರ್ಗಾ­ವ­ಣೆ­ಯಾ­ಗುವ ಸಂಭವ ಹೆಚ್ಚಿದೆ. ಇದ­ರಿಂದ ರೋಗ ನಿರೋ­ಧಕ ಶಕ್ತಿಯ ಮೇಲೆ ಅಡ್ಡ ಪರಿ­ಣಾಮ ಬೀರು­ವುದು ಮಾತ್ರ­ವ­ಲ್ಲದೇ ಜೀವ­ಕೋ­ಶ­ಗಳು ಅಸ­ಹ­ಜ­ವಾಗಿ ಬೆಳೆ­ಯುವ ಸಾಧ್ಯ­ತೆ­ಯಿದೆ. ಬಿಟಿಯ ಉಪು­ತ್ಪ­ನ್ನ­ಗ­ಳನ್ನು ತಿಂದ ದನ­ಕ­ರು­ಗಳು, ಕುರಿ­ಗಳು ಸಾವ­ನ್ನ­ಪ್ಪಿ­ರು­ವುದು ಕಂಡು­ಬಂ­ದಿದೆ. ಬಿಟಿ ತಳಿ­ಗ­ಳನ್ನು ಬೆಳೆ­ಯುವ ಪ್ರದೇ­ಶ­ಗ­ಳಲ್ಲಿ ಕೆಲಸ ಮಾಡು­ವ­ವ­ರಿಗೆ ಅಲರ್ಜಿ, ತುರಿಕೆ, ದದ್ದು­ಗಳು ಎದ್ದ ವರ­ದಿ­ಗಳು ಈಗಾ­ಗಲೇ ಪ್ರಕ­ಟ­ಗೊಂ­ಡಿದೆ.
ಇದ­ಲ್ಲೆ­ಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯ­ದಲ್ಲಿ ಸಾವ­ಯವ ಕೃಷಿ ನೀತಿ­ಯನ್ನು ಜಾರಿ­ಗೊ­ಳಿ­ಸಿದೆ. ಸಾವ­ಯವ ಮಿಷನ್‌ ಕೆಲಸ ಮಾಡು­ತ್ತಿದೆ. ಸಾವ­ಯವ ಗ್ರಾಮ­ಗಳು ರಚಿ­ತ­ವಾ­ಗಿದೆ. ಹೀಗಿ­ರು­ವಾಗ ಕುಲಾಂ­ತರಿ ತಳಿ­ಯಲ್ಲಿ ಕೃಷಿ ಮಾಡಿ­ದರೆ ಸಾವ­ಯವ ಧೃಢೀ­ಕ­ರಣ ನೀಡು­ವಂ­ತಿಲ್ಲ. ಸಾವ­ಯವ ರೀತಿ­ಯ­ಲ್ಲಿಯೇ ಬಿಟಿ ತಳಿ­ಗ­ಳನ್ನು ಬೆಳೆ­ಸಿ­ದ್ದರೂ `ಸಾವ­ಯವ ಲೇಬಲ್‌' ಹಚ್ಚಿ ಮಾರು­ವಂ­ತಿಲ್ಲ.
ಏಕ­ಸ್ವಾ­ಮ್ಯದ ಹುನ್ನಾ­ರವೇ?
`ಜೀನ್‌' ತಂತ್ರ­ಜ್ಞಾನ ಸಾಮಾನ್ಯ ಜನ­ರಿಗೆ ಸಿಗು­ವು­ದಿಲ್ಲ. ಯಾಕೆಂ­ದರೆ, ಅವು­ಗಳ ಪೇಟೆಂಟ್‌ ಬಹು­ರಾ­ಷ್ಟ್ರೀಯ ಕಂಪ­ನಿಯ ಕಪಿ­ಮು­ಷ್ಟಿ­ಯ­ಲ್ಲಿದೆ. ಕುಲಾಂ­ತರಿ ತಳಿ­ಯನ್ನು ಬೆಳೆಯ ಬೇಕೆಂ­ದರೆ ಕಂಪ­ನಿಗೆ ಮಾರು­ಹೋ­ಗ­ಬೇಕು. ಅವರು ನೀಡುವ ಜೀಬ­ವನ್ನೇ ಬಿತ್ತ­ಬೇಕು. ಕುಲಾಂ­ತರಿ ತಳಿ­ಗ­ಳಿಂದ ಬೀಜ­ವನ್ನು ದ್ವಿಗು­ಣ­ಗೊ­ಳಿ­ಸ­ಲಿಕ್ಕೆ ಸಾಧ್ಯ­ವಿಲ್ಲ. ಇಳು­ವ­ರಿ­ಯನ್ನು ಮನ­ದ­ಲ್ಲಿ­ಟ್ಟು­ಕೊಂಡು `ಕುಲಾಂ­ತರಿ'ಯನ್ನು ಬೆಳೆ­ಸ­ಲಿಕ್ಕೆ ತೋಡ­ಗಿ­ದರೆ `ಬಿತ್ತನೆ ಬೀಜ­ಕ್ಕಾಗಿ' ಪರ­ದಾ­ಡು­ವುದು ತಪ್ಪು­ವು­ದಿಲ್ಲ. ಕಂಪ­ನಿ­ಗಳು ನಮ್ಮ­ಲ್ಲಿನ ವೈವಿ­ಧ್ಯ­ತೆ­ಯನ್ನು ನಾಶ ಮಾಡಿ `ಏಕ­ರೂಪ ಕೃಷಿ'ಯನ್ನು ಹೇರು­ವು­ದಕ್ಕೆ ಪ್ರಯ­ತ್ನಿ­ಸು­ತ್ತಿ­ರು­ವುದು ಇವರ ಪ್ರಯೋ­ಗ­ಗ­ಳಿಂದ ತಿಳಿ­ಯು­ತ್ತದೆ. ಅಂದರೆ ಇವರ ಮೂಲ ಉದ್ದೇಶ ರೈತ­ರಿಗೆ ಬೇಕಾ­ಗುವ ಬಿತ್ತನೆ ಬೀಜದ ಮೇಲೆ ಏಕ­ಸ್ವಾ­ಮ್ಯ­ವನ್ನು ಹೊಂದು­ವುದು ಎನ್ನು­ವುದು ಸ್ಪಷ್ಟ. ಒಂದು ದೃಷ್ಟಿ­ಯಿಂದ ನೋಡಿ­ದರೆ `ಅಮಲು ಪದಾ­ರ್ಥದ' ಚಟ್ಟ­ದಂತೆ ರೈತ­ರಿಗೆ ತಾವು ತಯಾ­ರಿ­ಸಿದ ಬಿಟಿ ತಳಿ­ಗ­ಳಿಂದ ಮಾಡ­ಲಿಕ್ಕೆ ಹೊರ­ಟಿ­ರು­ವುದು ಸ್ಪಷ್ಟ­ವಾ­ಗು­ತ್ತದೆ.
ಕುಲಾಂ­ತರಿ ವಿರುದ್ಧ ಹೋರಾಟ:
ಅಂತ­ರಾ­ಷ್ಟ್ರೀಯ ಪರಿ­ಸ­ರ­ಪರ ಸಂಘ­ಟ­ನೆ­ಗಳು `ಜಿ.ಎಂ. ಆಹಾ­ರದ ವಿರುದ್ಧ ಈಗಾ­ಗಲೇ ದನಿ ಎತ್ತಿ ಹೋರಾ­ಟ­ವನ್ನು ಮಾಡು­ತ್ತಿ­ದ್ದಾರೆ. ದೆಹ­ಲಿ­ಯಲ್ಲಿ ರೈತರು ಬೀದಿಗೆ ಇಳಿದು ಹೋರಾ­ಟ­ವನ್ನು ಮಾಡಿ­ದ್ದಾರೆ. ಕೇಂದ್ರ ಆಹಾರ ಮಂತ್ರಿ ಅಂಬು­ಮಣಿ ರಾಮ­ದಾಸ್‌ ಕುಲಾಂ­ತರಿ ಬೇಡ ಎನ್ನುವ ಅಭಿ­ಪ್ರಾ­ಯ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ. ಕರ್ನಾ­ಟ­ಕ­ದಲ್ಲೂ ಸಹಜ ಸಮೃದ್ಧ, ಗ್ರೀನ್‌­ಪೀಸ್‌ ಮುಂತಾದ ಸಂಘ­ಟ­ನೆ­ಗಳು ರೈತ ಸಂಘದ ಜೊತೆ­ಗೂಡಿ ` ನಾನೂ ಪ್ರಯೋಗ ಪಶು­ವಲ್ಲ' ಎನ್ನುವ ಚಳು­ವ­ಳಿ­ಯನ್ನು ಕುಲಾಂ­ತ­ರಿಯ ವಿರುದ್ಧ ರೂಪಿ­ಸಿದೆ. ಇವ­ರಿಗೆ ಉಡುಪಿ ಪೇಜಾ­ವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ರಾಮ­ಚಂ­ದ್ರಾ­ಪುರ ಮಠದ ಶ್ರೀರಾ­ಘ­ವೇ­ಶ್ವರ ಸ್ವಾಮೀಜಿ, ಸಾಹಿತಿ ಯು.ಆರ್‌. ಅನಂ­ತ­ಮೂರ್ತಿ ಮುಂತಾದ ಚಿಂತ­ಕರು ಬೆಂಬ­ಲ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ.
ಕೊನೆ­ಯಲ್ಲಿ: ಕುಲಾಂ­ತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವು­ಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗ­ಳ­ದ­ಲ್ಲಯೇ ಕಾಯುತ್ತ ನಿಂತಿವೆ. ಕುಲಾಂ­ತ­ರಿಯ ಪ್ರಯೋಗ ಫಲಿ­ತಾಂಶ ಸಾರ್ವ­ಜ­ನಿ­ಕ­ರೆ­ದುರು ಪಾರ­ದ­ರ್ಶ­ಕ­ವಾಗಿ ತೆರೆ­ದಿ­ಡ­ಬೇಕು ಎನ್ನುವ ಆಗ್ರಹ ಸಂಘ­ಟ­ನೆ­ಗ­ಳದ್ದು.
ರೈತರ ಪ್ರಗತಿ ನೆಪ ಮಾಡಿ­ಕೊಂಡು ಕಂಪ­ನಿ­ಗಳು ಸಾಂಪ್ರ­ದಾ­ಯಿಕ ಕೃಷಿ ಹಾಳು­ಮಾ­ಡಲು ಹೊರ­ಟಿ­ರುವ `ತಂತ್ರ'ಜ್ಞಾನ ನಮಗೆ ಬೇಕೆ?


ನಾಗ­ರಾಜ ಮತ್ತಿ­ಗಾರ


ಉದಯವಾಣಿ ಕೃಷಿ ಸಂಪದದಲ್ಲಿ ಪ್ರಕಟಗೊಂಡ ಲೇಖನ

2 comments:

Anonymous said...

ನೀವು ಈ ಬಗ್ಗೆ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.
ಧನ್ಯವಾದಗಳು

PaLa said...

ಸಕ್ಕತ್ ಲೇಖನ, ನೀವು ಕೃಷಿಯ ಬಗ್ಗೆ ಬರೀತಾ ಇರೋದು ನೋಡಿ ತುಂಬಾ ಸಂತೋಷ ಆಯ್ತು..
--
ಪಾಲ